ಕರ್ನಾಟಕದಿಂದ ಮೀರಾ ಕುಮಾರ್ ಗೆ ಭರ್ಜರಿ ಮತ ಚಲಾವಣೆ
ನವದೆಹಲಿ, ಜುಲೈ 20: ರಾಜ್ಯವಾರು ರಾಷ್ಟ್ರಪತಿಗಳಿಗೆ ಮತ ಚಲಾಯಿಸಿದ ಲೆಕ್ಕ ಬಹಿರಂಗವಾಗಿದೆ. ಪಶ್ಚಿಮ ಬಂಗಾಳ ಬಿಟ್ಟರೆ ವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ರನ್ನು ಕರ್ನಾಟಕದಲ್ಲೇ ಹೆಚ್ಚಾಗಿ ಬೆಂಬಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿರುವುದೂ ಇದಕ್ಕೆ ಕಾರಣ.
224 ಶಾಸಕರಲ್ಲಿ ರಾಜ್ಯದ 222 ಎಂಎಲ್ಎಗಳು ಮತ ಚಲಾಯಿಸಿದ್ದು ಇವರಲ್ಲಿ 163 ಶಾಸಕರು ಮೀರಾ ಕುಮಾರ್ ಪರ ಮತದಾನ ಮಾಡಿದ್ದಾರೆ. ಪ್ರತಿ ಮತದ ಮೌಲ್ಯ 131 ಆಗಿದ್ದು ಒಟ್ಟು 21,353 ಮೌಲ್ಯದ ಮತಗಳು ಮೀರಾ ಕುಮಾರ್ ಪರ ಚಲಾವಣೆಯಾಗಿವೆ. ಜೆಡಿಎಸ್ ಕೂಡಾ ಮೀರಾ ಕುಮಾರ್ ಅವರನ್ನೇ ಬೆಂಬಲಿಸಿದ್ದರಿಂದ ವಿಪಕ್ಷಗಳ ಅಭ್ಯರ್ಥಿ ಪರ ಭರ್ಜರಿ ಮತ ಚಲಾವಣೆಯಾಗಿದೆ.

ಇನ್ನು ರಾಮ್ ನಾಥ್ ಕೋವಿಂದ್ ಪರ ಕರ್ನಾಟಕದಲ್ಲಿ ಕೇವಲ 56 ಮತಗಳು ಚಲಾವಣೆಯಾಗಿದ್ದು ಮತಗಳ ಮೌಲ್ಯ 7,336 ಆಗಿದೆ. ಒಟ್ಟು 3 ಶಾಸಕರ ಮತಗಳು ಅಸಿಂಧುವಾಗಿವೆ. ಇನ್ನು ಜೆಡಿಎಸ್ ನ ವೈ.ಎಸ್.ವಿ ದತ್ತಾ ಹಾಗೂ ಚಲುವರಾಯಸ್ವಾಮಿ ಮತ ಚಲಾಯಿಸಿರಲಿಲ್ಲ.

ಒಟ್ಟು ಶಾಸಕರು - 224
ಚಲಾವಣೆಯಾದ ಮತಗಳು - 222
ಪ್ರತೀ ಮತಗಳ ಮೌಲ್ಯ - 131
ಮೀರಾ ಕುಮಾರ್ ಪರ ಚಲಾವಣೆಯಾದ ಮತಗಳು -163, ಮೌಲ್ಯ21,353
ರಾಮ್ ನಾಥ್ ಕೋವಿಂದ್ ಪರ ಚಲಾವಣೆಯಾದ ಮತಗಳು - 56, ಮೌಲ್ಯ 7,336
ತಿರಸ್ಕೃತ ಮತಗಳು - 3, ಮೌಲ್ಯ 393
ಇನ್ನು ಕರ್ನಾಟಕಕ್ಕಿಂತ ಹೆಚ್ಚು ಪಶ್ಚಿಮ ಬಂಗಾಳದಲ್ಲಿ ಮೀರಾ ಕುಮಾರ್ ಪರ ಮತಚಲಾವಣೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ 41,223 ಮೌಲ್ಯದ ಮತಗಳು ಮೀರಾ ಪರ ಚಲಾವಣೆಯಾಗಿವೆ. ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು ಮೂರನೇ ಸ್ಥಾನದಲ್ಲಿ ಕೇರಳ ಇದೆ. ಇಲ್ಲಿ 20,973 ಮೌಲ್ಯದ ಮತಗಳು ಮೀರಾ ಕುಮಾರ್ ಗೆ ಬಿದ್ದಿವೆ.
ಇನ್ನು ಬಿಜೆಪಿ ಪರ ಅತೀ ಹೆಚ್ಚಿನ 69,680 ಮೌಲ್ಯದ ಮತಗಳು ಉತ್ತರ ಪ್ರದೇಶವೊಂದರಲ್ಲೇ ಚಲಾವಣೆಯಾಗಿವೆ. ಇನ್ನು ಆಂಧ್ರ ಪ್ರದೇಶದಲ್ಲಿ ಒಂದೇ ಒಂದು ಮತಗಳು ಮೀರಾ ಕುಮಾರ್ ಪರವಾಗಿ ಬಿದ್ದಿಲ್ಲ. ಇಲ್ಲಿ ಎಲ್ಲಾ ಮತಗಳು ಕೋವಿಂದ್ ರಿಗೇ ಬಿದ್ದಿವೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications