ಶಾಲಾ- ಕಾಲೇಜು ಆರಂಭ; ವಿವಿಧ ಜಿಲ್ಲೆಗಳಲ್ಲಿ ಪ್ರತಿಕ್ರಿಯೆ ಹೇಗಿದೆ?
ಕರ್ನಾಟಕ, ಆಗಸ್ಟ್ 23: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಶಾಲಾ- ಕಾಲೇಜುಗಳು ಒಂದೂವರೆ ವರ್ಷದ ಬಳಿಕ ಇದೀಗ ಭೌತಿಕ ತರಗತಿಗಳನ್ನು ಆ. 23 ರಿಂದ ಪ್ರಾರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.
ಬೆಂಗಳೂರು
ಚಿತ್ರಣ
ಕರ್ನಾಟದ
ಬಹುತೇಕ
ಜಿಲ್ಲೆಗಳಲ್ಲಿ
ಇಂದಿನಿಂದ
(ಆ.
23)
9
ರಿಂದ
12ನೇ
ತರಗತಿ
ವಿದ್ಯಾರ್ಥಿಗಳಿಗೆ
ಭೌತಿಕ
ತರಗತಿ
ಆರಂಭವಾಗಿದ್ದು,
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಬೆಂಗಳೂರಿನ
ಮಲ್ಲೇಶ್ವರದ
ಸರ್ಕಾರಿ
ಪದವಿ
ಪೂರ್ವ
ಕಾಲೇಜಿಗೆ
ಭೇಟಿ
ನೀಡಿದರು.
ಕಾಲೇಜಿನಲ್ಲಿ ಭೌತಿಕ ತರಗತಿ ಆರಂಭಕ್ಕೆ ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು. ಈ ವೇಳೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ ಉಪಸ್ಥಿತರಿದ್ದರು.
ನಂತರ ಶಾಲೆ ಆರಂಭದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಲ್ಲೇಶ್ವರದ ನಿರ್ಮಲ ರಾಣಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಆಫ್ಲೈನ್ ತರಗತಿ ಬೇಕಾ ಅಥವಾ ಆನ್ಲೈನ್ ಸಾಕಾ ಎಂಬ ಸಿಎಂ ಪ್ರಶ್ನೆಗೆ ವಿದ್ಯಾರ್ಥಿಗಳು ಆಫ್ಲೈನ್ ತರಗತಿ ಬೇಕು ಎಂದು ಪ್ರತಿಕ್ರಿಯಿಸಿದರು.
ಸುಮಾರು ಒಂದೂವರೆ ವರ್ಷ ಕೋವಿಡ್ ಸೋಂಕು ಕಾರಣಕ್ಕೆ ಶಾಲೆಗಳು ಬಂದ್ ಆಗಿದ್ದವು. ಆ ಸಂದರ್ಭದಲ್ಲಿ ಪರ್ಯಾಯ ಕ್ರಮದ ಮೂಲಕ ಶಿಕ್ಷಣ ಕೊಡಲಾಗಿದೆ. ವಿದ್ಯಾರ್ಥಿಗಳ ಜತೆ ಶಿಕ್ಷಣ ಇಲಾಖೆ ನಿರಂತರ ಸಂಪರ್ಕದಲ್ಲಿತ್ತು. ಶಿಕ್ಷಣ ಇಲಾಖೆ ಉತ್ತಮವಾದ ಕೆಲಸ ಮಾಡಿದೆ. ಇದೀಗ ಅಧ್ಯಯನ ಮಾಡಿ ತಜ್ಞರ ವರದಿ ಪಡೆದು ಶಾಲೆ ಆರಂಭ ಮಾಡಲಾಗಿದೆ. ಮಲ್ಲೇಶ್ವರಂ ಕಾಲೇಜಿನ ಮಕ್ಕಳು ಹಾಗೂ ಶಿಕ್ಷಕರ ಜತೆ ಚರ್ಚೆ ಮಾಡಿದ್ದೇನೆ. ಇಲ್ಲಿ ಕಳೆದ ಒಂದು ವಾರದಿಂದ ತಯಾರಿ ಮಾಡಲಾಗಿದೆ. ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ಶಾಲೆ ಆರಂಭ ಖುಷಿಯಾಗಿದೆ. ರಾಜ್ಯಾದ್ಯಂತ ಇದೇ ವಾತಾವರಣ ಇದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಮಕ್ಕಳ ಶಿಕ್ಷಕರ ಸಂಬಂಧ ಮತ್ತೆ ಶುರುವಾಗಿದೆ. ವಿದ್ಯಾರ್ಥಿಗಳು ಶಾಲೆ ಆರಂಭದ ಬಗ್ಗೆ ಸಂತೋಷವಾಗಿದ್ದಾರೆ. ಆನ್ಲೈನ್ ಕ್ಲಾಸ್ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಸಮಸ್ಯೆಯಾಗಿತ್ತು. ಹೀಗಾಗಿ ಶಾಲೆ ಆರಂಭಕ್ಕೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ. ಕೋವಿಡ್ ಮಾರ್ಗಸೂಚಿ ಕಠಿಣವಾಗಿ ಅನುಸರಿಸಲು ಹೇಳಲಾಗಿದೆ. ಶಾಲೆ ಆರಂಭ ನನಗೆ ತುಂಬಾ ಸಂತೋಷವಾಗಿದೆ. ಇಂದು ಮಕ್ಕಳಿಗೆ ಕೋವಿಡ್ನಿಂದ ಸ್ವತಂತ್ರ ಸಿಕ್ಕಿದೆ ಎಂದು ಸಂತಸಪಟ್ಟಿದ್ದಾರೆ.
ಶಿವಮೊಗ್ಗ
ವರದಿ
ರಾಜ್ಯಾದ್ಯಂತ
ಇಂದಿನಿಂದ
ಶಾಲಾ-
ಕಾಲೇಜು
ಆರಂಭ
ಹಿನ್ನೆಲೆಯಲ್ಲಿ
ಶಾಲಾ-
ಕಾಲೇಜುಗಳಿಗೆ
ಮಕ್ಕಳನ್ನು
ಕಳುಹಿಸುವಂತೆ
ಗ್ರಾಮೀಣಾಭಿವೃದ್ಧಿ
ಹಾಗೂ
ಶಿವಮೊಗ್ಗ
ಜಿಲ್ಲಾ
ಉಸ್ತುವಾರಿ
ಸಚಿವ
ಕೆ.ಎಸ್.
ಈಶ್ವರಪ್ಪ
ವಿಡಿಯೋ
ಬಿಡುಗಡೆ
ಮಾಡಿ,
ಪೋಷಕರಿಗೆ
ಮನವಿ
ಮಾಡಿದ್ದಾರೆ.
ಕೊರೊನಾ ಸೋಂಕು ಬಂದ ನಂತರದಲ್ಲಿ ನೇರ ಶಿಕ್ಷಣ ವ್ಯವಸ್ಥೆಯೇ ತಪ್ಪಿಹೋಗಿತ್ತು. ವಿಶ್ವದಲ್ಲಿ ಕೊರೊನಾ ಓಡಿಸುವಲ್ಲಿ ದೇಶ ಯಶಸ್ವಿಯಾಗುತ್ತಿದ್ದು, ಕರ್ನಾಟಕ ಕೂಡ ಅದೇ ಹಾದಿಯಲ್ಲಿದೆ.
ಕೊರೊನಾ ಮೂರನೇ ಅಲೆ ಚರ್ಚೆ ನಡೀತಾ ಇದ್ದರೂ, ಎಷ್ಟು ದಿನ ನಮ್ಮ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯ? ಮಕ್ಕಳಿಗೆ ಆರೋಗ್ಯದ ಜೊತೆಗೆ ಉತ್ತಮ ಶಿಕ್ಷಣವನ್ನು ಕೊಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ. ಮಕ್ಕಳು ಆರೋಗ್ಯವಂತರಾಗಿರಲು ಏನು ವ್ಯವಸ್ಥೆ ಬೇಕೋ ಎಲ್ಲವನ್ನು ಸರ್ಕಾರ ಮಾಡುತ್ತದೆ ಎಂದಿದ್ದಾರೆ.
ಉತ್ತಮ ಆರೋಗ್ಯ ಮತ್ತು ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪೋಷಕರು ಸಹಕಾರ ನೀಡುವಂತೆ ಸಚಿವ ಈಶ್ವರಪ್ಪ ಮನವಿ ಮಾಡಿದರು.
ಸಾಗರ
ಶಾಸಕ
ಎಚ್.
ಹಾಲಪ್ಪ
ಪರಿಶೀಲನೆ
ಇಂದಿನಿಂದ
ಶಾಲಾ-
ಕಾಲೇಜುಗಳಲ್ಲಿ
9
ರಿಂದ
12
ನೇ
ತರಗತಿಗಳು
ಪ್ರಾರಂಭವಾಗುತ್ತಿರುವ
ಹಿನ್ನಲೆಯಲ್ಲಿ
ಶಾಸಕರಾದ
ಎಚ್.ಹಾಲಪ್ಪ
ಸಾಗರದ
ಸರ್ಕಾರಿ
ಪದವಿ
ಪೂರ್ವ
ಕಾಲೇಜಿನ
ಪ್ರೌಢಶಾಲೆ
ವಿಭಾಗಕ್ಕೆ
ಭೇಟಿ
ನೀಡಿ,
ವಿದ್ಯಾರ್ಥಿಗಳಿಗೆ
ಆತ್ಮ
ಸ್ಥೈರ್ಯ
ತುಂಬಿದರು.
Recommended Video
ಭೌತಿಕ ತರಗತಿ ವ್ಯವಸ್ಥೆ ಪರಿಶೀಲಿಸಿ, ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಿಕೊಂಡು ತರಗತಿಗಳನ್ನು ನಡೆಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು. ನಂತರ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಕೊಠಡಿಗಳ ನವೀಕರಣಕ್ಕೆ MSIL ವತಿಯಿಂದ 35 ಲಕ್ಷ ಅನುದಾನ ಮಂಜೂರು ಮಾಡಿದ್ದು, ಪರಿಕರಗಳನ್ನು ಪರಿಶೀಲಿಸಿದರು. ನಗರಸಭೆ ಅಧ್ಯಕ್ಷರು, ಸದಸ್ಯರು, CDC ಸಮಿತಿಯವರು ಉಪಸ್ಥಿತರಿದ್ದರು.
ರಾಮನಗರ
ಚಿತ್ರಣ
ಇಂದಿನಿಂದ
ಶಾಲಾ-
ಕಾಲೇಜುಗಳು
ಆರಂಭ
ಹಿನ್ನೆಲೆ
ರಾಮನಗರ
ಜಿಲ್ಲೆಯಲ್ಲಿ
ಶಾಲಾ-
ಕಾಲೇಜಿಗೆ
ವಿದ್ಯಾರ್ಥಿಗಳು
ಆಗಮಿಸಿದರು.
ಬಾಲಕಿಯರ
ಪದವಿ
ಪೂರ್ವ
ಕಾಲೇಜಿನಲ್ಲಿ
ಶಾಲಾ
ಸಿಬ್ಬಂದಿ
ಸಿದ್ಧತೆ
ಮಾಡಿಕೊಂಡಿದ್ದು,
ಶಾಲೆಗೆ
ಬರುವ
ಮಕ್ಕಳಿಗೆ
ಕಡ್ಡಾಯವಾಗಿ
ಮಾಸ್ಕ್
ಹಾಕಿರಬೇಕು
ಎಂದು
ಹೇಳಲಾಗಿದೆ.
ಇದೇ
ಶಾಲೆಗೆ
ಆಗಮಿಸಿದ
ವಿದ್ಯಾರ್ಥಿಗಳಿಗೆ
ಥರ್ಮಲ್
ಸ್ಕ್ಯಾನಿಂಗ್
ಮಾಡಿ,
ಸ್ಯಾನಿಟೈಸ್
ಮಾಡಲಾಯಿತು.
ರಾಮನಗರದ ಐಜೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಚಾಕಲೇಟ್, ಹೂ ಕೊಟ್ಟು ಶಿಕ್ಷಕರು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಅದೇ ರೀತಿ ಶಾಲೆಗೆ ಆಗಮಿಸಿದ ಮಕ್ಕಳಿಗೆ ಸಾರ್ವಜನಿಕರಿಂದ ಸಿಹಿ ವಿತರಣೆ ಮಾಡಲಾಯಿತು.
ವಿದ್ಯಾರ್ಥಿಗಳೊಂದಿಗೆ
ಸಂವಾದ
ನಡೆಸಿದ
ಸುಧಾಕರ್
ರಾಜ್ಯ
ಸರ್ಕಾರದ
ಸೂಚನೆಯಂತೆ
ರಾಜ್ಯಾದ್ಯಂತ
ಹಲವು
ದಿನಗಳ
ಬಳಿಕ
9
ರಿಂದ
12
ತರಗತಿಗಳು
ಸೋಮವಾರದಿಂದ
ಆರಂಭಗೊಂಡಿದ್ದು,
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ,
ವೈದ್ಯಕೀಯ
ಶಿಕ್ಷಣ
ಹಾಗೂ
ಜಿಲ್ಲಾ
ಉಸ್ತುವಾರಿ
ಸಚಿವರಾದ
ಡಾ.ಕೆ.
ಸುಧಾಕರ್
ಚಿಕ್ಕಬಳ್ಳಾಪುರ
ನಗರದ
ವಿವಿಧ
ಸರ್ಕಾರಿ
ಪ್ರೌಢಶಾಲೆಗಳಿಗೆ
ಭೇಟಿ
ನೀಡಿ,
ಕೊರೊನಾ
ಹಿನ್ನಲೆಯಲ್ಲಿ
ಶಾಲೆಗಳಲ್ಲಿ
ಕೈಗೊಂಡಿರುವ
ಸಿದ್ಧತೆಗಳ
ಬಗ್ಗೆ
ಪರಿಶೀಲನೆ
ನಡೆಸಿ,
ವಿದ್ಯಾರ್ಥಿಗಳೊಂದಿಗೆ
ಸಂವಾದ
ನಡೆಸಿದರು.
ಮೊದಲಿಗೆ ನಗರದ ಬಿ.ಬಿ. ರಸ್ತೆಯಲ್ಲಿರುವ ಜೂನಿಯರ್ ಕಾಲೇಜು ಆವರಣದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಠಿಯಿಂದ ಶಾಲೆಯಲ್ಲಿ ಕೈಗೊಂಡಿರುವ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿ ಶಿಕ್ಷಕರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ನಿರ್ಭಯವಾಗಿ ಶಾಲೆಗಳಿಗೆ ಬರಬಹುದು ಎಂದು ನೈತಿಕ ಸ್ಥೈರ್ಯ ತುಂಬಿದರು. ಬಳಿಕ ನಗರದ ವಾಪಸಂದ್ರದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿದ ಸಚಿವರು, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.