Get Updates
Get notified of breaking news, exclusive insights, and must-see stories!

ಹಜಾಮ ಪದ ಬಳಕೆಗೆ ಶಿಕ್ಷೆ, ಕಾನೂನು ತರಲು ಆಗ್ರಹ

ಬೆಂಗಳೂರು ಆಗಸ್ಟ್‌ 24: ಹಜಾಮ/ಅಜಾಮ ಪದವನ್ನು ಬಳಸಿ ಬೈಯುವರನ್ನು ಶಿಕ್ಷೆಗೆ ಒಳಪಡಿಸಲು ಅನುವು ಮಾಡಿಕೊಡುವ ಕಾನೂನು ಜಾರಿಗೆ ತನ್ನಿ ಎಂದು ಕರ್ನಾಟಕ ರಾಜ್ಯ ಕ್ಷೌರಿಕರ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ. ಶಿವಕುಮಾರ್‌ ಆಗ್ರಹಿಸಿದ್ದಾರೆ.

Recommended Video

      ಡಿಕೆಶಿ ಗೂಂಡ ಪವೃತ್ತಿ ಬಿಡಬೇಕು..! | Oneindia Kannada

      ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯರಾದ ರವಿಕುಮಾರ್‌ ಅವರ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿರುವ ಅವರು ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಕ್ಷೌರಿಕ ಮುಟ್ಟದ ಜನರಿಲ್ಲ ಆದರೆ ನಮಗೆ ಸಾಮಾಜಿಕವಾಗಿ ಗೌರವ ದೊರೆಯುತ್ತಿಲ್ಲ.

      Karnataka Salon Owners Demand Bring Law To Restrict Use Of Hajama Word


      ಎಲ್ಲಾ ವರ್ಗದ ಭಯದ ನೆರಳಿನಲ್ಲಿ ಅಪಹಾಸ್ಯ, ಅವಮಾನ, ಹಿಂಸೆ, ನಿಂದನೆ ಹಾಗೂ ಎಲ್ಲಾ ವರ್ಗಗಳ ಬಾಯಿಯ ಬೈಗುಳದ ತುತ್ತಾಗಿ ಅಪಮಾನಕ್ಕೆ ಒಳಗಾಗಿ ಮಾನಸಿಕ ಹಿಂಸೆ ಅನುಭವಿಸಿಕೊಂಡು ಅಪಹಾಸ್ಯಕ್ಕೆ ತುತ್ತಾಗಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

      ಇಂತಹ ದಾರುಣ ಪರಿಸ್ಥಿತಿ ನಮ್ಮ ಮುಂದಿನ ಪೀಳಿಗೆ ಅನುಭವಿಸಬಾರದು ಎನ್ನುವ ಸದುದ್ದೇಶದಿಂದ ಹಜಾಮ/ಅಜಾಮ ಪದವನ್ನು ಬಳಸಿ ಅಪಮಾನ ಮಾಡಿದರೆ ಅಂತಹವರನ್ನು ಶಿಕ್ಷೆಗೆ ಒಳಪಡಿಸುವಂತಹ ಕಾನೂನನ್ನು ಜಾರಿಗೆ ತರುವ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಕಾನೂನು ಜಾರಿಗೊಳಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡುವಂತೆ ವಿನಂತಿ ಮಾಡಿಕೊಂಡಿದ್ದೇವೆ ಎಂದರು.

      Karnataka Salon Owners Demand Bring Law To Restrict Use Of Hajama Word

      ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯರಾದ ರವಿಕುಮಾರ್‌ ಮತ್ತು ಬೆಂಗಳೂರು ನಗರ ಅಧ್ಯಕ್ಷ ಹೆಚ್‌.ಎನ್‌ ನರಸಿಂಹಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+