ಸರ್ಕಾರಿ ಕಾರ್ಯಕ್ರಮದಲ್ಲೇ ಕನ್ನಡ ಕಡೆಗಣನೆ, ಕರವೇ ಎಚ್ಚರಿಕೆ

ಬೆಂಗಳೂರು,

ಅಕ್ಟೋಬರ್
13:
ಕರ್ನಾಟಕದಲ್ಲಿ
ರಾಜ್ಯ
ಅಥವಾ
ಕೇಂದ್ರ
ಸರ್ಕಾರದ
ಯಾವುದೇ
ಸಂಸ್ಥೆಗಳಲ್ಲಿ
ನಡೆಯುವ
ಸಾರ್ವಜನಿಕ‌
ಸಮಾರಂಭಗಳಲ್ಲಿ
ಕನ್ನಡವನ್ನು
ಕಡೆಗಣಿಸಿದರೆ
ಅದನ್ನು
ಸಹಿಸಿಕೊಳ್ಳಲು
ಸಾಧ್ಯವಿಲ್ಲ,
ಮುಂದೆ‌
ರೀತಿಯ
ಘಟನೆಗಳು
ನಡೆದರೆ
ಆಗುವ
ಅನಾಹುತಗಳಿಗೆ
ಆಯಾ
ಸಂಸ್ಥೆಗಳೇ
ಹೊಣೆಯಾಗುತ್ತದೆ
ಎಂದು
ಕರ್ನಾಟಕ
ರಕ್ಷಣಾ
ವೇದಿಕೆ‌
ಎಚ್ಚರಿಕೆ
ನೀಡಿದೆ.

id="toptextpromo">
id='are-slot-1'
class='oiad
oi-axt
oiadv'>

ರಾಜ್ಯದ

ಪ್ರತಿಷ್ಠಿತ
ಆರೋಗ್ಯ
ಸಂಸ್ಥೆಗಳಾದ
ಎಸ್‌ಡಿಎಸ್
ಕ್ಷಯರೋಗ
ಸಂಶೋಧನಾ
ಕೇಂದ್ರ
ಹಾಗೂ
ರಾಜೀವ್
ಗಾಂಧಿ
ಎದೆರೋಗ
ಸಂಸ್ಥೆ
ಹಾಗು
ರಾಷ್ಟ್ರೀಯ
ನರವಿಜ್ಞಾನ
ಮತ್ತು
ಮಾನಸಿಕ
ಆರೋಗ್ಯ
ಸಂಸ್ಥೆಗಳಲ್ಲಿ
10-10-2021ರಂದು
ನಡೆದ
ಕಾರ್ಯಕ್ರಮಗಳಲ್ಲಿ
ಕನ್ನಡವನ್ನು
ಕಡೆಗಣಿಸಿದ
ಹಿನ್ನೆಲೆಯಲ್ಲಿ
ಕರ್ನಾಟಕ
ರಕ್ಷಣಾ
ವೇದಿಕೆ
ಮುಖಂಡರು
ಇಂದು
(13-10-2021)
ಉಭಯ
ಸಂಸ್ಥೆಗಳ
ಮುಖ್ಯಸ್ಥರನ್ನು
ಪ್ರತ್ಯೇಕವಾಗಿ
ಭೇಟಿ
ಮಾಡಿ
ಎಚ್ಚರಿಕೆ
ನೀಡಲಾಗಿದೆ
ಎಂದು
ಕರ್ನಾಟಕ
ರಕ್ಷಣಾ
ವೇದಿಕೆ
ಸಾಮಾಜಿಕ‌
ಜಾಲತಾಣ
ಮಖ್ಯಸ್ಥರಾದ
ದಿನೇಶ್
ಕುಮಾರ್
ಎಸ್.ಸಿ
ತಿಳಿಸಿದರು.

id='are-slot-2'
class='oiad
oi-axt
oiadv'>

ನಾರಾಯಣಗೌಡರು ಬರೆದಿರುವ ಖಂಡನಾ ಪತ್ರ

ನಾರಾಯಣಗೌಡರು ಬರೆದಿರುವ ಖಂಡನಾ ಪತ್ರ

ಈ ಸಂಬಂಧ ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಹಾಗು ರಾಜೀವ್ ಗಾಂಧಿ‌ ಆಸ್ಪತ್ರೆಯ ನಿರ್ದೇಶಕ‌‌ ಡಾ.ನಾಗರಾಜ್ ಅವರಿಗೆ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಬರೆದಿರುವ ಖಂಡನಾ ಪತ್ರವನ್ನು ನೀಡಲಾಯಿತು. ಆಗಿರುವ ಪ್ರಮಾದವನ್ನು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಕನ್ನಡ ಕಡೆಗಣನೆ ಆಗಿರುವುದನ್ನು ಒಪ್ಪಿಕೊಂಡು‌‌ ಕ್ಷಮೆ ಯಾಚಿಸಿದ ನಿರ್ದೇಶಕರು ಇನ್ನುಮುಂದೆ ಈ ರೀತಿಯ ತಪ್ಪುಗಳು ಆಗದಂತೆ ನೋಡಿಕೊಳ್ಳುವುದಾಗಿ ವಾಗ್ದಾನ ಮಾಡಿದರು.

ಅಪಮಾನ ಎಸಗಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ

ಅಪಮಾನ ಎಸಗಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ

ನಿಮ್ಹಾನ್ಸ್ ಸಂಸ್ಥೆಗೆ ನೂರು ಎಕರೆ ಜಾಗ ನೀಡಿ, ಅಡಿಗಲ್ಲು ಹಾಕಿ ಸ್ಥಾಪಿಸಿದ್ದು ರಾಜರ್ಷಿ‌ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. 1936ರಲ್ಲಿ ನಿಮ್ಹಾನ್ಸ್ ಸಂಸ್ಥೆಯನ್ನು ಸ್ಥಾಪಿಸಿದಾಗ ಹಿಂದಿ ಎಂಬ ಭಾಷೆಯ ಪರಿಚಯವೇ ಕನ್ನಡಿಗರಿಗೆ ಇರಲಿಲ್ಲ. ಇಂಥ‌ ಸಂಸ್ಥೆಯಲ್ಲಿ ಹಿಂದಿ ನುಡಿಗೆ ಹೆಚ್ಚುಗಾರಿಕೆ ನೀಡಿ,‌ ಕನ್ನಡಕ್ಕೆ ಅಪಮಾನ ಎಸಗಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಿರ್ದೇಶಕರಿಗೆ ಮನವರಿಗೆ ಮಾಡಿಕೊಡಲಾಯಿತು.

ಸರ್ಕಾರದ ಆಡಳಿತ ಭಾಷಾ‌ನೀತಿಯನ್ನು ಉಲ್ಲಂಘನೆ

ಸರ್ಕಾರದ ಆಡಳಿತ ಭಾಷಾ‌ನೀತಿಯನ್ನು ಉಲ್ಲಂಘನೆ

ಅದೇ ರೀತಿ‌ ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ರಾಜೀವ್ ಗಾಂಧಿ‌ ಎದೆರೋಗಗಳ ಆಸ್ಪತ್ರೆಯ ಜಾಗದಲ್ಲಿ ಖಾಸಗಿ ಸಂಸ್ಥೆಗಳು ಸ್ಥಾಪಿಸುತ್ತಿರುವ ಕೋವಿಡ್ ಫೀಲ್ಡ್ ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ‌ ಕನ್ನಡ ಬಳಸದೆ ಸರ್ಕಾರದ ಆಡಳಿತ ಭಾಷಾ‌ನೀತಿಯನ್ನು ಉಲ್ಲಂಘಿಸಲಾಗಿದೆ. ಇನ್ನುಮುಂದೆ ಇದೇ ರೀತಿ ನಡೆದರೆ ಖಾಸಗಿ ಸಂಸ್ಥೆಗಳ ವಿರುದ್ಧವೂ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಲಾಯಿತು.

Recommended Video

    ಸಲೀಂ ಮತ್ತು ಉಗ್ರಪ್ಪ ಹೇಳಿಕೆಗೆ ಡಿಕೆಶಿ ಕೊಟ್ಟ ಪ್ರತಿಕ್ರಿಯೆ | Oneindia Kannada
    ಕರ್ನಾಟಕ ರಕ್ಷಣಾ ವೇದಿಕೆ ನಿಯೋಗ

    ಕರ್ನಾಟಕ ರಕ್ಷಣಾ ವೇದಿಕೆ ನಿಯೋಗ

    ಕರ್ನಾಟಕ ರಕ್ಷಣಾ ವೇದಿಕೆ ನಿಯೋಗದಲ್ಲಿ‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಉಪಾಧ್ಯಕ್ಷ‌ ಬಿ.ಎಚ್.ಸತೀಶ್ ಗೌಡ,‌ ಸಾಮಾಜಿಕ ಜಾಲತಾಣ ಮುಖ್ಯಸ್ಥ ದಿನೇಶ್ ಕುಮಾರ್ ಎಸ್.ಸಿ, ಯುವ ಘಟಕದ ರಾಜ್ಯಾಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ, ಸಾಮಾಜಿಕ ಜಾಲತಾಣ ಬೆಂಗಳೂರು ನಗರ ಅಧ್ಯಕ್ಷ ನಿತೀಶ್ ಮನುಗೌಡ, ವಿಜಯನಗರ ಕ್ಷೇತ್ರ ಘಟಕದ ಅಧ್ಯಕ್ಷ ಬಾಲು, ಯುವ ಘಟಕದ ಬೆಂಗಳೂರು ನಗರ ಅಧ್ಯಕ್ಷ ಕಾರ್ತಿಕ್ ಸೇರಿದಂತೆ‌ ಹಲವರು ಪಾಲ್ಗೊಂಡಿದ್ದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+