Get Updates
Get notified of breaking news, exclusive insights, and must-see stories!

ಅಂಡಮಾನ್‌ ಜೈಲಿಗೆ ಕಳಿಸಿಬಿಡಿ ಎಂದು ಕೃಷ್ಣ ಅವರಿಗೆ ಕೇಳಿದ್ದೆ: ಕರವೇ ನಾರಾಯಣಗೌಡ

ರಾಜ್ಯದ ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರ ನಿಧನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಸಂತಾಪ ಸೂಚಿಸಿದ್ದಾರೆ. ನಾಡಿನ ಹಿರಿಯ ಚೇತನ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಅಗಲಿದ್ದಾರೆ. ಬೆಂಗಳೂರಿಗೆ ಸಿಲಿಕಾನ್ ಸಿಟಿ, ಐಟಿ ಸಿಟಿ, ಐಟಿ ರಾಜಧಾನಿ ಇತ್ಯಾದಿ ಹೆಸರುಗಳು ಬರಲು ಮುಖ್ಯ ಕಾರಣ ಎಸ್.ಎಂ.ಕೃಷ್ಣ ಅವರು ಎಂದು ನೆನೆದಿದ್ದಾರೆ.

ಕೃಷ್ಣ ಅವರು ತಮ್ಮ ದೂರದೃಷ್ಟಿತ್ವ, ಅಭಿವೃದ್ಧಿಪರ ಚಿಂತನೆಯಿಂದ ಬೆಂಗಳೂರಿನ ಚಿತ್ರವನ್ನೇ ಬದಲಾಯಿಸಿದರು‌. ಸಜ್ಜನರು, ಸಹೃದಯಿಯೂ ಆಗಿದ್ದ ಎಸ್.ಎಂ.ಕೃಷ್ಣ ಅಜಾತಶತ್ರುವೆಂದು ಕರೆಸಿಕೊಂಡಿದ್ದರು. ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವ ಹೀಗೆ ತಮಗೆ ಒದಗಿ ಬಂದ ಎಲ್ಲ ಬಗೆಯ ಅಧಿಕಾರವನ್ನೂ ಜನರ ಒಳಿತಿಗೆ ಬಳಸಿಕೊಂಡರು ಎಂದು ಸ್ಮರಿಸಿದ್ದಾರೆ.

Karnataka Rakshana Vedike Leader T A Narayan Gowda Condoles S M Krishna s Demise

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅತ್ಯಂತ ಕಠಿಣ ಸಮಸ್ಯೆಗಳು ತಲೆದೋರಿದ್ದವು. ವರನಟ ಡಾ.ರಾಜಕುಮಾರ್ ಅಪಹರಣ, ಕಾವೇರಿ ವಿವಾದ.. ಹೀಗೆ ಒಂದಿಲ್ಲೊಂದು ಸಮಸ್ಯೆಗಳನ್ನು ಅವರು ನಿಭಾಯಿಸಬೇಕಾಯಿತು. ಇಷ್ಟೆಲ್ಲದರ ನಡುವೆಯೂ ಅವರು ಆರ್ಥಿಕ ಕ್ಷೇತ್ರದಲ್ಲಿ ಕರ್ನಾಟಕವನ್ನು ಇಡೀ ದೇಶದಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿದರು. ಇದು ಅವರ ಆಳವಾದ ರಾಜಕೀಯ ಪ್ರಜ್ಞೆ, ಅಧ್ಯಯನಶೀಲತೆ, ಕ್ರಿಯಾಶೀಲತೆ, ಅಪಾರವಾದ ಜ್ಞಾನವನ್ನು ತೋರಿಸುತ್ತದೆ ಎಂದು ಶ್ಲಾಘಿಸಿದ್ದಾರೆ.

ಹಲವು ಬಾರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದಾಗ ನಾನು‌ ಗಮನಿಸಿದ್ದು ಅವರ ಸೂಕ್ಷ್ಮಗ್ರಾಹಿ ಗುಣ, ಸಂದರ್ಭವನ್ನು ಅರಿತು ನಿರ್ಧಾರ ತೆಗೆದುಕೊಳ್ಳುವ ಅವರ ರಾಜಕೀಯ ಚತುರತೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಚಳವಳಿ ಏರುಗತಿಯನ್ನು ಪಡೆದುಕೊಂಡಿತ್ತು. ಹೀಗಾಗಿ ನಾವು ಹಲವು ಬಾರಿ ಬಂಧನಕ್ಕೊಳಗಾಗಿ ಜೈಲು ಸೇರಬೇಕಾಯಿತು ಎಂದು ಕನ್ನಡ ಹೋರಾಟಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಒಮ್ಮೆ ಬಳ್ಳಾರಿ ಜೈಲುವಾಸವನ್ನೂ ಅನುಭವಿಸಿದೆವು. ಎಲ್ಲ ಜೈಲುಗಳನ್ನು ನೋಡಿದೆವು. ಅಂಡಮಾನ್ ಜೈಲೊಂದನ್ನು ನೋಡುವ ಆಸೆ, ಅಲ್ಲಿಗೂ ಕಳಿಸಿಬಿಡಿ ಎಂದು ಎಸ್.ಎಂ.ಕೃಷ್ಣ ಅವರಿಗೆ ಒಮ್ಮೆ ತಮಾಶೆಯಾಗಿ ಹೇಳಿದ್ದೆ. ಆದರೆ, ಅವರು ಆಡಳಿತಾತ್ಮಕವಾಗಿ ಏನೇ ತೀರ್ಮಾನ ತೆಗೆದುಕೊಂಡರೂ ಅದರಲ್ಲಿ ವೈಯಕ್ತಿಕ ಹಗೆ, ಸೇಡು ಇತ್ಯಾದಿಯನ್ನು ಎಂದಿಗೂ ಮಿಶ್ರಣ ಮಾಡುತ್ತಿರಲಿಲ್ಲ‌. ಹೀಗಾಗಿ ಅವರ ಮೇಲಿನ ಅಭಿಮಾನಕ್ಕೆ ಎಂದೂ ಧಕ್ಕೆಯಾಗಿರಲಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.

Karnataka Rakshana Vedike Leader T A Narayan Gowda Condoles S M Krishna s Demise

ಎಸ್.ಎಂ.ಕೃಷ್ಣ ಅವರು ಇವತ್ತಿನ ದ್ವೇಷ, ಸೇಡಿನ ರಾಜಕಾರಣಕ್ಕೆ ವ್ಯತಿರಿಕ್ತವಾಗಿ ಸ್ನೇಹ, ಪ್ರೀತಿಯ ರಾಜಕಾರಣವನ್ನು ನಡೆಸಿದವರು. ಈ ಗುಣಗಳಿಗಾಗಿಯೇ ಅವರು ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಸದಾ ಸ್ಮರಣೀಯರಾಗಿರುತ್ತಾರೆ. ಎಸ್.ಎಂ.ಕೃಷ್ಣ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ದೊರೆಯಲಿ. ಹೋಗಿ ಬನ್ನಿ ಸರ್, ನಿಮ್ಮ ಕೊಡುಗೆಯನ್ನು ಕರ್ನಾಟಕ ಎಂದಿಗೂ ಮರೆಯದು. ಭಾವಪೂರ್ಣ ಶ್ರದ್ಧಾಂಜಲಿಗಳು ಎಂದು ಕರವೇ ನಾರಾಯಣಗೌಡರು ಸಂತಾಪ ಸೂಚಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+