ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ 48 ಗಂಟೆಗಳ ಕಾಲ ಮಳೆ, ಜಲಾಶಯದ ನೀರಿನ ಮಟ್ಟ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20 : ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ತಗ್ಗಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. 2284 ಅಡಿ ಗರಿಷ್ಠ ಮಟ್ಟದ ಕಬಿನಿ ಜಲಾಶಯ ಭರ್ತಿಯಾಗಿದೆ. ಸೆಪ್ಟೆಂಬರ್ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ.

ತುಂಬಿದ ಕಬಿನಿಗೆ ಸೆ.21ರಂದು ಸಿದ್ದರಾಮಯ್ಯ ಬಾಗಿನತುಂಬಿದ ಕಬಿನಿಗೆ ಸೆ.21ರಂದು ಸಿದ್ದರಾಮಯ್ಯ ಬಾಗಿನ

Karnataka rain forecast and water level of dams Sep 20, 2017

ಕಳೆದ 24ಗಂಟೆಗಳ ಅವಧಿಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಮುಂದಿನ 48ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಲಾಶಯ ತುಂಬಿದರೂ ಕೊಡಗು ಕೃಷಿಕರಿಗೆ ಸಂಕಷ್ಟ ತಪ್ಪಿದ್ದಲ್ಲ!ಜಲಾಶಯ ತುಂಬಿದರೂ ಕೊಡಗು ಕೃಷಿಕರಿಗೆ ಸಂಕಷ್ಟ ತಪ್ಪಿದ್ದಲ್ಲ!

ಭಾಗಮಂಡಲದಲ್ಲಿ 12, ಸುಳ್ಯ, ಮಡಿಕೇರಿ, ನಾಪೋಕ್ಲುವಿನಲ್ಲಿ 7 ಸೆಂ.ಮೀ.ಮಳೆಯಾಗಿದೆ. ಸೋಮವಾರ ಪೇಟೆ, ಕಳಸ, ಕೊಟ್ಟಿಗೆಹಾರದಲ್ಲಿ 6 ಸೆಂ.ಮೀ., ಧರ್ಮಸ್ಥಳ, ಆಗುಂಬೆ, ಪಣಂಬೂರಿನಲ್ಲಿ 4 ಸೆಂ.ಮೀ.ಮಳೆಯಾಗಿದೆ. ಮಂಗಳೂರು, ಕಮ್ಮರಡಿ, ಲೋಂಡಾ, ಕಾರವಾರದಲ್ಲಿ 3 ಸೆಂ.ಮೀ.ಮಳೆಯಾಗಿದೆ.

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1796.65
ಸುಪಾ 1849.92 1793.50
ವಾರಾಹಿ 1949.50 1924.08
ಹಾರಂಗಿ 2859.00 2857.67
ಹೇಮಾವತಿ 2922.00 2886.87
ಕೆಆರ್ ಎಸ್ 124.80 102.45
ಕಬಿನಿ 2284.00 2282.5
ಭದ್ರಾ 2158.00 2137.41
ತುಂಗಭದ್ರಾ 1633.00 1624.72
ಘಟಪ್ರಭಾ 2175.00 2157.25
ಮಲಪ್ರಭಾ 2079.50 2056.60
ಆಲಮಟ್ಟಿ 1704.81 1704.82
ನಾರಾಯಣಪುರ 1615.00 1614.19
English summary
Meteorological department said rain will continue for at least the next 48 hours in Karavali and Dakshina Kannada district. Water level in almost all dams in Karnataka has increased considerably.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X