ಕರ್ನಾಟಕದ ಬುಧವಾರದ ತುಣುಕು ಸುದ್ದಿಗಳು
ಬೆಂಗಳೂರು, ನ. 5 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 5 ಗಂಟೆ : ರಮ್ಯಾ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತಾರೆ ಮಂಡ್ಯದಲ್ಲಿ ರಮ್ಯಾ ತಾಯಿ ರಂಜಿತಾ ಹೇಳಿಕೆ.
ಸಮಯ 4 ಗಂಟೆ : ಎರಡು ವಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಇಂದು ಮಾತನಾಡಿದರು.
ಸಮಯ 3 ಗಂಟೆ : ನಿಗಮ ಮಂಡಳಿಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ಕುರಿತಂತೆ ಸದ್ಯಕ್ಕೆ ಯಾವುದೇ ಚರ್ಚೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಂದು ಮೈಸೂರಿನಲ್ಲಿ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ.
ಸಮಯ 2 ಗಂಟೆ : ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಪ್ರಯಾಣದರ ಕಡಿಮೆ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಸಂಸ್ಥೆಗಳಿಗೆ ಸಾಲದ ಹೊರೆ ಹೆಚ್ಚಾಗಿದ್ದು, ಆದ್ದರಿಂದ ಸದ್ಯ ಪ್ರಯಾಣ ದರ ಇಳಿಕೆ ಮಾಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಕುರಿತು [ಪ್ರಯಾಣದರ ಇಳಿಕೆಗೆ ಅಧಿಕಾರಿಗಳ ವಿರೋಧ]
ಸಮಯ 1 ಗಂಟೆ : ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಆಗಮಿಸುತ್ತಿದ್ದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಶೇಷಾದ್ರಿಪುರಂ ಕಾಲೇಜಿನ ಬಳಿ ತಡೆದಿದ್ದು, 25 ಜನರನ್ನು ಬಂಧಿಸಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಿಂದ ಪ್ರತಿಭಟನೆ ಆರಂಭಗೊಂಡಿತ್ತು.
ಸಮಯ 12 ಗಂಟೆ : ಬೆಂಗಳೂರಿನಲ್ಲಿ ಚರಂಡಿಯಲ್ಲಿ ಕೊಚ್ಚಿ ಹೋದ ಬಾಲಕಿ ಗೀತಾಲಕ್ಷ್ಮೀ ಪ್ರಕರಣಕ್ಕೆ ಸಂಬಂಧಿದಂತೆ ನ.25ಕ್ಕೆ ಅಂತಿಮ ವರದಿ ನೀಡುವಂತೆ ಹೈಕೋರ್ಟ್ ಬಿಬಿಎಂಪಿ, ಪೊಲೀಸ್ ಇಲಾಖೆಗೆ ಆದೇಶ ನೀಡಿದೆ. ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಹೊರಡಿಸಿದೆ.
ಸಮಯ 11 ಗಂಟೆ : ಕಾರವಾರದಲ್ಲಿ ಮೀನುಗಾರರ ಗುಡಿಸಲು ತೆರವುಗೊಳಿಸಿದ ಜಿಲ್ಲಾಡಳಿತದ ಕ್ರಮ ಖಂಡಿಸಿ ಇಂದು ಕಾರವಾರ ಬಂದ್ಗೆ ಕರೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದ ಎಲ್ಲಾ ಅಂಗಡಿಮುಂಗಟ್ಟುಗಳು ಮುಚ್ಚಲಾಗಿದ್ದು, ಆಟೋ ಸಂಚಾರ ಸ್ಥಗಿತಗೊಂಡಿದೆ. ರವೀಂದ್ರನಾಥ ಕಡಲ ತೀರದಲ್ಲಿದ್ದ ಅನೇಕ ವರ್ಷಗಳಿಂದ ಮೀನುಗಾರರು ವಾಸವಿದ್ದ 100ಕ್ಕೂ ಹೆಚ್ಚು ಗುಡಿಸಲುಗಳನ್ನ ನವೆಂಬರ್ 2ರಂದು ಜಿಲ್ಲಾಡಳಿತ ತೆರವುಗೊಳಿತ್ತು. [ಕಾರವಾರದ ಕಡಲ ತೀರದಲ್ಲಿ ಬಿಗುವಿನ ಪರಿಸ್ಥಿತಿ]
ಸಮಯ
10
ಗಂಟೆ
:
ಬಾಲಕಿ
ಮೇಲಿನ
ಲೈಂಗಿಕ
ದೌರ್ಜನ್ಯ
ಪ್ರಕರಣ
ಬೆಳಕಿಗೆ
ಬಂದ
ನಂತರ
ಮುಚ್ಚಲಾಗಿರುವ
ಇಂದಿರಾನಗರ
ಕೇಂಬ್ರಿಡ್ಜ್
ಇಂಗ್ಲೀಷ್
ಶಾಲೆಯಲ್ಲಿ
ಇಂದು
ಪೋಷಕರ
ಸಭೆಯ
ನಡೆಯಲಿದೆ.
ಶಾಲೆ
ಪುನಃ
ಎಂದು
ಆರಂಭಗೊಳ್ಳಲಿದೆ
ಎಂದು
ಇಂದು
ತೀರ್ಮಾನ
ಕೈಗೊಳ್ಳುವ
ಸಾಧ್ಯತೆ
ಇದೆ.
ಸಮಯ 9 ಗಂಟೆ : ಬೆಳಗಾವಿಯ ಸುವರ್ಣವಿಧಾನಸೌಧದ ಮುಂದೆ ಇಂದು ಎಮ್ಮೆಗಳೊಂದಿಗೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಲಿದ್ದಾರೆ. ಸುವರ್ಣವಿಧಾನಸೌಧದಲ್ಲಿ ಅಧಿವೇಶನ ನಡೆಸುವುದಿಲ್ಲ ಅಂದಮೇಲೆ ಅದನ್ನು ಕಟ್ಟಿದ್ದು ವ್ಯರ್ಥ ಆದ್ದರಿಂದ ಅದನ್ನು ನಮಗೆ ಬಿಟ್ಟುಕೊಡಿ ಎಂದು ಎಮ್ಮೆಗಳು ಬೇಡಿಕೆ ಇಡುತ್ತಿವೆ ಎಂದು ವಾಟಾಳ್ ಪ್ರತಿಭಟನೆ ನಡೆಸಲಿದ್ದಾರೆ.
ಸಮಯ 8 ಗಂಟೆ : ತೀರ್ಥಹಳ್ಳಿಯ ನಂದಿತಾ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿಲು ಪೂರ್ವ ವಲಯ ಐಜಿಪಿ ಡಾ.ಜಿ.ಪರಶಿವಮೂರ್ತಿ ಅವರು ಇಂದು ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಮಂಜುಳಾ ಮಾನಸ ಅವರು ಮಂಗಳವಾರ ರಾತ್ರಿ ನಂದಿತಾ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಸಮಯ 7.30 : ಖಾಸಗಿ ಕಾರ್ಯಕ್ರಮದ ನಿಮಿತ್ತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಸ್ಥಳೀಯ ಕಾಂಗ್ರೆಸಿಗರು ಅವರಿಗೆ ಅಹವಾಲು ಸಲ್ಲಿಕೆ ಮಾಡಲು ಕಾದು ಕುಳಿತಿದ್ದಾರೆ. ಸಚಿವ ಹುದ್ದೆ, ನಿಗಮ ಮಂಡಳಿ ಸ್ಥಾನಮಾನದ ಆಕಾಂಕ್ಷಿಗಳು ಸಿಂಗ್ಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.