ಕರ್ನಾಟಕದ ಗುರುವಾರದ ತುಣುಕು ಸುದ್ದಿಗಳು
ಬೆಂಗಳೂರು, ನ. 13 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 3 ಗಂಟೆ : ಸಚಿವೆ ಉಮಾಶ್ರೀ ವಿರುದ್ಧ ಹೇಳಿಕೆ ನೀಡಿದ್ದ ತೇಜಸ್ವಿನಿ ಅವರಿಗೆ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ತಿರುಗೇಟು ನೀಡಿದ್ದು, ಇಂತಹ ಕೀಳುಮಟ್ಟದ ಹೇಳಿಕೆಯನ್ನು ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ನಲ್ಲಿ ಹಲವು ಮಹಿಳಾ ನಾಯಕಿಯರು ಮೂಲೆಗುಂಪಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸೊರಕೆ ಅವರು ತೇಜಸ್ವಿನಿ ಅವರಿಗೂ ಬಿಜೆಪಿಯಲ್ಲಿ ಇದೇ ಸ್ಥಿತಿ ಬರಲಿದೆ ಎಂದು ಹೇಳಿದ್ದಾರೆ.
ಸಮಯ 2 ಗಂಟೆ : ರಾಜ್ ಪ್ರತಿಮೆಗೆ ಬೆಂಕಿ ಹಚ್ಚಿದ ರಾಜರಾಜೇಶ್ವರಿ ನಗರದ ಬಂಗಾರಪ್ಪ ಲೇಔಟ್ಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆಯನ್ನು ಎಲ್ಲರೂ ಖಂಡಿಸಬೇಕು ಎಂದು ಸಚಿವರು ಹೇಳಿದರು.
ಸಮಯ 1 ಗಂಟೆ : ಸಚಿವೆ ಉಮಾಶ್ರೀ ವಿರುದ್ಧ ಬಿಜೆಪಿ ನಾಯಕಿ ತೇಜಸ್ವಿನಿ ನೀಡಿದ್ದ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. [ಜೋಶಿ ಹೇಳಿದ್ದೇನು ಇಲ್ಲಿದೆ ನೋಡಿ]
ಸಮಯ
12
ಗಂಟೆ
:
ಸರ್ಕಾರಿ
ಬಸ್
ಪ್ರಯಾಣ
ದರ
ಕಡಿಮೆ
ಮಾಡುವಂತೆ
ಒತ್ತಾಯಿಸಿ
ಶಾಂತಿನಗರದ
ಬಸ್
ನಿಲ್ದಾಣದ
ಬಳಿ
ಅಹೋರಾತ್ರಿ
ಧರಣಿ
ನಡೆಸುತ್ತಿದ್ದ
ಎಎಪಿ
ಮುಖಂಡ
ರವಿಕೃಷ್ಣಾ
ರೆಡ್ಡಿ
ಸೇರಿದಂತೆ
25ಕ್ಕೂ
ಹೆಚ್ಚು
ಕಾರ್ಯಕರ್ತರನ್ನು
ಪೊಲೀಸರು
ವಶಕ್ಕೆ
ತೆಗೆದುಕೊಂಡಿದ್ದಾರೆ.
ಇಂದು
ಸಂಜೆ
6
ಗಂಟೆಯಿಂದ
ಪುನಃ
ಧರಣಿ
ಮುಂದುವರೆಸಲು
ಆಪ್
ಕಾರ್ಯಕರ್ತರು
ತೀರ್ಮಾನಿಸಿದ್ದಾರೆ.
ಸಮಯ 11 ಗಂಟೆ : ಎಚ್.ಡಿ.ಕುಮಾರಸ್ವಾಮಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ದೇವೇಗೌಡರು ಪತ್ರಿಕಾಗೋಷ್ಠಿ ನಡೆಸಲಿದ್ದು, ಕುಮಾರಸ್ವಾಮಿ ಹೆಸರನ್ನು ಘೋಷಿಸಲಿದ್ದಾರೆ.
ಸಮಯ 10 ಗಂಟೆ : ಕರ್ನಾಟಕದ ಜನತೆ ಈ ಡಾ.ರಾಜ್ ಪ್ರತಿಮೆಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಖಂಡಿಸಬೇಕು ಎಂದು ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮತ್ತು ನಿರ್ಮಾಪಕ ಮುನಿರತ್ನ ಅವರು ಹೇಳಿದ್ದಾರೆ. ಕನ್ನಡ, ನೆಲ, ಜಲ ಭಾಷೆಗೆ ಹೋರಾಟ ಮಾಡಿದ ರಾಜ್ ಎಲ್ಲರಿಗೂ ಮಾದರಿಯಾಗಬೇಕು. ತನಿಖೆಯನ್ನು ಬೇಗ ಮುಗಿಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಮುನಿರತ್ನ ಅವರು ಒತ್ತಾಯಿಸಿದ್ದರು.
ಘಟನಾ
ಸ್ಥಳದಲ್ಲಿ
50
ಕ್ಕೂ
ಹೆಚ್ಚು
ಪೊಲೀಸರನ್ನು
ನಿಯೋಜಿಸಲಾಗಿದ್ದು
ಹೆಚ್ಚುವರಿ
ಪೊಲೀಸ್
ಆಯುಕ್ತ
ಅಲೋಕ್
ಕುಮಾರ್
ಸೇರಿದಂತೆ
ಹಲವು
ಅಧಿಕಾರಿಗಳು
ಸ್ಥಳಕ್ಕೆ
ಆಗಮಿಸಿ
ಪರಿಶೀಲನೆ
ನಡೆಸುತ್ತಿದ್ದಾರೆ.
ಸಮಯ 9.15 : ರಾಜ್ ಪ್ರತಿಮೆಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಬಂಗಾರಪ್ಪ ಲೇಔಟ್ ರಾಜ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಸಮಯ 9 ಗಂಟೆ : ರಾಜ್ ಪ್ರತಿಮೆಗೆ ಬೆಂಕಿಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದ್ದಾರೆ. ಇಲ್ಲಿ ದೇವಾಲಯ ನಿರ್ಮಾಣ ಮಾಡಬೇಕು ಎಂದು ಒಂದು ಗುಂಪು ಪ್ರಯತ್ನಿಸಿತ್ತು. ಆ ಗುಂಪಿನ ಕೃತ್ಯವಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.
ಸಮಯ
8
ಗಂಟೆ
:
ಬೆಂಗಳೂರಿನ
ರಾಜರಾಜೇಶ್ವರಿ
ನಗರ
ಸಮೀಪದ
ಬಂಗಾರಪ್ಪ
ಲೇಔಟ್ನಲ್ಲಿ
ಡಾ.ರಾಜ್
ಪ್ರತಿಮೆಗೆ
ಕಿಡಿಗೇಡಿಗಳು
ಬೆಂಕಿ
ಹಚ್ಚಿದ್ದಾರೆ.
'ಸಿಪಾಯಿ
ರಾಮು'
ಚಿತ್ರದಲ್ಲಿನ
ಸಿಪಾಯಿ
ಮಾದರಿಯ
ಪ್ರತಿಮೆಯನ್ನು
ಬುಧವಾರ
ಪ್ರತಿಷ್ಠಾಪಿಸಲಾಗಿತ್ತು
ಮತ್ತು
ನ.23ರಂದು
ಉದ್ಘಾಟನೆಯಾಗಬೇಕಿತ್ತು.
ಈ
ಪ್ರತಿಮೆ
ನಿರ್ಮಾಣಕ್ಕೆ
ಸ್ಥಳೀಯರಲ್ಲಿ
ಯಾರ
ವಿರೋಧವೂ
ಇರಲಿಲ್ಲ.
ಆದರೆ,
ಬುಧವಾರ
ತಡರಾತ್ರಿ
ಕಿಡಿಗೇಡಿಗಳು
ಸೀಮೆಎಣ್ಣೆ
ಮತ್ತು
ಕಾಗದ
ಹಾಕಿ
ಪ್ರತಿಮೆಗೆ
ಬೆಂಕಿ
ಹಚ್ಚಿದ್ದಾರೆ
ಎಂದು
ಸ್ಥಳೀಯರು
ಹೇಳಿದ್ದಾರೆ.
ಸಮಯ 7.30 : ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಇಂದು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷರ ಹೆಸರು ಇಂದು ಘೋಷಣೆಯಾಗಲಿದೆ.