ಕರ್ನಾಟಕದಲ್ಲಿ ಮೊಹರಂ ಆಚರಣೆಗೆ ಸರ್ಕಾರದ ಮಾರ್ಗಸೂಚಿ
ಬೆಂಗಳೂರು, ಆಗಸ್ಟ್.18: ಕೊರೊನಾವೈರಸ್ ಸೋಂಕು ಹರಡುವಿಕೆ ಗಮನದಲ್ಲಿಟ್ಟುಕೊಂಡು ಈ ವರ್ಷ ಮೊಹರಂ ಮೆರವಣಿಗೆ ನಡೆಸುವುದನ್ನು ನಿಷೇಧಿಸಿರುವುದಾಗಿ ಸರ್ಕಾರ ಆದೇಶಿಸಿದೆ. ಜೊತೆಗೆ ಹಬ್ಬದ ಆಚರಣೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
Recommended Video
ರಾಜ್ಯದಲ್ಲಿ ಮೊಹರಂ ಆಚರಣೆ ವೇಳೆ ಸಾರ್ವಜನಿಕರ ಮೆರವಣಿಗೆ ಮತ್ತು ಕೂಟಗಳ ಆಯೋಜನೆಗಳನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ಹಜ್ ಮತ್ತು ವಕ್ಫ್ ಕಾರ್ಯದರ್ಶಿ ಎ. ಬಿ. ಇಬ್ರಾಹಿಂ ತಿಳಿಸಿದ್ದಾರೆ.
'ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ, ಮೊಹರಂ ಹಬ್ಬದಲ್ಲಿ ತಾಬೂತುಗಳ ಪ್ರತಿಷ್ಠಾಪನೆ ನಿಷೇಧ'
ಕೊರೊನಾವೈರಸ್ ಸೋಂಕಿನ ಹರಡುವಿಕೆ ಹಿನ್ನೆಲೆ ಹೊರಡಿಸಿರುವ ಆದೇಶವು ಕೇವಲ ಈ ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಸಾಂಕ್ರಾಮಿಕ ಪಿಡುಗು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಇಬ್ರಾಹಿಂ ಮನವಿ ಮಾಡಿಕೊಂಡಿದ್ದಾರೆ.
ಮೊಹರಂ
ಆಚರಣೆಗೆ
ಸರ್ಕಾರದ
ಮಾರ್ಗಸೂಚಿ:
- ಆಗಸ್ಟ್.21 ರಿಂದ 30ರವರೆಗೂ ಸರ್ಕಾರದ ಹೊರಡಿಸಿರುವ ಮಾರ್ಗಸೂಚಿ ಜಾರಿಯಲ್ಲಿರುತ್ತದೆ
- ಅಶುರ್ಖಾನ, ಮಸೀದಿ, ದರ್ಗಾಗಳನ್ನು ಸ್ಯಾನಿಟೈಸ್ ಮಾಡುವುದು, ಆದರೆ ಸಾರ್ವಜನಿಕ ಪ್ರದೇಶಗಳಲ್ಲಿ ಪಂಜ ಮತ್ತು ಅಲಂಗಳನ್ನು ಸ್ಥಾಪಿಸುವಂತಿಲ್ಲ
- ಮಜಲಿಸ್-ಎ-ಇಮಾಮ್ ಹುಸೇನ್ (ಧಾರ್ಮಿಕ ಧರ್ಮೋಪದೇಶ)ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ
- ಕೋವಿಡ್ ನ ದೃಷ್ಟಿಯಿಂದ ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ಮನೆಗಳಲ್ಲಿ ವಿಧಾ ಮತ್ತು ಮಜಿಲಿಗಳನ್ನು ಅರ್ಪಿಸಲು ಸೂಚಿಸಲಾಗಿದೆ
- ಧಾರ್ಮಿಕ ಧರ್ಮೋಪದೇಶಕ್ಕೆ ಸಭಾಂಗಣಗಳಲ್ಲಿ ಮಾತ್ರ ಅನುಮತಿಸಲಾಗಿದೆ, ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ
- ಮಜಲಿ, ಅಸ್ಥಾನ ಅಥವಾ ಅಶುರ್ಖಾನಗಳಲ್ಲಿ ಪ್ರವೇಶಿಸುವ ಭಕ್ತರ ಸಂಖ್ಯೆ ಮತ್ತು ಸ್ಥಳಾವಕಾಶದ ಬಗ್ಗೆ ನಿರ್ವಹಣಾ ಸಮಿತಿಗಳು ಮಾಹಿತಿಯನ್ನು ಪ್ರದರ್ಶಿಸಬೇಕು
- ರತ್ನಗಂಬಳಿಗಳನ್ನು ತೆಗೆದುಹಾಕಬೇಕು ಮತ್ತು ಕುಳಿತುಕೊಳ್ಳುವ ಸ್ಥಳಗಳನ್ನು ಪ್ರತಿ ಧರ್ಮೋಪದೇಶದ ನಂತರ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಸ್ಪಷ್ಟವಾಗಿ ಗುರುತಿಸಬೇಕು
- ದೊಡ್ಡ ಕೂಟಗಳನ್ನು ತಪ್ಪಿಸಲು ಭಕ್ತರ ಪ್ರವೇಶದ ಮೇಲ್ವಿಚಾರಣೆ ಮಾಡಬೇಕು
- ಶಾರ್ ಬತ್, ತಬಾರುಕ್ ಮತ್ತು ನೀರನ್ನು ಮೊಹರು ಪ್ಯಾಕೆಟ್ಗಳಲ್ಲಿ ಮಾತ್ರ ವಿತರಿಸಬಹುದು
- 60 ವರ್ಷಕ್ಕಿಂತ ಮೇಲ್ಪಟ್ಟವರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಜಿಯಾರತ್ ಗೆ ಅನುಮತಿಸಬಾರದು ಮತ್ತು ಮನೆಯಲ್ಲಿ ಪ್ರಾರ್ಥಿಸಲು ಸೂಚಿಸಲಾಗಿದೆ
- ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್, ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು
- ಅಪರಿಚಿತ ಸಂದರ್ಶಕರನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಧಾರ್ಮಿಕ ಸ್ಥಳದ ಹೊರಗೆ ಯಾವುದೇ ಭಿಕ್ಷುಕರನ್ನು ಅನುಮತಿಸಬಾರದು
- ಮೊಹರಂ ಆಚರಣೆ ಸಮಯದಲ್ಲಿ ಅಶುರ್ಖಾನಗಳು, ಮಸೀದಿ ಮತ್ತು ದರ್ಗಾಗಳು ಪ್ರಾಯೋಗಿಕವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ಪರಿಗಣಿಸಿ ರಾಜ್ಯ ಸರ್ಕಾರ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ
- ಮೊಹರಂ ಆಚರಣೆಯು ಮಕ್ಕಳು, ಹಿರಿಯ ನಾಗರಿಕರು ಮತ್ತು ಇತರ ಧರ್ಮದ ಜನರು ಸೇರಿದಂತೆ ಅಪಾರ ಜನಸಮೂಹವನ್ನು ಆಕರ್ಷಿಸಲು ಹೆಸರುವಾಸಿ ಹಬ್ಬವಾಗಿದೆ