49 ಕೆ.ಎ.ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಸರ್ಕಾರ
ಬೆಂಗಳೂರು, ಆಗಸ್ಟ್ 05: ಕಾಲಕಾಲಕ್ಕೆ ಸಮರ್ಥ ಅಧಿಕಾರಿಗಳನ್ನು ಆಯಕಟ್ಟಿನ ಜಾಗಗಳಲ್ಲಿ ನೇಮಿಸುವುದು ಎಲ್ಲಾ ಸರ್ಕಾರಗಳು ಮಾಡಿಕೊಂಡು ಬಂದಿರುವ ರೂಢಿಗತ ಕ್ರಮ. ಅದರಂತೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಸುಮಾರು 49 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಿದ್ದಾರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬುಧವಾರ ಸಂಜೆ ಹೊರಡಿಸಿರುವ ಆದೇಶದಂತೆ ಸೂಪರ್ ಟೈಂ ಸ್ಕೇಲ್/ ಆಯ್ಕೆ ಶ್ರೇಣಿ/ಹಿರಿಯ ಶ್ರೇಣಿ/ ಕಿರಿಯ ಶ್ರೇಣಿ ಅಧಿಕಾರಿಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣವೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಪ್ರಕಟಣೆಯಲ್ಲಿ ಹೇಳಲಾಗಿದೆ. [ಐಎಎಸ್ ಅಧಿಕಾರಿಗಳ ವರ್ಗಾವಣೆ ಏನಿದರ ಅಸಲಿಯತ್ತು?]

ವರ್ಗಾವಣೆಗೊಂಡ ಅಧಿಕಾರಿಗಳ ಹೆಸರು-ವರ್ಗಾವಣೆಯಾದ ಇಲಾಖೆ ಹೀಗಿದೆ:
1. ಬಿ. ಭೀಮಪ್ಪ- ಸಹಕಾರ ಇಲಾಖೆ
2. ನಾಗರಾಜು- ವೈದ್ಯಕೀಯ ಶಿಕ್ಷಣ ಇಲಾಖೆ
3. ಗಂಗೂಬಾಯಿ ಆರ್ ಮಾನಕರ್- ಕಾರ್ಯದರ್ಶಿ, ಕರ್ನಾಟಕ ಮಹಿಳಾ ಆಯೋಗ.
4. ಕವಿತಾ ಎಸ್ ಮನ್ನಿಕೇರಿ- ಅಪರ ಜಿಲ್ಲಾಧಿಕಾರಿ ವಿಜಯಪುರ
5. ಶಶಿಧರ ಕುರೇರ- ಬೆಳಗಾವಿ ನಗರಾಭಿವೃದ್ಧಿ ಇಲಾಖೆ
6. ಎಂಎಸ್ ಅರ್ಚನಾ-ಅಪರ ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ
7. ಡಾ. ವಾಸಂತಿ ಅಮರ್- ವಸತಿ ಇಲಾಖೆ
8. ಕೆಎಂ ಜಾನಕಿ-ಅಪರ ಜಿಲ್ಲಾಧಿಕಾರಿ, ಹಾಸನ
9. ಡಾ. ಎಚ್ ಎನ್ ಗೋಪಾಲಕೃಷ್ಣ-ಮಂಗಳೂರು ನಗರಾಭಿವೃದ್ಧಿ ಇಲಾಖೆ
10. ಡಾ. ಸುರೇಶ್ ಬಿ ಹಿಟ್ನಾಳ್- ಅಪರ ಜಿಲ್ಲಾಧಿಕಾರಿ, ಬೆಳಗಾವಿ
11. ಡಾ. ಜಿಎಲ್ ಪ್ರವೀಣ್ ಕುಮಾರ್ -ಅಪರ ಜಿಲ್ಲಾಧಿಕಾರಿ, ಕೊಪ್ಪಳ
12. ಕುಮಾರ್- ಅಪರ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ
13. ಬಿ. ಸದಾಶಿವಪ್ರಭು- ಅಪರ ಜಿಲ್ಲಾಧಿಕಾರಿ, ಉಡುಪಿ
14. ಕೆಎಂ ಗಾಯತ್ರಿ-ಅಪರ ಪ್ರಾದೇಶಿಕ ಆಯುಕ್ತರು, ಮೈಸೂರು
15. ಮೀನಾ ನಾಗರಾಜ್- ಭೂಮಿ ಮತ್ತು ಯುಪಿಓಆರ್, ಕಂದಾಯ ಇಲಾಖೆ ನಿರ್ದೇಶಕರು.
16. ಕರಿಗೌಡ- ಕೃಷ್ಣ ಮೇಲ್ದಂಡೆ ಯೋಜನೆ ಬಾಗಲಕೋಟೆ ಖಾಲಿ ಹುದ್ದೆ
17. ಕುಸುಮ ಕುಮಾರಿ- ವಿಶೇಷ ಭೂಸ್ವಾದೀನಾಧಿಕಾರಿ, ಕಬಿನಿ ಸಿಎನ್ ಎನ್ ಎಲ್, ಮೈಸೂರು
18. ಬಿಟಿ ಕುಮಾರಸ್ವಾಮಿ- ದಾವಣಗೆರೆ ಉಪ ವಿಭಾಗಾಧಿಕಾರಿ
19. ಜಗದೀಶ್ ಕೆ ನಾಯ್ಕ್- ಕೃಷ್ಣ ಮೇಲ್ದಂಡೆ ಯೋಜನೆಯಿಂದ ಬೇರೆಡೆ ನೇಮಕಾತಿ ನಿರೀಕ್ಷೆ
20. ತಬಸ್ಸುಮ್ ಜಹೆರಾ- ಉಪ ವಿಭಾಗಾಧಿಕಾರಿ ತುಮಕೂರು
21. ಸಿಎಲ್ ಆನಂದ್- ಉಪ ಆಯುಕ್ತರು ಕೆಯುಐಡಿಎಫ್ ಸಿ, ಬೆಂಗಳೂರು
22. ಎಸ್ ಎಸ್ ಮಧುಕೇಶ್ವರ್-ಕಾಡಾ ಮೈಸೂರು
23. ಬಿ.ಆರ್ ರೂಪಾ- ಉಪ ವಿಭಾಗಾಧಿಕಾರಿ, ಸಕಲೇಶಪುರ
24. ಆರತಿ ಆನಂದ್- ಎಂಎನ್ ಆರ್ ಜಿಎ, ಆರ್ ಡಿಪಿಆರ್, ಬೆಂಗಳೂರು, ಸಹಾಯಕ ನಿರ್ದೇಶಕರು
25. ವರಪ್ರಸಾದ್ ರೆಡ್ಡಿ-ಪೌರಾಡಳಿತ ಸುಧಾರಣಾ ಕೋಶ, ಬೆಂಗಳೂರು
26. ಎಂಕೆ ಜಗದೀಶ್-ಉಪ ವಿಭಾಗಾಧಿಕಾರಿ, ದೊಡ್ಡಬಳ್ಳಾಪುರ.
27. ಡಾ. ಎ ಸೌಜನ್ಯ- ಹುಣಸೂರು ಉಪ ವಿಭಾಗಾಧಿಕಾರಿ
28. ಡಾ. ಸಿ ಮಂಜುನಾಥ್-ಯೋಜನಾ ನಿರ್ದೇಶಕರು, ಡಿಯುಡಿಸಿ, ಶಿವಮೊಗ್ಗ.
29. ಸಾಜಿದ್ ಅಹಮದ್ ಮುಲ್ಲಾ- ಯೋಜನಾ ನಿರ್ದೇಶಕರು, ಕಲ್ಬುರ್ದಿ
30. ಎನ್ ಆರ್ ನಾಗರಾಜ್- ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ, ಬೆಂಗಳೂರು
31.ರೇಷ್ಮಾ ತಹ್ಸೀನ್- ಅಪರ ಮುಖ್ಯ ನಿರ್ವಹಣಾಧಿಕಾರಿ, ಕರ್ನಾಟಕ ವಕ್ಫ್ ಮಂಡಳಿ
32. ಎನ್ ರಂಗಸ್ವಾಮಿ-ಉಪ ನಿರ್ದೇಶಕರು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು.
33. ಮಲ್ಲಿಕಾರ್ಜುನ್ ವೈಎಸ್- ಪುನರ್ ವಸತಿ ಅಧಿಕಾರಿ, ಕೃಷ್ಣಾ ಮೇಲ್ಡಂಡೆ ಯೋಜನೆ ಆಲಮಟ್ಟಿ.
34. ಪಿ ಜಯಮಾಧವ- ವಲಯ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ.
35. ಎಂಆರ್ ರಾಜೇಶ್- ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಮೈಸೂರು.
36. ಕೆ ರಾಜು ಮೊಗವೀರ - ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ.
37. ಶಂಕರ ಗೌಡ ಸೋಮನಾಳ್- ಪುನರ್ ವಸತಿ ಅಧಿಕಾರಿ ಬಿಟಿಡಿಎ, ಬಾಗಲಕೋಟೆ
38.ಯಶೋಧ ಆರ್- ಕೇಂದ್ರ ಸ್ಥಾನಿಕ ಸಹಾಯಕಾರು, ಪೌರಾಡಳಿತ ನಿರ್ದೇಶನಾಲಯ.
39. ಪೂಜಾರಾ ವೀರಮಲ್ಲಪ್ಪ- ಅಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರ,ರಾಯಚೂರು
40. ಪ್ರಸನ್ನ ವಿ- ಯೋಜನಾ ನಿರ್ದೇಶಕರು ಡಿಯುಡಿಸಿ, ಕೊಡಗು
41. ಪ್ರಕಾಶ್ ಗೋಪು ರಜಪೂತ್- ಉಪವಿಭಾಗಾಧಿಕಾರಿ, ಇಂಡಿ ಉಪ ವಿಭಾಗ, ವಿಜಯಪುರ
42. ಕೃಷ್ಣೇಗೌಡ ತಾಯಣ್ಣನವರ್- ಉಪ ಆಯುಕ್ತರು, ಮಹಾನಗರ ಪಾಲಿಕೆ, ದಾವಣಗೆರೆ
43. ಗೀತಾ ಈ.ಕೌಲರಿ-ಜಿಲ್ಲಾ ನಗರಾಭಿವೃದ್ಧಿ ಕೋಶ, ಬೆಳಗಾವಿ
44. ಶೀಲವಂತ ಎಂ. ಶಿವಕುಮಾರ್- ವಿಶೇಷ ಭೂಸ್ವಾದೀನಾಧಿಕಾರಿ, ಕಾರಂಜಾ ಯೋಜನೆ, ಬೀದರ್.
45. ಶಿವಪ್ಪ ಯಲ್ಲಪ್ಪ ಭಜಂತ್ರಿ- ಉಪ ವಿಭಾಗಾಧಿಕಾರಿ,ಬೈಲಹೊಂಗಲ, ಬೆಳಗಾವಿ.
46. ವಿಜಯಕುಮಾರ್ ಹೊನಕೇರಿ- ವಿಶೇಷ ಭೂಸ್ವಾದೀನಾಧಿಕಾರಿ, ಕೆಐಎಡಿಬಿ, ಧಾರವಾಡ.
47. ಚಂದ್ರಶೇಖರಯ್ಯ ಎಚ್ ಬಿ- ಉಪ ವಿಭಾಗಾಧಿಕಾರಿ, ಕುಮಟಾ, ಉತ್ತರ ಕನ್ನಡ.
48. ಬಿ. ಶೋಭಾ- ಉಪ ಪ್ರಧಾನ ವ್ಯವಸ್ಥಾಪಕರು, ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು
49. ರೇಣುಕಾಂಬ- ಸಹಾಯಕ ನಿರ್ದೇಶಕರು, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿರ್ದೇಶನಾಲಯ, ಬೆಂಗಳೂರು
( ಒನ್ ಇಂಡಿಯಾ ಸುದ್ದಿ)












Click it and Unblock the Notifications