ಮಾನ್ಯ ಮುಖ್ಯಮಂತ್ರಿಗಳೇ, ಸರಕಾರದ ಬೊಕ್ಕಸ ತುಂಬಲು ಇದೇನಾ ರಾಜಮಾರ್ಗ?
Recommended Video

ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಲಾಗಿದೆ. ಆದರೆ, ಸಾರಾಯಿ ಕುಡಿಯುವುದು ನಿಂತಿದ್ಯಾ? ಮೊದಲು ಮೂವತ್ತು ರೂಪಾಯಿಗೆ ಎರಡು ಪ್ಯಾಕೆಟ್ ಕುಡಿದು ಚಟ ತೀರಿಸಿಕೊಳ್ಳುತ್ತಿದ್ದರು, ಈಗ ಎರಡು ಕ್ವಾಟರ್ ಕುಡಿಯಂತಾಗಿದೆ. ಆರ್ಥಿಕವಾಗಿ ಇನ್ನಷ್ಟು ಬಲಹೀನಗೊಳ್ಳುತ್ತಿದ್ದಾರೆ ಎಂದು ತಮ್ಮ ಸಿಎಂ ಅವಧಿಯಲ್ಲಿ ಸಿದ್ದರಾಮಯ್ಯ ಹೇಳಿದ್ದರು.
ಸಾಲಮನ್ನಾದ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲು, ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲಿಗೆ ಕೈಹಾಕಿದ್ದು ಕುಡುಕರ ಜೇಬಿಗೆ. ಮದ್ಯ ಉತ್ಪನ್ನಗಳ ಮೇಲಿನ ಅಬಕಾರಿ ಶುಂಕವನ್ನು ಜಾಸ್ತಿ ಮಾಡಿ, ಅದನ್ನು ರೈತರ ಸಾಲಮನ್ನಾ ಮಾಡಲು ಬಳಸಿಕೊಳ್ಳುವುದಾಗಿ ಹೇಳಿದ್ದರು.
ಅಬಕಾರಿ ಖಾತೆ ನನ್ನ ಬಳಿಯೇ ಇದೆ. ಈವರೆಗೆ ಯಾವುದೇ ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡುವ ಕಾರ್ಯ ಆಗಿಲ್ಲ. ಆ ಬಗ್ಗೆ ಪ್ರಸ್ತಾವನೆ ಕೂಡಾ ಸರ್ಕಾರದ ಮುಂದೆ ಇಲ್ಲ ಎಂದು ಸೆಪ್ಟಂಬರ್ ತಿಂಗಳಲ್ಲಿ ಹೇಳಿದ್ದ ಸಿಎಂ ಕುಮಾರಸ್ವಾಮಿ, ಈಗ ರಾಜ್ಯದ ಬೊಕ್ಕಸಕ್ಕೆ ಇನ್ನಷ್ಟು ಆದಾಯ ತರಲು ಮತ್ತೆ ಅಬಕಾರಿ ಇಲಾಖೆಗೆ ಕೈಹಾಕಿದ್ದಾರೆ.
ರಾಜ್ಯ ಸರಕಾರದ ಅಧೀನದ ಮಾರ್ಕೆಂಟಿಗ್ ಸಂಸ್ಥೆ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಮೂಲಕ, ಹಳ್ಳಿಹಳ್ಳಿಗಳಲ್ಲೂ ತಮ್ಮ ಮದ್ಯದ ಔಟ್ಲೆಟ್ ತೆರೆಯಲು ಮುಂದಾಗಿದೆ. ಆ ಮೂಲಕ, ಕುಡುಕರಿಗೆ ಇನ್ನಷ್ಟು ಉತ್ತೇಜನ ಸರಕಾರ ನೀಡುತ್ತಿದೆ ಎನ್ನುವ ಆಪಾದನೆ ಕೇಳಿಬರುತ್ತಿದೆ.
ಕುಡಿತದ ಚಟವಿರುವವರು, ಎಣ್ಣೆಯಂಗಡಿಯನ್ನು ಹುಡುಕಿಕೊಂಡು ಹಳ್ಳಿಗಾದರೂ ಹೋಗುತ್ತಾರೆ..ದಿಲ್ಲಿಗಾದರೂ ಹೋಗುತ್ತಾರೆ.. ಅದನ್ನು ಬಂದ್ ಮಾಡಿಸಲು ನಾವ್ಯಾರು..ಎನ್ನುವ ಮಾತನ್ನು ಹಿಂದೊಮ್ಮೆ ಹಿರಿಯ ರಾಜಕಾರಣಿಯೊಬ್ಬರು ಹೇಳಿದ್ದರು. ಅಬಕಾರಿ ಇಲಾಖೆಯ ಆದಾಯ ಹೆಚ್ಚಳ ಐಡಿಯಾ ಹೀಗಿದೆ, ಮುಂದೆ ಓದಿ..

ವಾರ್ಷಿಕ 12 ಸಾವಿರ ಕೋಟಿ ಆದಾಯ ತರುವ ಅಬಕಾರಿ ಇಲಾಖೆ
ಸರಕಾರದ ಬೊಕ್ಕಸಕ್ಕೆ ವಾರ್ಷಿಕ ಅಂದಾಜು ಹನ್ನೆರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆದಾಯ ತಂದುಕೊಡುವ ಅಬಕಾರಿ ಇಲಾಖೆಯ ಮೇಲೆ, ಸರಕಾರ ಯಾವುದೇ ಇರಲಿ.. ಮುಖ್ಯಮಂತ್ರಿಗಳು ಯಾರೇ ಆಗಿರಲಿ.. ತಮ್ಮತಮ್ಮ ಅವಧಿಯಲ್ಲಿ, ಮದ್ಯ ಮಾರಾಟ ನಿಷೇಧದ ಬಗ್ಗೆ ಬರೀ ಚಿಂತನೆ ಮಾತ್ರ ಮಾಡುತ್ತಾರೆಯೇ ಹೊರತು, ಕಾರ್ಯರೂಪಕ್ಕೆ ತರುವ ಇಚ್ಚಾಶಕ್ತಿ ಯಾರಲ್ಲೂ ಇರುವುದಿಲ್ಲ. ಮೊದಲು, ಪ್ರಧಾನಿ ಮೋದಿ, ಈ ಸಂಬಂಧ ನ್ಯಾಷನಲ್ ಪಾಲಿಸಿ ಮಾಡಲಿ ಎಂದು ಕೇಂದ್ರ ಸರಕಾರವನ್ನೂ ದೂರಿದ್ದುಂಟು.

MRP ದರದಲ್ಲಿ ಮದ್ಯ ಮಾರಾಟ
ಪ್ರಮುಖವಾಗಿ ಯುವ ಸಮುದಾಯದವರು ಕುಡಿತದ ಮೊರೆ ಹೋಗುತ್ತಿರುವ ವಿಷಾದಕಾರಿ ಅಂಶಗಳ ನಡುವೆ, ಎಂಎಸ್ಐಎಲ್ ಮೂಲಕ, MRP ದರದಲ್ಲಿ ಮದ್ಯ ಮಾರಾಟ ಮಾಡಲು ಅಬಕಾರಿ ಇಲಾಖೆ ಮುಂದಾಗಿದೆ. ಇನ್ನೂ ಹೆಚ್ಚಿನ ಔಟ್ಲೆಟ್ ಗಳನ್ನು ತೆರಯಲು ಸಂಸ್ಥೆ ಮುಂದಾಗಿದ್ದು, ಗ್ರಾಮೀಣ ಭಾಗದತ್ತ ಕಣ್ಣಿಟ್ಟಿದೆ.

ಅಬಕಾರಿ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳು
ಹೊಸದಾಗಿ ಬಾರ್ & ರೆಸ್ಟೋರೆಂಟ್, ವೈನ್ ಶಾಪ್ ತೆರೆಯಲು ಅನುಮತಿ ನೀಡುತ್ತಿಲ್ಲ ಎಂದು ಅಬಕಾರಿ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳು ಹೇಳಿದ್ದರೂ, ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಆರು ನೂರಕ್ಕೂ ಹೆಚ್ಚು ಎಂಎಸ್ಐಎಲ್ ಮೂಲಕ ಎಣ್ಣೆಯಂಗಡಿ ತೆರೆಯಲು ಮುಂದಾಗಿದೆ. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಶಾಖೆ ತೆರೆಯಲು ಇಲಾಖೆ ಮುಂದಾಗಿರುವುದು ಗಮನಿಸಬೇಕಾದ ವಿಚಾರ.

1,400 ಶಾಖೆಗಳನ್ನು ಹೊಂದುವ ಗುರಿ
ಮುಂಬರುವ ಆರು ತಿಂಗಳಲ್ಲಿ 1,400 ಶಾಖೆಗಳನ್ನು ಹೊಂದುವ ಗುರಿಹಾಕಿಕೊಂಡಿರುವ ರಾಜ್ಯ ಸರಕಾರದ ಒಡೆತನದ ಎಂಎಸ್ಐಎಲ್ ಅಧಿಕಾರಿಗಳ ಪ್ರಕಾರ, ಬಾರ್ ಮತ್ತು ವೈನ್ ಶಾಪ್ ನಲ್ಲಿ ಇಲ್ಲಿಗಿಂತ ಶೇ. 10-15% ಹೆಚ್ಚು ಹಣವನ್ನು ಕೊಟ್ಟು ಮದ್ಯ ಖರೀದಿಸಬೇಕಾಗುತ್ತದೆ. ಇಲ್ಲಿಂದ ತೆಗೆದುಕೊಂಡರೆ ಹೆಚ್ಚುವರಿ ಹಣ ಪಾವತಿಸಬೇಕಾಗಿಲ್ಲ. ಹಾಗಾಗಿ, ಹೆಚ್ಚಿನ ಔಟ್ಲೆಟ್ ತೆರೆಯುವ ನಿರ್ಧಾರಕ್ಕೆ ಬಂದಿದ್ದೇವೆ ಎನ್ನುವ ಕಾರಣ ನೀಡುತ್ತಾರೆ.

ಸರಕಾರ ಕೊಟ್ಟಿರುವ ಹೊಸ ಟಾರ್ಗೆಟ್
ಆದರೆ, ಸರಕಾರ ಕೊಟ್ಟಿರುವ ಹೊಸ ಟಾರ್ಗೆಟ್ ತಲುಪಲು ಅಬಕಾರಿ ಇಲಾಖೆ ಹೊಸ ಔಟ್ಲೆಟ್ ತೆರೆಯಲು ಮುಂದಾಗಿರುವುದು ಎನ್ನುವ ಮಾಹಿತಿಯಿದೆ. ಜೊತೆಗೆ, ಅಬಕಾರಿ ಇಲಾಖೆಯ ಆದಾಯವನ್ನು ಸರಕಾರ ಬಹುವಾಗಿ ನೆಚ್ಚಿಕೊಂಡಿರುವುದೇ ಇದಕ್ಕೆ ಕಾರಣ. ಒಟ್ಟಿನಲ್ಲಿ, ಮದ್ಯಸೇವನೆಗೆ ಇನ್ನಷ್ಟು ಸರಕಾರ ಉತ್ತೇಚನ ನೀಡಿದಂತಾಗುವುದಂತೂ ಸ್ಪಷ್ಟ..
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications