ತಮಿಳುನಾಡಿಗೆ 5 ಕೋಟಿ ನೆರವು ಘೋಷಿಸಿದ ಕರ್ನಾಟಕ
ಬೆಂಗಳೂರು, ಡಿಸೆಂಬರ್ 02 : ಭಾರೀ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತಮಿಳುನಾಡು ರಾಜ್ಯಕ್ಕೆ ಕರ್ನಾಟಕ ಸರ್ಕಾರ 5 ಕೋಟಿ ರೂ.ಗಳ ನೆರವು ಘೋಷಣೆ ಮಾಡಿದೆ. ಔಷಧಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ.
ದೆಹಲಿಯಲ್ಲಿ
ಮಾತನಾಡಿದ
ಸಿದ್ದರಾಮಯ್ಯ
ಅವರು
ಈ
ಕುರಿತು
ಮಾಹಿತಿ
ನೀಡಿದರು.
'ಜಲಪ್ರಳಯದಿಂದ
ಸಂಕಷ್ಟಕ್ಕೆ
ಸಿಲುಕಿರುವ
ತಮಿಳುನಾಡು
ರಾಜ್ಯಕ್ಕೆ
5
ಕೋಟಿ
ರೂ.
ಪರಿಹಾರ
ನೀಡುತ್ತಿದ್ದೇವೆ.
ತಮಿಳುನಾಡಿನ
ಅಧಿಕಾರಿಗಳ
ಜೊತೆ
ಚರ್ಚಿಸಲು
ಮುಖ್ಯ
ಕಾರ್ಯದರ್ಶಿಗಳಿಗೆ
ಸೂಚನೆ
ನೀಡಲಾಗಿದೆ'
ಎಂದು
ಹೇಳಿದರು.
[ಮಳೆಯಿಂದ
ಜರ್ಝರಿತ
ತಮಿಳುನಾಡಿನ
ಇತ್ತೀಚಿನ
ವರದಿಗಳು]
'5 ಕೋಟಿ ಹಣದ ಜೊತೆಗೆ ಔಷಧ ಸೇರಿ ಅಗತ್ಯ ಪರಿಹಾರ ಸಾಮಗ್ರಿಗಳನ್ನು ತಮಿಳುನಾಡಿಗೆ ಪೂರೈಕೆ ಮಾಡಲಾಗುತ್ತದೆ. ಮುಖ್ಯಕಾರ್ಯರ್ಶಿಗಳ ಕೌಶಿಕ್ ಮುಖರ್ಜಿ ಅವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಪರಿಹಾರಗಳನ್ನು ಪೊರೈಕೆ ಮಾಡಲಾಗುತ್ತದೆ' ಎಂದರು. [ಗ್ಯಾಲರಿ: ಹಚ್ಚಿ ಹೊಡೆಯುತ್ತಿರುವ ಮಳೆಗೆ ತತ್ತರಿಸಿದ ಚೆನ್ನೈ]
Our
govt
has
sanctioned
Rs.5
crore
along
medicines
and
relief
items.
Have
asked
Chief
Secy
to
coordinate
with
TN.
#ChennaiFloods
—
CM
of
Karnataka
(@CMofKarnataka)
December
2,
2015
ಸಿಎಫ್ಟಿಆರ್ಐನಿಂದ ಪಲಾವ್, ಉಪ್ಪಿಟ್ಟು ರವಾನೆ : ಮಳೆಯಿಂದಾಗಿ ನಿರಾಶ್ರಿತರಾಗಿರುವ ಚೆನ್ನೈನ ಜನರಿಗೆ ಮೈಸೂರಿನ ಸಿಎಫ್ಟಿಆರ್ಐ ಉಪ್ಪಿಟ್ಟು, ಪಲಾವ್, ಚಪಾತಿ ಮುಂತಾದ ಆಹಾರ ಪದಾರ್ಥಗಳನ್ನು ರವಾನೆ ಮಾಡುತ್ತಿದೆ. ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ) ಸುಮಾರು 3 ಟನ್ ಆಹಾರಗಳನ್ನು ರವಾನಿಸುತ್ತಿದೆ.