ಜಾರ್ಜ್ ವಿರುದ್ಧದ ಚುನಾವಣೆ 'ಧರ್ಮ ಯುದ್ಧ': ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ
ಬೆಂಗಳೂರು, ಜನವರಿ 22: ಕರ್ನಾಟಕ ವಿಧಾನ ಸಭೆ ಚುನಾವಣೆ-2018ರಲ್ಲಿ ಅಖಾಡಕ್ಕಿಳಿಯಲು ಆಮ್ ಆದ್ಮಿ ಪಕ್ಷ ಸಜ್ಜಾಗಿದೆ. ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಎಪಿ ನಿರ್ಧರಿಸಿದ್ದು ಅವುಗಳಲ್ಲಿ ಸರ್ವಜ್ಞನಗರವೂ ಒಂದು.
ಬೆಂಗಳೂರು ಅಭಿವೃದ್ಧಿ ಸಚಿವ, ಪ್ರಭಾವಿ ಕಾಂಗ್ರೆಸ್ ರಾಜಕಾರಣಿ ಕೆ.ಜೆ ಜಾರ್ಜ್ ಪ್ರತಿನಿಧಿಸುವ ಸರ್ವಜ್ಞನಗರ ಕ್ಷೇತ್ರ ಈ ಬಾರಿ ಕುತೂಹಲ ಹುಟ್ಟಿಸಿದೆ. ಎಎಪಿ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಪೃಥ್ವಿ ರೆಡ್ಡಿ ಇಲ್ಲಿ ಜಾರ್ಜ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಜಾರ್ಜ್ ವಿರುದ್ಧ ಯಾಕೆ ರೆಡ್ಡಿ ಕಣಕ್ಕಿಳಿದಿದ್ದಾರೆ? ರೆಡ್ಡಿಯ ಆಲೋಚನೆಗಳು ಏನು ಎಂಬುದನ್ನುಅವರು 'ಒನ್ಇಂಡಿಯಾ' ಜತೆಗಿನ ಸಂದರ್ಶನದಲ್ಲಿ ವಿವರಿಸಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.

ಜಾರ್ಜ್ ವಿರುದ್ಧ ಕಣಕ್ಕಿಳಿಯಲು ಯಾಕೆ ನಿರ್ಧರಿಸಿದ್ರಿ?
ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್ ವಿರುದ್ಧ ಹೋರಾಟವೆಂದರೆ ಸತ್ಯ ಮತ್ತು ಅನ್ಯಾಯದ ವಿರುದ್ಧದ ಹೋರಾಟ. ಜನರಿಗೆ ಆಯ್ಕೆ ನೀಡಲು ಇದು ಸೂಕ್ತ ಸಮಯ.
ಸ್ವಲ್ಪ ವಿವರಿಸಿ..
ಒಂದೊಮ್ಮೆ ಸಂತೋಷ್ ಹೆಗ್ಡೆಯಂಥ ಲೋಕಾಯುಕ್ತರು ಇದ್ದಿದ್ದರೆ ಜಾರ್ಜ್ ಇವತ್ತು ಕಂಬಿ ಹಿಂದೆ ಇರಬೇಕಾಗಿತ್ತು. ಅವರು ಮತ್ತು ಅವರ ಸಹವರ್ತಿಗಳು ಹಗರಣಗಳಲ್ಲಿ ಭಾಗಿಯಾದ ಬಗ್ಗೆ ಮಾತ್ರ ಅನುಮಾನವಿಲ್ಲ, ಡಿವೈಎಸ್ಪಿ ಎಂಕೆ ಗಣಪತಿ ಸಾವಿಗೆ ಸಂಬಂಧಿಸಿದಂತೆಯೂ ಅನುಮಾನಗಳಿವೆ.

ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಅವರ ಕೆಲಸ ಹೇಗಿದೆ?
ತನ್ನ ಅಭಿವೃದ್ಧಿ ಮತ್ತು ತನಗೆ ಸೇರಿದ ಕಂಪೆನಿಗಳ ಅಭಿವೃದ್ಧಿ ಮಾಡಿದ್ದು ಬಿಟ್ಟರೆ ನಗರ ಬೇರೆ ರೀತಿಯಲ್ಲಿ ಅಬಿವೃದ್ಧಿಗೊಂಡಿಲ್ಲ. ಅನ್ಯಾಯ ಮಾತ್ರವಲ್ಲ ಹಿತಾಸಕ್ತಿಗಳೂ ಕೆಲಸ ಮಾಡಿವೆ.

ಜಾರ್ಜ್ ಭ್ರಷ್ಟ ಎಂದು ಸಂಕ್ಷಿಪ್ತವಾಗಿ ಹೇಳುತ್ತಿದ್ದೀರಾ?
ಸರಕಾರದ ಜತೆ ಸಂಬಂಧ ಇದ್ದವರು ಸರಕಾರದ ಟೆಂಡರ್ ಗಳನ್ನು ಪಡೆದುಕೊಳ್ಳಬಾರದು. ಆಶ್ಚರ್ಯದ ವಿಷಯವೆಂದರೆ ಪಾಡ್ ಟಾಕ್ಸಿಯಲ್ಲಿ ಅವರ ಸಂಬಂಧಿಗಳು ಮಾತ್ರ ಏಕೈಕ ಟೆಂಡರುದಾರರಾಗಿದ್ದರು. ಭ್ರಷ್ಟಾಚಾರವೆಂದರೆ ಲಂಚ ತೆಗೆದುಕೊಳ್ಳುವುದು ಮಾತ್ರವಲ್ಲ ಎಂದು ಜನರು ಅರ್ಥ ಮಾಡಿಕೊಳ್ಳಬೇಕು. ಭ್ರಷ್ಟಾಚಾರದ ವಿಸ್ತೃತ ಅರ್ಥದಲ್ಲಿ ಸಾರ್ವಜನಿಕ ಹಣವನ್ನು ಲೂಟಿ ಮಾಡುವುದು ಒಂದು; ಜಾರ್ಜ್ ಅದನ್ನು ಮಾಡಿದರು.

ಕರ್ನಾಟಕ ಕಾಂಗ್ರೆಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
ದೇಶದಾದ್ಯಂತ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಮ್ಮ ರಾಜ್ಯವನ್ನು ಬಳಸಿಕೊಳ್ಳಲಾಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಅಷ್ಟು ಸಾಕು.

ಜಾರ್ಜ್ ಎದುರಿಸುವ ಮೂಲಕ ನೀವು ಪ್ರಬಲ ಸ್ಪರ್ಧೆಗೆ ಕೈಹಾಕಿದ್ದೀರಿ ಎನಿಸುತ್ತಿಲ್ವಾ?
ನನಗೆ ಸೋಲು ಗೆಲುವು ಮುಖಯವಲ್ಲ. ಸರಿಯಾದ ಕೆಲಸ ಮಾಡುವುದು ಮುಖ್ಯ. ಇದು ಧರ್ಮ ಯುದ್ಧ. ರಾಜ್ಯದಲ್ಲಿ ಕೋಮು ಮತ್ತು ಭ್ರಷ್ಟರನ್ನು ಬಹಿರಂಗಗೊಳಿಸಲು ಇರುವ ಅವಕಾಶ. ಪ್ರಬಲ ನಾಯಕರ ವಿರುದ್ಧ ಮತ್ತೊಂದು ಪಕ್ಷದಿಂದ ಪ್ರಬಲ ನಾಯಕರನ್ನು ಕಣಕ್ಕಿಳಿಸದೇ ಇರುವ ರಾಜಕೀಯ ಹೊಂದಾಣಿಕೆಗಳು ನನಗೆ ಗೊತ್ತಿವೆ. ಇದು ಅಲಿಖಿತ ನಿಯಮ. ಆದರೆ ಇಲ್ಲಿ ಸೌಹಾರ್ದ ಪಂದ್ಯವಾಗಲು ಸಾಧ್ಯವಿಲ್ಲ.

ಎಷ್ಟು ಕ್ಷೇತ್ರಗಳಲ್ಲಿ ಎಎಪಿ ಕಣಕ್ಕಿಳಿಯುತ್ತದೆ?
ನಾವು ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಕಣಕ್ಕಿಳಿಯುತ್ತೇವೆ. ಅಭ್ಯರ್ಥಿಗಳ ಬಗ್ಗೆ ಪಕ್ಷವು ಭರವಸೆ ನೀಡಬೇಕಾಗಿದ್ದು ಪ್ರಮುಖ ವಿಷಯವಾಗಿದೆ.

ಜಗದೀಶ ಶೆಟ್ಟರ್ ವಿರುದ್ಧ ಎಎಪಿ ಅಭ್ಯರ್ಥಿ ನಿಲ್ಲಿಸುತ್ತದೆ ಎಂದು ಕೇಳಲ್ಪಟ್ಟೆ?
ಹೌದು ಜಗದೀಶ್ ಶೆಟ್ಟರ್ ವಿರುದ್ಧ ಅಭ್ಯರ್ಥಿ ಇರಲಿದ್ದಾರೆ. ಸಂತೋಷ್ ನರಗುಂದ ಅಂತ ಏರೋನಾಟಿಕಲ್ ಇಂಜಿನಿಯರ್ ಅವರ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ನೀವು ಏನು ಸಂದೇಶ ನೀಡಲು ಇಚ್ಚಿಸುತ್ತೀರಿ?
ನಾನು ನೀಡಬೇಕಾದ ಸಂದೇಶವೆಂದರೆ ನಾವು ಎದ್ದು ನಿಲ್ಲಬೇಕು. ಇದು ಕರ್ನಾಟಕದ ಜನರು ಮತ್ತು ಸಾಂಪ್ರದಾಯಿಕ ಭ್ರಷ್ಟ ಮತ್ತು ಕೋಮು ಶಕ್ತಿಗಳ ವಿರುದ್ಧದ ಹೋರಾಟ. ಸಾಮಾನ್ಯ ಮನುಷ್ಯ ಮತ್ತು ಈ ಶಕ್ತಿಗಳ ವಿರುದ್ಧದ ಹೋರಾಟ. ಹೀಗಾಗಿ ಸೈದ್ಧಾಂತಿಕ ರಾಜಕಾರಣ ಮಾಡಬೇಕೇ ವಿನಃ ವೈಯಕ್ತಿಕ ರಾಜಕಾರಣವನ್ನಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ.

ಎಎಪಿ ಬಿಜೆಪಿಯ ಇನ್ನೊಂದು ಮುಖವೇ?
ಬಿಜೆಪಿಗೆ ತಲೆನೋವು ತಂದ ಪಕ್ಷ ಅಂತ ಇದ್ದರೆ ಅದು ಎಎಪಿ ಮಾತ್ರ. ನಿಮ್ಮ ಆರೋಪ ಹಾಸ್ಯಾಸ್ಪದವಾಗಿದೆ. ನಾವು ಆಮ್ ಆದ್ಮಿ ಪಕ್ಷದ ಬಗ್ಗೆ ಮಾತ್ರ ಚಿಂತಿಸಿದ್ದೇವೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications