ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ, ಹಲವು ಕ್ಷೇತ್ರಗಳ ಅಭ್ಯರ್ಥಿಗಳು ಬದಲು!
ಬೆಂಗಳೂರು, ಏಪ್ರಿಲ್ 24 : ನಾಮಪತ್ರ ಸಲ್ಲಿಕೆಗೆ ಕೆಲವು ಗಂಟೆಗಳು ಬಾಕಿ ಇರುವಾಗ ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಿಂದೆ ಘೋಷಣೆಯಾಗಿದ್ದ 6 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದೆ.
ಮಂಗಳವಾರ ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆಯಾಗಿದ್ದು, 2 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. 6 ಕ್ಷೇತ್ರಗಳ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ. ಇನ್ನೂ 2 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕಾಗಿದೆ.

ಅಭ್ಯರ್ಥಿಗಳ ಪಟ್ಟಿ
* ಸಕಲೇಶಪುರ : ಸೋಮಶೇಖರ್
* ಶಿಢ್ಲಘಟ್ಟ : ಎಚ್.ಸುರೇಶ್
ಬಾದಾಮಿ ಮತ್ತು ವರುಣಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಯನ್ನು ಇನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಆದರೆ, ಬಾದಾಮಿಯಿಂದ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು ಕಣಕ್ಕಿಳಿಯಲಿದ್ದಾರೆ. ನಾಮಪತ್ರ ಸಲ್ಲಿಸಲು ಅವರು ಇಂದು ಬಾದಾಮಿಗೆ ತೆರಳಿದ್ದಾರೆ.
ಅಭ್ಯರ್ಥಿಗಳು ಬದಲಾದ ಕ್ಷೇತ್ರಗಳು
* ಶಿರಾ : ಎಸ್.ಆರ್.ಗೌಡ
* ಅರಸೀಕೆರೆ : ಮರಿಸ್ವಾಮಿ
* ಮಧುಗಿರಿ : ರಮೇಶ್ ರೆಡ್ಡಿ
* ಶ್ರೀನಿವಾಸಪುರ : ಡಾ.ವೇಣುಗೋಪಾಲ್
* ಮಂಡ್ಯ : ಚಂದಗಲ ಶಿವಣ್ಣ
* ಮೇಲುಕೋಟೆ : ಶಿವಲಿಂಗೇಗೌಡ
6 ಅಭ್ಯರ್ಥಿಗಳು ಬದಲಾಗಿದ್ದಾರೆ. ಮೊದಲು ಘೋಷಣೆಯಾದ ಅಭ್ಯರ್ಥಿಗಳು
* ಶಿರಾ : ಎಚ್.ಮಂಜುನಾಥ್
* ಅರಸೀಕೆರೆ : ಡಾ.ಅರುಣ್ ಸೋಮಣ್ಣ
* ಮಧುಗಿರಿ : ಎಂ.ಆರ್.ಹುಲಿನಾಯ್ಕರ್
* ಶ್ರೀನಿವಾಸಪುರ : ವೆಂಕಟೇಗೌಡ
* ಮಂಡ್ಯ : ಬಸವೇಗೌಡ
* ಮೇಲುಕೋಟೆ : ಎಚ್.ಮಂಜುನಾಥ್












Click it and Unblock the Notifications