BJP Candidates List 2023: ಅಂತಿಮವಾಗಿ ಕಣದಲ್ಲಿರುವ ಬಿಜೆಪಿಯ ಕೇಸರಿ ಕಲಿಗಳು
BJP Candidates List: ಕಾಂಗ್ರೆಸ್, ಜೆಡಿಎಸ್ ನವರು ಪಟ್ಟಿ ಬಿಡುಗಡೆ ಮಾಡಿದ್ದರೂ, ಬಿಜೆಪಿ ಮಾತ್ರ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿತ್ತು. ಕೊನೆಗೆ, 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು.
ಇದಾದ ನಂತರ ಹಲವು ಹಂತಗಳಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ಪಕ್ಷದಲ್ಲಿನ ಭಿನ್ನಮತವೂ ಹೆಚ್ಚಾಗ ತೊಡಗಿತು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದು ಪ್ರಮುಖ ಬೆಳವಣಿಗೆಯಾಗಿತ್ತು.

ಬಿಜೆಪಿಯ ಪಟ್ಟಿಯಲ್ಲಿ ಹಲವು ಅಚ್ಚರಿಗಳಿದ್ದವು, ಹಲವು ಹಾಲೀ ಶಾಸಕರಿಗೆ ಟಿಕೆಟ್ ನೀಡದೇ ಕೆಲವೊಂದು ಕಡೆ ಗುಜರಾತ್ ಮೊಡೆಲ್ ಅನ್ನು ಅನುಸರಿಸಿತ್ತು. ಯಾವುದೇ ಭಿನ್ನಮತಕ್ಕೆ ಕ್ಯಾರ್ ಅನ್ನದ ಬಿಜೆಪಿಯ ವರಿಷ್ಠರು ತಮ್ಮ ಪಟ್ಟಿಯನ್ನು ಬದಲಾಯಿಸಿಕೊಳ್ಳಲು ಹೋಗಿಲ್ಲ. ಕೆಲವೊಂದು ಕಡೆ ಕುಟುಂಬ ರಾಜಕಾರಣಕ್ಕೂ ಬಿಜೆಪಿ ಆಸ್ಪದ ನೀಡಿತು.
ಯಡಿಯೂರಪ್ಪನವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಹೇಳಿದ್ದರು. ಹಾಗಾಗಿ, ಅವರು ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರಕ್ಕೆ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ನೀಡಿತು. ಇನ್ನು, ಶಿವಮೊಗ್ಗ ನಗರದಲ್ಲಿ ಕೆ.ಎಸ್.ಈಶ್ವರಪ್ಪನವರ ಪುತ್ರ ಕಾಂತೇಶ್ ಗೆ ಟಿಕೆಟ್ ನೀಡುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರ ಆಪ್ತ ಚನ್ನಬಸಪ್ಪಗೆ ಟಿಕೆಟ್ ನೀಡಲಾಯಿತು.
ಇನ್ನು, ಬೆಂಗಳೂರು ವ್ಯಾಪ್ತಿಯ ಮಹದೇವಪುರದಲ್ಲಿ ಹಾಲೀ ಶಾಸಕ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡದೇ ಅವರ ಪತ್ನಿ ಮಂಜುಳಾಗೆ ಟಿಕೆಟ್ ನೀಡಲಾಯಿತು. ಆ ಮೂಲಕ, ಬೆಂಗಳೂರು ಭಾಗದ ಪ್ರಭಾವೀ ಮುಖಂಡ ಪಕ್ಷದ ಜೊತೆಗೆ ಮುನಿಸಿಕೊಳ್ಳದಂತೇ ನೋಡಿಕೊಳ್ಲಲಾಯಿತು. ಇನ್ನು, ಉಡುಪಿಯಲ್ಲೂ ಹಲವು ಹೊಸ ಮುಖವನ್ನು ಬಿಜೆಪಿ ಕಣಕ್ಕಿಳಿಸಿದೆ.
ನಾಮಪತ್ರ ಸಲ್ಲಿಸಲು ಇದ್ದ ಗಡುವಿಗೆ ಒಂದು ದಿನ ಮುನ್ನ ಬಿಜೆಪಿ ತನ್ನ ಅಂತಿಮ ಪಟ್ಟಿಯನ್ನು ಪ್ರಕಟಿಸಿತು. ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದೆ. ಆಯಾಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಟೇಬಲ್ ಫಾರ್ಮ್ಯಾಟ್ ನಲ್ಲಿ ನೀಡಲಾಗಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ 2023: ಅಂತಿಮವಾಗಿ ಕಣದಲ್ಲಿರುವ ಕೇಸರಿ ಕಲಿಗಳು
| ಕ್ಷೇತ್ರದ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ |
| 1 | ನಿಪ್ಪಾಣಿ | ಶಶಿಕಲಾ ಜೊಲ್ಲೆ |
| 2 | ಚಿಕ್ಕೋಡಿ-ಸದಲಗಾ | ರಮೇಶ್ ಕತ್ತಿ |
| 3 | ಅಥಣಿ | ಮಹೇಶ್ ಕುಮುಟಹಳ್ಳಿ |
| 4 | ಕಾಗವಾಡ | ಶ್ರೀಮಂತ್ ಬಾಳಾಸಾಹೇಬ ಪಾಟೀಲ |
| 5 | ಕುಡಚಿ (SC) | ಪಿ.ರಾಜೀವ್ |
| 6 | ರಾಯಭಾಗ (SC) | ದುರ್ಯೋಧನ ಮಹಾಲಿಂಗಪ್ಪ ಐಹೊಳೆ |
| 7 | ಹುಕ್ಕೇರಿ | ನಿಖಿಲ್ ಕತ್ತಿ |
| 8 | ಅರಭಾವಿ | ಬಾಲಚಂದ್ರ ಜಾರಕಿಹೊಳಿ |
| 9 | ಗೋಕಾಕ್ | ರಮೇಶ್ ಜಾರಕಿಹೊಳಿ |
| 10 | ಯಮಕನಮರಡಿ (ST) | ಬಸವರಾಜ ಹೊಂಡ್ರಿ |
| 11 | ಬೆಳಗಾವಿ ಉತ್ತರ | ಡಾ.ರವಿ ಪಾಟೀಲ್ |
| 12 | ಬೆಳಗಾವಿ ದಕ್ಷಿಣ | ಅಭಯ್ ಪಾಟೀಲ್ |
| 13 | ಬೆಳಗಾವಿ ಗ್ರಾಮಾಂತರ | ನಾಗೇಶ್ ಮನ್ನೋಲ್ಕರ್ |
| 14 | ಖಾನಾಪುರ | ವಿಠಲ ಹಲಗೇಕರ್ |
| 15 | ಕಿತ್ತೂರು | ಮಹಾಂತೇಶ್ ದೊಡ್ಡಗೌಡರ್ |
| 16 | ಬೈಲಹೊಂಗಲ | ಜಗದೀಶ್ ಚನ್ನಪ್ಪ ಮೇಟಗದ್ |
| 17 | ಸವದತ್ತಿ ಯಲ್ಲಮ್ಮ | ರಾಮ ವಿಶ್ವನಾಥ್ ಮಾಮಿನಿ |
| 18 | ರಾಮದುರ್ಗ | ಚಿಕ್ಕ ರೇವಣ್ಣ |
| 19 | ಮುಧೋಳ (SC) | ಗೋವಿಂದ ಎಂ. ಕಾರಜೋಳ |
| 20 | ತೇರದಾಳ | ಸಿದ್ದು ಸವದಿ |
| 21 | ಜಮಖಂಡಿ | ಜಗದೀಶ್ ಗುಡಗಂಟಿ |
| 22 | ಬೀಳಗಿ | ಮುರುಗೇಶ್ ನಿರಾಣಿ |
| 23 | ಬಾದಾಮಿ | ಶಾಂತಗೌಡ ಪಾಟೀಲ |
| 24 | ಬಾಗಲಕೋಟೆ | ವೀರಭದ್ರಯ್ಯ ಚರಂತಿಮಠ |
| 25 | ಹುನಗುಂದ | ದೊಡ್ಡನಗೌಡ ಪಾಟೀಲ |
| 26 | ಮುದ್ದೇಬಿಹಾಳ | ಎ.ಎಸ್.ಪಾಟೀಲ್ ನಡಹಳ್ಳಿ |
| 27 | ದೇವರ ಹಿಪ್ಪರಗಿ | ಸೋಮನಗೌಡ ಪಾಟೀಲ್ |
| 28 | ಬಸವನ ಬಾಗೇವಾಡಿ | ಎಸ್ .ಕೆ.ಬೆಳ್ಳುಬ್ಬಿ |
| 29 | ಬಬಲೇಶ್ವರ | ವಿಜುಗೌಡ ಎಸ್ ಪಾಟೀಲ |
| 30 | ವಿಜಯಪುರ ನಗರ | ಬಸನಗೌಡ ಪಾಟೀಲ ಯತ್ನಾಳ |
| 31 | ನಾಗಠಾಣ (SC) | ಸಂಜೀವ್ ಐಹೊಳೆ |
| 32 | ಇಂಡಿ | ಕಾಸಗೌಡ ಬಿರಾದಾರ್ |
| 33 | ಸಿಂಧಗಿ | ರಮೇಶ ಭೂಸನೂರ |
| 34 | ಅಫಜಲಪುರ | ಮಾಲೀಕಯ್ಯ ಗುತ್ತೇದಾರ |
| 35 | ಜೇವರ್ಗಿ | ಶಿವನಗೌಡ ಪಾಟೀಲ ರದ್ದೇವದಗಿ |
| 36 | ಸುರಪುರ (ST) | ನರಸಿಂಹ ನಾಯಕ (ರಾಜೂಗೌಡ) |
| 37 | ಶಹಾಪುರ | ಅಮೀನರೆಡ್ಡಿ ಯಾಲಗಿ |
| 38 | ಯಾದಗಿರಿ | ವೆಂಕಟರೆಡ್ಡಿ ಮುದ್ನಾಳ್ |
| 39 | ಗುರುಮಿಠಕಲ್ | ಲಲಿತ ಅನಪೂರ್ |
| 40 | ಚಿತ್ತಾಪುರ (SC) | ಮಣಿಕಾಂತ ರಾಥೋಡ್ |
| 41 | ಸೇಡಂ | ರಾಜಕುಮಾರ ಪಾಟೀಲ್ |
| 42 | ಚಿಂಚೋಳಿ (SC) | ಡಾ.ಅವಿನಾಶ್ ಜಾಧವ್ |
| 43 | ಕಲಬುರಗಿ ಗ್ರಾಮೀಣ (SC) | ಬಸವರಾಜ ಮತ್ತಿಮೋಡ |
| 44 | ಕಲಬುರಗಿ ದಕ್ಷಿಣ | ದತ್ತಾತ್ರೇಯ ಪಾಟೀಲ ರಾವೂರ |
| 45 | ಕಲಬುರಗಿ ಉತ್ತರ | ಚಂದ್ರಕಾಂತ ಪಾಟೀಲ |
| 46 | ಆಳಂದ | ಸುಭಾಶ್ ಗುತ್ತೇದಾರ |
| 47 | ಬಸವಕಲ್ಯಾಣ | ಶರಣು ಸಲಗರ |
| 48 | ಹುಮ್ನಾಬಾದ್ | ಸಿದ್ದು ಪಾಟೀಲ |
| 49 | ಬೀದರ್ ದಕ್ಷಿಣ | ಡಾ.ಶೈಲೇಂದ್ರ ಬೆಳದಲೆ |
| 50 | ಬೀದರ್ | ಈಶ್ವರ್ ಸಿಂಗ್ ಠಾಕೂರ್ |
| 51 | ಭಾಲ್ಕಿ | ಪ್ರಕಾಶ್ ಖಂಡ್ರೆ |
| 52 | ಔರಾದ್ (SC) | ಪ್ರಭು ಚವಾಣ್ |
| 53 | ರಾಯಚೂರು ಗ್ರಾ. (ST) | ತಿಪ್ಪರಾಜು ಹವಾಲ್ದಾರ್ |
| 54 | ರಾಯಚೂರು | ಡಾ.ಶಿವರಾಜ್ ಪಾಟೀಲ್ |
| 55 | ಮಾನ್ವಿ (ST) | ಬಿ.ವಿ.ನಾಯಕ್ |
| 56 | ದೇವದುರ್ಗ(ST) | ಕೆ.ಶಿವನಗೌಡ ನಾಯಕ್ |
| 57 | ಲಿಂಗಸುಗೂರು (SC) | ಮನ್ನಪ್ಪ ಡಿ ವಜ್ಜಲ್ |
| 58 | ಸಿಂಧನೂರು | ಕೆ.ಕರಿಯಪ್ಪ |
| 59 | ಮಸ್ಕಿ (ST) | ಪ್ರತಾಪಗೌಡ ಪಾಟೀಲ |
| 60 | ಕುಷ್ಟಗಿ | ದೊಡ್ಡನಗೌಡ ಪಾಟೀಲ |
| 61 | ಕನಕಗಿರಿ (SC) | ಬಸವರಾಜ ಧಡೇಸಾಗರು |
| 62 | ಗಂಗಾವತಿ | ಪರಣ್ಣ ಮುನವಳ್ಳಿ |
| 63 | ಯಲಬುರ್ಗಾ | ಹಾಲಪ್ಪ ಬಸಪ್ಪ ಆಚಾರ್ |
| 64 | ಕೊಪ್ಪಳ | ಮಂಜುಳಾ ಅಮರೇಶ್ |
| 65 | ಶಿರಹಟ್ಟಿ (SC) | ಡಾ.ಚಂದ್ರ ಲಮಣಿ |
| 66 | ಗದಗ | ಅನಿಲ್ ಮೆಣಸಿನಕಾಯಿ |
| 67 | ರೋಣ | ಕಳಕಪ್ಪ ಬಂಡಿ |
| 68 | ನರಗುಂದ | ಸಿಸಿ ಪಾಟೀಲ್ |
| 69 | ನವಲಗುಂದ | ಶಂಕರ ಪಾಟೀಲ ಮುನೇನಕೊಪ್ಪ |
| 70 | ಕುಂದಗೋಳ | ಎಂ.ಆರ್.ಪಾಟೀಲ್ |
| 71 | ಧಾರವಾಡ | ಅಮೃತ್ ದೇಸಾಯಿ |
| 72 | ಹುಬ್ಬಳ್ಳಿ - ಧಾರವಾಡ ಪೂರ್ವ (SC) | ಡಾ.ಕ್ರಾಂತಿ ಕಿರಣ್ |
| 73 | ಹುಬ್ಬಳ್ಳಿ - ಧಾರವಾಡ ಕೇಂದ್ರ | ಮಹೇಶ್ ಟೆಂಗಿನಕಾಯಿ |
| 74 | ಹುಬ್ಬಳ್ಳಿ - ಧಾರವಾಡ ಪಶ್ಚಿಮ | ಅರವಿಂದ ಬೆಲ್ಲದ್ |
| 75 | ಕಲಘಟಗಿ | ನಾಗರಾಜ್ ಛಬ್ಬಿ |
| 76 | ಹಳಿಯಾಳ | ಸುನೀಲ್ ಹೆಗ್ಡೆ |
| 77 | ಕಾರವಾರ | ರೂಪಾಲಿ ಸಂತೋಷ್ ನಾಯ್ಕ್ |
| 78 | ಕುಮಟಾ | ದಿನಕರ ಶೆಟ್ಟಿ |
| 79 | ಭಟ್ಕಳ | ಸುನೀಲ್ ನಾಯ್ಕ ಸಿ |
| 80 | ಶಿರಸಿ | ವಿಶ್ವೇಶ್ವರ ಹೆಗಡೆ ಕಾಗೇರಿ |
| 81 | ಯಲ್ಲಾಪುರ | ಶಿವರಾಂ ಹೆಬ್ಬಾರ್ |
| 82 | ಹಾನಗಲ್ | ಶಿವರಾಜ್ ಸಜ್ಜನರ್ |
| 83 | ಶಿಗ್ಗಾಂವಿ | ಬಸವರಾಜ ಬೊಮ್ಮಾಯಿ |
| 84 | ಹಾವೇರಿ (SC) | ಗವಿಸಿದ್ದಪ್ಪ ದ್ಯಾಮನ್ನವರ್ |
| 85 | ಬ್ಯಾಡಗಿ | ವಿರೂಪಾಕ್ಷಪ್ಪ ಬಳ್ಳಾರಿ |
| 86 | ಹಿರೇಕೆರೂರು | ಬಿ.ಸಿ.ಪಾಟೀಲ್ |
| 87 | ರಾಣೆಬೆನ್ನೂರು | ಅರುಣ್ ಕುಮಾರ್ ಪೂಜಾರ್ |
| 88 | ಹಡಗಲಿ (SC) | ಕೃಷ್ಣ ನಾಯಕ |
| 89 | ಹಗರಿಬೊಮ್ಮನಹಳ್ಳಿ (SC) | ಬಿ.ರಾಮಣ್ಣ |
| 90 | ವಿಜಯನಗರ | ಸಿದ್ದಯ್ಯ ಸಿಂಗ್ |
| 91 | ಕಂಪ್ಲಿ (ST) | ಟಿ.ಎಚ್.ಸುರೇಶ್ ಬಾಬು |
| 92 | ಸಿರಗುಪ್ಪ (ST) | ಎಂ.ಎಸ್.ಸೋಮಲಿಂಗಪ್ಪ |
| 93 | ಬಳ್ಳಾರಿ (ST) | ಬಿ.ಶ್ರೀರಾಮುಲು |
| 94 | ಬಳ್ಳಾರಿ ನಗರ | ಗಾಲಿ ಸೋಮಶೇಖರ ರೆಡ್ಡಿ |
| 95 | ಸಂಡೂರು (ST) | ಶಿಲ್ಪಾ ರಾಘವೇಂದ್ರ |
| 96 | ಕೂಡ್ಲಿಗಿ (ST) | ಲೋಕೇಶ ವಿ ನಾಯಕ |
| 97 | ಮೊಳಕಾಲ್ಮೂರು (ST) | ಎಸ್.ತಿಪ್ಪೇಸ್ವಾಮಿ |
| 98 | ಚಳ್ಳಕೆರೆ (ST) | ಅನಿಲ್ ಕುಮಾರ್ |
| 99 | ಚಿತ್ರದುರ್ಗ | ಜಿ.ಎಚ್.ತಿಪ್ಪಾರೆಡ್ಡಿ |
| 100 | ಹಿರಿಯೂರು | ಕೆ.ಪೂರ್ಣಿಮಾ ಶ್ರೀನಿವಾಸ |
| 101 | ಹೊಸದುರ್ಗ | ಎಸ್.ಲಿಂಗಮೂರ್ತಿ |
| 102 | ಹೊಳಲ್ಕೆರೆ (SC) | ಎಂ.ಚಂದ್ರಪ್ಪ |
| 103 | ಜಗಳೂರು (ST) | ಎಸ್.ವಿ.ರಾಮಚಂದ್ರಪ್ಪ |
| 104 | ಹರಪ್ಪನಹಳ್ಳಿ | ಕರುಣಾಕರ ರೆಡ್ಡಿ |
| 105 | ಹರಿಹರ | ಬಿ.ಪಿ.ಹರೀಶ್ |
| 106 | ದಾವಣಗೆರೆ ಉತ್ತರ | ಲೊಕ್ಕಿರೆ ನಾಗರಾಜ್ |
| 107 | ದಾವಣಗೆರೆ ದಕ್ಷಿಣ | ಅಜಯ್ ಕುಮಾರ್ |
| 108 | ಮಾಯಕೊಂಡ (SC) | ಬಸವರಾಜ ನಾಯಕ್ |
| 109 | ಚನ್ನಗಿರಿ | ಶಿವಕುಮಾರ್ |
| 110 | ಹೊನ್ನಾಳಿ | ಎಂ.ಪಿ.ರೇಣುಕಾಚಾರ್ಯ |
| 111 | ಶಿವಮೊಗ್ಗ ಗ್ರಾ. (SC) | ಅಶೋಕ್ ನಾಯಕ್ |
| 112 | ಭದ್ರಾವತಿ | ಮಂಗೋತಿ ರುದ್ರೇಶ್ |
| 113 | ಶಿವಮೊಗ್ಗ | ಚನ್ನಬಸಪ್ಪ |
| 114 | ತೀರ್ಥಹಳ್ಳಿ | ಆರಗ ಜ್ಞಾನೇಂದ್ರ |
| 115 | ಶಿಕಾರಿಪುರ | ಬಿ.ವೈ.ವಿಜಯೇಂದ್ರ |
| 116 | ಸೊರಬ | ಕುಮಾರ್ ಬಂಗಾರಪ್ಪ |
| 117 | ಸಾಗರ | ಹರತಾಳು ಎಚ್. ಹಾಲಪ್ಪ |
| 118 | ಬೈಂದೂರು | ಗುರುರಾಜ್ ಗಂಟಿಹೊಳೆ |
| 119 | ಕುಂದಾಪುರ | ಕಿರಣ್ ಕುಮಾರ್ ಕೋಡ್ಗಿ |
| 120 | ಉಡುಪಿ | ಯಶ್ಪಾಲ್ ಸುವರ್ಣ |
| 121 | ಕಾಪು | ಗುರ್ಮೆ ಸುರೇಶ್ ಶೆಟ್ಟಿ |
| 122 | ಕಾರ್ಕಳ | ವಿ.ಸುನೀಲ್ ಕುಮಾರ್ |
| 123 | ಶೃಂಗೇರಿ | ಡಿ.ಎನ್.ಜೀವರಾಜ್ |
| 124 | ಮೂಡಿಗೆರೆ (SC) | ದೀಪಕ್ ದೊಡ್ಡಯ್ಯ |
| 125 | ಚಿಕ್ಕಮಗಳೂರು | ಸಿ.ಟಿ.ರವಿ |
| 126 | ತರೀಕೆರೆ | ಡಿ.ಎಸ್.ಸುರೇಶ್ |
| 127 | ಕಡೂರು | ಕೆ.ಎಸ್.ಪ್ರಕಾಶ್ |
| 128 | ಚಿಕ್ಕನಾಯಕನಹಳ್ಳಿ | ಜೆ.ಸಿ.ಮಾಧುಸ್ವಾಮಿ |
| 129 | ತಿಪಟೂರು | ಬಿ.ಸಿ.ನಾಗೇಶ್ |
| 130 | ತುರುವೇಕೆರೆ | ಮಸಾಲ ಜಯರಾಮ್ |
| 131 | ಕುಣಿಗಲ್ | ಡಿ.ಕೃಷ್ಣ ಕುಮಾರ್ |
| 132 | ತುಮಕೂರು ನಗರ | ಜಿ.ಬಿ.ಜ್ಯೋತಿ ಗಣೇಶ್ |
| 133 | ತುಮಕೂರು ಗ್ರಾಮೀಣ | ಬಿ.ಸುರೇಶ್ ಗೌಡ |
| 134 | ಕೊರಟಗೆರೆ (SC) | ಅನಿಲ್ ಕುಮಾರ್ |
| 135 | ಗುಬ್ಬಿ | ಎಸ್.ಡಿ.ದಿಲೀಪ್ ಕುಮಾರ್ |
| 136 | ಶಿರಾ | ಡಾ.ರಾಜೇಶ್ ಗೌಡ |
| 137 | ಪಾವಗಡ (SC) | ಕೃಷ್ಣ ನಾಯಕ್ |
| 138 | ಮಧುಗಿರಿ | ಎಲ್.ಸಿ.ನಾಗರಾಜ್ |
| 139 | ಗೌರಿಬಿದನೂರು | ಡಾ.ಶಶಿಧರ್ |
| 140 | ಬಾಗೇಪಲ್ಲಿ | ಸಿ.ಮುನಿರಾಜು |
| 141 | ಚಿಕ್ಕಬಳ್ಳಾಪುರ | ಡಾ.ಕೆ.ಸುಧಾಕರ್ |
| 142 | ಶಿಡ್ಲಘಟ್ಟ | ರಾಮಚಂದ್ರ ಗೌಡ |
| 143 | ಚಿಂತಾಮಣಿ | ವೇಣು ಗೋಪಾಲ್ |
| 144 | ಶ್ರೀನಿವಾಸಪುರ | ಗುಂಜೂರು ಶ್ರೀನಿವಾಸ್ ರೆಡ್ಡಿ |
| 145 | ಮುಳಬಾಗಿಲು (SC) | ಶೀಗೆಹಳ್ಳಿ ಸುಂದರ್ |
| 146 | ಕೆಜಿಎಫ್ (SC) | ಅಶ್ವಿನಿ ಸಂಪಂಗಿ |
| 147 | ಬಂಗಾರಪೇಟೆ (ST) | ಎಂ.ನಾರಾಯಣಸ್ವಾಮಿ |
| 148 | ಕೋಲಾರ | ವರ್ತೂರು ಪ್ರಕಾಶ್ |
| 149 | ಮಾಲೂರು | ಕೆ.ಎಸ್.ಮಂಜುನಾಥ್ ಗೌಡ |
| 150 | ಯಲಹಂಕ | ಎಸ್.ಆರ್.ವಿಶ್ವನಾಥ್ |
| 151 | ಕೆ.ಆರ್.ಪುರ | ಬಿ.ಎ.ಬಸವರಾಜ್ |
| 152 | ಬ್ಯಾಟರಾಯನಪುರ | ತಮ್ಮೇಶ್ ಗೌಡ |
| 153 | ಯಶವಂತಪುರ | ಎಸ್.ಟಿ.ಸೋಮಶೇಖರ್ |
| 154 | ರಾಜರಾಜೇಶ್ವರಿನಗರ | ಮುನಿರತ್ನ ನಾಯ್ಡು |
| 155 | ದಾಸರಹಳ್ಳಿ | ಎಸ್.ಮುನಿರಾಜು |
| 156 | ಮಹಾಲಕ್ಷ್ಮೀ ಲೇಔಟ್ | ಕ.ಗೋಪಾಲಯ್ಯ |
| 157 | ಮಲ್ಲೇಶ್ವರಂ | ಡಾ.ಸಿ.ಎನ್.ಅಶ್ವತ್ಥ್ ನಾರಾಯಣ |
| 158 | ಹೆಬ್ಬಾಳ | ಕಟ್ಟಾ ಜಗದೀಶ್ |
| 159 | ಪುಲಕೇಶಿನಗರ (SC) | ಮುರಳಿ |
| 160 | ಸರ್ವಜ್ಞನಗರ | ಪದ್ಮನಾಭ ರೆಡ್ಡಿ |
| 161 | ಸಿ.ವಿ. ರಾಮನ್ ನಗರ (SC) | ಎಸ್. ರಘು |
| 162 | ಶಿವಾಜಿನಗರ | ಎನ್.ಚಂದ್ರು |
| 163 | ಶಾಂತಿನಗರ | ಶಿವಕುಮಾರ್ |
| 164 | ಗಾಂಧಿನಗರ | ಎ ಆರ್ ಸಪ್ತಗಿರಿ ಗೌಡ |
| 165 | ರಾಜಾಜಿನಗರ | ಎಸ್.ಸುರೇಶ್ ಕುಮಾರ್ |
| 166 | ಗೋವಿಂದರಾಜ ನಗರ | ಉಮೇಶ್ ಶೆಟ್ಟಿ |
| 167 | ವಿಜಯನಗರ | ಎಚ್.ರವೀಂದ್ರ |
| 168 | ಚಾಮರಾಜಪೇಟೆ | ಭಾಸ್ಕರ್ರಾವ್, ಮಾಜಿ ಐಪಿಎಸ್ |
| 169 | ಚಿಕ್ಕಪೇಟೆ | ಉದಯ್ ಗರುಡಾಚಾರ್ |
| 170 | ಬಸವನಗುಡಿ | ರವಿಸುಬ್ರಮಣ್ಯ |
| 171 | ಪದ್ಮನಾಭನಗರ | ಆರ್.ಅಶೋಕ್ |
| 172 | ಬಿಟಿಎಂ ಲೇಔಟ್ | ಶ್ರೀಧರ್ ರೆಡ್ಡಿ |
| 173 | ಜಯನಗರ | ಸಿ.ಕೆ.ರಾಮಮೂರ್ತಿ |
| 174 | ಮಹಾದೇವಪುರ (ST) | ಮಂಜುಳಾ ಅರವಿಂದ ಲಿಂಬಾವಳಿ |
| 175 | ಬೊಮ್ಮನಹಳ್ಳಿ | ಸತೀಶ್ ರೆಡ್ಡಿ |
| 176 | ಬೆಂಗಳೂರು ದಕ್ಷಿಣ | ಎಂ.ಕೃಷ್ಣಪ್ಪ |
| 177 | ಆನೇಕಲ್ (SC) | ಹುಲ್ಲಳ್ಳಿ ಶ್ರೀನಿವಾಸ್ |
| 178 | ಹೊಸಕೋಟೆ | ಎಂ.ಟಿ.ಬಿ.ನಾಗರಾಜ್ |
| 179 | ದೇವನಹಳ್ಳಿ (SC) | ಪಿಳ್ಳ ಮುನಿಶಾಮಪ್ಪ |
| 180 | ದೊಡ್ಡಬಳ್ಳಾಪುರ | ಧೀರಜ್ ಮುನಿರಾಜು |
| 181 | ನೆಲಮಂಗಲ (SC) | ಸಪ್ತಗಿರಿ ನಾಯಕ್ |
| 182 | ಮಾಗಡಿ | ಪ್ರಸಾದ್ ಗೌಡ |
| 183 | ರಾಮನಗರ | ಗೌತಮ್ ಗೌಡ |
| 184 | ಕನಕಪುರ | ಆರ್.ಅಶೋಕ್ |
| 185 | ಚನ್ನಪಟ್ಟಣ | ಸಿ.ಪಿ.ಯೋಗೇಶ್ವರ್ |
| 186 | ಮಳವಳ್ಳಿ (SC) | ಮುನಿರಾಜು |
| 187 | ಮದ್ದೂರು | ಎಸ್.ಪಿ.ಸ್ವಾಮಿ |
| 188 | ಮೇಲುಕೋಟೆ | ಇಂದ್ರೇಶ್ ಕುಮಾರ್ |
| 189 | ಮಂಡ್ಯ | ಅಶೋಕ್ ಜಯರಾಮ್ |
| 190 | ಶ್ರೀರಂಗಪಟ್ಟಣ | ಇಂಡವಾಳು ಸಚ್ಚಿದಾನಂದ |
| 191 | ನಾಗಮಂಗಲ | ಸುಧಾ ಶಿವರಾಮ್ |
| 192 | ಕೆ.ಆರ್.ಪೇಟೆ | ಕೆ.ಸಿ.ನಾರಾಯಣಗೌಡ |
| 193 | ಶ್ರವಣಬೆಳಗೊಳ | ಚಿದಾನಂದ |
| 194 | ಅರಸೀಕೆರೆ | ಜಿ.ವಿ.ಬಸವರಾಜು |
| 195 | ಬೇಲೂರು | ಹುಲ್ಲಳ್ಳಿ ಕೆ ಸುರೇಶ್ |
| 196 | ಹಾಸನ | ಜೆ.ಪ್ರೀತಮ್ ಗೌಡ |
| 197 | ಹೊಳೆನರಸೀಪುರ | ದೇವರಾಜೇಗೌಡ |
| 198 | ಅರಕಲಗೂಡು | ಯೋಗ ರಮೇಶ್ |
| 199 | ಸಕಲೇಶಪುರ (SC) | ಸಿಮೆಂಟ್ ಮಂಜು |
| 200 | ಬೆಳ್ತಂಗಡಿ | ಹರೀಶ್ ಪೂಂಜಾ |
| 201 | ಮೂಡಬಿದ್ರೆ | ಉಮಾನಾಥ್ ಕೋಟ್ಯಾನ್ |
| 203 | ಮಂಗಳೂರು ನಗರ ದ | ವೇದವ್ಯಾಸ್ ಕಾಮತ್ |
| 204 | ಮಂಗಳೂರು | ಸತೀಶ್ ಕುಂಪಳ |
| 202 | ಮಂಗಳೂರು ನಗರ ಉ | ವೈ.ಭರತ್ ಶೆಟ್ಟಿ |
| 205 | ಬಂಟ್ವಾಳ | ರಾಜೇಶ್ ನಾಯಕ್ |
| 206 | ಪುತ್ತೂರು | ಆಶಾ ತಿಮ್ಮಪ್ಪ |
| 207 | ಸುಳ್ಯ (SC) | ಭಗೀರಥಿ ಮುರುಳ್ಯ |
| 208 | ಮಡಿಕೇರಿ | ಎಂ.ಪಿ.ಅಪ್ಪಾಚು ರಂಜನ್ |
| 209 | ವಿರಾಜಪೇಟೆ | ಕೆ.ಜಿ.ಬೋಪಯ್ಯ |
| 210 | ಪಿರಿಯಾಪಟ್ಟಣ | ಸಿ.ಎಚ್.ವಿಜಯಶಂಕರ್ |
| 211 | ಕೃಷ್ಣರಾಜನಗರ | ವೆಂಕಟೇಶ್ ಹೊಸಳ್ಳಿ |
| 212 | ಹುಣಸೂರು | ದೇವರಹಳ್ಳಿ ಸೋಮಶೇಖರ್ |
| 213 | ಹೆಗ್ಗಡದೇವನಕೋಟೆ (ST) | ಕೃಷ್ಣ ನಾಯಕ್ |
| 214 | ನಂಜನಗೂಡು (SC) | ಬಿ.ಹರ್ಷವರ್ಧನ್ |
| 215 | ಚಾಮುಂಡೇಶ್ವರಿ | ಕವೀಶ್ ಗೌಡ |
| 216 | ಕೃಷ್ಣರಾಜ | ಶ್ರೀವತ್ಸ |
| 217 | ಚಾಮರಾಜ | ಎಲ್.ನಾಗೇಂದ್ರ |
| 218 | ನರಸಿಂಹರಾಜ | ಸಂದೇಶ್ ಸ್ವಾಮಿ |
| 219 | ವರುಣಾ | ವಿ.ಸೋಮಣ್ಣ |
| 220 | ಟಿ.ನರಸೀಪುರ | ರೇವಣ್ಣ |
| 221 | ಹನೂರು | ಪ್ರೀತಮ್ ನಾಗಪ್ಪ |
| 222 | ಕೊಳ್ಳೆಗಾಲ (SC) | ಎಂ.ಮಹೇಶ್ |
| 223 | ಚಾಮರಾಜನಗರ | ವಿ.ಸೋಮಣ್ಣ |
| 224 | ಗುಂಡ್ಲುಪೇಟೆ | ಸಿ.ಎಸ್.ನಿರಂಜನ್ ಕುಮಾರ್ |












Click it and Unblock the Notifications