Get Updates
Get notified of breaking news, exclusive insights, and must-see stories!

Karnataka Dams Water Level: ಜೂನ್ 17ರಂದು ರಾಜ್ಯದ ಜಲಾಶಯಗಳ ಒಳ ಹರಿವು, ನೀರು ಸಂಗ್ರಹದ ಪಟ್ಟಿ

ಬೆಂಗಳೂರು, ಜೂನ್ 17: ಕರ್ನಾಟಕದಲ್ಲಿ ಅತ್ಯಧಿಕ ಮಳೆ ತಕ್ಕಮಟ್ಟಿಗೆ ಇಳಿಕೆ ಆಗಿದ್ದು, ಈವರೆಗೆ ಬಂದ ಸಾಧಾರಣದಿಂದ ಭಾರಿ ಮಳೆಯ ಕಾರಣದಿಂದಾಗಿಯೇ ರಾಜ್ಯದ ಜಲಾಶಯಗಳಲ್ಲಿ ನೀರಿನ ಒಳ ಮತ್ತು ಹೊರ ಹರಿವಿನ ಪ್ರಮಾಣದಲ್ಲಿ ಏರಿಕೆ ಆಗಿದೆ. ಕಬಿನಿ, ಹಾರಂಗಿ, ತುಂಗಭದ್ರಾ ಸೇರಿದಂತೆ ಅನೇಕ ಜಲಾಶಯಗಳ ಒಳಹರಿವು ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಈ ಹರಿವು ಇನ್ನಷ್ಟು ಏರಿಕೆ ಆಗುವ ಸಂಭವ ಇದೆ.

ಸೋಮವಾರ ಬೆಂಗಳೂರಿನ ಒಂದೆರಡು ಕಡೆಗಳಲ್ಲಿ ಬಿಸಿಲ ಮಧ್ಯೆಯು ಹಗುರ ಮಳೆ ದಾಖಲಾಗಿದೆ. ಇದೇ ರೀತಿ ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ, ಹಾಸನ ಸೇರಿದಂತೆ ಮಲೆನಾಡಿನ ಭಾಗದಲ್ಲಿ ಅತ್ಯುತ್ತಮ ಮಳೆ ದಾಖಲಾಗಿದೆ. ಕೆಲವೆಡೆ ಮಳೆ ಮುಂದುವರಿದ ಪರಿಣಾಮ ರಾಜ್ಯದ ಜಲಾಶಯಗಳಲ್ಲಿ ಒಳಹರಿವು ಏರಿಕೆ ಆಗಿದೆ. ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ನೆರೆ ಭೀತಿ ಆವರಿಸಿದೆ ಎನ್ನಬಹುದು.

Karnataka Dams Water Level Increased on June 17th Know These Dams Storage inflow

KRS ಜಲಾಶಯದ ವಿವರ

ಒಟ್ಟು ಸಾಮರ್ಥ್ಯ - 49.451 ಟಿಎಂಸಿ

ಇಂದಿನ ಸಂಗ್ರಹ- 11 ಟಿಎಂಸಿ

ಒಳ ಹರಿವು - 2120 ಕ್ಯೂಸೆಕ್

ಹೊರ ಹರಿವು- 461 ಕ್ಯೂಸೆಕ್

* ಹೇಮಾವತಿ ಜಲಾಶಯ​

ಒಟ್ಟು ಸಾಮರ್ಥ್ಯ- 37. 10 ಟಿಎಂಸಿ

ಇಂದಿನ ನೀರಿನ ಮಟ್ಟ - 10.46 ಟಿಎಂಸಿ

ಒಳಹರಿವು - 950 ಕ್ಯೂಸೆಕ್

ಹೊರಹರಿವು - 205 ಕ್ಯೂಸೆಕ್

* ತುಂಗಭದ್ರಾ ಜಲಾಶಯ​

ಒಟ್ಟು ಸಾಮರ್ಥ್ಯ - 105.79 ಟಿಎಂಸಿ

ಇಂದಿನ ಸಂಗ್ರಹ - 5.2 ಟಿಎಂಸಿ

ಹೊರಹರಿವು - 300 ಕ್ಯೂಸೆಕ್

ಒಳಹರಿವು - 1470 ಕ್ಯೂಸೆಕ್

Karnataka Dams Water Level Increased on June 17th Know These Dams Storage inflow

* ಹಾರಂಗಿ ಜಲಾಶಯ

ಒಟ್ಟು ನೀರಿನ ಸಾಮರ್ಥ್ಯ- 8.50 ಟಿಎಂಸಿ

ಇಂದಿನ ಸಂಗ್ರಹ - 3.20 ಟಿಎಂಸಿ

ಒಳಹರಿವು -400 ಕ್ಯೂಸೆಕ್

ಹೊರಹರಿವು - 180 ಕ್ಯೂಸೆಕ್

* ಲಿಂಗನಮಕ್ಕಿ ಜಲಾಶಯ​

ಒಟ್ಟು ಸಾಮರ್ಥ್ಯ- 151.75 ಟಿಎಂಸಿ

ಇಂದಿನ ಸಂಗ್ರಹ - 12.70 ಟಿಎಂಸಿ

ಒಳಹರಿವು - 314 ಕ್ಯೂಸೆಕ್

ಹೊರಹರಿವು - 1400 ಕ್ಯೂಸೆಕ್

* ಮಲಪ್ರಭಾ ಜಲಾಶಯ​

ಒಟ್ಟು ನೀರಿನ ಸಾಮರ್ಥ್ಯ - 37.73 ಟಿಎಂಸಿ

ಇಂದಿನ ಸಂಗ್ರಹ - 6.54 ಟಿಎಂಸಿ

ಒಳಹರಿವು - 0 ಕ್ಯೂಸೆಕ್

ಹೊರಹರಿವು - 194 ಕ್ಯೂಸೆಕ್

* ಕಬಿನಿ ಜಲಾಶಯ​

ಡ್ಯಾಮ್‌ನ ಒಟ್ಟು ಸಾಮಥ್ಯ - 19.52 ಟಿಎಂಸಿ

ಇಂದಿನ ಸಂಗ್ರಹ - 8.0 ಟಿಎಂಸಿ

ಹೊರಹರಿವು - 350 ಕ್ಯೂಸೆಕ್

ಒಳಹರಿವು - 1530 ಕ್ಯೂಸೆಕ್

ಒಂದಷ್ಟು ಜಲಾಶಯಗಳು ಭರ್ತಿಯಾಗಿದ್ದು, ಮಳೆ ಇನ್ನಷ್ಟು ಹೆಚ್ಚಾಗಿ ಅಧಿಕ ಪ್ರಮಾಣದಲ್ಲಿ ನೀರು ಹೊರ ಬಿಟ್ಟರೆ ಗತಿ ಏನು? ಎಂದು ಜಲಾನಯನ ಪ್ರದೇಶಗಳ ಜನರು ಆತಂಕಪಡುತ್ತಿದ್ದಾರೆ.

ಕರ್ನಾಟಕ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮೂರು ದಿನ ಭಾರಿ ಮಳೆ ಆಗಲಿದೆ. ಇಂದು ಇಲ್ಲಿನ ಮೂರು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ಕೊಡಲಾಗಿದೆ. ಇದೇ ರೀತಿ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣೆ ಮಳೆ ಮುಂದುವರಿಯಲಿದೆ. ಕಾವೇರಿ, ಕಬಿನಿ ಜಲಾಯನಯ ಪ್ರದೇಶಗಳಲ್ಲಿ ಮಳೆ ಮುಂದುವರಿಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+