Get Updates
Get notified of breaking news, exclusive insights, and must-see stories!

ಮತದಾರರ ಹೆಸರನ್ನು ಅಳಿಸಿದ ಆರೋಪ: ಚುನಾವಣೆ ಆಯೋಗಕ್ಕೆ ದೂರು ನೀಡಲು ಮುಂದಾದ ಕಾಂಗ್ರೆಸ್‌

ಬೆಂಗಳೂರು, ಮಾರ್ಚ್‌ 08: ಆಯ್ದ ಮತದಾರರ ಹೆಸರನ್ನು ಅಳಿಸಿದ ಆರೋಪದ ಮೇಲೆ ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ದೂರು ಸಲ್ಲಿಸುವುದಾಗಿ ಕರ್ನಾಟಕ ಕಾಂಗ್ರೆಸ್ ಬುಧವಾರ ತಿಳಿಸಿದೆ. ಮತದಾರರ ಪಟ್ಟಿಯಿಂದ ಅಳಿಸಲಾದ ಹೆಸರುಗಳು ಚಿಲುಮೆ ಗ್ರೂಪ್ ಸಂಗ್ರಹಿಸಿದ ಪಟ್ಟಿಯನ್ನು ಆಧರಿಸಿವೆ ಎಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ. ಮತದಾರರ ಡೇಟಾ ಕಳ್ಳತನದ ಆರೋಪದ ಮೇಲೆ ಪೊಲೀಸರು ಮತ್ತು ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ತನಿಖೆ ನಡೆಸುತ್ತಿದೆ.

ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ತಾವು ಪ್ರತಿನಿಧಿಸುವ ಶಿವಾಜಿನಗರ ಕ್ಷೇತ್ರದಲ್ಲಿ ಒಟ್ಟು 9,195 ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಆರೋಪಿಸಿದರು. ಈ ಮತದಾರರು ದಲಿತರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರದ್ದಾಗಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ 193 ಬೂತ್‌ಗಳಲ್ಲಿ ಕೇವಲ 91 ಬೂತ್‌ಗಳಲ್ಲಿ ಈ ಮತದಾರರಿದ್ದಾರೆ ಎಂದು ಅವರು ಹೇಳಿದರು. ಬಿಜೆಪಿಯ ನಿರ್ದೇಶನದ ಮೇಲೆ ಎಸ್‌ಇಸಿ ಮತದಾರರಿಗೆ ನೋಟಿಸ್ ಜಾರಿ ಮಾಡಿದೆ ಎಂದು ರಿಜ್ವಾನ್‌ ತಿಳಿಸಿದರು.

Karnataka Congress to approach EC over ‘selective’ deletion of voter names ahead of polls

9,195 ಮತದಾರರ ಪೈಕಿ 22 ಮಂದಿ ತಮ್ಮ ಹೆಸರನ್ನು ಸ್ವಯಂ ಪ್ರೇರಿತವಾಗಿ ಅಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಮತದಾರರ ಪಟ್ಟಿಯಿಂದ 22 ಹೆಸರುಗಳನ್ನು ಅಳಿಸಲಾಗುವುದಿಲ್ಲ ಎಂದು ಎಸ್‌ಇಸಿ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದೆ. ಅವರು ಇದನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದರೆ, ನೋಟಿಸ್‌ಗಳನ್ನು ಏಕೆ ನೀಡಲಾಯಿತು? ಇಸಿಐ ಮಾರ್ಗಸೂಚಿಗಳ ಪ್ರಕಾರ, ಚುನಾವಣೆಗೆ ಆರು ತಿಂಗಳ ಮೊದಲು ಸ್ವಯಂಪ್ರೇರಣೆಯಿಂದ ಹೆಸರುಗಳನ್ನು ಅಳಿಸಲಾಗುವುದಿಲ್ಲ. ಆದರೂ ಬಿಜೆಪಿಯ ಒತ್ತಡಕ್ಕೆ ಮಣಿದು ಮತದಾರರಿಗೆ ನೋಟಿಸ್ ಜಾರಿ ಮಾಡಿದ್ದು ಏಕೆ? ರಿಜ್ವಾನ್‌ ಪ್ರಶ್ನಿಸಿದರು.

22 ಮತದಾರರಿಗೆ ನ್ಯಾಯಾಲಯ ಪರಿಹಾರ ನೀಡಿದರೆ, ಉಳಿದ 9 ಸಾವಿರ ಮತದಾರರು ತಮ್ಮ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಲಯದ ಮೊರೆ ಹೋಗಬೇಕೇ ಎಂದು ಪ್ರಶ್ನಿಸಿದರು. ಚುನಾವಣೆಗೆ ಕೇವಲ ಎರಡು ತಿಂಗಳ ಮೊದಲು ಹೆಸರುಗಳನ್ನು ತೆಗೆದುಹಾಕುವುದು ಕೆಟ್ಟ ಪ್ರವೃತ್ತಿಯಾಗಿದೆ. 'ಭವಿಷ್ಯದಲ್ಲಿ ನ್ಯಾಯಯುತ ಚುನಾವಣೆಗಳನ್ನು ನಡೆಸುವ ಪ್ರಕ್ರಿಯೆಗೆ ಇದರಿಂದ ಅಡ್ಡಿಯಾಗಲಿದೆ' ಎಂದು ಅರ್ಷದ್ ಹೇಳಿದರು.

Karnataka Congress to approach EC over ‘selective’ deletion of voter names ahead of polls

ಎಸ್‌ಇಸಿ ಪ್ರದರ್ಶಿಸಿದ ಮತದಾರರ ಹೆಸರುಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಲ್ಲಿಸಿದ ಮತದಾರರ ಪಟ್ಟಿಗಳಲ್ಲಿ ವ್ಯತ್ಯಾಸವಿದೆ ಎಂದು ಶಾಸಕರು ಆರೋಪಿಸಿದರು.

ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂವಹನ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ, ಆಳಂದ ಕ್ಷೇತ್ರದಲ್ಲಿ 6,000 ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ಆರೋಪಿಸಿದರು. ಶಿವಾಜಿನಗರ ಪ್ರಕರಣವನ್ನು ಉಲ್ಲೇಖಿಸಿದ ಅವರು, ಆರಂಭಿಕ ಎಸ್‌ಇಸಿ ಪಟ್ಟಿಯು ಕ್ಷೇತ್ರದಲ್ಲಿ 26,000 ಮತದಾರರ ಹೆಸರನ್ನು ಅಳಿಸಲು ಶಿಫಾರಸು ಮಾಡಿದೆ ಎಂದು ಹೇಳಿದರು.

ಮತದಾರರ ಹೆಸರು ಅಳಿಸಿ ಹಾಕಿರುವ ಬಗ್ಗೆ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ಖರ್ಗೆ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+