ಕರ್ನಾಟಕ ಏಕದಿನದ ವಿದ್ಯುತ್ ಬಳಕೆಯಲ್ಲಿ ಜ.13ರಂದು ದಾಖಲೆ, ಕಾರಣ ಏನು?, ಪೂರ್ಣ ವಿವಿರ ಇಲ್ಲಿದೆ
ಬೆಂಗಳೂರು ಜನವರಿ 17: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿದೆ. ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಉಚಿತ ವಿದ್ಯುತ್ ಭರವಸೆ ನೀಡುತ್ತಿವೆ. ಇದರ ಮಧ್ಯದಲ್ಲಿ ಕರ್ನಾಟಕವು ಜನವರಿ 13ರಂದು ಗರಿಷ್ಠ ಮಟ್ಟದಲ್ಲಿ ವಿದ್ಯುತ್ ಬಳಕೆಗೆ ಸಾಕ್ಷಿಯಾಗಿದೆ. ಈ ಮೂಲಕ ತನ್ನದೇ ಸರ್ವಕಾಲಿಕ ಹಿಂದಿನ ದಾಖಲೆ ಮುರಿದಿದೆ.
ರಾಜ್ಯದಲ್ಲಿ ಕಳೆದ 2022ರ ಮಾರ್ಚ್ ನಲ್ಲಿ 14,818 ಮೆಘಾವ್ಯಾಟ್ (Mw) ವಿದ್ಯುತ್ ಬಳಕೆಯ ಪೀಕ್ ಲೋಡ್ ಸಾಧಿಸಿತ್ತು. ಇದೇ ಸಾರ್ವಜಕಾಲಿಕ ದಾಖಲೆಯಾಗಿತ್ತು. ಆದರೆ ಅದನ್ನು ಇದೇ ವರ್ಷದ ಆರಂಭಿಕ ಜನವರಿ 15 ದಿನದಲ್ಲೇ ಆ ದಾಖಲೆ ಮೀರಿ ಹೊಸ ದಾಖಲೆ ಸೃಷ್ಟಿಯಾಗಿದೆ. 14,818 ಮೆಘಾವ್ಯಾಟ್ ಗಿಂತಲೂ ಹೆಚ್ಚು ವಿದ್ಯುತ್ ಬಳಕೆ ಆಗಿದೆ. ಮುಂಬರಲಿರುವ ಬೇಸಿಗೆ ವೇಳೆ ಬೇಡಿಕೆ ಇನ್ನಷ್ಟು 15,500 ಮೆಗಾವ್ಯಾಟ್ ಹೆಚ್ಚಾಗುವ ನಿರೀಕ್ಷೆ ಇದೆ. ಕರ್ನಾಟಕ ಇಂಧನ ಇಲಾಖೆ ಅಗತ್ಯಷ್ಟು ಇಂಧನ ಪೂರೈಕೆ ಸಿದ್ಧವಿದೆ ಎಂದು ಇಂಧನ ಇಲಾಖೆ ತಿಳಿಸಿದೆ.
ಕರ್ನಾಟಕವು ಕಳೆದ (2022) ಮಾರ್ಚ್ ಅಂದರೆ ಬೇಸಿಗೆ ಅವಧಿಯಲ್ಲಿ ವಿದ್ಯುತ್ ಬಳಕೆಯ ಗರಿಷ್ಠ ಮಟ್ಟ (ಪೀಕ್) ತಲುಪಿತ್ತು. ಅಂತಹ ಗರಿಷ್ಠ ಮಟ್ಟದ ಬಳಕೆ ಜನವರಿಯಲ್ಲಿ ಆಗಿದೆ. ಈಗಿನ್ನು ಚಳಿಗಾಲ. ಇದೆಲ್ಲ ನೋಡಿದರೆ ಮುಂದಿನ ಬೇಸಿಗೆಗೆ ಜನವರಿಯ ದಾಖಲೆ ಮುರಿಯುವ ಸಾಧ್ಯತೆ ಇದೆ. ಅಷ್ಟರ ಮಟ್ಟಿಗೆ ವಿದ್ಯುತ್ ಬಳಕೆಯಾಗಲಿದೆ. ಮುಂಬರಲಿರುವ ಬೇಸಿಗೆಯಲ್ಲಿ ಕರ್ನಾಟಕದಲ್ಲಿ 15,300 ರಿಂದ 15,500 ಮೆಘಾವ್ಯಾಟ್ ವರೆಗೆ ಬೇಡಿಕೆ ಬರಬಹುದು ಎಂದು ಊಸಿಲಾಗಿದೆ.

ಕಳೆದ ಜನವರಿ 2022 ರಲ್ಲಿ ಕರ್ನಾಟಕವು ನಿತ್ಯ 190-210 ಮಿಲಿಯನ್ ಯುನಿಟ್ಗಳನ್ನು ಬಳಸುತ್ತಿತ್ತು. ಇದೀಗ ಜನವರಿ 13ರಂದು ಒಂದೇ ದಿನ ಹಳೆಯ ದಾಖಲೆಗಿಂತಲೂ ಹೆಚ್ಚು 235 ಮಿಲಿಯನ್ ಯೂನಿಟ್ಗಳ ವಿದ್ಯುತ್ ಖರ್ಚಾಗಿದೆ ಎಂದು ರಾಜ್ಯ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ (SCADA) ನೆಟ್ವರ್ಕ್ ತಿಳಿಸಿದೆ.
ವಿದ್ಯುತ್ ಬಳಕೆ ಸರಾಸರಿ ಶೇ. 10ರಷ್ಟು ಏರಿಕೆ
ನೀರಾವರಿ ಪಂಪ್ಸೆಟ್ ಬಳಕೆ, ಉದ್ಯೋಗಿಗಳು ಕಚೇರಿಯಿಂದಲೇ ಕೆಲಸ ಮಾಡುವ ಪ್ರಮಾಣ ಹೆಚ್ಚಾಗಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ವಿದ್ಯತ್ ಬಳಕೆಯಲ್ಲಿ ನಾವು ಪೀಕ್ ತಲುಪಿದ್ದೇವೆ. ರಾಜ್ಯದಲ್ಲಿ ಅಂತರ್ಜಲ ಮಟ್ಟವು ಉತ್ತಮವಾಗಿದೆ. ಹಲವಾರು ಕಂಪನಿಗಳು ವರ್ಕ್ ಫ್ರಂ ಹೋಮ್ನಿಂದ ಕಚೇರಿಗೆ ಮರಳಿವೆ. ಉದ್ಯಮಗಳು ಉತ್ಪಾದನಾ ಚಟುವಟಿಕೆಗಳ ಪುನಾರಂಭವಾಗಿದೆ. ಹೀಗಾಗಿ ಈ ವರ್ಷ ವಿದ್ಯುತ್ ಬಳಕೆ ರಾಜ್ಯದಲ್ಲಿ ಸರಾಸರಿ ಶೇ.10ರಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂಧನ ಸಚಿವ ವಿ.ಸುನೀಲ್ ಕುಮಾರ್ ಇದಕ್ಕೆ ಪ್ರತಿಕ್ರಿಯಿಸಿದ್ದು, ನವೆಂಬರ್ನಿಂದ ಇಂಧನ ಬಳಕೆಯಲ್ಲಿ ಏರಿಕೆ ಆಗುತ್ತಾ ಬಂದಿದೆ. ಡಿಸೆಂಬರ್ನ ಕೆಲವು ದಿನಗಳಲ್ಲಿ ವಿದ್ಯುತ್ ಬಳಕೆ ಕುಸಿತ ಕಂಡರೂ ಸಹ ಮತ್ತೆ ಹೆಚ್ಚಾಗುತ್ತಾ ಹೋಯಿತು. ಸಾಮಾನ್ಯವಾಗಿ ಬೇಸಿಗೆಯಲ್ಲಿ ವಿದ್ಯುತ್ ಗೆ ಹೆಚ್ಚು ಬೇಡಿಕೆ ಇರುತ್ತದೆ. ಈ ವರ್ಷ ಬೇಸಿಗೆ ಬೇಡಿಕೆಗಿಂತಲೂ ಹೆಚ್ಚು ಪೂರೈಸಲಾಗುವುದು. ಯಾವುದೇ ವಿದ್ಯುತ್ ಕಡಿತ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications