ಪ್ರೀತಿಯಿಂದ ಕನ್ನಡ ಕಲಿಸಬೇಕಾ, ರೌಡಿಸಂನಿಂದಲಾ?
ಪ್ರ : ಹಲವಾರು ಸಾಫ್ಟ್ ವೇರ್ ಇಂಜಿನಿಯರುಗಳು, ತಾವೇ ಸ್ವತಃ ಮುಂದಾಗಿ ಕನ್ನಡೇತರರಿಗೆ ತರಗತಿ ಮುಖಾಂತರ ಅಥವಾ ಆನ್ ಲೈನ್ ಮೂಲಕ ಕನ್ನಡ ಕಲಿಸುವ ಕೆಲಸಕ್ಕೆ ಮುಂದಾಗಿವೆ. ಕರವೇಯಿಂದ ಕನ್ನಡೇತರರಿಗೆ ಕನ್ನಡ ಕಲಿಸುವ ಕೆಲಸ ಏನು ನಡೆಯುತ್ತಿದೆ?
ನಾ. ಗೌಡ : ಕರವೇ ಅಂಗ ಸಂಸ್ಥೆಯಾದ ಬನವಾಸಿ ಬಳಗ ಕನ್ನಡೇತರರಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿರುವುದರ ಜೊತೆಗೆ, ಉದ್ಯೋಗ ಅಗತ್ಯವಿರುವ ಕನ್ನಡಿಗರಿಗೆ ಸಂದರ್ಶನ ಎದುರಿಸಲು ಸೂಕ್ತ ತರಬೇತಿ ನೀಡಿ ಅವರಿಗೆ ವಿವಿಧ ಐಟಿಬಿಟಿ ಕಂಪನಿಗಳಲ್ಲಿ, ಕೆಲಸ ಖಾಲಿ ಇರುವುದು ತಿಳಿದುಬಂದರೆ, ಕೆಲಸ ಕೊಡಿಸುವ ಕೈಂಕರ್ಯವನ್ನು ಕೈಗೊಂಡಿದೆ. ಐಟಿಬಿಟಿ ಉದ್ಯೋಗಿಗಳ ಜೊತೆ ವರ್ಷಕ್ಕೊಂದು ಬಾರಿ ಕನ್ನಡಿಗರ ಉದ್ಯೋಗದ ಅಗತ್ಯತೆಯ ಬಗ್ಗೆ, ಕನ್ನಡದ ಆಗುಹೋಗುಗಳ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ಪ್ರತಿವರ್ಷ ಜನವರಿಯಲ್ಲಿ ಚರ್ಚೆ ನಡೆಯುತ್ತದೆ.

ಪ್ರ : ಕನ್ನಡೇತರರಿಗೆ ಪ್ರೀತಿಯಿಂದ ಕನ್ನಡ ಕಲಿಸಬೇಕಾ, ರೌಡಿಸಂನಿಂದ ಕನ್ನಡ ಕಲಿಸಬೇಕಾ? 'ಎಲಾ ಕುನ್ನಿ ಕರ್ನಾಟಕದಲ್ಲಿ ಕನ್ನಡ ಮಾತಾಡೋ' ಎಂಬಂತಹ ಭಾಷೆಯನ್ನು ರಕ್ಷಣಾ ವೇದಿಕೆ ಬಳಸುವುದು ಎಷ್ಟು ಸರಿ?
ನಾ. ಗೌಡ : ನನಗೆ ರೌಡಿಸಂನಲ್ಲಿ ಖಂಡಿತ ನಂಬಿಕೆ ಇಲ್ಲ. ಭಯೋತ್ಪಾದನೆ ಮಾಡಿ ನಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ತಿಳಿಸುವ ಅಗತ್ಯವಿಲ್ಲ. ಆದರೆ, ನೋಡಿ ಕೆಲವೊಂದು ಸಾರಿ ಭೀತಿಯೂ ಅಗತ್ಯವಿದೆ. ಭೀತಿ ಅನ್ನುವುದಕ್ಕಿಂತ ಕ್ರಾಂತಿಯ ಅಗತ್ಯವಿದೆ ಅಂತ ಅನಿಸುತ್ತೆ. ಪ್ರೀತಿಯ ಹೋರಾಟಕ್ಕೆ ಯಶಸ್ಸು ಸಿಕ್ಕದಿದ್ದಾಗ ಇಂಥ ಕ್ರಾಂತಿ ಮಾಡಲೇಬೇಕಾಗುತ್ತದೆ. ಆದರೆ, ಫೇಸ್ ಬುಕ್ ನಲ್ಲಿ ಕರವೇ ಅಂತಹ ಭಾಷೆ ಬಳಸಿರುವ ಬಗ್ಗೆ ನನಗೆ ಗೊತ್ತಿಲ್ಲ. ನೋಡಿದ ಮೇಲೆ ಅಂಥ ಭಾಷೆ ಬಳಸದಂತೆ ನೋಡುತ್ತೇನೆ, ಸರಿಮಾಡಿಕೊಳ್ಳುತ್ತೇನೆ. 'ಕನ್ನಡ ಕಲಿ, ಇಲ್ಲವೇ ತೊಲಗಿ' ಅದು ನಮ್ಮ ಘೋಷಣೆ.
ಪ್ರ : ಬೆಳಗಾವಿ ವಿಚಾರಕ್ಕೆ ಬರುವುದಾದರೆ ಅಲ್ಲಿ ಮರಾಠಿಗರ ಪ್ರಾಬಲ್ಯದ ಮುಂದೆ ಕನ್ನಡಿಗರ ಹೋರಾಟದ ಧ್ವನಿ ಕಮ್ಮಿಯಾಗುತ್ತಿದೆಯೇ?
ನಾ. ಗೌಡ : ಜನಸಂಖ್ಯೆಯಲ್ಲಿ ಮರಾಠಿಗರು ಬೆಳಗಾವಿ ಜಿಲ್ಲೆಯಲ್ಲಿ ಪ್ರಾಬಲ್ಯರಾಗಿಲ್ಲ. ಜಿಲ್ಲೆಯ ಎರಡು ತಾಲೂಕಿನಲ್ಲಿ ಬಿಟ್ಟರೆ ಉಳಿದೆಲ್ಲಾ ಕಡೆ ಕನ್ನಡಿಗರೇ ಹೆಚ್ಚು. ಅಲ್ಲಿ ಪ್ರಮುಖವಾಗಿ ಗೆಲುವಿನ ತೀರ್ಮಾನ ಮಾಡುವವರು ಮರಾಠಿಗರು. ನಾವು ಹೋದ ಬಾರಿ ದೊಡ್ಡ ಜವಾಬ್ದಾರಿ ವಹಿಸಿಕೊಂಡು ಮರಾಠಿಗರ ಸೊಕ್ಕು ಅಡಗಿಸುವ ಕೆಲಸಕ್ಕೆ ಮುಂದಾಗಿದ್ದೆವು. ಎಂಇಎಸ್ ವಿರುದ್ದ ಕನ್ನಡಿಗರು ಒಂದಾಗಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ವಿನಂತಿ ಮಾಡಿಕೊಂಡು ಆಯಾಯ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯದಂತೆ ನೋಡಿಕೊಂಡೆವು. ಆಗ 22ಕ್ಕೆ 22 ಕನ್ನಡಿಗರು ಜಯಗಳಿಸಿದರು.
ಈ ಹಿಂದೆ ನನ್ನ ಭಾಷಣ ಕೇಳಲು ಬಂದಿದ್ದ ಕನ್ನಡದ ಹೆಣ್ಣು ಮಗಳು ಪ್ರಶಾಂತ್ ಬುಡವಿ ಅಲ್ಲಿ ಮೇಯರ್ ಆಗಿ ಆಯ್ಕೆಯಾದರು. ಇದು 25 ವರ್ಷಗಳ ಇತಿಹಾಸದಲ್ಲಿ ಮೊದಲು. ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಾಗ ಬಿಜೆಪಿ ಅಲ್ಲಿ ಮರಾಠಿಗರ ಜೊತೆ ಕರ್ನಾಟಕ ಸರಕಾರವೇ ಒಳ ಒಪ್ಪಂದ ಮಾಡಿಕೊಂಡಿತು. ಸಮ್ಮೇಳನ ಮುಗಿದ ಮರುದಿನವೇ ಮರಾಠಿ ಹೆಣ್ಣುಮಗಳೊಬ್ಬಳು ಅಲ್ಲಿ ಮೇಯರ್ ಅಗಿ ಆಯ್ಕೆಯಾದರು.
ವೋಟ್ ಬ್ಯಾಂಕಿಗೆ ಹೆದರಿ ಬಿಜೆಪಿ ಅಲ್ಲಿ ಮರಾಠಿಗರಿಗೆ ಬೆಂಬಲಿಸಿತು. ಒಬ್ಬರೇ ಒಬ್ಬರು ಮರಾಠಿ ಶಾಸಕರು ಆಯ್ಕೆಯಾದ ಬೆಳಗಾವಿಯಲ್ಲಿ ಕಳೆದ ಚುನಾವಣೆಯಲ್ಲಿ ಇಬ್ಬರು ಮರಾಠಿಗರು ಆಯ್ಕೆಯಾಗಿದ್ದಾರೆ. ಅದರಲ್ಲಿ ಸಂಭಾಜಿ ಪಾಟೀಲ್ ಎನ್ನುವ ಪಾತಕಿ ಕೂಡಾ ಒಬ್ಬ. ಇದು ಬೆಳಗಾವಿಯ ವಸ್ತುಸ್ಥಿತಿ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications