ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಸಂತೋಷ್ ಹೆಗ್ಡೆ ಸಂದರ್ಶನ
ಬೆಂಗಳೂರು, ಆಗಸ್ಟ್ 19 : ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ -2015ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ. ವಿಧೇಯಕದ ಪ್ರಕಾರ ಲೋಕಾಯುಕ್ತರನ್ನು ಪದಚ್ಯುತಿಗೊಳಿಸಬಹುದಾಗಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಒನ್ ಇಂಡಿಯಾಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತ ತಿದ್ದುಪಡಿ ಕಾಯ್ದೆಯ ಬಗ್ಗೆ ಮಾತನಾಡಿದ್ದಾರೆ. ಕಾಯ್ದೆಗೆ ಒಪ್ಪಿಗೆ ಸಿಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರ ಪದಚ್ಯುತಿಗೆ ಶಾಸಕ ಸಹಿ ಸಂಗ್ರಹ ಮಾಡುವ ಕಾರ್ಯವನ್ನು ಆರಂಭಿಸಿದೆ. ಸಂತೋಷ್ ಹೆಗ್ಡೆ ಸಂದರ್ಶನದ ವಿವರ ಇಲ್ಲಿದೆ.....[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ 4 ಪ್ರಮುಖ ಬೆಳವಣಿಗೆಗಳು]
ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಲೋಕಾಯುಕ್ತ
ತಿದ್ದುಪಡಿ
ವಿಧೇಯಕ
ಒಂದು
ಉತ್ತಮ
ಬೆಳವಣಿಗೆಯಾಗಿದೆ.
ಕಾಯ್ದೆಯ
ಅನ್ವಯ
ಮೂವರು
ನ್ಯಾಯಮೂರ್ತಿಗಳು
ಆರೋಪಗಳ
ಬಗ್ಗೆ
ಪರಿಶೀಲನೆ
ನಡೆಸಲಿದ್ದಾರೆ.
ಆದರೆ,
ಈ
ಪ್ರಕ್ರಿಯೆ
ದೀರ್ಘಕಾಲಿಕವಾಗಬಾರದು
ಶೀಘ್ರವಾಗಿ
ಪೂರ್ಣಗೊಳ್ಳಬೇಕು.
ಲೋಕಾಯುಕ್ತದ
ಅವ್ಯವಸ್ಥೆ
ಮತ್ತು
ಬಾಕಿ
ಉಳಿದಿರುವ
ಪ್ರಕರಣಗಳ
ಬಗ್ಗೆ
ಏನು
ಹೇಳುವಿರಿ?
ಸದ್ಯ
ಲೋಕಾಯುಕ್ತರು
ರಜೆ
ಮೇಲೆ
ತೆರಳಿದ್ದಾರೆ.
ಅವರು
ತಮ್ಮ
ಜವಾಬ್ದಾರಿಯನ್ನು
ಯಾರಿಗೂ
ವಹಿಸಿಲ್ಲ.
ಆದ್ದರಿಂದ
ಪ್ರಕರಣಗಳು
ಬಾಕಿ
ಉಳಿಯುತ್ತಿವೆ.
ಲೋಕಾಯುಕ್ತರ
ಅನುಪಸ್ಥಿತಿಯಲ್ಲಿ
ಉಪ
ಲೋಕಾಯುಕ್ತರು
ಕಚೇರಿಯ
ಕೆಲಸಗಳ
ಜವಾಬ್ದಾರಿ
ನೋಡಿಕೊಳ್ಳಬೇಕು.
ಆದರೆ,
ಯಾರಿಗೂ
ಜವಾಬ್ದಾರಿ
ವಹಿಸಿದ
ಕಾರಣ
ಅವ್ಯವಸ್ಥೆ
ಉಂಟಾಗುತ್ತಿದೆ
ಎಂದು
ಅನ್ನಿಸುತ್ತಿದೆ.
[ಕರ್ನಾಟಕ
ಲೋಕಾಯುಕ್ತದಲ್ಲಿ
ಇದೇನಿದು
ಹಗರಣ?]
ಲೋಕಾಯುಕ್ತ
ಸಂಸ್ಥೆಯನ್ನು
ಮುಚ್ಚುವ
ಮಾತಿನ
ಬಗ್ಗೆ
ಏನು
ಹೇಳುತ್ತೀರಿ?
ಕೆಲವು
ವ್ಯಕ್ತಿಗಳ
ವಿರುದ್ಧ
ಆರೋಪ
ಕೇಳಿಬಂದ
ತಕ್ಷಣ
ಸಂಸ್ಥೆಯನ್ನೇ
ಮುಚ್ಚುವ
ಬಗ್ಗೆ
ಮಾತನಾಡಬಾರದು.
ಸಂಸ್ಥೆಯಲ್ಲಿ
ಕೇಳಿಬಂದಿರುವ
ಆರೋಪಗಳನ್ನು
ಅದು
ಬಗೆಹರಿಸಿಕೊಳ್ಳಬೇಕು.
ಸಂಸ್ಥೆಯ
ಮೇಲೆ
ನಂಬಿಕೆ
ಇಟ್ಟುಕೊಂಡಿರುವ
ಇತರ
ವ್ಯಕ್ತಿಗಳ
ಬಗ್ಗೆಯೂ
ಆಲೋಚನೆ
ನಡೆಸಬೇಕು.
ಆರೋಪಗಳ ಬಗ್ಗೆ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿದೆಯೇ?
ಹಲವಾರು ಆರೋಪಗಳು ಕೇಳಿಬರುತ್ತಿದ್ದರೂ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿದೆ ಎಂದು ಅನ್ನಿಸುತ್ತಿದೆ. ಹೈಕೋರ್ಟ್ ಕೋಲ್ಜಿಯಂ ಲೋಕಾಯುಕ್ತ ನೇಮಕಾತಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಈ ಆರೋಪಗಳ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಕೇಳಿದ್ದೇನೆ.