ಅಕ್ರಮ ಆಸ್ತಿಗಳಿಕೆ ಕೇಸ್, ಅಕ್ಟೋಬರ್ನಲ್ಲಿ ಜಯಾ ಅರ್ಜಿ ವಿಚಾರಣೆ
ಬೆಂಗಳೂರು, ಜುಲೈ 29 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಅಕ್ಟೋಬರ್ನಲ್ಲಿ ನಡೆಯಲಿದೆ. ಜುಲೈ 27ರಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.
ಕರ್ನಾಟಕ
ಸರ್ಕಾರ
ಮತ್ತು
ಡಿಎಂಕೆ
ಮುಖಂಡ
ಅನ್ಬಳಗನ್
ಅವರು
ಅಕ್ರಮ
ಆಸ್ತಿಗಳಿಗೆ
ಪ್ರಕರಣದಲ್ಲಿ
ಕರ್ನಾಟಕ
ಹೈಕೋರ್ಟ್
ನೀಡಿದ್ದ
ತೀರ್ಪನ್ನು
ಪ್ರಶ್ನಿಸಿ
ಸುಪ್ರೀಂಕೋರ್ಟ್ಗೆ
ಅರ್ಜಿ
ಸಲ್ಲಿಸಿದ್ದಾರೆ.
ಅರ್ಜಿಯ
ವಿಚಾರಣೆ
ನಡೆಸಿದ
ಕೋರ್ಟ್
ಜಯಲಲಿತಾ
ಮತ್ತು
ಇತರ
ಮೂವರಿಗೆ
ನೋಟಿಸ್
ನೀಡಿದ್ದು,
ಉತ್ತರಿಸಲು
4
ವಾರಗಳ
ಕಾಲಾವಕಾಶ
ನೀಡಿದೆ.
[ಜಯಲಲಿತಾ
ಖುಲಾಸೆ,
ಹೈಕೋರ್ಟ್
ತೀರ್ಪಿಗೆ
ತಡೆ
ಇಲ್ಲ]
ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್, ಇಳವರಸಿ ಮತ್ತು ಸುಧಾಕರನ್ ಅವರಿಗೆ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ ಮತ್ತು ಕರ್ನಾಟಕ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. [ಜಯಲಲಿತಾ ಪ್ರಕರಣ Timeline]
ಸುಪ್ರೀಂಕೋರ್ಟ್ ನೀಡಿರುವ ನೋಟಿಸ್ಗೆ ಜಯಲಲಿತಾ ಮತ್ತು ಇತರ ಮೂವರು ನಾಲ್ಕುವಾರದಲ್ಲಿ ಉತ್ತರ ನೀಡಲಿದ್ದಾರೆ. ನಂತರ ಅರ್ಜಿ ಸಲ್ಲಿಸಿರುವ ಕರ್ನಾಟಕ ಸರ್ಕಾರ ಮತ್ತು ಅನ್ಬಳಗನ್ ಇದಕ್ಕೆ ಆಕ್ಷೇಪಣೆ ಸಲ್ಲಿಸಲಿದ್ದಾರೆ. ನಂತರ ಅಕ್ಟೋಬರ್ನಲ್ಲಿ ಅರ್ಜಿಯ ವಿಚಾರಣೆ ಪುನಃ ನಡೆಯಲಿದೆ.
ತಡೆಯಾಜ್ಞೆ ಕೊಟ್ಟಿಲ್ಲ : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೆ.ಜಯಲಲಿತಾ ಅವರು ನಿರ್ದೋಷಿ ಎಂದು ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು 2015ರ ಮೇ 11ರಂದು ತೀರ್ಪು ನೀಡಿದ್ದರು. ಮೇ.23ರಂದು ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಕರ್ನಾಟಕ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿತ್ತು. ಆದರೆ, ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಒಂದು ವೇಳೆ ಹೈಕೋರ್ಟ್ ತೀರ್ಪುರದ್ದುಗೊಂಡಿದ್ದರೆ, ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ 4 ವರ್ಷದ ಜೈಲು ಶಿಕ್ಷೆ ತೀರ್ಪು ಜಾರಿಗೆ ಬರುತ್ತಿತ್ತು