IT - BT: ಕರಾವಳಿ ಅಭಿವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ vs ಉದ್ಯಮಿ ಮೋಹನ್ದಾಸ್ ಪೈ ನಡುವೆ ಟ್ವೀಟ್ ಸಮರ
ಸಚಿವ ಪ್ರಿಯಾಂಕ್ ಖರ್ಗೆ vs ಉದ್ಯಮಿ ಮೋಹನ್ದಾಸ್ ಪೈ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಕರ್ನಾಟಕದ ಕರಾವಳಿ ಅಭಿವೃದ್ಧಿ, ಕರಾವಳಿಗೆ ಐಟಿ - ಬಿಟಿ ಕಂಪನಿಗಳು ಬರುವ ವಿಚಾರ ಹಾಗೂ ಕರ್ನಾಟಕದ ಆದಾಯದಲ್ಲಿ ಕರಾವಳಿಯ ಪಾಲು ಸೇರಿದಂತೆ ಹಲವು ವಿಚಾರಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ. ಮುಖ್ಯವಾಗಿ ಕೋಮುಗಲಭೆಯ ಕಾರಣಕ್ಕೆ ಕರ್ನಾಟಕದ ಕರಾವಳಿಗೆ ಐಟಿ - ಬಿಟಿ ಕಂಪನಿಗಳು ಬರಲು ಹಿಂದೇಟು ಹಾಕುತ್ತಿವೆ ಎನ್ನುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಇದೇ ಸಂದರ್ಭದಲ್ಲಿ ವಾಸ್ತವದ ಅನಾವರಣವೂ ಆಗಿದೆ. ಉದ್ಯಮಿ ಮೋಹನ್ದಾಸ್ ಪೈ vs ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ವಾರ್ ವಿವರ ಇಲ್ಲಿದೆ.
ಕರಾವಳಿಯ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಪರ - ವಿರೋಧ ಚರ್ಚೆ ಶುರುವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರೇ ನೀವು ದಕ್ಷಿಣ ಕೆನರಾ ಮತ್ತು ದಕ್ಷಿಣ ಕೆನರಾದ ಜನರನ್ನು ಏಕೆ ನಿಂದಿಸುತ್ತಿದ್ದೀರಿ. ಯಾರೂ ಕಣ್ಣು ಮುಚ್ಚಿಕೊಂಡು ಕುಳಿತಿಲ್ಲ. ಸಮಸ್ಯೆಯೆಂದರೆ ನೆರೆಯ ಜಿಲ್ಲೆಯ ಜಿಹಾದಿ ಗುಂಪು ಬಂದು ತೊಂದರೆ ಸೃಷ್ಟಿಸಿತು ಮತ್ತು ಆ ಬಗ್ಗೆ ಕಾಂಗ್ರೆಸ್ ಮೃದುವಾಗಿತ್ತು. ಅವರನ್ನು ಈಗ ನಿಷೇಧಿಸಲಾಗಿದೆ. ಉದ್ಯಮಿ ರೋಹಿತ್ ಭಟ್ ಹಾಗೂ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಸ್ಥಳೀಯ ನಾಯಕರು ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ತುಂಬಾ ಶ್ರಮಿಸುತ್ತಿದ್ದಾರೆ. ದಯವಿಟ್ಟು ಕನ್ನಡಿಯಲ್ಲಿ ನೋಡಿ ಮತ್ತು ನಮ್ಮ ಸಚಿವರು ಇಲ್ಲಿಯವರೆಗೆ ಅಲ್ಲಿ ಏನು ಮಾಡಿದ್ದಾರೆ ಎಂದು ಕೇಳಿ, ಘೋಷಣೆಗಳನ್ನು ಹೊರತುಪಡಿಸಿ ಬೇರೆ ಏನಾಗಿದೆ. ಕೆಟ್ಟ ನಿರ್ಧಾರಗಳಿಂದಾಗಿ ಎಸ್ಟಿಪಿಐ ಟೆಂಡರ್ ಸಿಲುಕಿಕೊಂಡಿದೆ, ಹಣವಿಲ್ಲ ಎಂದು ಹೇಳುವುದರಿಂದ ಸ್ಟಾರ್ಟ್ಅಪ್ಗಳಿಗೆ ಪ್ರೋತ್ಸಾಹ ಧನ ಸಿಕ್ಕಿಲ್ಲ. ನಾವು ಎಐ ಕೇಂದ್ರದ ಬಗ್ಗೆ ಚರ್ಚಿಸಿದ್ದೇವೆ ಮತ್ತು ನೀವು ಕಾರ್ಯನಿರ್ವಹಿಸಬೇಕಾಗಿದೆ. ದಯವಿಟ್ಟು ಕೋಮು ರಾಜಕೀಯವನ್ನು ಮಾಡದೆ, ಅಭಿವೃದ್ಧಿಯತ್ತ ಗಮನಹರಿಸಿ. ನೀವು ನಮ್ಮ ಗೌರವಾನ್ವಿತ ಯುವ ಕ್ರಿಯಾತ್ಮಕ ಸಚಿವರು / ನಾವು ನಿಮ್ಮ ಮಾರ್ಗದರ್ಶನದ ಮೇಲೆ ನಂಬಿಕೆ ಇರಿಸಿದ್ದೇವೆ ಎಂದು ಉದ್ಯಮಿ ಮೋಹನ್ ದಾಸ್ ಪೈ ಅವರು ಟ್ವೀಟ್ ಮಾಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ನಲ್ಲಿ ಏನಿದೆ ?
ಸಚಿವ ಪ್ರಿಯಾಂಕ್ ಖರ್ಗೆ ಅವರು ಕೆಸಿಸಿಐ ಪತ್ರವನ್ನು ಹಂಚಿಕೊಂಡು ಉದ್ಯಮಿ ಮೋಹನ್ ದಾಸ್ಪೈ ಅವರನ್ನು ಪ್ರಶ್ನೆ ಮಾಡಿದ್ದರು. ಈ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಜನರ ಬಗ್ಗೆ ತಮಾಷೆ ಅನಿಸುತ್ತದೆ. ದಕ್ಷಿಣ ಕನ್ನಡವು 5.4% ರಷ್ಟು ಎರಡನೇ ಅತಿ ಹೆಚ್ಚು ಪಾಲನ್ನು ನೀಡುತ್ತಿದ್ದರೆ, ಬೆಂಗಳೂರು 40% ರಷ್ಟು ಹತ್ತಿರದಲ್ಲಿದೆ, ಈ ಅಂತರವೇ ಎಲ್ಲವನ್ನೂ ಹೇಳುತ್ತದೆ.
ದಕ್ಷಿಣ ಕನ್ನಡವು ಕರ್ನಾಟಕದ ಜಿಡಿಪಿಗೆ 5.4% ಕೊಡುಗೆ ನೀಡುತ್ತದೆ. ಆದರೆ ಬೆಂಗಳೂರು ಮಾತ್ರ ಸುಮಾರು 40% ಕೊಡುಗೆ ನೀಡುತ್ತಿದೆ. ಈ ಅಂತರವೇ ಪರಿಸ್ಥಿತಿಯನ್ನು ಹೇಳುತ್ತದೆ. ಅದಕ್ಕಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಹೂಡಿಕೆಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿ, ಸ್ಥಳೀಯ ಆರ್ಥಿಕ ವೇಗವರ್ಧಕ ಯೋಜನೆ ಅಗತ್ಯವಾಗಿದೆ. ಹೀಗೆ ಮಾಡಿದರೆ ರಾಜ್ಯದ ಜಿಡಿಪಿಗೆ ಇನ್ನಷ್ಟು ಕೊಡುಗೆ ನೀಡಲು ಸಾಧ್ಯ. ಹೂಡಿಕೆ ಬರಲು ಮತ್ತು ಉದ್ಯೋಗ ಸೃಷ್ಟಿಯಾಗಲು, ರಾಜಕೀಯ ಹಾಗೂ ಧಾರ್ಮಿಕ ನಾಯಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬ ನಿರೀಕ್ಷೆ ತಪ್ಪೇನಲ್ಲ.
ಇದು ಸುಳ್ಳು ಕಥನವಿದ್ದರೆ, Kanara Chamber of Commerce and Industry ಸಭೆಗಳಲ್ಲಿ ಈ ವಿಷಯ ಚರ್ಚೆಯಾಗುತ್ತಿರುವುದೇಕೆ. ಈ ಪ್ರದೇಶದ ಹಿಂದಿನ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರು ಪ್ರದೇಶದ ಅಭಿವೃದ್ಧಿಗೆ ಗಮನಾರ್ಹ ಕೆಲಸ ಮಾಡಲಿಲ್ಲ ಎಂಬ ಟೀಕೆ ಇದೆ. ನಾವು ಜವಾಬ್ದಾರಿಯುತ ಸರ್ಕಾರ. ಕರಾವಳಿಯ ಅಭಿವೃದ್ಧಿಗೆ ನಮ್ಮ ಬದ್ಧತೆ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಉದ್ಯಮಿ ಮೋಹನ್ದಾಸ್ ಪೈ ಅವರು, ಇದು ದೊಡ್ಡ ಕೆಟ್ಟ ಜೋಕ್ ಮತ್ತು ನಕಲಿ ನಿರೂಪಣೆ. ಸಚಿವ ಪ್ರಿಯಾಂಕ್ ಖರ್ಗೆ ಅವರೇ ಬೆಂಗಳೂರಿನ ನಂತರ ದಕ್ಷಿಣ ಕೆನರಾ ಎರಡನೇ ಅತಿ ಹೆಚ್ಚು GSDP ಹೊಂದಿದೆ. ಅಲ್ಲದೆ ತಲಾ ಆದಾಯವನ್ನೂ ಹೊಂದಿದೆ. ಇತರ ನಗರಗಳು/ರಾಜ್ಯಗಳಿಂದ 30,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರ ವಿಭಾಗಗಳಲ್ಲಿ ಅಲ್ಲಿ ಅಧ್ಯಯನ ಮಾಡುತ್ತಾರೆ.
Minister @PriyankKharge why are you abusing South Canara and people of South Canara? Nobody is turning any blind eye. The problem was about the jihadi group from the neighboring district who came and created trouble and which INC was soft on. They are now banned. Local leaders… https://t.co/bj5EzSu4rb
— Mohandas Pai (@TVMohandasPai) February 17, 2026
ನೀವು ಹೇಳುವುದು ಸರಿಯಾಗಿದ್ದರೆ, ಇಷ್ಟೊಂದು ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸುತ್ತಾರೆಯೇ. ಅಲ್ಲಿ 30,000 ಜನರು ಐಟಿ ಕ್ಷೇತ್ರದಲ್ಲಿ 250ಕ್ಕೂ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವರು 15 ವರ್ಷಗಳಿಗೂ ಹೆಚ್ಚು ಕಾಲ ಅಲ್ಲಿಯೇ ಇದ್ದವರು. ನಮ್ಮ ಸಚಿವರಾಗಿ ನಾವು ಇದಕ್ಕಿಂತ ಉತ್ತಮವಾದದ್ದನ್ನು ನಿರೀಕ್ಷಿಸುತ್ತೇವೆ. ನೀವು ನಮ್ಮನ್ನು ಭಯಂಕರವಾಗಿ ನಿರಾಸೆಗೊಳಿಸುತ್ತಿದ್ದೀರಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಕ್ಷಿ ಸಮೇತ ತಿರುಗೇಟು ನೀಡಿದ್ದಾರೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications