ರಾಜ್ಯದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳಲ್ಲೇ ಒಳ ಮೀಸಲಾತಿ: ಸಿಎಂ
ಬೆಂಗಳೂರು,
ಅಕ್ಟೋಬರ್
08:
ಕರ್ನಾಟಕದ
ಅವಕಾಶ
ವಂಚಿತ
ಪರಿಶಿಷ್ಟ
ಜಾತಿ
ಮತ್ತು
ಪರಿಶಿಷ್ಟ
ಪಂಗಡಗಳ
ಸಮುದಾಯಗಳಿಗೆ
ಒಳ
ಮೀಸಲಾತಿ
ಕಲ್ಪಿಸಲು
ನ್ಯಾಯಮೂರ್ತಿ
ಸದಾಶಿವ
ಆಯೋಗದ
ವರದಿಯನ್ನು
ಪರಿಶೀಲಿಸಿ
ಸೂಕ್ತ
ಕ್ರಮ
ಕೈಗೊಳ್ಳಲಾಗುವುದು
ಎಂದು
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ತಿಳಿಸಿದ್ದಾರೆ.
ಶನಿವಾರ
ನಡೆದ
ಸಚಿವ
ಸಂಪುಟ
ಸಭೆಯ
ನಂತರದಲ್ಲಿ
ಮಾಧ್ಯಮವನ್ನು
ಉದ್ದೇಶಿಸಿ
ಅವರು
ಮಾತನಾಡಿದರು.
ಎಸ್ಸಿ
ಮತ್ತು
ಎಸ್ಟಿ
ಅಲೆಮಾರಿ
ಸಮುದಾಯಗಳಿಗೆ
ಪ್ರತ್ಯೇಕ
ನಿಗಮ
ರಚಿಸಲು
ತೀರ್ಮಾನ
ಮಾಡಲಾಗಿದೆ
ಎಂದರು.
Breaking: SC- ST ಮೀಸಲಾತಿ ಹೆಚ್ಚಳ: ಶೀಘ್ರವೇ ಗೆಜೆಟ್ ಅಧಿಸೂಚನೆ: ಸಿಎಂ ಬೊಮ್ಮಾಯಿ
ತಳಸಮುದಾಯಗಳಿಗೆ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಮುಟ್ಟಿಲ್ಲ ಎಂದು ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಹೇಳಿದೆ. ಇವರಿಗೆ ನ್ಯಾಯ ಒದಗಿಸಲು ಕೂಲಂಕಷವಾಗಿ ಕಾನೂನಾತ್ಮಕ ಅಂಶಗಳನ್ನು ತಜ್ಞರು ಪರಿಶೀಲಿಸಿ, ಮುಂದೆ ಕ್ರಮ ತೆಗೆದುಕೊಳ್ಳಲು ಹೇಳಿದ್ದಾರೆ. ಒಳಮೀಸಲಾತಿ ಬಗ್ಗೆ ಅಧ್ಯಯನ ಮಾಡಿರುವ ಸದಾಶಿವ ಆಯೋಗದ ಪ್ರಮುಖ ಅಂಶಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ಒಳಮೀಸಲಾತಿ
ಬಗ್ಗೆ
ಸಿಎಂ
ಬೊಮ್ಮಾಯಿ
ಮಾತು:
ಪರಿಶಿಷ್ಟ
ಜಾತಿಯಲ್ಲಿ
ಬರುವ
ಎಲ್ಲಾ
ಜಾತಿಗಳ
ಹಿತರಕ್ಷಣೆ
ಮಾಡುವ
ಸಲುವಾಗಿ
ಮತ್ತು
ಒಳಮೀಸಲಾತಿಯಿಂದ
ಪರಿಣಾಮ
ಬೀರುವ
ಸಮುದಾಯಗಳನ್ನು
ವಿಶ್ವಾಸಕ್ಕೆ
ತೆಗೆದುಕೊಂಡು
ಕ್ರಮ
ತೆಗೆದುಕೊಳ್ಳಲಾಗುವುದು.
ಪರಿಶಿಷ್ಟ
ಜಾತಿಯಲ್ಲಿರುವ
ಅಲೆಮಾರಿ
ಸಮುದಾಯಗಳಿಗೆ
ಪ್ರತ್ಯೇಕ
ನಿಗಮ
ಸ್ಥಾಪಿಸಲು
ತೀರ್ಮಾನಿಸಲಾಗಿದೆ.
ಇದು
ಅಧಿಕೃತವಾಗಿ
ಚರ್ಚೆ
ಮಾಡಿ
ಕೈಗೊಂಡಿರುವ
ತೀರ್ಮಾನ
ಎಂದು
ತಿಳಿಸಿದರು.
ಮೀಸಲಾತಿ
ಹೆಚ್ಚಳದ
ನಿರ್ಧಾರ:
ಶುಕ್ರವಾರ
ನಡೆದ
ಸರ್ವ
ಪಕ್ಷ
ಸಭೆಯಲ್ಲಿ
ತೀರ್ಮಾನಿಸಿದಂತೆ
ಸಚಿವ
ಸಂಪುಟ
ಸಭೆಯಲ್ಲಿ
ನಿವೃತ್ತ
ನ್ಯಾಯಮೂರ್ತಿ
ನಾಗಮೋಹನ್
ದಾಸ್
ಸಮಿತಿಯು
ಶಿಫಾರಸ್ಸು
ಮಾಡಿರುವಂತೆ
ಪರಿಶಿಷ್ಟ
ಜಾತಿಗೆ
ಶೇ.17
ಹಾಗೂ
ಪರಿಶಿಷ್ಟ
ಪಂಗಡಕ್ಕೆ
ಶೇ.7
ರಷ್ಟು
ಹೆಚ್ಚಿಸಬೇಕು
ಎನ್ನುವ
ವಿಚಾರವನ್ನು
ಒಪ್ಪಲಾಗಿದೆ.
ಈ
ಬಗ್ಗೆ
ಆದೇಶಿಸಿ
ಗೆಜೆಟ್
ಅಧಿಸೂಚನೆ
ಹೊರಡಿಸಬೇಕೆಂದು
ಸಚಿವ
ಸಂಪುಟದಲ್ಲಿ
ತೀರ್ಮಾನಿಸಿದೆ.
ಈ
ನಿರ್ಣಯಕ್ಕೆ
ಕಾನೂನಿನ
ರಕ್ಷಣೆ
ನೀಡಲು
ಸಂವಿಧಾನದ
ಪರಿಚ್ಛೇದ
9ಕ್ಕೆ
ಸೇರಿಸಲು
ವಿಧಿವಿಧಾನಗಳನ್ನು
ಕಾನೂನು
ಸಚಿವರು,
ಕಾನೂನು
ಆಯೋಗ
ಮತ್ತು
ಸಂವಿಧಾನದ
ತಜ್ಞರು
ಹಾಗೂ
ಅಡ್ವೊಕೇಟ್
ಜನರಲ್
ಅವರೊಂದಿಗೆ
ಚರ್ಚಿಸಿ
ಕೂಡಲೇ
ಶಿಫಾರಸು
ಮಾಡಿ
ಅನುಷ್ಠಾನಗೊಳಿಸುವ
ತೀರ್ಮಾನ
ಮಾಡಲಾಗಿದೆ
ಎಂದು
ತಿಳಿಸಿದರು.
ಶೇ.50ರಷ್ಟು
ದಾಟಿದ
ಒಟ್ಟು
ಮೀಸಲಾತಿಯ
ಪ್ರಮಾಣ:
ಒಟ್ಟು
ಮೀಸಲಾತಿಯ
ಪ್ರಮಾಣವು
ಶೇಕಡಾ
50ರಷ್ಟು
ದಾಟಿದೆ.
ಇದರಿಂದ
ಕಾನೂನು
ರಕ್ಷಣೆ
ಸಿಗುವುದೋ
ಇಲ್ಲವೋ
ಎಂಬ
ಬಗ್ಗೆ
ಪ್ರಶ್ನೆಗಳಿವೆ.
ಇಂದಿರಾ
ಸಹಾನಿ
ಪ್ರಕರಣದಲ್ಲಿ
ಸಾಮಾಜಿಕ
ಮತ್ತು
ಶೈಕ್ಷಣಿಕವಾಗಿ
ಮುಖ್ಯ
ವಾಹಿನಿಯಿಂದ
ದೂರವಿರುವ
ಪರಿಶಿಷ್ಟ
ಪಂಗಡಗಳ
ವಿಶೇಷ
ಪ್ರಕರಣವನ್ನಾಗಿ
ಪರಿಗಣಿಸಿ
ಅದಕ್ಕೆ
ಮೀಸಲಾತಿ
ನೀಡಬಹುದು
ಎಂದು
ಹೇಳಲಾಗಿದೆ.
ನ್ಯಾಯಮೂರ್ತಿ
ನಾಗಮೋಹನ್
ದಾಸ್
ಹಾಗೂ
ನ್ಯಾ.ಸುಭಾಷ್
ಅಡಿ,
ಇದು
ಯಾಕೆ
ವಿಶೇಷ
ಪ್ರಕರಣವಾಗುತ್ತದೆ
ಎಂದು
ಸ್ಪಷ್ಟವಾಗಿ
ತಮ್ಮ
ವರದಿಯಲ್ಲಿ
ನಮೂದಿಸಲಾಗಿದೆ.
ಜನಸಂಖ್ಯೆಗೆ
ಅನುಗುಣವಾಗಿ
ಇರಬೇಕು
ಹಾಗೂ
ಸಾಮಾಜಿಕವಾಗಿ
ಅಂಕಿ-ಅಂಶಗಳ
ಸಮೇತವಾಗಿ
ಇವೆಲ್ಲವೂ
ಮುಖ್ಯ
ವಾಹಿನಿಯಿಂದ
ದೂರವಿದ್ದು,
ಇಷ್ಟು
ವರ್ಷಗಳಾದರೂ
ಸಾಕಷ್ಟು
ಪ್ರಾತಿನಿಧ್ಯ
ದೊರೆತಿಲ್ಲ.
ಹಾಗಾಗಿ
ಇದು
ವಿಶೇಷ
ಪ್ರಕರಣವಾಗಿದೆ
ಎಂದು
ಕಾರಣಗಳನ್ನು
ನೀಡಿದ್ದಾರೆ.
ಪರಿಚ್ಛೇದ
9ರಲ್ಲಿ
ರಕ್ಷಣೆ
ನೀಡಲು
ಸರ್ಕಾರದ
ಕ್ರಮ:
ಬುಡಕಟ್ಟು
ಜನಾಂಗ
ಹಾಗೂ
ಪರಿಶಿಷ್ಟ
ಜಾತಿಗಳ
ಮೀಸಲಾತಿಯು
ಮಧ್ಯಪ್ರದೇಶ,
ಛತ್ತೀಸ್
ಗಡ್,
ಜಾರ್ಖಂಡ್,
ರಾಜಸ್ಥಾನ,
ತಮಿಳುನಾಡು
ರಾಜ್ಯಗಳಲ್ಲಿ
ಶೇ.50ರಷ್ಟನ್ನು
ಮೀರಿದೆ.
ಯಾವುದೇ
ನ್ಯಾಯಾಲಯದ
ಆದೇಶ
ಇದರ
ವಿರುದ್ಧ
ಬಂದಿಲ್ಲ.
ಕೇಂದ್ರ
ಸರ್ಕಾರ
ಆರ್ಥಿಕವಾಗಿ
ಹಿಂದುಳಿದ
ವರ್ಗಗಳಿಗೆ
ಸಂವಿಧಾನಕ್ಕೆ
ತಿದ್ದುಪಡಿ
ತಂದು
ಶೇ.50ಕ್ಕಿಂತ
ಹೆಚ್ವು
ಮೀಸಲಾತಿ
ನೀಡಿ
ಆದೇಶವನ್ನು
ನೀಡಿದೆ.
ಇವೆರಡನ್ನು
ಸರ್ವೋಚ್ಚ
ನ್ಯಾಯಾಲಯದಲ್ಲಿ
ಪ್ರಶ್ನಿಸಲಾಗಿದೆ.
ಯಾವುದೇ
ವ್ಯತಿರಿಕ್ತ
ತೀರ್ಪು
ಇದುವರೆಗೆ
ಬಂದಿಲ್ಲ.
ಕಾನೂನು
ತಜ್ಞರೊಂದಿಗೆ
ಚರ್ಚೆ
ಮಾಡಿ
ಅದಕ್ಕೆ
ಪರಿಚ್ಛೇದ
9ರಲ್ಲಿ
ರಕ್ಷಣೆ
ಪಡೆಯಲು
ಸಕಾರಣಗಳನ್ನು
ನೀಡಲು
ಸರ್ಕಾರ
ಕ್ರಮ
ಕೈಗೊಳ್ಳಲಿದೆ.
ನಾವು
ಪರಿಶಿಷ್ಟ
ಜಾತಿ
ಮತ್ತು
ಪಂಗಡಗಳಿಗೆ
ನೀಡಿರುವ
ಮೀಸಲಾತಿಯ
ಹೆಚ್ಚಳವನ್ನು
ರಕ್ಷಣೆ
ಮಾಡಬೇಕು.
ಈ
ಹಿನ್ನೆಲೆ
ನಾವು
ಕೆಲಸ
ಮಾಡುತ್ತಿದ್ದು,
ಈಗಾಗಲೇ
ಚರ್ಚೆಯಾಗಿದೆ.
ಇನ್ನಷ್ಟು
ಚರ್ಚಿಸಿ
ಎಲ್ಲಾ
ವಿವರಗಳೊಂದಿಗೆ
ಗೆಜೆಟ್
ಅಧಿಸೂಚನೆ
ಹಾಗೂ
ಪರಿಚ್ಛೇದ
9ರಲ್ಲಿ
ಸೇರಿಸಲು
ಶಿಫಾರಸ್ಸು
ಮಾಡಲಾಗುವುದು
ಎಂದು
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ತಿಳಿಸಿದರು.
ಸಮಗ್ರ
ಹಾಗೂ
ಸಮರ್ಥನೀಯ
ವರದಿ:
ಗೆಜೆಟ್
ಅಧಿಸೂಚನೆ
ವಿಸ್ತೃತವಾಗಿ
ಇರಲಿದೆ.
ಇದುವರೆಗೆ
ಶೇ.50ರೊಳಗೆ
ಇದ್ದರೂ
ನ್ಯಾಯಾಲಯಕ್ಕೆ
ಹೋಗಿದ್ದಾರೆ.
ನಾಗಮೋಹನ್
ದಾಸ
ವರದಿ
ಸಮಗ್ರವಾಗಿದ್ದು,
ಸಮರ್ಥನೀಯವಾಗಿದೆ.
ಈ
ಪ್ರಕರಣಕ್ಕೆ
ಗಟ್ಟಿಯಾಗಿ
ನೆಲೆಗಟ್ಟಿದೆ.
ಇಂದಿರಾ
ಸಹಾನಿ
ಪ್ರಕರಣದ
ಬೆಂಬಲವೂ
ಇದೆ.
ಈ
ಹಿಂದಿನ
ಪ್ರಕರಣಗಳನ್ನು
ಗಮನಿಸಿ
ಸಮುದಾಯಗಳಿಗೆ
ತಕ್ಷಣದ
ಸೌಲಭ್ಯ
ನೀಡಲು
ತೀರ್ಮಾನ
ತೆಗೆದುಕೊಳ್ಳಲಾಗಿದೆ.
ಪರಿಚ್ಛೇದ
9ಕ್ಕೆ
ಸೇರಿಸಲು
ತನ್ನದೇ
ವಿಧಾನಗಳಿವೆ.
ಸಂವಿಧಾನದ
ತಿದ್ದುಪಡಿಯಾಗಬೇಕು.
ಸಮಯವೂ
ಬೇಕು
ಎಂದು
ಹೇಳಿದರು.