ಐಎಂಎ ವಂಚನೆ ಪ್ರಕರಣ: ಗ್ರಾಹಕರಿಗೆ ಎರಡು ದಿನದಿಂದ ಚಿನ್ನ ವಿತರಣೆ ಮಾಡುತ್ತಿರುವ ಹರ್ಷಗುಪ್ತ!
ಬೆಂಗಳೂರು, ಏ. 22: ಬಹುಕೋಟಿ ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದ 9 ಸಾವಿರ ಮಂದಿಗೆ ತಲಾ 50 ಸಾವಿರ ರೂ. ಪಾವತಿಸಿದ್ದ ಐಎಂಎ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಡಾ. ಹರ್ಷಗುಪ್ತಾ, ಇದೀಗ ಚಿನ್ನ ಅಡವಿಟ್ಟವರಿಗೂ ನ್ಯಾಯದಾನ ಮಾಡಿದ್ದಾರೆ.
ಬಹುಕೋಟಿ ವಂಚನೆ ಐಎಂಎ ನಲ್ಲಿ ಚಿನ್ನ ಅಡವಿಟ್ಟಿದ್ದ ಗ್ರಾಹಕರಿಗೆ ಅವರ ಚಿನ್ನ ವಾಪಸು ಕೊಡುವ ಮೂಲಕ ಖಡಕ್ ಐಎಎಸ್ ಅಧಿಕಾರಿ ಹರ್ಷಗುಪ್ತಾ ಮಹತ್ವದ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಹರ್ಷ ಗುಪ್ತಾ ಕೇಂದ್ರ ಸೇವೆಗೆ ವರ್ಗಾವಣೆಯಾಗಿ ಒಂದೂವರೆ ತಿಂಗಳಾಗಿದೆ. ಆ ವಿಚಾರದಲ್ಲಿ ನೋಡುವುದಾದ್ರೆ ಒಂದೂವರೆ ತಿಂಗಳ ಹಿಂದೆಯೇ ದೆಹಲಿಗೆ ಹೊರಡಬೇಕಿತ್ತು. ಐಎಂಎನಲ್ಲಿ ಚಿನ್ನ ಅಡವಿಟ್ಟಿದ್ದ ಗ್ರಾಹಕರಿಗೆ ನ್ಯಾಯ ಒದಗಿಸಲು ಒಂದೂವರೆ ತಿಂಗಳಿನಿಂದ ಹಗರಳಿರುಳು ಪರಿಶ್ರಮ ಹಾಕಿ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಸದಾ ಜನ ಪರ ತೀರ್ಮಾನ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಹೆಸರು ಗಳಿಸಿರುವ ಹರ್ಷ ಗುಪ್ತಾ ವರ್ಗಾವಣೆಯಾಗಿದ್ದರೂ ಅರ್ಧಕ್ಕೆ ಕೆಲಸ ಬಿಡದೇ ಪೂರ್ಣಗೊಳಿಸಿದ್ದಾರೆ.
ಐಎಂಎನಲ್ಲಿ ಚಿನ್ನ ಅಡವಿಟ್ಟಿದ್ದ ಗ್ರಾಹಕರಿಗೆ ಕಳೆದ ಎರಡು ದಿನದಿಂದ ಚಿನ್ನ ವಾಪಸು ನೀಡಲಾಗುತ್ತಿದೆ. ನ್ಯಾಯಾಲಯದ ಆದೇಶದಂತೆ ಅಡವಿಟ್ಟಿದ್ದ ಚಿನ್ನದ ಅಸಲು ಮತ್ತು ನ್ಯಾಯಾಲಯದ ವಿಧಿಸಿದ ಬಡ್ಡಿ ದರ ಪಾವತಿ ಮಾಡಿದವರಿಗೆ ಚಿನ್ನವನ್ನು ಹರ್ಷ ಗುಪ್ತಾ ವಾಪಸು ಕೊಡಿಸಿದ್ದಾರೆ. ಇನ್ನೇನು ಚಿನ್ನವೇ ಹೋಯಿತು ಎಂದು ಆತಂಕದಲ್ಲಿದ್ದವರ ಮುಖದಲ್ಲಿ ಇದೀಗ ಹರ್ಷ ಮೂಡಿಸಿದ್ದಾರೆ.

ಐಎಂಎನಲ್ಲಿ ನೂರಾರು ಗ್ರಾಹಕರು ಚಿನ್ನ ಅಡವಿಟ್ಟಿದ್ದರು. ಅಡವಿಟ್ಟಿದ್ದ ಚಿನ್ನದ ಪೈಕಿ 32 ಕೆ.ಜಿ ಚಿನ್ನವನ್ನು ತನಿಖೆ ವೇಳೆ ವಶಪಡಿಸಿಕೊಳ್ಳಲಾಗಿತ್ತು. ಅಡವಿಟ್ಟಿದ್ದ ಚಿನ್ನವನ್ನು ಗ್ರಾಹಕರಿಗೆ ವಿತರಣೆ ಮಾಡುವ ಜವಾಬ್ಧಾರಿಯನ್ನು ಐಎಂಎ ಸಕ್ಷಮ ಪ್ರಾಧಿಕಾರಕ್ಕೆ ವಹಿಸಲಾಗಿತ್ತು. ಹಗಳಿರುಳು ಶ್ರಮಿಸಿರುವ ಐಎಂಎ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ನ್ಯಾಯಾಲದಯ ಅನುಮತಿ ಮೇರೆಗೆ ಗುರುವಾರ 168 ಮಂದಿಗೆ ಅಡವಿಟ್ಟಿದ್ದ ಚಿನ್ನವನ್ನು ವಾಪಸು ನೀಡಿದ್ದಾರೆ. ಬಡ್ಡಿ ಮತ್ತು ಅಸಲು ಪಾವತಿಸಿದ ಗ್ರಾಹಕರಿಗೆ ಚಿನ್ನಾಭರಣಗಳನ್ನು ಐಎಂಎ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥರಾದ ಡಾ. ಹರ್ಷ ಗುಪ್ತಾ ವಿತರಣೆ ಮಾಡಿದ್ದಾರೆ.
ಬಾಕಿ ಉಳಿದ 150 ಮಂದಿಗೆ ಸೋಮವಾರ ಅಡವಿಟ್ಟಿದ್ದ ಚಿನ್ನವನ್ನು ವಿತರಣೆ ಮಾಡುತ್ತಿದ್ದಾರೆ. ಸುಮಾರು ಐದು ಕೆ.ಜಿ. ಯಷ್ಟು ಅಡವಿಟ್ಟಿದ್ದ ಚಿನ್ನಾಭರಣ ವಿತರಣೆ ಮಾಡಿದ್ದು, ಬಾಕಿ ಐದು ಕೆ.ಜಿಯಷ್ಟು ಚಿನ್ನಾಭರಣ ಕೆಲವೇ ದಿನಗಳಲ್ಲಿ ವಿತರಣೆ ಮಾಡಲಿದ್ದಾರೆ. ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳದೇ ಇದ್ದ ಪಕ್ಷದಲ್ಲಿ ಅದನ್ನು ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಿ ಬಂದ ಹಣವನ್ನು ಐಎಂಎನಲ್ಲಿ ಹೂಡಿಕೆ ಮಾಡಿ ಮೋಸ ಹೋದವರಿಗೆ ವಿತರಣೆ ಮಾಡಲಾಗುತ್ತದೆ.

9 ಸಾವಿರ ಮಂದಿಗೆ ನ್ಯಾಯ:
ಇನ್ನು ಐಎಂಎನಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದ ಬಡವರು ನಮ್ಮ ಹಣ ಹೋಯಿತು ಎಂದು ಕೈಕಟ್ಟಿ ಕೂತಿದ್ದರು. ಮೊದಲ ಹಂತದಲ್ಲಿ ತಲಾ 50 ಸಾವಿರ ರೂ. ನಂತೆ 9 ಸಾವಿರ ಮಂದಿಗೆ ಹಣವನ್ನು ಅವರ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಅತಿ ಕಡಿಮೆ ಹೂಡಿಕೆ ಮಾಡಿ ಬಿದಿಗೆ ಬಂದಿದ್ದ ಬಹುತೇಕ ಬಡವರಿಗೆ ಪೂರ್ಣ ಪ್ರಮಾಣದ ಹೂಡಿಕೆ ಅಸಲು ಹಣ ಬರುವಂತೆ ಮಾಡುವಲ್ಲಿ ಹರ್ಷಗುಪ್ತಾ ಯಶಸ್ವಿಯಾಗಿದ್ದರು. ಇದೀಗ ಚಿನ್ನ ಅಡವಿಟ್ಟಿದ್ದ ಗ್ರಾಹಕರಿಗೂ ನ್ಯಾಯ ಒದಗಿಸಿದ್ದಾರೆ.
-
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications