ರಾಯಚೂರಲ್ಲಿ ಐಐಟಿ ಸ್ಥಾಪಿಸಲು ಸಂಸದರ ಮನವಿ
ರಾಯಚೂರು, ಮೇ 8 : ಕರ್ನಾಟಕದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ರಾಯಚೂರಿನಲ್ಲಿ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಸಂಸದರ ನಿಯೋಗ ಸಚಿವೆ ಸ್ಮೃತಿ ಇರಾನಿ ಅವರಿಗೆ ಮನವಿ ಮಾಡಿದೆ.
ಗುರುವಾರ
ವೈದ್ಯಕೀಯ
ಶಿಕ್ಷಣ
ಸಚಿವ
ಶರಣ
ಪ್ರಕಾಶ್
ಪಾಟೀಲ್,
ಮಾಜಿ
ಮುಖ್ಯಮಂತ್ರಿ
ಯಡಿಯೂರಪ್ಪ,
ಬಳ್ಳಾರಿ
ಸಂಸದ
ಬಿ.ಶ್ರೀರಾಮುಲು
ಮುಂತಾದ
ನಾಯಕರ
ನಿಯೋಗ
ಕೇಂದ್ರ
ಮಾನವ
ಸಂಪನ್ಮೂಲ
ಸಚಿವೆ
ಸ್ಮೃತಿ
ಇರಾನಿ
ಅವರನ್ನು
ಭೇಟಿ
ಮಾಡಿ
ಮನವಿ
ಸಲ್ಲಿಸಿತು.
[ಬೆಳಗಾವಿಯಲ್ಲಿ
ಐಐಟಿ?,
ಸುರೇಶ್
ಅಂಗಡಿಗೆ
ಪತ್ರ]
ಕರ್ನಾಟಕ ಸರ್ಕಾರ ಐಐಟಿ ಸ್ಥಾಪನೆಗೆ ರಾಯಚೂರು, ಧಾರವಾಡ, ಮೈಸೂರು ಜಿಲ್ಲೆಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿದೆ. ಈ ಮೂರು ಜಿಲ್ಲೆಗಳ ಪೈಕಿ ರಾಯಚೂರಿಗೆ ಆದ್ಯತೆ ನೀಡಬೇಕು ಎಂದು ನಿಯೋಗ ಸಚಿವರಿಗೆ ಮನವಿ ಮಾಡಿತು. [ಐಐಟಿಗೆ ಮೂರು ಜಿಲ್ಲೆಗಳ ಆಯ್ಕೆ]
ಮನವಿ ಸ್ವೀಕರಿಸಿ ಮಾತನಾಡಿದ ಸಚಿವೆ ಸ್ಮೃತಿ ಇರಾನಿ ಅವರು, 'ಐಐಟಿ ಸ್ಥಾಪನೆಯ ಮಾನದಂಡಗಳಿಗೆ ಅನುಗುಣವಾಗಿ ಇಲಾಖೆ ನಿರ್ಧಾರ ಕೈಗೊಳ್ಳಲಿದೆ. ರಾಜ್ಯ ಸರ್ಕಾರ ಸಹ ತನ್ನ ಪ್ರಸ್ತಾವನೆಯಲ್ಲಿ ರಾಯಚೂರು ಜಿಲ್ಲೆಯನ್ನು ಸೂಚಿಸಿದೆ. ಈ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ' ನಿಯೋಗಕ್ಕೆ ಭರವಸೆ ನೀಡಿದರು. [ಅಸಲಿಗೆ, ಕರ್ನಾಟಕಕ್ಕೆ ಐಐಟಿ ಅಗತ್ಯವಿದೆಯಾ?]
ರಾಜ್ಯದ
ಪ್ರಸ್ತಾವನೆ
:
ಕರ್ನಾಟಕ
ಸರ್ಕಾರ
ಐಐಟಿ
ಸ್ಥಾಪನೆಗೆ
ರಾಯಚೂರು,
ಧಾರವಾಡ,
ಮೈಸೂರು
ಜಿಲ್ಲೆಗಳು
ಸೂಕ್ತ
ಸ್ಥಳ
ಎಂದು
ಕೇಂದ್ರ
ಸರ್ಕಾರಕ್ಕೆ
ಕೆಲವು
ದಿನಗಳ
ಹಿಂದೆ
ಪ್ರಸ್ತಾವನೆ
ಸಲ್ಲಿಸಿದೆ.
ಮೂರು
ಜಿಲ್ಲೆಗಳ
ಪೈಕಿ
ಒಂದನ್ನು
ಆಯ್ಕೆ
ಮಾಡುವಂತೆ
ಮನವಿ
ಮಾಡಿದೆ.
ಆದರೆ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರಿಗೆ ಬರೆದಿರುವ ಪತ್ರ ಬರೆದಿರುವ ಸಚಿವೆ ಸ್ಮೃತಿ ಇರಾನಿ ಅವರು, ಐಐಟಿ ಸ್ಥಾಪನೆಗೆ 500 ರಿಂದ 600 ಎಕರೆ ಭೂಮಿ ಉಚಿತವಾಗಿ ಬೇಕು, ಯಾವುದೇ ಕಾನೂನು ತೊಡಕಿಲ್ಲದ ಭೂಮಿಯ ಅಗತ್ಯವಿದೆ. ಎಲ್ಲಾ ಮೂಲಭೂತ ಸೌಕರ್ಯಗಳು, ರಸ್ತೆ, ರೈಲ್ವೆ ಹಾಗೂ ವಿಮಾನಯಾನದ ಸೌಲಭ್ಯವಿರುವ ಸ್ಥಳ ಗುರುತಿಸುವಂತೆ ತಿಳಿಸಿದ್ದಾರೆ. ಆದ್ದರಿಂದ ಎಲ್ಲಿ ಐಐಟಿ ಸ್ಥಾಪನೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.