Get Updates
Get notified of breaking news, exclusive insights, and must-see stories!

ಐಐಎಂ-ಬಿ & ಸಿಐಐನಿಂದ ‘ಕರ್ನಾಟಕ@100:ಎ ವಿಷನ್ ಡಾಕ್ಯುಮೆಂಟ್ ಫಾರ್ 2047’ ವರದಿ ಬಿಡುಗಡೆ

ಬೆಂಗಳೂರು, ಜೂನ್ 13: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು(ಐಐಎಂ-ಬಿ) ಮತ್ತು ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ) ಜಂಟಿಯಾಗಿ ಇಂದು ಐಐಎಂ-ಬಿ ಆವರಣದಲ್ಲಿ 'ಕರ್ನಾಟಕ@100: ಎ ವಿಷನ್ ಡಾಕ್ಯುಮೆಂಟ್ ಫಾರ್ 2047' ವರದಿಯನ್ನು ಬಿಡುಗಡೆಗೊಳಿಸಿದರು. ಭವಿಷ್ಯ ಕರ್ನಾಟಕದ ಅಭಿವೃದ್ಧಿಗೆ, ಜಾಗತಿಕವಾಗಿ ಸ್ಪರ್ಧೆಗೆ ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ಈ ವರದಿ ಹೊಂದಿದೆ.

ಐಐಎಂಬಿ ನಿರ್ದೇಶಕ ಪ್ರೊ.ಋಷಿಕೇಶ ಟಿ ಕೃಷ್ಣನ್‌ ಮತ್ತು ಸಿಐಐನ ಕರ್ನಾಟಕ ರಾಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ 3ಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರಮೇಶ್‌ ರಾಮದೊರೈ ಜಂಟಿಯಾಗಿ ವರದಿ ಬಿಡುಗಡೆಗೊಳಿಸಿದರು.

IIM-B & CII Release Report

ಒಟ್ಟಾರೆ ವರದಿ ವಿಕೇಂದ್ರೀಕರಣ, ಪ್ರಾಥಮಿಕ ಶಿಕ್ಷಣದಲ್ಲಿ ಹೂಡಿಕೆ, ಆರೋಗ್ಯ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ, ಪರಿಸರ ಸ್ನೇಹಿ ವ್ಯವಸ್ಥೆ ನಿರ್ಮಾಣ ಮತ್ತು ಬೆಂಗಳೂರಿನ ಹೊರಗಿನ ಅಭಿವೃದ್ಧಿಗೆ ಒತ್ತು ನೀಡುವುದು ಸೇರಿದಂತೆ ರಾಜ್ಯದ ಅಭಿವೃದ್ಧಿ ಪೂರಕ ಹಲವಾರು ಅಂಶಗಳನ್ನು ಹೊಂದಿದ್ದು, ಐಐಎಂಬಿ ಮತ್ತು ಸಿಐಐ ತಜ್ಞರೆಲ್ಲ ಒಟ್ಟುಗೂಡಿ, ಅಧ್ಯಯನ ಮಾಡಿ ಈ ವರದಿ ಸಿದ್ಧಪಡಿಸಿದ್ದಾರೆ. ಈ ಮಾರ್ಗಸೂಚಿಗಳು ಏಕೆ ಎಂಬುದನ್ನು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಮದೊರೈ, 'ಇದು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಒಂದು ಮಹತ್ವದ ಮೈಲುಗಲ್ಲು. ನಾನು 39 ವರ್ಷಗಳ ಹಿಂದೆ ಐಐಎಂ ಬಿಸಿನೆಸ್‌ ಪ್ಲಾನ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಐಐಎಂಬಿ ಆವರಣಕ್ಕೆ ಬಂದಿದ್ದೆ. ಮತ್ತೊಮ್ಮೆ ಈ ಆವರಣಕ್ಕೆ ಭೇಟಿ ನೀಡುತ್ತಿರುವುದು ಒಂದು ಅನನ್ಯ ಅನುಭವ ನೀಡುತ್ತಿದೆ. ವೃತ್ತಿಪರವಾಗಿ, ಈ ಡಾಕ್ಯುಮೆಂಟ್ ಸಿಐಐ - ಭಾರತ@2047ರ ಉಪಕ್ರಮವಾಗಿದ್ದು, ದೇಶದ ಕುರಿತಾಗಿನ ದೂರದೃಷ್ಟಿಯ ಹೆಜ್ಜೆಯಾಗಿದೆ.

ಯಾವುದೇ ದೃಷ್ಟಿಕೋನದ ಈ ರೀತಿಯ ಚಟುವಟಿಕೆಗಳು ಮಾರ್ಗದರ್ಶಿಯಾಗಿವೆ. ಈ ಪ್ರಯಾಣ ಪ್ರಗತಿಯಲ್ಲಿರುವಾಗ ನಿರ್ದಿಷ್ಟತೆಗಳು ಗೊತ್ತಾಗುತ್ತವೆ ಮತ್ತು ನಾವು ಮುಂದೆ ಸಾಗಿದಂತೆ ಮಾಪನಾಂಕ ನಿರ್ಣಯಿಸುತ್ತೇವೆ ಮತ್ತು ಪರಿಷ್ಕರಣೆ ಮಾಡುತ್ತೇವೆ. ಈ ಡಾಕ್ಯುಮೆಂಟ್‌ನಲ್ಲಿ ನಾವು ಅನೇಕ ಆಸಕ್ತಿದಾಯಕ ವಿಷಯಗಳನ್ನು ಉಲ್ಲೇಖಿಸಿದ್ದೇವೆ ಮತ್ತು ಇದು ಸುಸ್ಥಿರತೆ ಮತ್ತು ನಾವೀನ್ಯತೆಯ ಆಧಾರದ ಮೇಲೆ ನಿಂತಿದೆ' ಎಂದರು.

ಐಐಎಂಬಿಯ ನಿರ್ಧಾರ ವಿಜ್ಞಾನ(ಡಿಸಿಷನ್‌ ಸೈನ್ಸ್‌) ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಪ್ರೊ. ಜಿತಾಮಿತ್ರ ದೇಸಾಯಿ, ಐಐಎಂಬಿ ತಂತ್ರಗಾರಿಕೆ(ಸ್ಟ್ರಾಟಜಿ) ವಿಭಾಗದ ಪ್ರೊ. ಪ್ರತೀಕ್ ರಾಜ್, ಐಐಎಂಬಿಯ ವೈವಿಧ್ಯತೆ ಮತ್ತು ಸೇರ್ಪಡೆ ಸಮಿತಿ ಮುಖ್ಯಸ್ಥರು ಮತ್ತು ಸಾರ್ವಜನಿಕ ನೀತಿಯ ಪ್ರಾಧ್ಯಾಪಕರಾದ ಪ್ರೊ. ಅನಿಲ್ ಬಿ ಸೂರಜ್, ಐಐಎಂಬಿಯ ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದ ಅತಿಥಿ ಉಪನ್ಯಾಸಕರಾದ ಪ್ರೊ. ಶಂಕರ್ ಸುಬ್ರಮಣಿ ಒಟ್ಟಾಗಿ ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

ಐಐಎಂಬಿ ನಿರ್ದೇಶಕ ಮತ್ತು ತಂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಋಷಿಕೇಶ ಟಿ ಕೃಷ್ಣನ್, ಸಾರ್ವಜನಿಕ ನೀತಿ ವಿಭಾಗದ ಪ್ರೊ. ಅರ್ನಾಬ್ ಮುಖರ್ಜಿ, ನಿರ್ಧಾರ ವಿಜ್ಞಾನ ವಿಭಾಗದ ಪ್ರೊ. ತ್ರಿಲೋಚನ್ ಶಾಸ್ತ್ರಿ, ಐಐಎಂಬಿಯ ಎರಡು ವರ್ಷಗಳ ಪೂರ್ಣಾವಧಿ ಎಂಬಿಎ ಕಾರ್ಯಕ್ರಮಗಳಾದ PGP ಮತ್ತು PGP ಇನ್ ಬಿಸಿನೆಸ್ ಅನಾಲಿಟಿಕ್ಸ್ನ ಮುಖ್ಯಸ್ಥರು ಮತ್ತು ಸ್ಟ್ರಾಟಜಿ ಪ್ರಾಧ್ಯಾಪಕರಾದ ಪ್ರೊ. ಆರ್ ಶ್ರೀನಿವಾಸನ್‌, ಇತಿಹಾಸ ರಿಸರ್ಚ್‌ ಮತ್ತು ಡಿಜಿಟಲ್, ಸಹ-ಸ್ಥಾಪಕ ಮತ್ತು ಸಿಇಒ ಹಾಗೂ ಐಐಎಂಬಿಯ ಡಾಕ್ಟರೇಟ್ ವಿಭಾಗದ ಹಳೆಯ ವಿದ್ಯಾರ್ಥಿ ದಯಾಸಿಂಧು ಎನ್‌ ಈ ವರದಿ ಸಿದ್ಧಪಡಿಸುವಿಕೆಯಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಐಐಎಂಬಿ ನಿರ್ದೇಶಕ ಪ್ರೊ.ಆರ್‌.ಟಿ.ಕೃಷ್ಣನ್‌, "ಕರ್ನಾಟಕ @100 ವಿಷನ್ ಡಾಕ್ಯುಮೆಂಟ್ ಒಂದು ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲಿದ್ದು, ಕರ್ನಾಟಕವು ಭವಿಷ್ಯದಲ್ಲಿ ಜಗತ್ತಿಗೆ ಸಮಾನ ಮತ್ತು ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ಸಾಗಲು ಮಾರ್ಗದರ್ಶನ ನೀಡುತ್ತದೆ. ವಿಷನ್‌ ಡಾಕ್ಯುಮೆಂಟ್‌ ಸುಸ್ಥಿರತೆ ಮತ್ತು ನಾವೀನ್ಯತೆಯನ್ನು ಕರ್ನಾಟಕದ ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಗೆ ಎರಡು ಪ್ರಮುಖ ಆಧಾರಗಳೆಂದು ಭಾವಿಸುತ್ತದೆ. ಇದು ನಮ್ಮ ರಾಜ್ಯವನ್ನು ಜಾಗತಿಕ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿರಿಸುವ ಪರಿಸರ ಸ್ನೇಹಿ ವ್ಯವಸ್ಥೆಯನ್ನು ನಿರ್ಮಿಸಲು ಕೈ ಜೋಡಿಸಲು ಮತ್ತು ಒಗ್ಗೂಡಲು ನಾಗರಿಕರಿಂದ ನೀತಿ ನಿರೂಪಕರವರೆಗೆ, ಶೈಕ್ಷಣಿಕ ವಲಯದಿಂದ ಉದ್ಯಮ ಸಮುದಾಯದವರೆಗೆ ಕರ್ನಾಟಕದ ಎಲ್ಲಾ ಪಾಲುದಾರರಿಗೆ ಆಹ್ವಾನವಾಗಿದೆ" ಎಂದರು.

" ಕರ್ನಾಟಕದ ಅಭಿವೃದ್ಧಿಯ ವೈವಿಧ್ಯತೆಯು 2008ರಲ್ಲಿ ಇದ್ದಂತೆಯೇ ಈಗಲೂ ಇದೆ. ಬೆಂಗಳೂರು ನಗರವು ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ 37 ಪ್ರತಿಶತವನ್ನು ಹೊಂದಿದೆ. ಸರ್ಕಾರ ಇದನ್ನು ಗುರುತಿಸಿದೆ ಮತ್ತು ಈ ವೈವಿಧ್ಯತೆಯನ್ನು ಪರಿಹರಿಸಲು ಇದು ಆದ್ಯತೆಯಾಗಿ ಉಳಿದಿದೆ. ಕರ್ನಾಟಕ, ಮತ್ತು ಬೆಂಗಳೂರು, ನಿರ್ದಿಷ್ಟವಾಗಿ, ನಾವೀನ್ಯತೆಯ ಮುಂಚೂಣಿಯಲ್ಲಿ ವಿಕಸನಗೊಂಡಿವೆ' ಎಂದರು.

ವರದಿ ಸಿದ್ಧಪಡಿಸುವಿಕೆಯಲ್ಲಿ ಭಾಗಿಯಾದ ಐಐಎಂ ಜಿತಮಿತ್ರ, ಪ್ರೊ.ಪ್ರತೀಕ್‌ರಾಜ್‌, ಅನಿಲ್‌, ಶಂಕರ್‌ ಸುಬ್ರಮಣಿ, ಸಿಐಐನ ಅಶೋಕ್‌ ರಾವ್‌ ಕಾರ್ಯಕ್ರಮದಲ್ಲಿ ಈ ವರದಿ ಕುರಿತಾದ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+