ಐಐಎಂ-ಬಿ & ಸಿಐಐನಿಂದ ‘ಕರ್ನಾಟಕ@100:ಎ ವಿಷನ್ ಡಾಕ್ಯುಮೆಂಟ್ ಫಾರ್ 2047’ ವರದಿ ಬಿಡುಗಡೆ
ಬೆಂಗಳೂರು, ಜೂನ್ 13: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು(ಐಐಎಂ-ಬಿ) ಮತ್ತು ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ) ಜಂಟಿಯಾಗಿ ಇಂದು ಐಐಎಂ-ಬಿ ಆವರಣದಲ್ಲಿ 'ಕರ್ನಾಟಕ@100: ಎ ವಿಷನ್ ಡಾಕ್ಯುಮೆಂಟ್ ಫಾರ್ 2047' ವರದಿಯನ್ನು ಬಿಡುಗಡೆಗೊಳಿಸಿದರು. ಭವಿಷ್ಯ ಕರ್ನಾಟಕದ ಅಭಿವೃದ್ಧಿಗೆ, ಜಾಗತಿಕವಾಗಿ ಸ್ಪರ್ಧೆಗೆ ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ಈ ವರದಿ ಹೊಂದಿದೆ.
ಐಐಎಂಬಿ ನಿರ್ದೇಶಕ ಪ್ರೊ.ಋಷಿಕೇಶ ಟಿ ಕೃಷ್ಣನ್ ಮತ್ತು ಸಿಐಐನ ಕರ್ನಾಟಕ ರಾಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ 3ಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರಮೇಶ್ ರಾಮದೊರೈ ಜಂಟಿಯಾಗಿ ವರದಿ ಬಿಡುಗಡೆಗೊಳಿಸಿದರು.

ಒಟ್ಟಾರೆ ವರದಿ ವಿಕೇಂದ್ರೀಕರಣ, ಪ್ರಾಥಮಿಕ ಶಿಕ್ಷಣದಲ್ಲಿ ಹೂಡಿಕೆ, ಆರೋಗ್ಯ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ, ಪರಿಸರ ಸ್ನೇಹಿ ವ್ಯವಸ್ಥೆ ನಿರ್ಮಾಣ ಮತ್ತು ಬೆಂಗಳೂರಿನ ಹೊರಗಿನ ಅಭಿವೃದ್ಧಿಗೆ ಒತ್ತು ನೀಡುವುದು ಸೇರಿದಂತೆ ರಾಜ್ಯದ ಅಭಿವೃದ್ಧಿ ಪೂರಕ ಹಲವಾರು ಅಂಶಗಳನ್ನು ಹೊಂದಿದ್ದು, ಐಐಎಂಬಿ ಮತ್ತು ಸಿಐಐ ತಜ್ಞರೆಲ್ಲ ಒಟ್ಟುಗೂಡಿ, ಅಧ್ಯಯನ ಮಾಡಿ ಈ ವರದಿ ಸಿದ್ಧಪಡಿಸಿದ್ದಾರೆ. ಈ ಮಾರ್ಗಸೂಚಿಗಳು ಏಕೆ ಎಂಬುದನ್ನು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಮದೊರೈ, 'ಇದು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಒಂದು ಮಹತ್ವದ ಮೈಲುಗಲ್ಲು. ನಾನು 39 ವರ್ಷಗಳ ಹಿಂದೆ ಐಐಎಂ ಬಿಸಿನೆಸ್ ಪ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ಐಐಎಂಬಿ ಆವರಣಕ್ಕೆ ಬಂದಿದ್ದೆ. ಮತ್ತೊಮ್ಮೆ ಈ ಆವರಣಕ್ಕೆ ಭೇಟಿ ನೀಡುತ್ತಿರುವುದು ಒಂದು ಅನನ್ಯ ಅನುಭವ ನೀಡುತ್ತಿದೆ. ವೃತ್ತಿಪರವಾಗಿ, ಈ ಡಾಕ್ಯುಮೆಂಟ್ ಸಿಐಐ - ಭಾರತ@2047ರ ಉಪಕ್ರಮವಾಗಿದ್ದು, ದೇಶದ ಕುರಿತಾಗಿನ ದೂರದೃಷ್ಟಿಯ ಹೆಜ್ಜೆಯಾಗಿದೆ.
ಯಾವುದೇ ದೃಷ್ಟಿಕೋನದ ಈ ರೀತಿಯ ಚಟುವಟಿಕೆಗಳು ಮಾರ್ಗದರ್ಶಿಯಾಗಿವೆ. ಈ ಪ್ರಯಾಣ ಪ್ರಗತಿಯಲ್ಲಿರುವಾಗ ನಿರ್ದಿಷ್ಟತೆಗಳು ಗೊತ್ತಾಗುತ್ತವೆ ಮತ್ತು ನಾವು ಮುಂದೆ ಸಾಗಿದಂತೆ ಮಾಪನಾಂಕ ನಿರ್ಣಯಿಸುತ್ತೇವೆ ಮತ್ತು ಪರಿಷ್ಕರಣೆ ಮಾಡುತ್ತೇವೆ. ಈ ಡಾಕ್ಯುಮೆಂಟ್ನಲ್ಲಿ ನಾವು ಅನೇಕ ಆಸಕ್ತಿದಾಯಕ ವಿಷಯಗಳನ್ನು ಉಲ್ಲೇಖಿಸಿದ್ದೇವೆ ಮತ್ತು ಇದು ಸುಸ್ಥಿರತೆ ಮತ್ತು ನಾವೀನ್ಯತೆಯ ಆಧಾರದ ಮೇಲೆ ನಿಂತಿದೆ' ಎಂದರು.
ಐಐಎಂಬಿಯ ನಿರ್ಧಾರ ವಿಜ್ಞಾನ(ಡಿಸಿಷನ್ ಸೈನ್ಸ್) ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಪ್ರೊ. ಜಿತಾಮಿತ್ರ ದೇಸಾಯಿ, ಐಐಎಂಬಿ ತಂತ್ರಗಾರಿಕೆ(ಸ್ಟ್ರಾಟಜಿ) ವಿಭಾಗದ ಪ್ರೊ. ಪ್ರತೀಕ್ ರಾಜ್, ಐಐಎಂಬಿಯ ವೈವಿಧ್ಯತೆ ಮತ್ತು ಸೇರ್ಪಡೆ ಸಮಿತಿ ಮುಖ್ಯಸ್ಥರು ಮತ್ತು ಸಾರ್ವಜನಿಕ ನೀತಿಯ ಪ್ರಾಧ್ಯಾಪಕರಾದ ಪ್ರೊ. ಅನಿಲ್ ಬಿ ಸೂರಜ್, ಐಐಎಂಬಿಯ ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದ ಅತಿಥಿ ಉಪನ್ಯಾಸಕರಾದ ಪ್ರೊ. ಶಂಕರ್ ಸುಬ್ರಮಣಿ ಒಟ್ಟಾಗಿ ಈ ವರದಿಯನ್ನು ಸಿದ್ಧಪಡಿಸಿದ್ದಾರೆ.
ಐಐಎಂಬಿ ನಿರ್ದೇಶಕ ಮತ್ತು ತಂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಋಷಿಕೇಶ ಟಿ ಕೃಷ್ಣನ್, ಸಾರ್ವಜನಿಕ ನೀತಿ ವಿಭಾಗದ ಪ್ರೊ. ಅರ್ನಾಬ್ ಮುಖರ್ಜಿ, ನಿರ್ಧಾರ ವಿಜ್ಞಾನ ವಿಭಾಗದ ಪ್ರೊ. ತ್ರಿಲೋಚನ್ ಶಾಸ್ತ್ರಿ, ಐಐಎಂಬಿಯ ಎರಡು ವರ್ಷಗಳ ಪೂರ್ಣಾವಧಿ ಎಂಬಿಎ ಕಾರ್ಯಕ್ರಮಗಳಾದ PGP ಮತ್ತು PGP ಇನ್ ಬಿಸಿನೆಸ್ ಅನಾಲಿಟಿಕ್ಸ್ನ ಮುಖ್ಯಸ್ಥರು ಮತ್ತು ಸ್ಟ್ರಾಟಜಿ ಪ್ರಾಧ್ಯಾಪಕರಾದ ಪ್ರೊ. ಆರ್ ಶ್ರೀನಿವಾಸನ್, ಇತಿಹಾಸ ರಿಸರ್ಚ್ ಮತ್ತು ಡಿಜಿಟಲ್, ಸಹ-ಸ್ಥಾಪಕ ಮತ್ತು ಸಿಇಒ ಹಾಗೂ ಐಐಎಂಬಿಯ ಡಾಕ್ಟರೇಟ್ ವಿಭಾಗದ ಹಳೆಯ ವಿದ್ಯಾರ್ಥಿ ದಯಾಸಿಂಧು ಎನ್ ಈ ವರದಿ ಸಿದ್ಧಪಡಿಸುವಿಕೆಯಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಐಐಎಂಬಿ ನಿರ್ದೇಶಕ ಪ್ರೊ.ಆರ್.ಟಿ.ಕೃಷ್ಣನ್, "ಕರ್ನಾಟಕ @100 ವಿಷನ್ ಡಾಕ್ಯುಮೆಂಟ್ ಒಂದು ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲಿದ್ದು, ಕರ್ನಾಟಕವು ಭವಿಷ್ಯದಲ್ಲಿ ಜಗತ್ತಿಗೆ ಸಮಾನ ಮತ್ತು ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ಸಾಗಲು ಮಾರ್ಗದರ್ಶನ ನೀಡುತ್ತದೆ. ವಿಷನ್ ಡಾಕ್ಯುಮೆಂಟ್ ಸುಸ್ಥಿರತೆ ಮತ್ತು ನಾವೀನ್ಯತೆಯನ್ನು ಕರ್ನಾಟಕದ ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಗೆ ಎರಡು ಪ್ರಮುಖ ಆಧಾರಗಳೆಂದು ಭಾವಿಸುತ್ತದೆ. ಇದು ನಮ್ಮ ರಾಜ್ಯವನ್ನು ಜಾಗತಿಕ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿರಿಸುವ ಪರಿಸರ ಸ್ನೇಹಿ ವ್ಯವಸ್ಥೆಯನ್ನು ನಿರ್ಮಿಸಲು ಕೈ ಜೋಡಿಸಲು ಮತ್ತು ಒಗ್ಗೂಡಲು ನಾಗರಿಕರಿಂದ ನೀತಿ ನಿರೂಪಕರವರೆಗೆ, ಶೈಕ್ಷಣಿಕ ವಲಯದಿಂದ ಉದ್ಯಮ ಸಮುದಾಯದವರೆಗೆ ಕರ್ನಾಟಕದ ಎಲ್ಲಾ ಪಾಲುದಾರರಿಗೆ ಆಹ್ವಾನವಾಗಿದೆ" ಎಂದರು.
" ಕರ್ನಾಟಕದ ಅಭಿವೃದ್ಧಿಯ ವೈವಿಧ್ಯತೆಯು 2008ರಲ್ಲಿ ಇದ್ದಂತೆಯೇ ಈಗಲೂ ಇದೆ. ಬೆಂಗಳೂರು ನಗರವು ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ 37 ಪ್ರತಿಶತವನ್ನು ಹೊಂದಿದೆ. ಸರ್ಕಾರ ಇದನ್ನು ಗುರುತಿಸಿದೆ ಮತ್ತು ಈ ವೈವಿಧ್ಯತೆಯನ್ನು ಪರಿಹರಿಸಲು ಇದು ಆದ್ಯತೆಯಾಗಿ ಉಳಿದಿದೆ. ಕರ್ನಾಟಕ, ಮತ್ತು ಬೆಂಗಳೂರು, ನಿರ್ದಿಷ್ಟವಾಗಿ, ನಾವೀನ್ಯತೆಯ ಮುಂಚೂಣಿಯಲ್ಲಿ ವಿಕಸನಗೊಂಡಿವೆ' ಎಂದರು.
ವರದಿ ಸಿದ್ಧಪಡಿಸುವಿಕೆಯಲ್ಲಿ ಭಾಗಿಯಾದ ಐಐಎಂ ಜಿತಮಿತ್ರ, ಪ್ರೊ.ಪ್ರತೀಕ್ರಾಜ್, ಅನಿಲ್, ಶಂಕರ್ ಸುಬ್ರಮಣಿ, ಸಿಐಐನ ಅಶೋಕ್ ರಾವ್ ಕಾರ್ಯಕ್ರಮದಲ್ಲಿ ಈ ವರದಿ ಕುರಿತಾದ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು.
-
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?












Click it and Unblock the Notifications