ಡಿಕೆ ರವಿ ಅವರ ಮನೆಯಲ್ಲಿ ಡೆತ್ನೋಟ್ ಸಿಕ್ಕಿಲ್ಲ
ಬೆಂಗಳೂರು, ಮಾ. 17 : ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಮನೆಯಲ್ಲಿ ಯಾವುದೇ ಡೆತ್ನೋಟ್ ದೊರಕಿಲ್ಲ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ. ರವಿ ಅವರ ಸಾವಿನ ಕುರಿತು ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. [ಈ ಸಾವು ನ್ಯಾಯವೇ ಮತ ಹಾಕಿ]
ಕೋರಮಂಗಲ ಬಳಿಯ ತಾವರೆಕೆರೆ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗ್ರೂಪ್ಗೆ ಸೇರಿದ 'ಸೇಂಟ್ ಜಾನ್ಸ್ವುಡ್ ಅಪಾರ್ಟ್ಮೆಂಟ್'ನಲ್ಲಿ ಸೋಮವಾರ ಸಂಜೆ ಡಿ.ಕೆ.ರವಿ ಅವರ ಮೃತದೇಹ ಪತ್ತೆಯಾಗಿತ್ತು. ಸ್ಥಳದಲ್ಲಿನ ಪರಿಶೀಲನೆ ಮುಗಿಸಿದ ಬಳಿಕ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. [ಡಿಕೆ ರವಿ ಸಾವು ಪ್ರಮುಖ ಘಟನಾವಳಿಗಳು]

ಮಂಗಳವಾರ ರವಿ ಅವರ ದೂರವಾಣಿ ಕರೆ, ಈ-ಮೇಲ್ಗಳನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದು ಡೆತ್ನೋಟ್ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಸಲಿದ್ದಾರೆ. ಸೋಮವಾರ ರಾತ್ರಿ ಡಿಕೆ ರವಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ಪ್ರಾಥಮಿಕ ಮಾಹಿತಿಯಿಂದ ಇದು ಆತ್ಮಹತ್ಯೆ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ. [ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವು]
ಸೋಮವಾರದ ರವಿ ಅವರ ದಿನಚರಿ
* ಅಪಾರ್ಟ್ಮೆಂಟ್ನ 903 ಸಂಖ್ಯೆಯ ಫ್ಲ್ಯಾಟ್ನಲ್ಲಿ ರವಿ ಪತ್ನಿ ಕುಸುಮಾ ಅವರೊಂದಿಗೆ ವಾಸವಾಗಿದ್ದರು
* ಶನಿವಾರ ಮತ್ತು ಭಾನುವಾರ ನಾಗರಭಾವಿಯಲ್ಲಿರುವ ಮಾವನ ಮನೆಯಲ್ಲಿರುತ್ತಿದ್ದರು
* ಸೋಮವಾರ ಮಾವನ ಮನೆಯಿಂದಲೇ ಕೋರಮಂಗಲದಲ್ಲಿರುವ ಕಚೇರಿಗೆ ಬಂದಿದ್ದರು
* ಬೆಳಗ್ಗೆ 10.15ರ ಸುಮಾರಿಗೆ ಕಚೇರಿ ತಲುಪಿದ ಅವರು ನಂತರ ಅಪಾರ್ಟ್ಮೆಂಟ್ಗೆ ಕಾರಿನಲ್ಲಿ ಮರಳಿದ್ದರು
* 11.15ರ ಸುಮಾರಿಗೆ ಸೇಂಟ್ ಜಾನ್ಸ್ವುಡ್ ಅಪಾರ್ಟ್ಮೆಂಟ್ ನಲ್ಲಿರುವ ಮನೆಗೆ ಆಗಮಿಸಿದ್ದರು
* ಕಾರು ಚಾಲಕನಿಗೆ ಕಾಯುತ್ತಿರುವಂತೆ ಹೇಳಿ 9 ಮಹಡಿಯಲ್ಲಿರುವ ಮನೆಗೆ ಹೋಗಿದ್ದರು
* ಪತ್ನಿ ಕುಸುಮಾ ಅವರ ಫೋನ್ ಕರೆಗೆ ಬೆಳಗ್ಗೆಯಿಂದ ರವಿ ಅವರು ಉತ್ತರ ನೀಡಿರಲಿಲ್ಲ
* ಮಧ್ಯಾಹ್ನದ ಊಟವನ್ನು ಕಚೇರಿಗೆ ಕಳುಹಿಸುವಂತೆ ಮನೆಯಿಂದ ಹೊರಡುವಾಗ ತಿಳಿಸಿದ್ದರು
* ರವಿ ಅವರು ಹೇಳಿದಂತೆ ಕಚೇರಿಗೆ ಮಧ್ಯಾಹ್ನದ ಊಟ ಕಳುಹಿಸಲಾಗಿತ್ತು
* ಮಧ್ಯಾಹ್ನ ಸಹ ಕುಸುಮಾ ಅವರ ಕರೆಯನ್ನು ರವಿ ಅವರು ಸ್ವೀಕರಿಸಿರಲಿಲ್ಲ
* ಮಧ್ಯಾಹ್ನ ಕಚೇರಿಗೆ ಕರೆ ಮಾಡಿದಾಗ ಮನೆಗೆ ಹೋಗಿದ್ದಾರೆ ಎಂಬ ಮಾಹಿತಿ ಕುಸುಮಾ ಅವರಿಗೆ ಸಿಕ್ಕಿತ್ತು
* ಸಂಜೆಯೂ ಕರೆ ಸ್ವೀಕರಿಸದಿದ್ದಾಗ ಕುಸುಮಾ ಅವರು ತಂದೆಯ ಜೊತೆ ಅಪಾರ್ಟ್ಮೆಂಟ್ಗೆ ಆಗಮಿಸಿದರು
* ರವಿ ಅವರು ಮನೆಯಲ್ಲಿದ್ದಾರೆ ಎಂದು ಕಾರು ಚಾಲಕ ಮಾಹಿತಿ ನೀಡಿದ್ದ
* ಸಂಜೆ 5.45ರ ಸುಮಾರಿಗೆ ಮನೆಯಲ್ಲಿ ಡಿಕೆ ರವಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ
* ತಕ್ಷಣ ಈ ಕುರಿತು ಸಂಬಂಧಿಕರು ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications