Get Updates
Get notified of breaking news, exclusive insights, and must-see stories!

ಮಾಧ್ಯಮದವರಿಗೆ ಬೈದಿಲ್ಲ, ಆತ್ಮಾವಲೋಕನ ಮಾಡಿಕೊಳ್ಳಿ ಎಂದಿದ್ದೆ: ಸಿಎಂ

ಬೆಂಗಳೂರು, ಜುಲೈ 31: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಮಾಡುತ್ತಿರುವ ಹೋರಾಟಕ್ಕೆ ಮಾಧ್ಯಮಗಳು ಇಂಬು ನೀಡಿವೆ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದ ಕುಮಾರಸ್ವಾಮಿ ಇಂದು ತಮ್ಮ ವರಸೆ ಬದಲಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟಗಾರರ ಜತೆ ಮಾತನಾಡಿದ ಕುಮಾರಸ್ವಾಮಿ ಅವರು, ಮಾಧ್ಯಮಗಳ ಬಗ್ಗೆ ಮತ್ತೆ ಮಾತನಾಡಿದರು ಆದರೆ ಇಂದು ಮಾಧ್ಯಮಗಳ ಬಗ್ಗೆ ಮೃದುವಾಗಿ ಮಾತನಾಡಿದರು.

'ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಬೇಡಿಕೆಗೆ ಮಾಧ್ಯಮಗಳೇ ಕಾರಣ. ನಿಮಗೆ ಚರ್ಚೆ ಮಾಡೋಕೆ ಬೇರೆ ವಿಷಯವಿಲ್ಲ. ಒಂದು ವಾರದಿಂದ ಅದಕ್ಕಾಗಿ ಇಂತಹ ಸುದ್ದಿ ಮಾಡುತ್ತಿದ್ದೀರಿ' ಎಂದು ಸಿಎಂ ಅವರು ಮೊನ್ನೆಯಷ್ಟೆ ಕೋಪ ಹೊರಹಾಕಿದ್ದರು.

I did not scold media only told them to introspection: CM

ಆದರೆ ಇಂದು ಮಾತನಾಡಿದ ಅವರು, ನಾನು ಮಾಧ್ಯಮದವರನ್ನು ಬೈದಿಲ್ಲ, ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದೆ ಅಷ್ಟೆ ಎಂದರು. ನಾನು ಏನಾದರೂ ಹೇಳಿದರೆ ಮಾಧ್ಯಮದವರು ಬೇಜಾರು ಮಾಡಿಕೊಳ್ಳುತ್ತಾರೆ ಎಂದು ಸೋದರ ಪ್ರೀತಿಯನ್ನೂ ತೋರಿದ್ದಾರೆ.

ತಮ್ಮ ವಿರುದ್ಧ ಪ್ರತಿಭಟನೆ ಮಾಡಿದ್ದ ರೈತರನ್ನೂ ತಾವು ಬೈದಿಲ್ಲ ಎಂದು ವರಸೆ ಬದಲಿಸಿದ ಸಿಎಂ, ಚುನಾವಣೆ ಸಮಯದಲ್ಲಿ ನನ್ನ ನೆನಪು ಬರಲಿಲ್ಲವಾ ಎಂದು ಕೇಳಿದ್ದೆನೆ ಹೊರತು ಬೈದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+