Pension Scheme: ಸರ್ಕಾರ ಜಾರಿಗೆ ತಂದಿದೆ ಭರ್ಜರಿ ಪಿಂಚಣಿ ಯೋಜನೆ, ತಪ್ಪದೆ ಓದಿ!
ಭವಿಷ್ಯಕ್ಕಾಗಿ ಹಲವು ಪಿಂಚಣಿ ಯೋಜನೆಗಳು ಚಾಲ್ತಿಯಲ್ಲಿವೆ, ಪಿಂಚಣಿ ಯೋಜನೆಗಳ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಜನರು ಕೂಡ ಪ್ಲಾನಿಂಗ್ ಮಾಡುತ್ತಾರೆ. ಈ ರೀತಿ ಪಿಂಚಣಿ ಯೋಜನೆ ಮಾಡುವವರಿಗೆ ಇದೀಗ ಭರ್ಜರಿ ಚಾನ್ಸ್ ಸಿಕ್ಕಿದೆ. ಅದರಲ್ಲೂ ಇದೀಗ ಸರ್ಕಾರ ಜಾರಿಗೆ ತಂದಿದೆ ಒಂದು ಭರ್ಜರಿ ಪಿಂಚಣಿ ಯೋಜನೆ, ಹಾಗಿದ್ರೆ ಈ ಯೋಜನೆಯಿಂದ ಏನೆಲ್ಲ ಪ್ರಯೋಜನ ಸಿಗಲಿದೆ? ಬನ್ನಿ ತಿಳಿಯೋಣ.
ಭಾರತ ಸರ್ಕಾರದ ವತಿಯಿಂದ ಇದೀಗ 'ಎನ್ಪಿಎಸ್ ವಾತ್ಸಲ್ಯ' ಎಂಬ ಹೊಸ ಯೋಜನೆ ರೂಪಿಸಿ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಜಾರಿಗೆ ತರಲಾಗಿದೆ. ಈ ವಿಶೇಷ ಯೋಜನೆಯು ಹಲವು ಮಹತ್ವದ ಪ್ರಯೋಜನ ಹೊಂದಿದ್ದು, ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲ್ಪಟ್ಟಿದೆ. 'ವಿಕಸಿತ ಭಾರತ@2047' ದೃಷ್ಟಿಕೋನಕ್ಕೆ ಅನುಗುಣವಾಗಿ ಹಾಗೂ ಮಕ್ಕಳಿಗೆ ಬೇಗನೆ ಉಳಿತಾಯ ಆರಂಭಿಸಲು & ಅವರ ಆರ್ಥಿಕ ಭವಿಷ್ಯ ಸುರಕ್ಷಿತಗೊಳಿಸಲು ಈ ಯೋಜನೆ ಸಹಾಯಕವಾಗಲಿದೆ.

ಎನ್ಪಿಎಸ್ ವಾತ್ಸಲ್ಯ ಯೋಜನೆಯು NPS ಅಡಿಯಲ್ಲಿ ಅಲ್ಪವಯಸ್ಕರಿಗೆ ಅಂತಾನೇ ವಿಶೇಷವಾಗಿ ವಿನ್ಯಾಸಗೊಂಡಿದೆ. ಪೋಷಕರು ಅಥವಾ ಕಾನೂನಾತ್ಮಕ ಸಂರಕ್ಷಕರು ತಮ್ಮ ಮಕ್ಕಳ ಪರ ಹೂಡಿಕೆ ಮಾಡಿ, ಅವರ ಭವಿಷ್ಯದ ಅಗತ್ಯತೆ ಪೂರೈಸುವಂತೆ ಆರ್ಥಿಕ ನಿಧಿ ನಿರ್ಮಿಸಬಹುದು ಎಂದು ಕೂಡ ತಿಳಿಸಲಾಗಿದೆ. ಹಾಗಾದರೆ ಯಾರೆಲ್ಲಾ ಈ ಯೋಜನೆಗೆ ಸೇರಬಹುದು? ಮಾಹಿತಿಗೆ ಮುಂದೆ ಓದಿ.
ಯೋಜನೆಗೆ ಸೇರಲು ಅರ್ಹತೆ ಏನು?
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಭಾರತೀಯ ಅಲ್ಪವಯಸ್ಕರು ಈ ಯೋಜನೆಯಡಿ ಖಾತೆ ತೆರೆಯಬಹುದು ಎಂದು ಈ ಯೋಜನೆಯಲ್ಲಿ ನಿಯಮ ರೂಪಿಸಲಾಗಿದೆ. ಹಾಗೇ, 18 ವರ್ಷಗಳ ವಯಸ್ಸು ಪ್ರಾಪ್ತಿಯಾಗುವವರೆಗೆ ಅವರ ಅಕೌಂಟ್ ಪೋಷಕ ಅಥವ ಕಾನೂನಾತ್ಮಕ ಸಂರಕ್ಷಕರಿಂದ ನಿರ್ವಹಿಸಲ್ಪಡುತ್ತದೆ. ಹಾಗಾದರೆ ಈ ಯೋಜನೆಯು ಹೇಗೆ ಕೆಲಸ ಮಾಡುತ್ತದೆ?
ಯೋಜನೆ ಹೇಗೆ ಕೆಲಸ ಮಾಡುತ್ತದೆ?
ಖಾತೆ ಮಗುವಿನ ಹೆಸರಲ್ಲಿ ಸಂರಕ್ಷಕರಿಂದ ತೆರೆಯಲ್ಪಡುತ್ತದೆ. ಪ್ರತಿ ಮಗುವಿಗೂ ವಿಶಿಷ್ಟ ಪಿಂಚಣಿ ನಿವೃತ್ತಿ ಖಾತೆ ಸಂಖ್ಯೆ (PRAN) ಕೂಡ ನೀಡಲಾಗುತ್ತದೆ. NPS ವ್ಯವಸ್ಥೆ ಅಡಿಯಲ್ಲಿ ವೃತ್ತಿಪರವಾಗಿ ಹೂಡಿಕೆ ಮಾಡಲಾಗುತ್ತದೆ & ಅವು ಸಮಯದೊಂದಿಗೆ ಬೆಳೆಯುತ್ತವೆ. ಕನಿಷ್ಠ ವಾರ್ಷಿಕ ಕೊಡುಗೆ 1,000 ರೂಪಾಯಿ ಆಗಿದ್ದು, ಗರಿಷ್ಠ ಮಿತಿ ಇರುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.
ವಿತ್ಡ್ರಾ ಮಾಡಲು ನಿಯಮಗಳು ಏನು?
ಪೋಷಕರು ಮಕ್ಕಳ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ, ತೀವ್ರ ಅಂಗವೈಕಲ್ಯದ ಸಂದರ್ಭ ಎದುರಾದರೆ ಶೇ. 25 ತನಕ ಹಿಂಪಡೆಯಲು ಅವಕಾಶ ಸಿಗಲಿದೆ. ಮಗು 18 ವರ್ಷ ಪೂರೈಸುವ ಮೊದಲು ಮೂರು ಬಾರಿ ವಿತ್ಡ್ರಾ ಮಾಡಲು ಅನುಮತಿ ಇರುತ್ತದೆ.
ಅಕೌಂಟ್ ತೆರೆಯುವ ದಿನಾಂಕದಿಂದ 3 ವರ್ಷ ತನಕ ಫಂಡ್ ಲಾಕ್ ಆಗಿರುತ್ತವೆ.
ಲಾಕ್-ಇನ್ ಅವಧಿ ಮುಗಿದ ನಂತರ ಮಾತ್ರ ಶಿಕ್ಷಣ, ವೈದ್ಯಕೀಯ ಖರ್ಚು ಅಥವಾ ಅಂಗವೈಕಲ್ಯ ಕಾರಣವಿದ್ದರೆ ಶೇಕಡಾ 25ರವರೆಗೆ ಹಿಂಪಡೆಯಲು ಅನುಮತಿ ಇದೆ (ಗರಿಷ್ಟ ಮೂರು ಬಾರಿ).
ಮಗು 18 ವರ್ಷ ಪೂರೈಸಿದಾಗ, ಖಾತೆ ನಿಯಮಿತ NPS ಖಾತೆಯಾಗಿ ಪರಿವರ್ತಿಸಬಹುದು ಅಥವಾ ನಿಯಮಗಳ ಪ್ರಕಾರ ಹಿಂಪಡೆಯಬಹುದು.
ಮರಣದ ಸಂದರ್ಭದಲ್ಲಿ: ಮಗು ನಿಧನರಾದರೆ, ಸಂಗ್ರಹದ ಮೊತ್ತ ಪೋಷಕರಿಗೆ ವರ್ಗಾವಣೆಯು ಆಗುತ್ತದೆ. ಪೋಷಕರು ಇರದೇ ಇದ್ದರೆ ಆಗ ಹೊಸ ಪೋಷಕರ ನೇಮಿಕಕ್ಕೆ ಅನುಮತಿ ಇರುತ್ತದೆ.
ಆನ್ಲೈನ್ ಖಾತೆ ತೆರೆಯುವ ವಿಧಾನ:
ನೀವು ಆನ್ಲೈನ್ ಮೂಲಕ ಖಾತೆ ತೆರೆಯಲು ಅಧಿಕೃತ eNPS ಪೋರ್ಟಲ್ಗೆ ಭೇಟಿ ನೀಡಿ ಮತ್ತು ಸೂಚನೆಗಳನ್ನು ಅನುಸರಿಸಿ.
ಆಫ್ಲೈನ್: NPS ಸೇವೆ ಲಭ್ಯ ಇರುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ.
ಅಗತ್ಯ ದಾಖಲೆ: ನಿಮ್ಮ ಮಕ್ಕಳ ಆಧಾರ್ ಕಾರ್ಡ್ ಮತ್ತು ಸಂರಕ್ಷಕರ ಆಧಾರ್ ಕಾರ್ಡ್, ಸಂರಕ್ಷಕರ PAN ಕಾರ್ಡ್, ಖಾತೆ ತೆರೆಯಬೇಕಿರುವ ಮಗುವಿನ ಜನನ ಪ್ರಮಾಣಪತ್ರ ಮತ್ತು ಪಾಸ್ಪೋರ್ಟ್.
ಮಗು 18 ವರ್ಷ ಪೂರೈಸಿದಾಗ...
ಮಗು 18 ವರ್ಷ ಪೂರೈಸಿದಾಗ ಖಾತೆ ಸ್ವಯಂಚಾಲಿತವಾಗಿ ನಿಯಮಿತ NPS ಟಿಯರ್-1 ಖಾತೆ ಆಗಿ ಪರಿವರ್ತನೆ ಆಗುತ್ತದೆ. ಆಗ ಹೊಸ ಕೆವೈಸಿ ಅಗತ್ಯವಿರುತ್ತದೆ ಮತ್ತು ಕೊಡುಗೆ ಮುಂದುವರಿಸಲು ಅವಕಾಶ ಇರುತ್ತದೆ.
ಖಾತೆ ಕ್ಲೋಸ್ ಮಾಡುವ ಸಂದರ್ಭದಲ್ಲಿ, ಒಟ್ಟು ಸಂಗ್ರಹಿತ ಸಂಪತ್ತಿನ ಕನಿಷ್ಠ ಶೇಕಡಾ 80 ಭಾಗ ಅನ್ಯೂಯಿಟಿ ಖರೀದಿಸಲು ಬಳಸಬೇಕು ಎಂಬ ನಿಯಮ ಇದೆ. ಮತ್ತು ಉಳಿದ ಭಾಗವನ್ನು ಒಟ್ಟಾರೆ ಮೊತ್ತವಾಗಿ ಪಡೆಯಬಹುದು.
ಈ ಯೋಜನೆ ಪೆನ್ಷನ್ ಫಂಡ್ ನಿಯಂತ್ರಣ & ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ, ಎಲ್ಲಾ ನಿಧಿ ಸುರಕ್ಷಿತವಾಗಿದ್ದು ವೃತ್ತಿಪರವಾಗಿ ನಿರ್ವಹಿಸಲ್ಪಡುವುದನ್ನ ಖಚಿತಪಡಿಸುತ್ತದೆ ಕೂಡ.
NPS ವಾತ್ಸಲ್ಯ ಉಳಿತಾಯ ಯೋಜನೆಯಷ್ಟೇ ಅಲ್ಲದೆ ಮಕ್ಕಳಿಗೆ ಹಣಕಾಸು ಜ್ಞಾನವನ್ನೂ ಕಲಿಸುವ ಅವಕಾಶ ಕೂಡ ಆಗಿದೆ. ಉಳಿತಾಯ, ಹೂಡಿಕೆ, ಅಪಾಯ ನಿರ್ವಹಣೆ ಹಾಗೂ ದೀರ್ಘಕಾಲೀನ ಯೋಜನೆಗಳಂತಹ ಪರಿಕಲ್ಪನೆ ಅರ್ಥಮಾಡಿಕೊಳ್ಳಲು ಈ ಯೋಜನೆ ಸಹಾಯ ಮಾಡುತ್ತದೆ.
ಶೀಘ್ರದಲ್ಲಿ ಪ್ರಾರಂಭಿಸುವ ಶಕ್ತಿ
ಹೂಡಿಕೆ ಶೀಘ್ರ ಆರಂಭಿಸುವುದರಿಂದ ಸಂಯೋಜಿತ ಬಡ್ಡಿ ಪ್ರಯೋಜನ ಸಿಗುತ್ತದೆ - ಮೂಲ ಧನದ ಮತ್ತು ಸಂಗ್ರಹಿತ ಬಡ್ಡಿ ಮೇಲಿನ ಲಾಭಗಳೂ ಕೂಡ ಸಿಗುತ್ತದೆ.
ಉದಾಹರಣೆಗೆ: ಜನನದಿಂದ ಪ್ರತಿ ತಿಂಗಳು ರೂ 2,000 ಹೂಡಿಕೆ ಮಾಡಿದರೆ ಮತ್ತು ವಾರ್ಷಿಕ 10% ಲಾಭ ದೊರೆತರೆ, 18 ವರ್ಷಗಳಲ್ಲಿ ಒಟ್ಟು 4.32 ಲಕ್ಷ ಹೂಡಿಕೆಗೆ ಸುಮಾರು 8.2 ಲಕ್ಷ ರೂಪಾಯಿ ಆಗಿರುತ್ತದೆ. ಆದರೆ 10ನೇ ವಯಸ್ಸಿನಿಂದ ಪ್ರಾರಂಭಿಸಿದರೆ, ಅದೇ ಹೂಡಿಕೆ ಕೇವಲ ರೂ 4.9 ಲಕ್ಷವಾಗುತ್ತದೆ - ಅಂದರೆ ರೂ 3.3 ಲಕ್ಷ ವ್ಯತ್ಯಾಸ ಕಾಣಬಹುದು.

ಗಮನಿಸಿ: ಸಾಧ್ಯವಾದಷ್ಟು ಮೊದಲೇ ಮತ್ತು ನಿರಂತರ ಹೂಡಿಕೆ ಮಾಡುವುದು ಸಂಪತ್ತು ಸೃಷ್ಟಿಯ ವಿಚಾರದಲ್ಲಿ ಮಹತ್ವದ ಪರಿಣಾಮ ಬೀರುತ್ತದೆ.
ಸ್ಮಾರ್ಟ್ ಇನ್ವೆಸ್ಟ್ಮೆಂಟ್: ಹೂಡಿಕೆಯಲ್ಲಿ ಅಪಾಯ & ಆಸ್ತಿ ಹಂಚಿಕೆ ಅರ್ಥಮಾಡಿಕೊಳ್ಳುವುದು
ಎನ್ಪಿಎಸ್ ವಾತ್ಸಲ್ಯ ಕೆಳಗಿನ ಹೂಡಿಕೆ ಆಯ್ಕೆಗಳನ್ನು ಒದಗಿಸುತ್ತದೆ:
ಇಕ್ವಿಟಿ (E): ಹೆಚ್ಚಿನ ಅಪಾಯ, ಆದರೂ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ಸಿಗುವ ಸಾಧ್ಯತೆ.
ಕಾರ್ಪೊರೇಟ್ ಬಾಂಡ್ಗಳು (C): ಕಡಿಮೆ ಅಪಾಯ & ಮಧ್ಯಮ ಲಾಭ.
ಸರ್ಕಾರಿ ಪಾವತಿಪತ್ರಗಳು (G): ಸುರಕ್ಷಿತ ಹಾಗೂ ಸ್ಥಿರ ಲಾಭದ ಆಯ್ಕೆ.
ದೀರ್ಘಾವಧಿ ಬೆಳವಣಿಗೆಗೆ ಅನಾನುಕೂಲತೆ ಇಲ್ಲದ ಮಕ್ಕಳಿಗೆ ಹೆಚ್ಚಿನ ಇಕ್ವಿಟಿ ಹಂಚಿಕೆ ಸೂಕ್ತವಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಏಕೆಂದರೆ ಸಮಯವು ಅಪಾಯವನ್ನು ಕಡಿಮೆ ಮಾಡುತ್ತದೆ.
ತೆರಿಗೆ ಪ್ರಯೋಜನಗಳು ಏನೇನು?
ಸೆಕ್ಷನ್ 80C (ರೂ. 1.5 ಲಕ್ಷ ತನಕ) & ಸೆಕ್ಷನ್ 80CCD(1B) (50,000 ತನಕ) ಅಡಿ ಕೊಡುಗೆಗಳು ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಇದು ಸಂಪತ್ತಿನ ನಿರ್ಮಾಣ ವೃದ್ಧಿಸುತ್ತದೆ & ಮಕ್ಕಳಿಗೆ ತೆರಿಗೆ-ಸಮರ್ಥ ಹೂಡಿಕೆಯ ಮಹತ್ವವನ್ನು ಕೂಡ ತಿಳಿಸುತ್ತದೆ.
ಹಣದುಬ್ಬರ ಮತ್ತು ನಿಜವಾದ ಗುರಿಗಳಿಗೆ ಯೋಜನೆ
ಸರಾಸರಿ ಹಣದುಬ್ಬರ ಶೇಕಡಾ 6 ಆಗಿರುವುದರಿಂದ, ಇಂದಿನ 1 ಲಕ್ಷ ರೂಪಾಯಿ 20 ವರ್ಷದಲ್ಲಿ ಕೇವಲ 31,000 ರೂಪಾಯಿ ಮೌಲ್ಯ ಹೊಂದಿರುತ್ತದೆ. ಎನ್ಪಿಎಸ್ ವಾತ್ಸಲ್ಯ ಹಣದುಬ್ಬರವನ್ನ ಮೀರಿಸುವ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತದೆ, ಮಕ್ಕಳಿಗೆ ದೀರ್ಘಾವಧಿಯಲ್ಲಿ ಹಣಕಾಸು ಯೋಜನೆ ಮೌಲ್ಯವನ್ನು ಕಲಿಸುತ್ತದೆ.
ಹಣಕಾಸು ಶಿಸ್ತನ್ನು ಬೆಳೆಸುವುದು
ಒಟ್ಟು 3 ವರ್ಷದ ಲಾಕ್-ಇನ್ ಅವಧಿ & ನಿಯಮಿತ ಹಿಂಪಡೆಯುವ ಮಿತಿ ಈ ಪ್ರಮುಖ ಅಭ್ಯಾಸ ಬೆಳೆಸುತ್ತವೆ:
ಅಗತ್ಯ ಮತ್ತು ಬಯಕೆ ನಡುವಿನ ವ್ಯತ್ಯಾಸ ತಿಳಿಯುವುದು.
ಕಡಿಮೆ ಅವಧಿಯ ಬಯಕೆಗೆ ಬದಲಾಗಿ ದೀರ್ಘಾವಧಿ ಗುರಿಗಳಿಗೆ ಆದ್ಯತೆ.
'ನಿಮಗಾಗಿ ಉಳಿಸಿಕೊಳ್ಳುವುದು ಮೊದಲು' ಎಂಬ ತತ್ವ ಅಳವಡಿಸಿಕೊಳ್ಳುವುದು.
ಅವಕಾಶ ವೆಚ್ಚ ಅರ್ಥಮಾಡಿಕೊಳ್ಳುವುದು
ಸಾಮಾನ್ಯ ಉಳಿತಾಯ ಖಾತೆ ಬದಲು ಎನ್ಪಿಎಸ್ ವಾತ್ಸಲ್ಯ ಆಯ್ಕೆ ಮಾಡಿದರೆ ಮಕ್ಕಳಿಗೆ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಕಲಿಸುತ್ತದೆ, ಹೆಚ್ಚು ಲಾಭ ತ್ಯಜಿಸುವ ಅಪಾಯದ ಬೆಲೆ ತೋರಿಸುತ್ತದೆ.
ಆರ್ಥಿಕ ಸ್ವಾವಲಂಬನೆಗೆ ಸಿದ್ಧತೆ
ಈ ಯೋಜನೆಯ ಮೂಲಕ 18ನೇ ವಯಸ್ಸಿನಲ್ಲೇ ಮಕ್ಕಳು ಹಣವನ್ನು ಮಾತ್ರವಲ್ಲ ಜ್ಞಾನವನ್ನೂ ಪಡೆಯುತ್ತಾರೆ:
ಹೂಡಿಕೆಗಳು ಸಮಯದ ಜೊತೆ ಹೇಗೆ ಬೆಳೆಯುತ್ತವೆ ಎಂಬುದನ್ನು ತಿಳಿಯಬಹುದು.
ವೈವಿಧ್ಯಮಯ ಹೂಡಿಕೆಗಳ ಬಗ್ಗೆ ಮಹತ್ವ ತಿಳಿಯಬಹುದು.
ನಿವೃತ್ತಿ ಯೋಜನೆ ಮುಂಚಿತವಾಗಿಯೇ ಪ್ರಾರಂಭಿಸಲು ಸಾಧ್ಯ.
ಅಪಾಯ ಮತ್ತು ಲಾಭದ ಸಮತೋಲನ ಕಲಿಯಬಹುದು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications