Breaking: ಹಿಜಾಬ್ ಕುರಿತ ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿದ ಹೈಕೋರ್ಟ್
ಬೆಂಗಳೂರು, ಫೆಬ್ರವರಿ 14: ಹಿಜಾಬ್ ವಿವಾದ ಕುರಿತಂತೆ ವಿಚಾರಣೆಯನ್ನು ಹೈಕೋರ್ಟ್ ತ್ರಿಸದಸ್ಯ ಪೀಠ ನಾಳೆ(ಫೆ.15, ಮಂಗಳವಾರ) 2:30ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಹಿಜಾಬ್ ಅರ್ಜಿ ವಿಚಾರಣೆಯಲ್ಲಿ ಅನೇಕ ಸಾಂವಿಧಾನಿಕ ಅಂಶಗಳಿವೆ ಎಂದಿರುವ ತ್ರಿಸದಸ್ಯ ಪೀಠ, ಮಧ್ಯಂತರ ಆದೇಶವನ್ನೇ ಪಾಲಿಸಬೇಕು ಎಂದು ತಿಳಿಸಿದೆ.
ಹಿಜಾಬ್ ವಿವಾದದ ಕುರಿತ ಹೈಕೋರ್ಟ್ನಲ್ಲಿ ಇಂದು ವಾದ ಮಂಡಿಸಿದ ಹಿಜಾಬ್ ಅರ್ಜಿ ಪರ ದೇವದತ್ ಕಾಮತ್, ಕಾಲೇಜ್ ಅಭಿವೃದ್ಧಿ ಸಮಿತಿಗೆ ಹಿಜಾಬ್ ನಿರ್ಬಂಧಿಸುವ ಅಧಿಕಾರವಿಲ್ಲ, ಕೇಂದ್ರೀಯ ವಿವಿಗಳಲ್ಲಿ ಈಗಲೂ ಹಿಜಾಬ್ಗೆ ಅವಕಾಶವಿದೆ ಎಂದು ವಾದ ಮಂಡಿಸಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ವಿದ್ಯಾರ್ಥಿನಿಯರ ಪರ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ದು, ಇನ್ನಷ್ಟು ಸಾಂವಿಧಾನಿಕ ಅಂಶಗಳ ಅಧ್ಯಯನ ಇರುವ ಕಾರಣ ನಾಳೆಗೆ ವಿಚಾರಣೆಯನ್ನು ಮುಂದೂಡಲಾಯಿತು.
ಘಟನೆ
ಹಿನ್ನಲೆ:
ಉಡುಪಿಯ
ಸರ್ಕಾರಿ
ಪದವಿ
ಪೂರ್ವ
ಬಾಲಕಿಯರ
ಕಾಲೇಜಿನ
ಮುಸ್ಲಿಮ್
ಸಮುದಾಯದ
ವಿದ್ಯಾರ್ಥಿನಿಯರು
ಹಿಜಾಬ್
ಧರಿಸಿ
ಕಾಲೇಜಿಗೆ
ಹಾಜರಾಗುವುದಕ್ಕೆ
ಅಡ್ಡಿಪಡಿಸುತ್ತಿದ್ದಾರೆ
ಅಂತ
ಆರೋಪಿಸಿ
ವಿದ್ಯಾರ್ಥಿನಿಯರು
ಅರ್ಜಿ
ಸಲ್ಲಿಸಿದ್ದರು.
ಅರ್ಜಿ
ವಿಚಾರಣೆಯನ್ನು
ಪ್ರಾರಂಭದಲ್ಲಿ
ಹೈಕೋರ್ಟ್ನ
ಏಕಸದ್ಯಸ
ಪೀಠ
ನಡೆಸಿದ
ಬಳಿಕ
ಹೆಚ್ಚಿನ
ವಿಚಾರಣೆಗಾಗಿ
ತ್ರಿಸದಸ್ಯ
ಪೀಠಕ್ಕೆ
ವಿಚಾರಣೆಯನ್ನು
ವರ್ಗಾವಣೆ
ಮಾಡಿದ್ದರು.