ಉಪ ಲೋಕಾಯುಕ್ತರ ಪದಚ್ಯುತಿ ಪ್ರಶ್ನಿಸಿದ್ದ ರಿಟ್ ಅರ್ಜಿ ವಜಾ
ಬೆಂಗಳೂರು ಮಾರ್ಚ್ 03 : ಸದನದಲ್ಲಿ ತಮ್ಮ ಪದಚ್ಯುತಿ ನಿರ್ಣಯ ಮಂಡನೆ ಮಾಡಿರುವುದನ್ನು ಪ್ರಶ್ನಿಸಿ ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಕಾಂಗ್ರೆಸ್ನ 78ಕ್ಕೂ ಅಧಿಕ ಶಾಸಕರು ಉಪ ಲೋಕಾಯುಕ್ತರ ಪದಚ್ಯುತಿ ನಿರ್ಣಯಕ್ಕೆ ಸಹಿ ಹಾಕಿದ್ದರು.
ಸುಭಾಷ್
ಬಿ
ಅಡಿ
ಅವರು
ಸಲ್ಲಿಸಿದ್ದ
ರಿಟ್
ಅರ್ಜಿಯ
ವಿಚಾರಣೆಯನ್ನು
ಬುಧವಾರ
ನಡೆಸಿದ
ನ್ಯಾ.ರಾಘವೇಂದ್ರ
ಎಸ್.ಚೌವ್ಹಾಣ್
ಅವರ
ಏಕಸದಸ್ಯ
ಪೀಠ,
ಅರ್ಜಿಯನ್ನು
ವಜಾಗೊಳಿಸಿತು.
ಸ್ಪೀಕರ್
ಈ
ಕುರಿತು
ತನಿಖೆ
ನಡೆಸಲು
ಹೈಕೋರ್ಟ್
ನ್ಯಾಯಮೂರ್ತಿಗಳಿಗೆ
ಪತ್ರ
ಬರೆದಿದ್ದಾರೆ.
ಅದು
ಪೂರ್ಣಗೊಂಡ
ಬಳಿಕ
ಅರ್ಜಿ
ಸಲ್ಲಿಸಬಹುದು
ಎಂದು
ಕೋರ್ಟ್
ಹೇಳಿದೆ.
[ಸುಭಾಷ್
ಬಿ
ಅಡಿ
ಕೆಲಸಕ್ಕೆ
ಅಡ್ಡಿ
ಇಲ್ಲ]
2015ರ ನವೆಂಬರ್ 27ರಂದು ಕಾಂಗ್ರೆಸ್ನ 78ಕ್ಕೂ ಅಧಿಕ ಶಾಸಕರು ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಅವರ ಪದಚ್ಯುತಿ ನಿರ್ಣಯನ್ನು ಸದನದಲ್ಲಿ ಮಂಡನೆ ಮಾಡಿದ್ದರು. ಇದಕ್ಕೆ ಸದನದ ಒಪ್ಪಿಗೆಯೂ ಸಿಕ್ಕಿತು. ನಂತರ ಪದಚ್ಯುತಿ ನಿರ್ಣಯವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಸಲ್ಲಿಸಲಾಗಿತ್ತು. [ಲೋಕಾಯುಕ್ತ ಪದಚ್ಯುತಿ ನಿರ್ಣಯ ಹೇಗೆ?]
ನಿರ್ಣಯವನ್ನು ಪಡೆದ ಸ್ಪೀಕರ್ ಅವರು ಈ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಇದರಿಂದಾಗಿ ಈಗ ರಿಟ್ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿರುವ ಹೈಕೋರ್ಟ್, ಈ ಪ್ರಕ್ರಿಯೆ ಮುಗಿದ ಬಳಿಕ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
ಯಾವ ಆರೋಪಗಳಿವೆ? : ಹಿಂದೆ ಉಪ ಲೋಕಾಯುಕ್ತರಾಗಿದ್ದ ಎಸ್.ಬಿ.ಮಜಗೆ ಅವರು ಸುಭಾಷ್ ಅಡಿ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಆರೋಪಗಳ ಆಧಾರದ ಮೇಲೆ ಪದಚ್ಯುತಿಗೊಳಿಸುವ ನಿರ್ಣಯವನ್ನು ಕಾಂಗ್ರೆಸ್ ಶಾಸಕರು ಸದನದಲ್ಲಿ ಮಂಡಿಸಿದ್ದರು.