Get Updates
Get notified of breaking news, exclusive insights, and must-see stories!

'ಸರ್ಕಾರದ ವೈಫಲ್ಯದಿಂದ ರಾಜ್ಯದಲ್ಲಿ ಕೊರೋನಾಗೆ ಮೊದಲ ಬಲಿ'

ಬೆಂಗಳೂರು, ಮಾ. 14: ಕರೋನಾ ವೈರಸ್ ಗೆ ರಾಜ್ಯದಲ್ಲಿ ಮೊದಲ ಸಾವಾಗಿರುವುದು ದುರದೃಷ್ಟಕರ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ನಿಂದ ಸಾವನ್ನಪ್ಪಿರುವುದು ದೃಢಪಟ್ಟಿರುವುದರ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಸರ್ಕಾರ ತಡವಾಗಿ ಈ ಮಾಹಿತಿ ನೀಡಿದೆ. ಇದು ಆರೋಗ್ಯ ಇಲಾಖೆಯ ವೈಫಲ್ಯ ಎಂದು ಆರೋಪಿಸಿದ್ದಾರೆ. ಇಲಾಖೆ ಸಭೆ ನಡೆಸಿ ನಿಯಂತ್ರಣಕ್ಕೆ ತತ್ಷಣ ಕ್ರಮ ತೆಗೆದುಕೊಳ್ಳಬೇಕು. ಪ್ರತಿದಿನ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲೂ ಕೊರೋನಾ ವೈರಸ್ ಭೀತಿ ಬಗ್ಗೆ ಚರ್ಚೆ

ವಿಧಾನಸಭೆಯಲ್ಲೂ ಕೊರೋನಾ ವೈರಸ್ ಭೀತಿ ಬಗ್ಗೆ ಚರ್ಚೆ

ಇನ್ನು ವಿಧಾನಸಭೆ ಕಲಾಪದಲ್ಲಿಯೂ ಕೊರೋನಾ ವೈರಸ್ ಕುರಿತು ಭೀತಿ ವ್ಯಕ್ತವಾಗಿದೆ. ರಾಜ್ಯದಲ್ಲಿ ಅತ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಕೊರೋನಾ ವೈರಸ್ ಕುರಿತು ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಪ್ರಸ್ತಾಪ ಮಾಡಿದ್ದಾರೆ. ಕೊರೋನಾಗೆ ಮೊದಲ ಬಲಿ ನಮ್ಮ ಕಲಬುರಗಿ ಜಿಲ್ಲೆಯಲ್ಲಿಯೇ ಆಗಿರೋದು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆ ಮಾಡಿರಲಿಲ್ಲ

ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆ ಮಾಡಿರಲಿಲ್ಲ

ಕರೋನಾ ವೈರಸ್ ನಿಂದ ಮೃತಪಟ್ಟ ಖಾಸಿಂ ಮೊಹಮದ್ ಸಿದ್ದಕಿ ಅವರು ಮೂಲತಃ ಕಲಬುರ್ಗಿಯವರು. ಉಮ್ರಾ ತೀರ್ಥ ಯಾತ್ರೆಗೆ ತೆರಳಿದ್ದ ಅವರು ಫೆಬ್ರವರಿ 29ರಂದು ಕಲ್ಬುರ್ಗಿಗೆ ಬಂದಿದ್ದಾರೆ.

ನಂತರ ಅವರನ್ನು ಸಾಕಷ್ಟು ಜನರು ಭೇಟಿಯಾಗಿ ಉಮ್ರಾ ಯಾತ್ರೆಯ ಶುಭಕೋರಿದ್ದಾರೆ. ಮಾರ್ಚ್ 08 ರಂದು ಅವರಿಗೆ ಜ್ವರ ಕಾಣಿಸಿಕೊಂಡಿದೆ. ನಂತರ ಅವರಿಗೆ ಕರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಅದು ಗೊತ್ತಾದ ನಂತರ ಜಿಲ್ಲಾ ಆರೋಗ್ಯ ಇಲಾಖೆಯವರು ನಿರ್ಲಕ್ಷ್ಯತನ ತೋರಿಸಿದ್ದಾರೆ.

ಐಸೋಲೆಟ್ ಮಾಡದೆ ಹೈದ್ರಾಬಾದ್ ಗೆ ತೆರಳಲು ಬಿಟ್ಟಿದ್ದಾರೆ

ಐಸೋಲೆಟ್ ಮಾಡದೆ ಹೈದ್ರಾಬಾದ್ ಗೆ ತೆರಳಲು ಬಿಟ್ಟಿದ್ದಾರೆ

ಸಿದ್ದಕಿ ಅವರಿಗೆ ರೋಗ ಲಕ್ಷಣಗಳು ಕಂಡು ಬಂದಾಗ ಅವರನ್ನು ಐಸೋಲೆಟ್ ಮಾಡದೆ ಹೈದ್ರಾಬಾದ್ ಗೆ ತೆರಳಲು ಬಿಟ್ಟಿದ್ದಾರೆ.

ಹೈದ್ರಾಬಾದ್ ನಲ್ಲೂ ಅವರು ಐದು ಆಸ್ಪತ್ರೆಗಳಿಗೆ ಎಡತಾಕಿದ್ದಾರೆ. ಐದು ದಿನಗಳಾದ ನಂತರ ಎಚ್ಚೆತ್ತುಕೊಂಡು ಜಿಲ್ಲಾ ವೈದ್ಯಾಧಿಕಾರಿಗಳು ದೂರವಾಣಿ ಕರೆ ಮಾಡಿದ್ದರು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಮೃತದೇಹವನ್ನೂ ಸರಿಯಾಗಿ ನಿರ್ಹಹಣೆ ಮಾಡಿಲ್ಲ

ಮೃತದೇಹವನ್ನೂ ಸರಿಯಾಗಿ ನಿರ್ಹಹಣೆ ಮಾಡಿಲ್ಲ

ಅವರ ಮೃತದೇಹವನ್ನು ತರಬೇಕಾದರೂ ಯಾವುದೇ ಮುಂಜಾಗ್ರತೆ ತೆಗೆದುಕೊಂಡಿಲ್ಲ. ಯಾರು ಬೇಕಾದರೂ ಹೋಗಿ ಅವರ ಪಾರ್ಥೀವ ಶರೀರದ ದರ್ಶನ ಮಾಡಿಕೊಂಡು ಬರಲು ಬಿಟ್ಟಿದ್ದಾರೆ. ಖಾಸಿಂ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳುವ ಸಂದರ್ಭದಲ್ಲೂ ಕಲ್ಬುರ್ಗಿ ಜಿಲ್ಲಾ ಆರೋಗ್ಯಾಧಿಕಾರಿಗಳು ಯಾವುದೇ ಮುಂಜಾಗ್ರತೆ ತೆಗೆದುಕೊಂಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಕೊರೋನಾಗೆ ಔಷಧಿ ಇದೆಯೆಂದು ಬೋರ್ಡ್

ಕಲಬುರಗಿಯಲ್ಲಿ ಕೊರೋನಾಗೆ ಔಷಧಿ ಇದೆಯೆಂದು ಬೋರ್ಡ್

ಮತ್ತೊಂದೆಡೆ ಮೆಡಿಕಲ್ ಶಾಪ್ ಗಳವರು ಕೊರೋನಾ ವೈರಸ್ ಗೆ ಔಷಧಿ ಇದೆ ಎಂದು ಬೋರ್ಡ್ ಹಾಕಿಕೊಂಡು 200-300ರೂ ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಹರಡುತ್ತಿರುವ ಸುದ್ದಿ ನೋಡಿ ಜನ ಆತಂಕಿತರಾಗಿದ್ದಾರೆ. ಇದೆಲ್ಲವನ್ನು ಸರ್ಕಾರ ಗಮನಿಸಿವ ಸೂಕ್ತಕ್ರಮನಕೈಗೊಳ್ಳಬೇಕೆಂದು ಖರ್ಗೆ ಆಗ್ರಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+