ಸಂಪುಟ ವಿಸ್ತರಣೆ: ಕುಮಾರಸ್ವಾಮಿ ಸಂಪುಟದ ಒಟ್ಟಾರೆ ಜಾತಿ ಲೆಕ್ಕಾಚಾರ ಹೀಗಿದೆ
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಏಳು ತಿಂಗಳ ನಂತರ ಸಂಪುಟ ವಿಸ್ತರಣೆಯಾಗಿದೆ. ಮತ್ತಿನ್ಯಾವುದೋ ಕಾರಣ ಮುಂದೊಡ್ಡಿ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ ಬರಲಿದೆ ಎನ್ನುವ ಮಾತು ಸುಳ್ಳಾಗಿದೆ.
ತನ್ನ ಖೋಟಾದಲ್ಲಿ ಖಾಲಿಯಿರುವ ಎರಡು ಸ್ಥಾನವನ್ನು ಜೆಡಿಎಸ್ ಭರ್ತಿ ಮಾಡಿಕೊಳ್ಳಲಿಲ್ಲ. ಧನುರ್ಮಾಸ ಎನ್ನುವುದು ಮೇಲ್ನೋಟಕ್ಕೆ ಕಾಣುವ ಕಾರಣವಾಗಿದ್ದರೂ, ಅಸಲಿ ರಾಜಕೀಯ ಬೇರೆಯದೇ ಇದೆ ಎನ್ನುವ ಮಾತಿದೆ.
ಸುಮಾರು ಹತ್ತು ಜಿಲ್ಲೆಗಳ ಯಾವ ಜನಪ್ರತಿನಿಧಿಗಳಿಗೂ ಸಂಪುಟದಲ್ಲಿ ಸ್ಥಾನ ನೀಡಲಿಲ್ಲ ಎನ್ನುವ ಕೂಗಿನ ನಡುವೆ, ಸಂಪುಟದಿಂದ ಕೈಬಿಡಲಾದ ರಮೇಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗದೇ ಇರುವುದು, ಕಾಂಗ್ರೆಸ್ಸಿಗೆ ಕಸಿವಿಸಿ ಉಂಟುಮಾಡಿದೆ.
ಶನಿವಾರ (ಡಿ 22) ಪ್ರಮಾಣವಚನ ಸ್ವೀಕರಿಸಿದ ಎಂಟು ನೂತನ ಸಚಿವರಿಗೆ ಖಾತೆಯನ್ನು ಇನ್ನೂ ಹಂಚಲಾಗಲಿಲ್ಲ. ಡಾ. ಪರಮೇಶ್ವರ್, ಡಿ ಕೆ ಶಿವಕುಮಾರ್, ಆರ್ ವಿ ದೇಶಪಾಂಡೆ ಮುಂತಾದವರು ಹೆಚ್ಚುವರಿ ಖಾತೆಯನ್ನು ಹೊಂದಿರುವುದರಿಂದ, ಇದರಿಂದ ಯಾವುದಾದರೂ ಖಾತೆಯನ್ನು ಕಸಿದುಕೊಡಬಹುದು.
ಸಂಪುಟ ವಿಸ್ತರಣೆಯ ನಂತರ, ಕುಮಾರಸ್ವಾಮಿ ಸರಕಾರದ ಸಚಿವರಲ್ಲಿ ಒಕ್ಕಲಿಗರ ಪ್ರಾಭಲ್ಯ ಹೆಚ್ಚಾಗಿದೆ. ಸರಕಾರದ ಸಚಿವರಲ್ಲಿನ ಜಾತಿ ಪ್ರಾತಿನಿಧ್ಯ ಹೀಗಿದೆ, ಮುಂದೆ ಓದಿ..

ಒಕ್ಕಲಿಗ ಸಮುದಾಯದವರು - 1
ಎಚ್ ಡಿ ಕುಮಾರಸ್ವಾಮಿ
ಡಿ ಕೆ ಶಿವಕುಮಾರ್
ಎಚ್ ಡಿ ರೇವಣ್ಣ
ಡಿ ಸಿ ತಮ್ಮಣ್ಣ
ಜಿ ಟಿ ದೇವೇಗೌಡ

ಒಕ್ಕಲಿಗ ಸಮುದಾಯದವರು - 2
ಸಾ. ರಾ. ಮಹೇಶ್
ಎಸ್ ಆರ್ ಶ್ರೀನಿವಾಸ್
ಕೃಷ್ಣ ಭೈರೇಗೌಡ
ಶಿವಶಂಕರ ರೆಡ್ಡಿ
ಸಿ ಎಸ್ ಪುಟ್ಟರಾಜು

ಬ್ರಾಹ್ಮಣ, ಹಿಂದುಳಿದ ವರ್ಗ
ಆರ್ ವಿ ದೇಶಪಾಂಡೆ (ಬ್ರಾಹ್ಮಣ)
ಕೆ ಜೆ ಜಾರ್ಜ್ (ಕ್ರಿಶ್ಚಿಯನ್)
ಡಾ. ಜಯಮಾಲ (ಹಿಂದುಳಿದ ವರ್ಗ)
ಪುಟ್ಟರಂಗ ಶೆಟ್ಟಿ (ಹಿಂದುಳಿದ ವರ್ಗ)

ಲಿಂಗಾಯತ ಸಚಿವರು
ಎಂ ಸಿ ಮನಗೋಳಿ
ವೆಂಕಟರಾವ್ ನಾಡಗೌಡ
ಶಿವಾನಂದ ಪಾಟೀಲ್
ರಾಜಶೇಖರ ಪಾಟೀಲ್
ಎಂ ಬಿ ಪಾಟೀಲ್

ಮುಸ್ಲಿಂ ಮತ್ತು ನಾಯಕ ಸಮುದಾಯ
ಸತೀಶ್ ಜಾರಕಿಹೊಳಿ (ನಾಯಕ)
ಇ ತುಕಾರಾಂ (ನಾಯಕ)
ಜಮೀರ್ ಅಹಮದ್ ಖಾನ್ (ಮುಸ್ಲಿಂ)
ಯು ಟಿ ಖಾದರ್ (ಮುಸ್ಲಿಂ)
ರಹೀಂಖಾನ್ (ಮುಸ್ಲಿಂ)
(ಚಿತ್ರದಲ್ಲಿ ಜಾರಕಿಹೊಳಿ)

ದಲಿತ ಸಮುದಾಯ
ಡಾ. ಜಿ ಪರಮೇಶ್ವರ್
ಪ್ರಿಯಾಂಕ್ ಖರ್ಗೆ
ವೆಂಕಟರಮಣಪ್ಪ
ಪರಮೇಶ್ವರ ನಾಯಕ
ಆರ್ ಬಿ ತಿಮ್ಮಾಪುರ

ಕುರುಬ ಸಮುದಾಯದವರು
ಬಂಡೆಪ್ಪ ಖಾಶೆಂಪುರ
ಎಂ ಟಿ ಬಿ ನಾಗರಾಜ್
ಸಿ ಎಸ್ ಶಿವಳ್ಳಿ
(ಚಿತ್ರದಲ್ಲಿ: ಎಂ ಟಿ ಬಿ ನಾಗರಾಜ್)












Click it and Unblock the Notifications