ಪೊಲೀಸರನ್ನು ಮಾಧ್ಯಮಗಳಿಂದ ದೂರ ಮಾಡಿದ ಹೊಸ ಆದೇಶ
ಬೆಂಗಳೂರು, ಜೂನ್ 26 : ಕರ್ನಾಟಕದ ಪೊಲೀಸ್ ಇಲಾಖೆಯ ಹೊಸ ಆದೇಶವೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಪೊಲೀಸರು ಮಾಧ್ಯಮಕ್ಕೆ ಮಾಹಿತಿ ನೀಡಿದರೆ ತಕ್ಷಣ ಅಮಾನತು ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
'ಮೀಡಿಯಾ ಪಾಲಿಸಿ' ಎಂಬ ಹೆಸರಿನಲ್ಲಿ ಈ ಆದೇಶ ಹೊರಬಿದ್ದಿದೆ. ಇದನ್ನು ಎಲ್ಲಾ ಮಹಾನಗರಗಳ ಪೊಲೀಸ್ ಆಯುಕ್ತು, ಜಿಲ್ಲಾ ಎಸ್ಪಿಗಳಿಗೆ ಕಳುಹಿಸಲಾಗಿದೆ. ಪಾಲಿಸಿಯನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ.
ಖಾಕಿ ತೊಟ್ಟು ಪ್ರತಿಭಟಿಸುತ್ತಿದ್ದ ವಾಟಾಳ್ ನಾಗರಾಜ್ ಪೊಲೀಸ್ ವಶಕ್ಕೆ!
ಈ ಆದೇಶದಲ್ಲಿ ಪ್ರಮುಖವಾಗಿ 3 ಉಲ್ಲೇಖಗಳನ್ನು ನೀಡಲಾಗಿದೆ. ಸೂಚನೆಗಳನ್ನು ಉಲ್ಲಂಘನೆ ಮಾಡಿದರೆ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಅಮಾನತುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ.
ಉಲ್ಲೇಖಗಳು ಹೀಗಿವೆ.....
* ಯಾವುದೇ ಪೂರ್ವಾನುಮತಿ ಇಲ್ಲದೇ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಯಾವುದೇ ಪತ್ರಿಕೆ, ಆಕಾಶಾವಾಣಿ, ದೂರದರ್ಶನ ಅಥವ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭಾಗವಹಿಸಕೂಡದು.
ಔರಾದ್ಕರ್ ವರದಿ : ಒಂದು ವಾರದಲ್ಲಿ ಪೊಲೀಸರಿಗೆ ಸಿಹಿ ಸುದ್ದಿ
* ಇಲಾಖೆಗೆ ಸಂಬಂಧಪಟ್ಟ ಯಾವುದೇ ವಿಷಯಗಳ ವಿವರಗಳನ್ನು ಜಿಲ್ಲಾ ಮಟ್ಟದಲ್ಲಿ ಮಾಧ್ಯಮಗಳಿಗೆ ನೀಡಲು ಆಯಾ ಘಟಕದ ಘಟಕಾಧಿಕಾರಿಗಳಾದ ಪೊಲೀಸ್ ಅಧೀಕ್ಷಕರು/ ಪೊಲೀಸ್ ಆಯುಕ್ತರು/ ವಲಯದ ಐಜಿಪಿ ಅವರು ಅಥವ ಅವರುಗಳಿಂದ ಅನುಮೋದನೆಗೊಂಡ ನಂತರ ಸಂಬಂಧಪಟ್ಟ ಘಟಕದ ನೋಡೆಲ್ ಅಧಿಕಾರಿ ಅವರು ಮಾತ್ರ ಮಾಧ್ಯಮಕ್ಕೆ ಮಾಹಿತಿ ನೀಡಲು ಅಧಿಕೃತ ಅಧಿಕಾರಿಗಳಾಗಿರುತ್ತಾರೆ.
ದಂಡಿಸುವ ಲಾಠಿಯಲ್ಲಿ ಸಪ್ತಸ್ವರ, ಕೊಳಲು ವಾದನಕ್ಕೆ ತಲೆದೂಗಿದ ಖಾಕಿ ಪಡೆ!
* ಮೇಲ್ಕಂಡ ಸೂಚನೆ ಉಲ್ಲಂಘನೆ ಮಾಡಿದಲ್ಲಿ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿಇರಿಸಿ ತಕ್ಷಣದಿಂದ ಅಮಾನತುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.