ಸಚಿವರ ನಿವಾಸ ನವೀಕರಣಕ್ಕೆ ಕೋಟಿ-ಕೋಟಿ ಖರ್ಚು
ಬೆಂಗಳೂರು, ಡಿ. 4 : ಕರ್ನಾಟಕ ಸರ್ಕಾರ ಸಚಿವರ ನಿವಾಸಗಳ ನವೀಕರಣಕ್ಕಾಗಿ ಕಳೆದ ಆರು ವರ್ಷದಲ್ಲಿ ಸರ್ಕಾರ 21.3 ಕೋಟಿ ರೂ. ವೆಚ್ಚ ಮಾಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಕಾವೇರಿ ವಸತಿ ಗೃಹ ನವೀಕರಣಕ್ಕೆ 2.69 ಕೋಟಿ ರೂ. ಖರ್ಚು ಮಾಡಲಾಗಿದೆ.
ಮಾಹಿತಿ
ಹಕ್ಕು
ಕಾರ್ಯಕರ್ತ
ಭೀಮಪ್ಪ
ಗಡಾದ
ಅವರು
ಲೋಕೋಪಯೋಗಿ
ಇಲಾಖೆಗೆ
ಮಾಹಿತಿ
ಹಕ್ಕು
ಕಾಯ್ದೆಯಡಿ
ಅರ್ಜಿ
ಸಲ್ಲಿಸಿ
ಪಡೆದ
ದಾಖಲೆಗಳು
ಸಿಎಂ
ಮತ್ತು
ಸಚಿವ
ನಿವಾಸಗಳ
ನವೀಕರಣಗಳ
ವೆಚ್ಚವನ್ನು
ಬಹಿರಂಗಪಡಿಸಿವೆ.
[ಸಿದ್ದುಗಾಗಿ
ಕಾವೇರಿ
ಬಿಟ್ಟುಕೊಟ್ಟ
ಶೆಟ್ಟರ್]
28 ಸರ್ಕಾರಿ ಬಂಗಲೆಗಳ ನವೀಕರಣಕ್ಕಾಗಿ ಕಳೆದ ಆರು ವರ್ಷಗಳಲ್ಲಿ 21.30 ಕೋಟಿ ರೂ. ಖರ್ಚು ಮಾಡಲಾಗಿದ್ದರೆ, 2008-09ರಲ್ಲಿ 2.15 ಕೋಟಿ ರೂ., 2009-10ರಲ್ಲಿ 6.28 ಕೋಟಿ ರೂ., 2010-11ರಲ್ಲಿ 2.86 ಕೋಟಿ ರೂ., 2011-12ರಲ್ಲಿ 2.81 ಕೋಟಿ ರೂ., 2012-13ರಲ್ಲಿ 3.09 ಕೋಟಿ ರೂ., 2013-14ರಲ್ಲಿ 4.27 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಹೇಳಿದೆ.
14 ಕೋಟಿ ಪಿಠೋಪಕರಣಕ್ಕೆ : ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ ಸಿದ್ದರಾಮಯ್ಯ ಮೊದಲ ವರ್ಷದ ಆಡಳಿತದವರೆಗೆ ಸಚಿವರ ನಿವಾಸಕ್ಕೆ ಪೀಠೋಪಕರಣ ಖರೀದಿ ಮಾಡಲು 14.86 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಕುಮಾರಸ್ವಾಮಿ ನೇತೃತ್ವದ ಸರ್ಕಾರ 4.69 ಕೋಟಿ ರೂ., ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 3.45 ಕೋಟಿ ರೂ., ಸದಾನಂದಗೌಡ ಸಿಎಂ ಆಗಿದ್ದಾಗ 56.55 ಲಕ್ಷ ರೂ. ಹಾಗೂ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ 74.90 ಲಕ್ಷ ರೂ.ಗಳನ್ನು ಸಚಿವರ ವಸತಿಗೃಹಗಳಿಗೆ ಪಿಠೋಪಕರಣ ಒದಗಿಸಲು ಖರ್ಚು ಮಾಡಲಾಗಿದೆ.
ಹಳೆಯ ಪಿಠೋಪಕರಣ ಎಲ್ಲಿ : ಹೊಸ ಪೀಠೋಪಕರಣಗಳಿಗೆ ಸರ್ಕಾರ ಇಷ್ಟೊಂದು ಮಾಡಿರುವಾಗ ಸರ್ಕಾರಿ ನಿವಾಸಗಳಲ್ಲಿ ಮೊದಲಿದ್ದ ಪೀಠೊಪಕರಣಗಳು ಎಲ್ಲಿ ಹೋದವು ಎಂದು ಭೀಮಪ್ಪ ಗಡಾದ ಪ್ರಶ್ನಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಹಳೆಯ ಪೀಠೊಪಕರಣಗಳನ್ನು ಹರಾಜು ಹಾಕಿಲ್ಲ ಎಂದು ಅವರು ದೂರಿದ್ದಾರೆ.