ತೀರ್ಥಹಳ್ಳಿ ನಂದಿತಾ ಕೊಲೆ ಪ್ರಕರಣ ಸಿಐಡಿ ತನಿಖೆಗೆ
ಬೆಂಗಳೂರು, ನ.4 : ಹಲವಾರು ಸಂಶಯಗಳಿಗೆ ಕಾರಣವಾಗಿರುವ ತೀರ್ಥಹಳ್ಳಿಯ ನಂದಿತಾ ಕೊಲೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ. ನಂದಿತಾ ಚಿಕಿತ್ಸೆಯ ಪ್ರಾಥಮಿಕ ವರದಿ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಹೇಳುತ್ತಿವೆ.
ನಂದಿತಾ
ಕೊಲೆ
ಪ್ರಕರಣ
ದಿನದಿಂದ
ದಿನಕ್ಕೆ
ಹೊಸ
ತಿರುವು
ಪಡೆಯುತ್ತಿದೆ
ಮತ್ತು
ತೀರ್ಥಹಳ್ಳಿಯಲ್ಲಿ
ಕಾನೂನು
ಮತ್ತು
ಸುವ್ಯವಸ್ಥೆಗೆ
ಧಕ್ಕೆ
ಉಂಟು
ಮಾಡಿದೆ.
ಆದ್ದರಿಂದ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಮಂಗಳವಾರ
ಪ್ರಕರಣದ
ತನಿಖೆಯನ್ನು
ಸಿಐಡಿಗೆ
ವಹಿಸಿ
ಆದೇಶ
ಹೊರಡಿಸಿದ್ದಾರೆ.
[ತೀರ್ಥಹಳ್ಳಿ
ಬಂದ್,
ಉತ್ತಮ
ಪ್ರತಿಕ್ರಿಯೆ]
ತೀರ್ಥಹಳ್ಳಿಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಂದಿತಾ ಅ.29ರಂದು ಅಸ್ವಸ್ಥ ಸ್ಥಿತಿಯಲ್ಲಿ ಆನಂದಗಿರಿ ಗುಡ್ಡದ ಸಮೀಪ ಪತ್ತೆಯಾಗಿದ್ದಳು. ನಂತರ ಅವಳನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಂತರ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲಾಯಿತು. [ತೀರ್ಥಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಕೊಲೆ]
ನಂತರ ಆಕೆಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಶುಕ್ರವಾರ ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ನಂದಿತಾಳನ್ನು ಅಪಹರಣ ಮಾಡಿರುವ ಮೂವರು ಆಕೆಗೆ ವಿಷಪ್ರಾಶನ ಮಾಡಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಡೆತ್ನೋಟ್ ಪತ್ತೆ : ನಂದಿತಾಳ ಕೊಲೆ ಪ್ರಕರಣಕ್ಕೆ ಸೋಮವಾರ ಹೊಸ ತಿರುವು ಸಿಕ್ಕಿದ್ದು, ಆಕೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಡೆತ್ನೋಟ್ ಬಿಡುಗಡೆ ಮಾಡಿದ್ದರು. ಆದರೆ, ಅದು ತಮ್ಮ ಮಗಳ ಕೈ ಬರಹವಲ್ಲ ಎಂದು ಆಕೆಯ ಪೋಷಕರು ಹೇಳಿಕೆ ನೀಡಿದ್ದರು.
ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿರುವ ಹಿನ್ನಲೆಯಲ್ಲಿ ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ ನೀಡಿದೆ. ನಂದಿತಾ ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಹಿರಂಗಗೊಂಡಿಲ್ಲ. ನಂದಿತಾ ಟ್ರೀಟ್ಮೆಂಟ್ ಸ್ಲಿಪ್ನಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ತೀರ್ಥಹಳ್ಳಿ ಮತ್ತು ಮಣಿಪಾಲ್ ಆಸ್ಪತ್ರೆ ವೈದ್ಯರು ದಾಖಲಿಸಿರುವ ಪತ್ರ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದೆ.