ರಾಘವೇಶ್ವರ ಶ್ರೀಗಳ ಕೇಸ್ ಬಗ್ಗೆ ಕೆಲವು ಅನುಮಾನಗಳು, ಜಿಜ್ಞಾಸೆಗಳು
ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಚಾರಿತ್ರ್ಯಹರಣ ಮಾಡುವ ಉದ್ದೇಶದಿಂದ ಹೆಣೆದಿದ್ದ ನಕಲಿ ಸಿಡಿ ಪ್ರಕರಣಕ್ಕೆ ಏಕಾಏಕಿ ತೆರೆಬಿದ್ದಿದೆ.
ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಕೊನೆಯ ಹಂತದಲ್ಲಿದ್ದು ಆರೋಪಿಗಳಿಗೆ ಶಿಕ್ಷೆಯಾಗುವ ಸಮಯ ಸನ್ನಿಹಿತವಾಗುವ ಹಂತದಲ್ಲಿ ಸರಕಾರ ಕೇಸನ್ನೇ ವಾಪಸ್ ಪಡೆಯಲು ಆತುರದ ನಿರ್ಧಾರ ತೆಗೆದುಕೊಂಡಿರುವುದು ತೀವ್ರ ವಿವಾದವನ್ನು ಸೃಷ್ಟಿಸಿದೆ. ಮಾತ್ರವಲ್ಲ, ಈ ನಿರ್ಧಾರದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಗುಮಾನಿಗೂ ಪುಷ್ಠಿ ಕೊಟ್ಟಿದೆ.
ಷಡ್ಯಂತ್ರದ ಮೂಲ ಬೇರುಗಳು ಗೋಕರ್ಣದಲ್ಲಿ ಚಾಚಿದೆ ಎಂಬುದು ಹಳೆಯ ವಿಚಾರ. ಆದರೆ ನ್ಯಾಯಾಲಯದಲ್ಲಿ ಸೆಣಸಿ ವಿಫಲರಾದ ನಕಲಿ ಸಿಡಿ ಪ್ರಕರಣದ ರೂವಾರಿಗಳು, ಸರ್ಕಾರದ ಮೇಲೂ ಪ್ರಭಾವ ಬೀರಬಲ್ಲರು ಎಂಬುದಕ್ಕೆ, ನಕಲಿ ಸಿಡಿ ಪ್ರಕರಣದ ಕೇಸ್ ಹಿಂತೆಗೆದುಕೊಂಡಿರುವುದೇ ಸಾಕ್ಷಿ. (ಗೋಮಾತೆಯ ಆಶೀರ್ವಾದದಿಂದ ಶ್ರೀಗಳಿಗೆ ಏನೂ ಆಗಿಲ್ಲ)

ಪ್ರಾಯಶಃ ಇದೇ ಮೊದಲಿರಬೇಕು, ಯಾವ ಸಾಮಾಜಿಕ ನ್ಯಾಯದ ಉದ್ದೇಶವೂ ಇಲ್ಲದೆ, ಸಮರ್ಪಕ ಸಾಕ್ಷ್ಯಗಳು ಇರುವ ಕ್ರಿಮಿನಲ್ ಪ್ರಕರಣವನ್ನು ಸರ್ಕಾರ ಹಿಂತೆಗೆದುಕೊಂಡದ್ದು.
ಇದರಿಂದ ಯಾವ ಆರೋಪಿಯು ಕೂಡ ತನ್ನ ಪ್ರಭಾವ ಬಳಸಿಕೊಂಡು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದೆಂಬ ಕೆಟ್ಟ ಸಂದೇಶವನ್ನು ಕರ್ನಾಟಕದ ಜನತೆಗೆ ರವಾನಿಸಿದಂತಾಗುವುದಲ್ಲವೇ?
ಒಂದು ಬಾರಿಯಲ್ಲ, ಒಟ್ಟು ಒಂಬತ್ತು ಬಾರಿ ನಕಲಿ ಸಿಡಿ ಆರೋಪಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯದಲ್ಲಿ ಮಾಡಿದ ಹೋರಾಟ ವಿಫಲವಾಗಿ ಅಂತಿಮವಾಗಿ ಸರ್ಕಾರದ ಮೇಲೆಯೇ ಕಬಂಧ ಬಾಹು ಚಾಚಿ, ಪ್ರಭಾವ ಬೀರಿದ್ದಾರೆ ಎಂದರೆ ಇದರ ಹಿಂದೆ ಅತ್ಯಂತ ಪ್ರಭಾವೀ ವ್ಯಕ್ತಿಗಳು, ಶಕ್ತಿಗಳು ಇವೆ ಎನ್ನುವುದಕ್ಕೆ ಬೇರೆ ಪುರಾವೆ ಬೇಕೆ? ಹಾಗಿರುವಾಗ, ಸ್ವಾಮೀಜಿಯವರ ಮೇಲೆ ಒಂದು 'ಮಿಥ್ಯಾಚಾರ' ಆರೋಪ ಹೇರುವುದು ಕಷ್ಟದ ಕೆಲಸವೇ?
ಗೋಪಾಲ್ ಬಿ ಹೊಸೂರ್ ಅವರ ಮಾರ್ಗದರ್ಶನದಲ್ಲಿ ದಕ್ಷ ಪೋಲೀಸ್ ಅಧಿಕಾರಿಗಳು ರಾತ್ರೋರಾತ್ರಿ ಆರೋಪಿಗಳ ಮನೆ ಮೇಲೆ ದಾಳಿಮಾಡಿ, ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಾಪ್ಟವೇರ್ ಹಾಗೂ ನೂರಾರು ಮಾರ್ಪ್ ಮಾಡಿರುವ ಫೋಟೋಗಳು ಹಾಗೂ ನಕಲಿ ವಿಡಿಯೋಗಳ ವಶಪಡಿಸಿಕೊಂಡು ಕೆಲ ಅರೋಪಿಗಳನ್ನು ಬಂಧಿಸಿದ್ದರು. (ಹೆಣ್ಣಿನ ಮೇಲೆ 169 ಬಾರಿ ಅತ್ಯಾಚಾರ ಆಗಲು ಸಾಧ್ಯವೇ)
ನ್ಯಾಯಾಲಯದ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಆಗದಷ್ಟು ಸಾಕ್ಷ್ಯಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಸಮರ್ಪಿಸಿದ್ದರು. ಈಗ ಆ ಪೋಲೀಸರ ದಕ್ಷತೆ, ಕರ್ತವ್ಯ ನಿಷ್ಠೆ ಎಲ್ಲವೂ ನೀರು ಪಾಲಾದಂತಾಗಿದೆ.

ಏಕಾಏಕಿ ಸರ್ಕಾರ ಮಾಧ್ಯಮಗಳಿಗೂ ಅರಿವಿಗೆ ಬರದಂತೆ ಕೇಸನ್ನು ಹಿಂಪಡೆದಿದೆ. ಹಿಂಪಡೆಯಲು ಯಾವ ಸಕಾರಣವೂ ಇಲ್ಲ. ಅಂದರೆ, ಇದು ಸಂವಿಧಾನ ಕೊಡಮಾಡಿದ ಸಾಮಾಜಿಕ ನ್ಯಾಯದ ಕಗ್ಗೊಲೆಯಲ್ಲದೇ ಇನ್ನೇನು?
ಹಲವು ನ್ಯಾಯಾಧೀಶರು ನೀಡಿದ ತೀರ್ಪು ಕೂಡ ಈ ಅರೋಪಿಗಳ ವಿರುದ್ದವಾಗಿದೆ. ಇಂತಹ ಸನ್ನಿವೇಶದಲ್ಲಿ ಕೇಸ್ ವಾಪಾಸಾತಿ ಮಾಡಿದರೆ ಆರೋಪಿಗಳ ರಕ್ಷಣೆ ಮಾಡಿದಂತಾಗಿಲ್ಲವೇ?
ಕೇಸ್ ಮೆರಿಟ್ಸ್ ಆಧಾರದ ಮೇಲೆ ಎರಡೆರಡು ಬಾರಿ ಆರೋಪಿಗಳ ಅರ್ಜಿ ಹೈಕೋರ್ಟ್ ನಲ್ಲಿ ತಿರಸ್ಕೃತವಾದರೂ, ಸರ್ಕಾರ ಅಂತಹ ಕೇಸನ್ನು ಕೂಡ ವಾಪಾಸ್ ಪಡೆಯುತ್ತದೆ ಎಂದಾದರೆ, ಸರ್ಕಾರದ ಮೇಲೆ ಅದೆಂತಹ ಪ್ರಭಾವ ಬೀರಿರಬೇಕು?
ಕರ್ನಾಟಕದ ಇತಿಹಾಸದಲ್ಲೇ ಸಮರ್ಪಕ ಸಾಕ್ಷ್ಯಗಳು ಇರುವ ಇಂತಹ ಪ್ರಕರಣ ಹಿಂತೆಗೆದುಕೊಂಡಿರುವುದು ಎಲ್ಲೂ ಕಾಣದು. ಆದರೆ ವಾಮಮಾರ್ಗದ ಮೂಲಕ ಆರೋಪಿಗಳು ಕಾನೂನು ಕುಣಿಕೆಯಿಂದ ಬಚಾವಾಗಬಹುದು ಎಂಬ ಸಂದೇಶ ನೀಡಿದಂತಾಗಿಲ್ಲವೇ? ಈ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಗೆ ಅಪಚಾರವೆಸೆಗಿದಂತೆ ಅಲ್ಲವೇ ?
(ಲೇಖನದ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬ್ದಾರಿಯಾಗಿರುತ್ತಾರೆ, ಸಂ)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications