'ಕಲಬುರ್ಗಿ ಹತ್ಯೆ ತನಿಖೆ ಸಿಬಿಐಗೆ ವಹಿಸಲು ಸಿದ್ಧ'
ಬೆಂಗಳೂರು, ಡಿಸೆಂಬರ್ 03 : 'ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಸಿದ್ಧ. ಪ್ರತಿಪಕ್ಷಗಳಿಗೆ ಸಿಐಡಿ ತನಿಖೆಯಲ್ಲಿ ವಿಶ್ವಾಸವಿಲ್ಲದಿದ್ದರೆ, ಸಿಬಿಐಗೆ ವಹಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ
ಸಂಜೆ
ದೆಹಲಿಯಲ್ಲಿ
ಮಾತನಾಡಿದ
ಸಿದ್ದರಾಮಯ್ಯ
ಅವರು,
'ಸಿಐಡಿ
ಕಲಬುರ್ಗಿ
ಅವರ
ಹತ್ಯೆ
ಪ್ರಕರಣದ
ತನಿಖೆಯನ್ನು
ಉತ್ತಮವಾಗಿಯೇ
ನಡೆಸುತ್ತಿದೆ.
ಸಿಬಿಐಗೆ
ಒಪ್ಪಿಸಬೇಕು
ಎಂಬ
ಅಪೇಕ್ಷೆ
ಇದ್ದರೆ,
ಹಸ್ತಾಂತರಿಸಲು
ಸರ್ಕಾರ
ಸಿದ್ಧವಿದೆ'
ಎಂದರು.
[ಲೋಕಸಭೆಯಲ್ಲಿ
ಕಲಬುರ್ಗಿ
ಹತ್ಯೆ
ಪ್ರಸ್ತಾಪ,
ಸಿಬಿಐ
ತನಿಖೆ?]
ಸಿಬಿಐ ತನಿಖೆಗೆ ಒತ್ತಾಯ : ಮಂಗಳವಾರ ಲೋಕಸಭೆಯಲ್ಲಿ ಕಲಬುರ್ಗಿ ಅವರ ಹತ್ಯೆ ಬಗ್ಗೆ ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಅವರು ವಿಷಯ ಪ್ರಸ್ತಾಪಿಸಿದ್ದರು. 'ಕಲಬುರ್ಗಿ ಅವರ ಹತ್ಯೆಯಾಗಿ 93 ದಿನಗಳು ಕಳೆದಿವೆ. ಇದುವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು' ಎಂದು ಒತ್ತಾಯಿಸಿದ್ದರು. [ಕಲಬುರ್ಗಿ ಹತ್ಯೆಯ ತನಿಖೆ ವಿಳಂಬಕ್ಕೆ ಯಾರು ಕಾರಣ?]
ಕೇಂದ್ರ ಸರ್ಕಾರ ಸಿದ್ಧ : ಲೋಕಸಭೆಯಲ್ಲಿ ಉತ್ತರ ನೀಡಿದ್ದ ಗೃಹ ಸಚಿವ ರಾಜನಾಥ್ ಸಿಂಗ್ ಅವರು, 'ಕರ್ನಾಟಕ ಸರ್ಕಾರ ಬಯಸಿದರೆ ಕಲಬುರ್ಗಿ ಅವರ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ' ಎಂದು ಘೋಷಿಸಿದ್ದರು.
2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣ ನಗರದಲ್ಲಿನ ನಿವಾಸದಲ್ಲಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ವಿದ್ಯಾರ್ಥಿಗಳ ಸೋಗಿನಲ್ಲಿ ಮನೆಗೆ ಬಂದಿದ್ದ ಇಬ್ಬರು ಕಲಬುರ್ಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಸರ್ಕಾರ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದೆ.