ಗೌರಿ ಹತ್ಯೆ ಆರೋಪಿಗಳೇ ಕಲಬುರ್ಗಿ, ಪಾನ್ಸರೆ, ದಾಬೋಲ್ಕರ್ ಕೊಲೆಗಾರರು!
ಬೆಂಗಳೂರು, ಆಗಸ್ಟ್ 11: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬೆನ್ನುಹತ್ತಿರುವ ಎಸ್ಐಟಿ ಪೊಲೀಸರಿಗೆ ಇನ್ನೂ ಮೂರು ಹೈಪ್ರೊಫೈಲ್ ಹತ್ಯೆಗಳ ಗಟ್ಟಿ ಸುಳಿವು ದೊರೆತಿದೆ.
ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳೇ, ದೇಶಾದ್ಯಂತ ಭಾರಿ ಚರ್ಚೆ ಎಬ್ಬಿಸಿದ್ದ ಗೋವಿಂದ ಪಾನ್ಸರೆ, ನರೇಂದ್ರ ದಾಬೋಲ್ಕರ್, ಎಂಎಂ ಕಲಬುರಗಿ ಅವರ ಹತ್ಯೆಗೂ ಕಾರಣ ಎಂಬುದು ಎಸ್ಐಟಿ ತನಿಖೆಯಿಂದ ತಿಳಿದು ಬಂದಿದೆ.
ಮಡಿಕೇರಿಯಲ್ಲಿ ಬಂಧಿತನಾದ ರಾಜೇಶ್ ಬಂಗೇರ ಎಂಬಾತನೇ ಎಲ್ಲಾ ವಿಚಾರವಾದಿಗಳ ಕೊಲೆ ಮಾಡಿದ ಆರೋಪಿಗಳಿಗೆ ಶಸ್ತ್ರಾಸ್ತ್ರ ಚಲಾಯಿಸುವ ತರಬೇತಿ ಕೊಟ್ಟಿದ್ದು ಎಂದು ಎಸ್ಐಟಿ ಬಳಿ ಆತನೇ ಒಪ್ಪಿಕೊಂಡಿದ್ದಾನೆ.

ಎಂಎಲ್ಸಿ ಆಪ್ತಕಾರ್ಯದರ್ಶಿ ರಾಜೇಶ್ ಬಂಗೇರಾ
ಮಡಿಕೇರಿಯಲ್ಲಿ ಜುಲೈ 24 ರಂದು ಬಂಧಿತನಾದ ರಾಜೇಶ್ ಬಂಗೇರಾ (42) ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರ ಆಪ್ತ ಕಾರ್ಯದರ್ಶಿಯಾಗಿದ್ದ. ಈತನ ಬಂಧನವಾದಾಗ ಈತನ ಬಳಿ ಅಕ್ರಮ ಶಸ್ತ್ರಾಸ್ತ್ರ ಸಹ ಇದ್ದವು ಎನ್ನಲಾಗಿದೆ.ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಎಂಎಲ್ಸಿ ವೀಣಾ ಅವರು, ರಾಜೀವ್ ಅವರ ಈ ಕೃತ್ಯದ ಬಗ್ಗೆ ತಮಗೆ ಅರಿವಿರಲಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು.

ಬಂದೂಕು ಚಲಾಯಿಸುವ ತರಬೇತಿ ನೀಡುತ್ತಿದ್ದ
ಗೌರಿ ಮೇಲೆ ಗುಂಡು ಹಾರಿಸಿದ್ದ ಪರಶುರಾಮ್ ವಾಘ್ಮೋರೆಗೆ ಬಂದೂಕು ಚಲಾಯಿಸುವುದನ್ನು ರಾಜೇಶ್ ಬಂಗೇರಾ ಕಲಿಸಿದ್ದ. ಎಂ.ಎಂ.ಕಲಬುರಗಿ, ಗೋವಿಂದ ಪಾನ್ಸರೆ, ನರೇಂದ್ರ ದಾಬೋಲ್ಕರ್ ಅವರ ಕೊಲೆ ಮಾಡಿದ ಹಂತಕರಿಗೂ ಬಂದೂಕು ಚಲಾಯಿಸುವುದನ್ನು ಕಲಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಅಮೋಲ್ ಕಾಳೆಗೂ ರಾಜೇಶ್ಗೂ ಹಳೆಯ ನಂಟು
ಗೌರಿ ಹತ್ಯೆಯ ಪ್ರಮುಖ ಆರೋಪಿ, ಹತ್ಯೆ ಹಿಂದಿನ ಸಂಚಿನ ಮಾಸ್ಟರ್ ಮೈಂಡ್ ಅಮೋಲ್ ಕಾಳೆಗೂ ರಾಜೇಶ್ ಬಂಗೇರಾಗೂ ಹಳೆಯ ಪರಿಚಯ ಇದ್ದು, ಅಮೋಲ್ ಕಾಳೆ ಹಾಗೂ ನಿಹಾಲ್ (ತಲೆಮರೆಸಿಕೊಂಡಿದ್ದಾನೆ) ಯೋಜಿಸಿದ ಎಲ್ಲ ಧರ್ಮ ಉದ್ದೇಶಿತ ಕೊಲೆಗಳಿಗೆ ರಾಜೇಶ್ ಬಂಗೇರನೇ ಶಸ್ತ್ರಾಸ್ತ್ರ ತರಬೇತಿ ನೀಡಿದ್ದ.

ಮೋಹನ್ ನಾಯಕ್ ನೀಡಿದ್ದ ಸುಳಿವು
ಹತ್ಯೆಗೆ ಗುಂಡುಗಳನ್ನು ಸರಬರಾಜು ಮಾಡಿದ್ದ ಮಡಿಕೇರಿ ಮೂಲದ ನಾಟಿ ವೈದ್ಯ ಮೋಹನ್ ನಾಯಕ್ ಎಂಬಾತ ನೀಡಿದ ಸುಳಿವಿನ ಆಧಾರದ ಮೇಲೆ ಮಡಿಕೇರಿಯ ಪಾಲೂರು ಗ್ರಾಮ ರಾಜೇಶ ಬಂಗೇರಾನನ್ನು ಬಂಧಿಸಲಾಗಿತ್ತು. ಗೌರಿ ಹತ್ಯೆ ತನಿಖೆ ಇನ್ನೇನು ಕೊನೆ ತಲುಪಿದೆ ಎಂದಾಗ, ಈ ಮುಂಚೆ ನಡೆದಿದ್ದ ಹಲವು ಕೊಲೆಗಳ ಪ್ರಕರಣ ಬಯಲಾಗಿದ್ದು, ವಿಚಾರಣೆ ಇನ್ನೂ ಮುಂದುವರೆಯುವ ಸಾಧ್ಯತೆ ಇದೆ.

ಬಂದೂಕಿಗಾಗಿ ಹುಡುಕಾಟ
ಗೌರಿ ಹತ್ಯೆ ತನಿಖೆಯನ್ನು ಚುರುಕಾಗಿ ಮಾಡುತ್ತಿರುವ ಎಸ್ಐಟಿಗೆ ಹತ್ಯೆಗೆ ಬಳಸಿದ್ದ ಬಂದೂಕು ದೊರೆತರೆ ಅತ್ಯಂತ ಪ್ರಮುಖ ಸಾಕ್ಷಿ ದೊರೆದಂತಾಗುತ್ತದೆ. ಅಲ್ಲದೆ ತಲೆ ಮರೆಸಿಕೊಂಡಿರುವ ಹತ್ಯೆಗಳ ಮಾಸ್ಟರ್ ಮೈಂಡ್ ನಿಹಾಲ್ ಅಲಿಯಾಸ್ ದಾದಾ ಸಹ ಪೊಲೀಸರ ಬಲೆಗೆ ಬೀಳಬೇಕಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications