Video: ಆನೆ ದಾಳಿಯಿಂದ ತಪ್ಪಿಸಿಕೊಂಡ ವ್ಯಕ್ತಿಗೆ ಆರಣ್ಯ ಇಲಾಖೆಯಿಂದ ₹25000 ದಂಡ: ಜಾಗೃತಿ ವಿಡಿಯೋ..
ಬೆಂಗಳೂರು, ಆಗಸ್ಟ್ 12: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ಸಿಕ್ಕು ಕೂಡಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದ ವ್ಯಕ್ತಿಯನ್ನು ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಅರಣ್ಯ ಪ್ರದೇಶಗಳ ನಿಯಮ ಉಲ್ಲಂಘಿಸಿದ ಆನೆ ಮುಂದೆ ಸೆಲ್ಫಿ ತೆಗೆಯಲು ಹೋಗಿ ಅನಾಹುತ ತಂದುಕೊಂಡಿದ್ದ ವ್ಯಕ್ತಿಗೆ ಬರೋಬ್ಬರಿ 25,000 ರೂಪಾಯಿ ದಂಡ ವಿಧಿಸಿದೆ. ಸಾಲದೆಂಬಂತೆ ಆ ವ್ಯಕ್ತಿಯಿಂದಲೇ ಮಹತ್ವದ ವಿಡಿಯೋ ಮಾಡಿಸಲಾಗಿದೆ.
ಹೌದು, ಬಂಡೀಪುರ ಅರಣ್ಯದ ರಸ್ತೆಯಲ್ಲಿ ಕಾಡಾನೆ ದಾಳಿಗೆ ಒಳಗಾಗಿದ್ದ ವ್ಯಕ್ತಿಯ ವಿಡಿಯೋ ವೈರಲ್ಆಗಿತ್ತು. ಈ ಮೂಲತಃ ಕೇರಳದವರು ಎಂದು ಕೊಳ್ಳಲಾಗಿತ್ತು. ಆದರೆ ಆತ ನಂಜನಗೂಡಿನ ವ್ಯಕ್ತಿ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳಿಂದ ಗೊತ್ತಾಗಿದೆ. ಅರಣ್ಯ ಇಲಾಖೆ ನಿಯಮ ಮೀರಿ ಆನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿದ್ದಕ್ಕಾಗಿ ಈ ವ್ಯಕ್ತಿಗೆ 25,000 ರೂ. ಹಣವನ್ನು ದಂಡವಾಗಿ ಪಡೆಯಲಾಗಿದೆ. ಈ ರೀತಿ ಮಾಡದಂತೆ ಅವರಿಂದಲೇ ಜಾಗೃತಿ ವಿಡಿಯೋ ಮಾಡಿಸಲಾಗಿದೆ.

ನಾನು ಬಂಕಾಪುರ ದೇವಸ್ಥಾನಕ್ಕೆ ಹೋಗಿ ವಾಪಾಸ್ ಬಂಡೀಪುರ ಅರಣ್ಯ ಪ್ರದೇದ ರಸ್ತೆಯಲ್ಲಿ ಬರುವಾಗ, ಮೋಜು ಮಸ್ತಿಗೆಂದು ಕಾಡಾನೆ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದೆ. ಈ ವೇಳೆ ಕಾಡಾನೆ ದಾಳಿ ಮಾಡಲು ಮುಂದಾಯಿತು. ಆ ವೇಳೆ ಪ್ರಾಣ ಉಳಿದಿದ್ದೆ ಹೆಚ್ಚು. ಯಾರು ಸಹ ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ. ನನ್ನಂತೆ ಯಾರು ಅರಣ್ಯ ಪ್ರದೇಶದ ರಸ್ತೆಯಲ್ಲ ಇಳಿದು ಇಂತಹ ಉಚ್ಚಾಟಕ್ಕೆ ಮುಂದಾಗಬೇಕು. ಅರಣ್ಯ ಇಲಾಖೆ ಕ್ರಮ ಕೈಗೊಂಡು ದಂಡ ವಿಧಿಸಿದೆ. ಜೀವ ಮುಖ್ಯ ಎಂದು ಆ ವ್ಯಕ್ತಿಯಿಂದ ಜಾಗೃತಿ ವಿಡಿಯೋ ಮಾಡಿಸಲಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಎರಡು ದಿನಗಳ ಹಿಂದೆ ಬಂಡೀಪುರ ರಸ್ತೆಯಲ್ಲಿ ಸಂಚರಿಸುವಾಗ ಕಾಡಾನೆ ಎದುರಾಗಿತ್ತು. ಎರಡು ಬದಿಯಲ್ಲಿ ಆನೆಯಿಂದ ದೂರಕ್ಕೆ ವಾಹನಗಳು ನಿಂತುಕೊಂಡಿದ್ದವು. ಆಗ ಈ ನಂಜನಗೂಡಿನ ವ್ಯಕ್ತಿ ಕಾಡಾನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿದ್ದ. ವ್ಯಕ್ತಿಯನ್ನು ನೋಡಿ ರೊಚ್ಚಿಗೆದ್ದ ಆನೆ ಅಟ್ಟಿಸಿಕೊಂಡು ಬಂದು ಕಾಡಾನೆ ದಾಳಿಗೆ ಒಳಗಾಗಿದ್ದ. ಅದೃಷ್ಟವಶಾತ್. ಆನೆ ಮೈಮೇಲೆ ಎರಗಿದಾಗ ಸಣ್ಣಪುಣ್ಣ ಗಾಯಗಳಾಗಿವೆ. ಪೂರ್ತಿ ದೇಹದ ಮೇಲೆ ಹತ್ತಿ ನಿಂತಿದ್ದರೆ ಜೀವ ಹಾನಿ ಸಂಭವಿಸುವ ಸಾಧ್ಯತೆ ಇತ್ತು. ಈ ಘಟನೆ ಅಲ್ಲಿಯೇ ನಿಂತಿದ್ದ ಹಲವರು ವಿಡಿಯೋ ಮಾಡಿದ್ದಾರೆ. ಆನೆ ಮುಂದೆ ತೆರಳುತ್ತಿದ್ದ ಕಾರಿನೊಳಗಿದ್ದವರು ವಿಡಿಯೋ ಮಾಡಿದ್ದರು.
ಮೊನ್ನೆ ಆನೆಯ ತುಳಿತದಿಂದ ಸ್ವಲ್ಪದರಲ್ಲಿ ಪಾರಾದ ವ್ಯಕ್ತಿಯನ್ನು ನೆನ್ನೆ ಅರಣ್ಯ ಇಲಾಖೆ ಪತ್ತೆಹಚ್ಚಿ ದಂಡ ವಸೂಲಿ ಮಾಡಿದೆ.#Bandipur #ElephantAttack pic.twitter.com/1sGY90uCSI
— ಸನಾತನ (@sanatan_kannada) August 12, 2025
ಕೆಲವರು ಅರಣ್ಯ ಇಲಾಖೆಗೆ ಟ್ಯಾಗ್ ಮಾಡಿ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಘಟನೆ ಬಳಿಕ ಜೀವ ಉಳಿಸಿಕೊಂಡು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಕಣ್ತಪ್ಪಿಸಿಕೊಂಡಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಪತ್ತೆ ಮಾಡಿ. ಅವರಿಗೆ 25000 ರೂಪಾಯಿ ದಂಡ ವಿಧಿಸಿದೆ. ಕಾಡಿನ ಒಳಗೆ ಯಾರು ಇಂತಹ ಸಾಹಸ ಮಾಡದಂತೆ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.
-
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆಲುವು: ಎರಡು ಬೌಂಡರಿಗಳ ಬಗ್ಗೆ ಯಾರೂ ಮಾತನಾಡಲಿಲ್ಲ ಎಂದು ಬೂಮ್ರಾ ಬೇಸರ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು? -
Viral : ರ್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ 'ಕ್ಲಾಸ್ ಟಾಪರ್' ಈಗ ರ್ಯಾಪಿಡೋ ರೈಡರ್ -
High Speed Rail: ಬೆಂಗಳೂರು-ಹೈದರಾಬಾದ್ ತಲುಪಲು 2 ಗಂಟೆ ಸಾಕು, 3 ಕಡೆ ಎಂಟ್ರಿ, ಮಹತ್ವದ ಅಪ್ಡೇಟ್ -
Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ -
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
ಹೊಸ ಮನೆಯಲ್ಲಿ ರಶ್ಮಿಕಾ-ವಿಜಯ್ ಸತ್ಯನಾರಾಯಣ ಪೂಜೆ: ಹುಟ್ಟೂರಿಗೆ ಬಂದ ನವದಂಪತಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ












Click it and Unblock the Notifications