Video: ಆನೆ ದಾಳಿಯಿಂದ ತಪ್ಪಿಸಿಕೊಂಡ ವ್ಯಕ್ತಿಗೆ ಆರಣ್ಯ ಇಲಾಖೆಯಿಂದ ₹25000 ದಂಡ: ಜಾಗೃತಿ ವಿಡಿಯೋ..
ಬೆಂಗಳೂರು, ಆಗಸ್ಟ್ 12: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ಸಿಕ್ಕು ಕೂಡಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದ ವ್ಯಕ್ತಿಯನ್ನು ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಅರಣ್ಯ ಪ್ರದೇಶಗಳ ನಿಯಮ ಉಲ್ಲಂಘಿಸಿದ ಆನೆ ಮುಂದೆ ಸೆಲ್ಫಿ ತೆಗೆಯಲು ಹೋಗಿ ಅನಾಹುತ ತಂದುಕೊಂಡಿದ್ದ ವ್ಯಕ್ತಿಗೆ ಬರೋಬ್ಬರಿ 25,000 ರೂಪಾಯಿ ದಂಡ ವಿಧಿಸಿದೆ. ಸಾಲದೆಂಬಂತೆ ಆ ವ್ಯಕ್ತಿಯಿಂದಲೇ ಮಹತ್ವದ ವಿಡಿಯೋ ಮಾಡಿಸಲಾಗಿದೆ.
ಹೌದು, ಬಂಡೀಪುರ ಅರಣ್ಯದ ರಸ್ತೆಯಲ್ಲಿ ಕಾಡಾನೆ ದಾಳಿಗೆ ಒಳಗಾಗಿದ್ದ ವ್ಯಕ್ತಿಯ ವಿಡಿಯೋ ವೈರಲ್ಆಗಿತ್ತು. ಈ ಮೂಲತಃ ಕೇರಳದವರು ಎಂದು ಕೊಳ್ಳಲಾಗಿತ್ತು. ಆದರೆ ಆತ ನಂಜನಗೂಡಿನ ವ್ಯಕ್ತಿ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳಿಂದ ಗೊತ್ತಾಗಿದೆ. ಅರಣ್ಯ ಇಲಾಖೆ ನಿಯಮ ಮೀರಿ ಆನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿದ್ದಕ್ಕಾಗಿ ಈ ವ್ಯಕ್ತಿಗೆ 25,000 ರೂ. ಹಣವನ್ನು ದಂಡವಾಗಿ ಪಡೆಯಲಾಗಿದೆ. ಈ ರೀತಿ ಮಾಡದಂತೆ ಅವರಿಂದಲೇ ಜಾಗೃತಿ ವಿಡಿಯೋ ಮಾಡಿಸಲಾಗಿದೆ.

ನಾನು ಬಂಕಾಪುರ ದೇವಸ್ಥಾನಕ್ಕೆ ಹೋಗಿ ವಾಪಾಸ್ ಬಂಡೀಪುರ ಅರಣ್ಯ ಪ್ರದೇದ ರಸ್ತೆಯಲ್ಲಿ ಬರುವಾಗ, ಮೋಜು ಮಸ್ತಿಗೆಂದು ಕಾಡಾನೆ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದೆ. ಈ ವೇಳೆ ಕಾಡಾನೆ ದಾಳಿ ಮಾಡಲು ಮುಂದಾಯಿತು. ಆ ವೇಳೆ ಪ್ರಾಣ ಉಳಿದಿದ್ದೆ ಹೆಚ್ಚು. ಯಾರು ಸಹ ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ. ನನ್ನಂತೆ ಯಾರು ಅರಣ್ಯ ಪ್ರದೇಶದ ರಸ್ತೆಯಲ್ಲ ಇಳಿದು ಇಂತಹ ಉಚ್ಚಾಟಕ್ಕೆ ಮುಂದಾಗಬೇಕು. ಅರಣ್ಯ ಇಲಾಖೆ ಕ್ರಮ ಕೈಗೊಂಡು ದಂಡ ವಿಧಿಸಿದೆ. ಜೀವ ಮುಖ್ಯ ಎಂದು ಆ ವ್ಯಕ್ತಿಯಿಂದ ಜಾಗೃತಿ ವಿಡಿಯೋ ಮಾಡಿಸಲಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಎರಡು ದಿನಗಳ ಹಿಂದೆ ಬಂಡೀಪುರ ರಸ್ತೆಯಲ್ಲಿ ಸಂಚರಿಸುವಾಗ ಕಾಡಾನೆ ಎದುರಾಗಿತ್ತು. ಎರಡು ಬದಿಯಲ್ಲಿ ಆನೆಯಿಂದ ದೂರಕ್ಕೆ ವಾಹನಗಳು ನಿಂತುಕೊಂಡಿದ್ದವು. ಆಗ ಈ ನಂಜನಗೂಡಿನ ವ್ಯಕ್ತಿ ಕಾಡಾನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿದ್ದ. ವ್ಯಕ್ತಿಯನ್ನು ನೋಡಿ ರೊಚ್ಚಿಗೆದ್ದ ಆನೆ ಅಟ್ಟಿಸಿಕೊಂಡು ಬಂದು ಕಾಡಾನೆ ದಾಳಿಗೆ ಒಳಗಾಗಿದ್ದ. ಅದೃಷ್ಟವಶಾತ್. ಆನೆ ಮೈಮೇಲೆ ಎರಗಿದಾಗ ಸಣ್ಣಪುಣ್ಣ ಗಾಯಗಳಾಗಿವೆ. ಪೂರ್ತಿ ದೇಹದ ಮೇಲೆ ಹತ್ತಿ ನಿಂತಿದ್ದರೆ ಜೀವ ಹಾನಿ ಸಂಭವಿಸುವ ಸಾಧ್ಯತೆ ಇತ್ತು. ಈ ಘಟನೆ ಅಲ್ಲಿಯೇ ನಿಂತಿದ್ದ ಹಲವರು ವಿಡಿಯೋ ಮಾಡಿದ್ದಾರೆ. ಆನೆ ಮುಂದೆ ತೆರಳುತ್ತಿದ್ದ ಕಾರಿನೊಳಗಿದ್ದವರು ವಿಡಿಯೋ ಮಾಡಿದ್ದರು.
ಮೊನ್ನೆ ಆನೆಯ ತುಳಿತದಿಂದ ಸ್ವಲ್ಪದರಲ್ಲಿ ಪಾರಾದ ವ್ಯಕ್ತಿಯನ್ನು ನೆನ್ನೆ ಅರಣ್ಯ ಇಲಾಖೆ ಪತ್ತೆಹಚ್ಚಿ ದಂಡ ವಸೂಲಿ ಮಾಡಿದೆ.#Bandipur #ElephantAttack pic.twitter.com/1sGY90uCSI
— ಸನಾತನ (@sanatan_kannada) August 12, 2025
ಕೆಲವರು ಅರಣ್ಯ ಇಲಾಖೆಗೆ ಟ್ಯಾಗ್ ಮಾಡಿ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಘಟನೆ ಬಳಿಕ ಜೀವ ಉಳಿಸಿಕೊಂಡು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಕಣ್ತಪ್ಪಿಸಿಕೊಂಡಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಪತ್ತೆ ಮಾಡಿ. ಅವರಿಗೆ 25000 ರೂಪಾಯಿ ದಂಡ ವಿಧಿಸಿದೆ. ಕಾಡಿನ ಒಳಗೆ ಯಾರು ಇಂತಹ ಸಾಹಸ ಮಾಡದಂತೆ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications