ಭಟ್ರು ಬರೀತಾರೆ ಎಲೆಕ್ಷನ್ ಹಾಡು, ಚುನಾವಣಾ ರಾಯಭಾರಿ ರಾಹುಲ್ ದ್ರಾವಿಡ್
ಬೆಂಗಳೂರು,ಮಾರ್ಚ್ 27: ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ ಹಾಗಾಗಿ ಇದನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವು ಹೊಸ ಕ್ರಮಗಳನ್ನು ಕೈಗೊಂಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಯುವ ಮತದಾರರು ದಾಖಲೆ ಸಂಖ್ಯೆಯಲ್ಲಿ ಹೆಚ್ಚಿರುವ ಕಾರಣ ಮತಗಟ್ಟೆಯತ್ತ ಅವರನ್ನು ಸೆಳೆಯಲು, ಹಾಗೂ ಮತದಾನದ ಬಗ್ಗೆ ಜಾಗೃತಿಯನ್ನು ಅವರ ಧಾಟಿಯಲ್ಲೇ ಅವರಿಗೆ ತಲುಪಿಸಲು ಚುನಾವಣೆ ಥೀಮ್ ಸಾಂಗ್ ಬರೆಸುತ್ತಿದ್ದು, ಅದರ ಜವಾಬ್ದಾರಿಯನ್ನು ವಿಕಟ ಕವಿ ಯೋಗರಾಜ್ ಭಟ್ಟರಿಗೆ ನೀಡಿದೆ.
ನಿರ್ದೇಶಕ, ಗೀತ ರಚನೆಕಾರ ಯೋಗರಾಜ್ ಭಟ್ ಅವರು ಚುನಾವಣೆಗಾಗಿ ತಮ್ಮ ಎಂದಿನ 'ಭಟ್ರ ಶೈಲಿ'ಯಲ್ಲಿ ಹಾಡೊಂದು ಬರೆಯಲಿದ್ದು, ಆದಷ್ಟು ಶೀಘ್ರವಾಗಿ ಅದು ಬಿಡುಗಡೆ ಕಾಣಲಿದೆ.

ಪಾರದರ್ಶಕ ಮತ್ತು ನ್ಯಾಯಯುತ ಚುನಾವಣೆ ನಡೆಸುವ ಧ್ಯೇಯ ಹೊಂದಿರುವ ರಾಜ್ಯ ಚುನಾವಣಾ ಆಯೋಗ 2018ರ ಕರ್ನಾಟಕ ವಿಧಾನಸಭಾ ಚುನಾವಣಾ ರಾಯಭಾರಿಯಾಗಿ ಸಜ್ಜನ ಕ್ರಿಕೆಟಿಗ, ಜವಾಬ್ದಾರಿಯುತ ನಾಗರೀಕ ರಾಹುಲ್ ದ್ರಾವಿಡ್ ಅವರನ್ನು ಆರಿಸಿಕೊಂಡಿದೆ.
ಮತದಾರರ ಸಂಖ್ಯೆ ಹೆಚ್ಚಾಗಿರುವುದು, ಜೊತೆಗೆ ಈ ಬಾರಿ ರಾಜ್ಯದೆಲ್ಲೆಡೆ ಒಂದೇ ಹಂತದ ಚುನಾವಣೆ ಇರುವುದರಿಂದ ರಾಜ್ಯ ಚುನಾವಣೆ ಆಯೋಗದ ಮೇಲೆ ಜವಾಬ್ದಾರಿ ಹೆಚ್ಚಿದ್ದು, ಪಾರದರ್ಶಕ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಹಲವು ಹೊಸ ಕ್ರಮಗಳನ್ನು ಚುನಾವಣಾ ಆಯೋಗ ಈ ಬಾರಿ ಹೊಸದಾಗಿ ಜಾರಿಗೆ ತಂದಿದೆ.
ಪ್ರಮುಖ ಕ್ರಮಗಳ ಪಟ್ಟಿ ಇಲ್ಲಿದೆ....
* 450 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇದು ರಾಜ್ಯದ ಚುನಾವಣಾ ಇತಿಹಾಸದಲ್ಲೇ ಮೊದಲು.
* ಮೊದಲ ಬಾರಿಗೆ ಅಂಗವಿಕಲ ರಾಜ್ಯ ಸರ್ಕಾರಿ ನೌಕರರು ರಾಜ್ಯದ ಕೆಲವು ಮತಗಟ್ಟೆಗಳಲ್ಲಿ ಕೆಲವು ವಿಶೇಷ ಕರ್ತವ್ಯಗಳಿಗೆ ನೇಮಕವಾಗಲಿದ್ದಾರೆ.
* ಸಜ್ಜನ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು 2018ರ ಕರ್ನಾಟಕ ವಿಧಾನಸಭೆ ಚುನಾವಣೆಯ ರಾಯಭಾರಿ.
* ನಿರ್ದೇಶಕ, ಗೀತರಚನೆಕಾರ ಯೋಗರಾಜ್ ಭಟ್ ಅವರು ಬರೆದಿರುವ ಹಾಡು ಈ ಬಾರಿಯ ಚುನಾವಣೆಯ ಥೀಮ್ ಸಾಂಗ್ ಆಗಲಿದೆ.
* ಬುಡಕಟ್ಟು ಮತದಾರರು ಹೆಚ್ಚಿಗಿರುವ ಮತಗಟ್ಟೆಗಳಲ್ಲಿ ವಿಶಿಷ್ಟ ರೀತಿಯ ಮತಗಟ್ಟೆ ರಚನೆ, ಸ್ಥಳೀಯ ಸಂಸ್ಕೃತಿಯನ್ನು ಆಚರಣೆಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಮತಗಟ್ಟೆ ವಿನ್ಯಾಸ.
* ಮೊಬೈಲ್ ಚುನಾವಣಾ ವೀಕ್ಷಕರು ಈ ಬಾರಿ ಮೊದಲ ಬಾರಿಗೆ ಜಿಪಿಎಸ್ ಅಳವಡಿತ ವಾಹನಗಳನ್ನು ಬಳಸಲಿದ್ದಾರೆ.
* ಜಿಐಎಸ್ ತಂತ್ರಜ್ಞಾನದ ಮೂಲಕ ಮತಗಟ್ಟೆಯ ಕ್ಷಣ-ಕ್ಷಣದ ವಿವರ ಮತ್ತು ಡಿಜಿಟಲ್ ನಕ್ಷೆಯ ರಚಿಸಿ ನಿಗಾ.
* ಎಲ್ಲಾ ವಿಧಾನಸಭೆ ಕ್ಷೇತ್ರಗಳ ಡಿಜಿಟಲ್ ನಕ್ಷೆ ತಯಾರಿ.
* ಅಂಗವಿಕಲ ಮತದಾರರ ವಿಶೇಷ ಪಟ್ಟಿ ತಯಾರಿ, ಮತಗಟ್ಟೆ ಬಳಿ ಅಂಗವಿಕಲರ ಸ್ನೇಹಿ ವ್ಯವಸ್ಥೆ ರಚನೆ, ವೀಲ್ ಚೇರ್ ಸಹ ಲಭ್ಯ ಇರುವಂತೆ ನಿಗಾ, ಅಂಗವಿಕಲ ಮತದಾರರು ವೀಲ್ ಚೇರ್ ಅನ್ನು ಮುಂಗಡ ಕಾಯ್ದಿರಿಸಿಕೊಳ್ಳಲು ಅವಕಾಶ.
* ಎಸ್ಎಂಎಸ್ ಮೂಲಕ ಮತಗಟ್ಟೆ ಮಾಹಿತಿ, ಆಪ್ ಮೂಲಕ ಮತಗಟ್ಟೆ ಮಾಹಿತಿ ಮತ್ತು ನಕ್ಷೆ.
* ಹೆಚ್ಚು ಮತದಾರರಿರುವ ಕ್ಷೇತ್ರದಲ್ಲಿ ಸರತಿ ಸಾಲಿನ ಬಗ್ಗೆಯೂ ಎಸ್ಎಂಎಸ್ ಹಾಗೂ ಮೊಬೈಲ್ ಆಪ್ನಲ್ಲಿ ಮಾಹಿತಿ.
* ತಂತ್ರಜ್ಞಾನ ಬಳಕೆ ಮೂಲಕ ಎಲ್ಲಾ ಕ್ಷೇತ್ರದ ಚುನಾವಣಾ ಮಾಹಿತಿ ಒಂದೇ ಸೂರಿನಡಿ ಲಬ್ಯವಾಗುವಂತೆ ಸೌಲಭ್ಯ.
* ಚುನಾವಣೆ ಮತ್ತು ಮತದಾನ ನಡೆಯುವ ಸಂದರ್ಭ ಬರುವ ದೂರುಗಳನ್ನು ಜಿಐಎಸ್ ತಂತ್ರಜ್ಞಾನ ಬಳಸಿ ಶೀಘ್ರವೇ ಬಗೆ ಹರಿಸುವ ಪ್ರಯತ್ನ.
* ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ಬಗ್ಗೆ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳಿಗೆ ರಾಜ್ಯದಾದ್ಯಂತ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳು.
-
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಬೆಂಗಳೂರು ನಾಗರಿಕರೇ ಗಮನಿಸಿ; ಪರಿಷ್ಕೃತ ಕರಡು ಮತದಾರರ ಪಟ್ಟಿ- ಅಹವಾಲು, ಆಕ್ಷೇಪಣೆ ಆಹ್ವಾನ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications