ಬೆಳಗಾವಿ ಅಧಿವೇಶನ : ಹೋರಾಟಕ್ಕೆ ಸಜ್ಜಾದ ಕಬ್ಬು ಬೆಳೆಗಾರರು
ಬೆಂಗಳೂರು, ಜೂ. 15 : ಬೆಳಗಾವಿಯಲ್ಲಿ ಜೂನ್ 29ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶನ ರೈತ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಎರಡು ವರ್ಷಗಳಿಂದ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬು ಬೆಳೆಗಾರರ ಬಾಕಿ ಹಣವನ್ನು ಪಾವತಿ ಮಾಡದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ
ಬೆಂಗಳೂರಿನ
ಫ್ರೀಡಂಪಾರ್ಕ್ನಲ್ಲಿ
ನಡೆದ
ಕಬ್ಬು
ಬೆಳೆಗಾರರ
ಸಭೆಯಲ್ಲಿ
ಈ
ಕುರಿತು
ತೀರ್ಮಾನ
ಕೈಗೊಳ್ಳಲಾಗಿದೆ.
ಕಬ್ಬು
ಬೆಳಗಾರರ
ಸಂಘದ
ಅಧ್ಯಕ್ಷ
ಕುರುಬೂರು
ಶಾಂತಕುಮಾರ್
ನೇತತ್ವದಲ್ಲಿ
ನಡೆದ
ಸಭೆಯಲ್ಲಿ
ರಾಜ್ಯದ
ವಿವಿಧ
ಭಾಗಗಳಿಂದ
ಆಗಮಿಸಿದ್ದ
ರೈತ
ಮುಖಂಡರು,
ಕಬ್ಬು
ಬೆಳೆಗಾರರು
ಪಾಲ್ಗೊಂಡಿದ್ದರು.
[ಕೀಟನಾಶಕ
ಸೇವಿಸಿ
ಬೆಳಗಾವಿಯಲ್ಲಿ
ರೈತ
ಆತ್ಮಹತ್ಯೆ]
ಜೂನ್ 29ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ನಡೆಯಲಿದೆ. ಕಬ್ಬು ಬೆಳೆಗಾರರ ಬಾಕಿ ಪಾವತಿ ಮಾಡದಿದ್ದರೆ ಜೂ.29ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರೈತರು ಎಚ್ಚರಿಕೆ ನೀಡಿದರು. [ಸಿದ್ದರಾಮಯ್ಯ ಸರ್ಕಾರಕ್ಕೆ ಸಕ್ಕರೆ ಕಾಯಿಲೆ!]
ಕಬ್ಬು
ಬೆಳೆಗಾರರ
ಇತರ
ಬೇಡಿಕೆಗಳು
*
ಕಾರ್ಖಾನೆಗಳು
4,600
ಕೋಟಿ
ಬಾಕಿ
ಹಣವನ್ನು
10
ದಿನಗಳೊಳಗೆ
ಬಿಡುಗಡೆ
ಮಾಡಬೇಕು.
*
ಬೆಳೆ
ನಷ್ಟದಿಂದ
ಆತ್ಮಹತ್ಯೆ
ಮಾಡಿಕೊಂಡ
ರೈತ
ಗುರುನಾಥ್
ಕುಟುಂಬಕ್ಕೆ
10
ಲಕ್ಷ
ಪರಿಹಾರ
ನೀಡಬೇಕು
*
ಸಕ್ಕರೆ
ಕಾರ್ಖಾನೆ
ಮಾಲೀಕರ
ವಿರುದ್ಧ
ಕ್ರಿಮಿನಲ್
ಮೊಕದ್ದಮೆ
ದಾಖಲಿಸಬೇಕು
ರೈತ ಆತ್ಮಹತ್ಯೆ ಮಾಡಿಕೊಂಡಿದ್ದ : 2013ರಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಮಯದಲ್ಲಿ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಲು ಮತ್ತು ನಷ್ಟ ಹೊಂದಿದ ಹತ್ತಿ ಬೆಳೆಯುವ ರೈತರಿಗೆ ಪರಿಹಾರ ಒದಗಿಸಲು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ರೈತ ವಿಠಲ ಅರಭಾವಿ ಸುವರ್ಣ ವಿಧಾನಸೌಧದ ಮುಂದೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಅಂದಹಾಗೆ ಈ ಬಾರಿಯ ಮುಂಗಾರು ಅಧಿವೇಶನ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಜೂನ್ 29ರಿಂದ ಜುಲೈ 10 ರವರೆಗೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮತ್ತು ಜುಲೈ 13 ರಿಂದ 24 ರವರೆಗೆ ಬೆಂಗಳೂರಿನಲ್ಲಿ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.