ನಕಲಿ ಬಿತ್ತನೆ ಬೀಜ ಆರೋಪ; ಲಕ್ಷಾಂತರ ರೂಪಾಯಿ ಆಲೂಗಡ್ಡೆ ಬೆಳೆ ನಾಶ ಮಾಡಿದ ರೈತರು

ಕೋಲಾರ, ಅಕ್ಟೋಬರ್‌ 27: ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬಿತ್ತನೆ ಮಾಡಿ ಒಂದೂವರೆ ತಿಂಗಳಾದ್ರೂ ಇನ್ನೂ ಆಲೂಗಡ್ಡೆ ಬರದ ಕಾರಣ ಹತಾಶೆಯಿಂದ ಆಲೂಗಡ್ಡೆ ಬೆಳೆಯನ್ನು ರೋಟರಿ ಮೂಲಕ ನಾಶ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೌದು, ಆಲೂಗಡ್ಡೆ ಬೆಳೆಯಿಂದ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಹಾಗೇ ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣಕ್ಕೆ ಬೀಜ ಕಾಯಿದೆ ಜಾರಿಗೆ ತನ್ನಿ, ನಕಲಿ ಆಲೂಗಡ್ಡೆ ಮಾರಾಟ ಮಾಡಿರುವ ವ್ಯಾಪಾರಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ನೊಂದ ರೈತರು ಒತ್ತಾಯಿಸಿದರು.

Fake Seed Distribution Allegation In Kolar

ಮುಳಬಾಗಿಲು ತಾಲೂಕಿನ ಶೀಗೇಹಳ್ಳಿ ಸುತ್ತಮುತ್ತಲ ನೂರಾರು ರೈತರ ಸಾವಿರಾರು ಎಕರೆ ಆಲೂಗಡ್ಡೆ ಬೆಳೆ ನಷ್ಟವಾಗಿದೆ. ಬರ ಪರಿಸ್ಥಿತಿ, ಲೋಡ್‌ ಶೆಡ್ಡಿಂಗ್ ಸಂಕಷ್ಟದ ನಡುವೆ ಖಾಸಗಿ ಸಾಲ ಮಾಡಿ ಪ್ರತಿ ಮೂಟೆ ಬಿತ್ತನೆ ಆಲೂಗಡ್ಡೆಗೆ 2,700 ರಿಂದ 3000 ರೂಪಾಯಿ ಹಣ ನೀಡಿ ಖರೀದಿ ಮಾಡಿ ಬಿತ್ತನೆ ಮಾಡಿದ್ದೇವೆ. ಆದ್ರೆ ಬಿತ್ತನೆ ಮಾಡಿ 60 ದಿನವಾದರೂ ಕನಿಷ್ಠ ಗಡ್ಡೆ ಬಿಡದೆ ಸೊಪ್ಪಿನ ತೋಟವಾಗಿ ಬೆಳೆದಿದ್ದರೂ ನಮ್ಮ ಕಣ್ಣೀರಿನ ನೋವನ್ನು ತೋಟಗಾರಿಕೆ, ಎಪಿಎಂಸಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ನೊಂದ ರೈತರು ಅಳಲು ತೋಡಿಕೊಂಡರು.

ಪ್ರತಿ ವರ್ಷ ಸ್ಥಳೀಯ ಆಲೂಗಡ್ಡೆ ವ್ಯಾಪಾರಸ್ಥರಿಂದ ಸಾಲ ಇಲ್ಲದೆ ಸಂಪೂರ್ಣ ಹಣವನ್ನು ಪಾವತಿಸಿ ನಾಟಿ ಮಾಡುತ್ತಿದ್ದ ಆಲೂಗಡ್ಡೆ ಅಲ್ಪಸ್ವಲ್ಪ ಬೆಳೆಯಾಗುತ್ತಿತ್ತು. ಆದರೆ, ಈ ವರ್ಷ ಹವಾಮಾನ ವೈಫರೀತ್ಯದ ಜೊತೆಗೆ ಗುಣಮಟ್ಟದ ಆಲೂಗಡ್ಡೆ ಹೆಸರಿನಲ್ಲಿ ನಕಲಿ ಆಲೂಗಡ್ಡೆ ವಿತರಣೆಯಿಂದಲೋ ಅನ್ಯಾಯವಾಗಿದೆ ಎಂದರು.

ಸಾವಿರಾರು ಎಕರೆ ಆಲೂಗಡ್ಡೆ ಬೆಳೆ ಕೈಕೊಟ್ಟಿರುವುದರಿಂದ ಬಂಡವಾಳ ವಾಪಸ್ ಬಾರದೆ ಖಾಸಗಿ ಸಾಲಕ್ಕೆ ಸಿಲುಕಿ ರೈತರು ತಪ್ಪು ನಿರ್ಧಾರ ತೆಗೆದುಕೊಳ್ಳುವ ಮೊದಲು ನೊಂದ ರೈತರಿಗೆ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

Fake Seed Distribution Allegation In Kolar

ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಆಲೂಗಡ್ಡೆ ನಕಲಿ ದಂಧೆ ಇವತ್ತು ನೆನ್ನೆಯದಲ್ಲ. ಸುಮಾರು ಹತ್ತಾರು ವರ್ಷಗಳಿಂದ ಈ ದಂಧೆ ಅಧಿಕಾರಿಗಳ ಮುಂದೆಯೇ ನಡೆಯುತ್ತಿದೆ. ಎಲ್ಲಾ ವ್ಯಾಪಾರಸ್ಥರು ಕಡ್ಡಾಯವಾಗಿ ಜಲಂಧರ್‌ ಹಾಗೂ ಪಂಜಾಬ್ ಕಡೆಯಿಂದ ತರಿಸುವ ಬಿತ್ತನೆ ಆಲೂಗಡ್ಡೆಯನ್ನು ಗುಣಮಟ್ಟ ಪರಿಶೀಲನೆ ಮಾಡಿ ಆನಂತರ ರೈತರಿಗೆ ಕಡ್ಡಾಯ ರಸೀದಿ ನೀಡುವ ಮುಖಾಂತರ ವಿತರಣೆ ಮಾಡಬೇಕೆಂಬ ನಿಯಮವಿದ್ದರೂ ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದರೆ ನಕಲಿ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ತಾಕತ್ತು ಇದ್ದರೆ ಬೀಜ ಕಾಯ್ದೆಯನ್ನು ಜಾರಿಗೆ ತಂದು ಪ್ರತಿ ಜಿಲ್ಲೆಯಲ್ಲಿ ಪ್ರಯೋಗಾಲಯ ಹಾಗೂ ಜಿಲ್ಲಾಧಿಕಾರಿಗಳ ಒಳಗೊಂಡಂತೆ ತಂಡ ರಚನೆ ಮಾಡಿ ಲಂಗೂಲಗಾಮು ಇಲ್ಲದ ನಕಲಿ ಬಿತ್ತನೆ ಬೀಜ, ಕೀಟನಾಶಕಗಳ ನಿಯಂತ್ರಣ ಮಾಡಿದರೆ ಮಾತ್ರ ರೈತರ ಬೆವರ ಹನಿಗೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.

ತೋಟಕ್ಕೆ ಭೇಟಿ ನೀಡಿದ ತೋಟಗಾರಿಕೆ ಅಧಿಕಾರಿ ರಮೇಶ್, ಮೇಲ್ನೋಟಕ್ಕೆ ನಕಲಿ ಬಿತ್ತನೆ ಬೀಜ ಹಾವಳಿ ಕಂಡು ಬರುತ್ತಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದರು. ಭೇಟಿ ಸಂದರ್ಭದಲ್ಲಿ ಸುಬ್ರಮಣಿ, ಚಿನ್ನಪ್ಪಯ್ಯ, ಹರಿನಾಥ್, ಅಮರಪ್ಪ, ಮಣಿ, ಸೀನಪ್ಪ, ರೈತಸಂಘದ ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು, ಭಾಸ್ಕರ್, ಸುನೀಲ್‌ಕುಮಾರ್, ರಾಜೇಶ್, ಶ್ರೀನಿವಾಸ್ ಮುಂತಾದ ನೊಂದ ರೈತರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+