ಸರ್ಕಾರಿ ನೌಕರರ ವಿರುದ್ಧ ದಿಢೀರ್ ಎಫ್ಐಆರ್, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ... Government Employees
ಪ್ರಜಾಪ್ರಭುತ್ವ ಸರಿಯಾಗಿ ನಡೆಯಲು ಸರ್ಕಾರ ಹೇಗೆ ಮುಖ್ಯವೋ, ಅದೇ ರೀತಿಯಾಗಿ ಸರ್ಕಾರಿ ನೌಕರರು ಕೂಡ ಮುಖ್ಯ. ಸರ್ಕಾರಿ ಕೆಲಸ ದೇವರ ಕೆಲಸ ಎಂಬ ನುಡಿಗಟ್ಟು ಕೂಡ ಇದೆ ಹೀಗಿದ್ದಾಗ ಸರ್ಕಾರಿ ನೌಕರರಿಗೆ ದಿಢೀರ್ ಆಘಾತ ಎದುರಾಗಿದ್ದು, ಹಲವಾರು ಚರ್ಚೆಗಳ ಬೆನ್ನಲ್ಲೇ ಸರ್ಕಾರಿ ನೌಕರರ ವಿರುದ್ಧ ದಿಢೀರ್ ಎಫ್ಐಆರ್ ದಾಖಲಾಗಿದೆ. ಕಾನೂನಿನ ಗಡಿ ಮೀರಿ ಸರ್ಕಾರಿ ನೌಕರರು ಕೆಲಸ ಮಾಡದಂತೆ ಸೂಚನೆ ನೀಡಿದ್ದರೂ, ಕೆಲವು ಬಾರಿ ಸರ್ಕಾರಿ ನೌಕರರು ಈ ತಪ್ಪು ಮಾಡಿದ್ದು ಉಂಟು. ಇನ್ನೂ ಕೆಲವರು ಬೇಕು ಅಂತಲೇ ಕಾನೂನಿನ ಗಡಿ ಮೀರಿ ವರ್ತಿಸಿದ್ದಾರೆ ಎಂಬ ಭಾರಿ ಗಂಭೀರ ಆರೋಪಗಳ ನಡುವೆಯೇ ಇದೀಗ ದಿಢೀರ್ ಸರ್ಕಾರಿ ನೌಕರರ ವಿರುದ್ಧವೇ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಲ್ಲಿ ಭೂಮಿಗೆ ಚಿನ್ನಕ್ಕೂ ಮೀರಿದ ಬೆಲೆ ಬಂದ ಬಳಿಕ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿದೆ. ಬೆಂಗಳೂರಲ್ಲಿ ಒತ್ತುವರಿ ಮಾಡಿಕೊಳ್ಳುವ ಭೂಗಳ್ಳರ ಕಾಟ ಹೆಚ್ಚಿದೆ. ಒತ್ತುವರಿ ಜಾಗದಲ್ಲಿ ದಿಢೀರ್ ದೊಡ್ಡ ದೊಡ್ಡ ಕಟ್ಟಡ & ಲೇಔಟ್ ನಿರ್ಮಾಣವು ಕೂಡ ನಡೆದಿದೆ. ಆದರೆ ಇಂತಹ ಭೂಗಳ್ಳರಿಗೆ ಇದೀಗ ಆಘಾತ ಸಿಗುತ್ತಿದ್ದು, ಬೆಂಗಳೂರು ಜಿಲ್ಲಾಡಳಿತ ಭಾರಿ ದೊಡ್ಡ ಕಾರ್ಯಾಚರಣೆ ನಡೆಸುತ್ತಿದೆ. ಹೀಗಾಗಿ ಸರ್ಕಾರದ ಜಮೀನು ಕದ್ದು ಆರಾಮವಾಗಿ ಇದ್ದವರಿಗೆ ಎದೆಯಲ್ಲಿ ನಡುಕ ಹುಟ್ಟಿದೆ. ಇದರ ಜೊತೆಗೆ ಇದೀಗ ಕಾನೂನು ಮೀರಿ ವರ್ತಿಸಿದ್ದ ಸರ್ಕಾರಿ ನೌಕರರಿಗೆ ಕೂಡ ಸಮಸ್ಯೆ ಎದುರಾಗಿದೆ.













Click it and Unblock the Notifications