ಗುಲಬರ್ಗಾದ ರಾಣಿಗೆ ಕೂಡಿ ಬಂದ ಕಂಕಣ
ಗುಲ್ಬರ್ಗ. ಏ.23 : ಗುಲ್ಬರ್ಗದ ಮಹಿಳಾ ವಸತಿ ನಿಯಲದ ನಿವಾಸಿಯಾದ ರಾಣಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಗುರುವಾರ ಬೆಂಗಳೂರಿನ ಜೆ.ಪಿ.ನಗರದ ನಿವಾಸಿಯಾದ ಶಂಕರ ಕುಲಕರ್ಣಿ ಅವರೊಂದಿಗೆ ರಾಣಿ ಅವರ ವಿವಾಹ ವಸತಿ ನಿಲಯದಲ್ಲಿ ನಡೆಯಲಿದೆ.
ಗುಲ್ಬರ್ಗ ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ವಸತಿ ನಿಯಲದ ನಿವಾಸಿಯಾದ ರಾಣಿಯ ವಿವಾಹ ಏಪ್ರಿಲ್ 24 ರಂದು ಮಧ್ಯಾಹ್ನ 12-32ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ನೆರವೇರಲಿದೆ. ಬೀದರ್ ಜಿಲ್ಲೆಯವರಾದ ರಾಣಿ, 2013ರ ನವೆಂಬರ್ 25ರಿಂದ ಮಹಿಳಾ ವಸತಿ ನಿಲಯದಲ್ಲಿದ್ದಾರೆ.
ರಾಣಿ ಸದ್ಯ ಪ್ರಥಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ. ಬೆಂಗಳೂರಿನಗ ಜೆ.ಪಿ.ನಗರ ಪುಟ್ಟೇನಹಳ್ಳಿಯ ಶಂಕರ ಕುಲಕರ್ಣಿ ಅವರು ಉತ್ತರ ಕರ್ನಾಟಕದ ಆಹಾರ ತಯಾರಿಕೆಯ ಸ್ವಂತ ಉದ್ಯೋಗ ನಡೆಸುತ್ತಿದ್ದು, ವಾರ್ಷಿಕ 2 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ರಾಣಿ ಅವರ ಸ್ವ ಇಚ್ಛೆಯಂತೆ ಈ ವಿವಾಹವನ್ನು ನಡೆಸಲಾಗುತ್ತಿದೆ.
ಇಬ್ಬರು ಪರಸ್ಪರ ಒಪ್ಪಿಗೆ ನೀಡಿರುವುದರಿಂದ, ರಾಣಿಯ ಮುಂದಿನ ಭವಿಷ್ಯ ಹಾಗೂ ಪುನರ್ವಸತಿ ಹಿತದೃಷ್ಟಿಯಿಂದ ಈ ಮದುವೆ ನಿಶ್ಚಯಿಸಲಾಗಿದೆ ಎಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ದ್ರೌಪದಿ ಕೆ. ನಾಯಕ್ ತಿಳಿಸಿದ್ದಾರೆ.

ವಸತಿ ನಿಲಯದಲ್ಲಿ ನಾಳೆ ಮದುವೆ ಸಂಭ್ರಮ
ಗುಲ್ಬರ್ಗದ ಮಹಿಳಾ ವಸತಿ ನಿಯಲದ ನಿವಾಸಿಯಾದ ರಾಣಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಗುರುವಾರ ಬೆಂಗಳೂರಿನ ಜೆ.ಪಿ.ನಗರದ ನಿವಾಸಿಯಾದ ಶಂಕರ ಕುಲಕರ್ಣಿ ಅವರೊಂದಿಗೆ ರಾಣಿ ಅವರ ವಿವಾಹ ವಸತಿ ನಿಲಯದಲ್ಲಿ ನಡೆಯಲಿದೆ ಎಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ದ್ರೌಪದಿ ಕೆ. ನಾಯಕ್ ತಿಳಿಸಿದ್ದಾರೆ.

ಮತ ಎಣಿಕೆಗೆ ಸಕಲ ಸಿದ್ಧತೆ
ಗುಲ್ಬರ್ಗ (ಪ.ಜಾ.) ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮೇ 16 ರಂದು ಶುಕ್ರವಾರ ಬೆಳಗಿನ 8 ಗಂಟೆಯಿಂದ ನಡೆಯಲಿದೆ. ಮತಯಂತ್ರಗಳನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಕಟ್ಟಡಗಳ ಸ್ಟ್ರಾಂಗ್ ರೂಮ್ ಗಳನ್ನು ಇಡಲಾಗಿದೆ. ಈ ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ 14 ಎಣಿಕೆ ಟೇಬಲ್ ಹಾಗೂ 1 ಸಹಾಯಕ ಚುನಾವಣಾಧಿಕಾರಿಯ ಟೇಬಲ್ ಸೇರಿದಂತೆ ಒಟ್ಟು 15 ಟೇಬಲ್ಗಳನ್ನು ಮತ ಎಣಿಕೆಗಾಗಿ ನಿಗದಿಪಡಿಸಲಾಗಿದೆ. ಪ್ರತಿ ಟೇಬಲ್ಲಿಗೆ ಒಬ್ಬ ಮತ ಎಣಿಕೆಯ ಏಜೆಂಟರ ನೇಮಕ ಮಾಡಲಾಗುತ್ತದೆ. ಎಜೆಂಟರ ನೇಮಕಾತಿ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲ 8 ಅಭ್ಯರ್ಥಿಗಳಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎನ್.ವಿ.ಪ್ರಸಾದ್ ಹೇಳಿದ್ದಾರೆ.

ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯಲ್ಲಿ ಖಾಲಿ ಇರುವ ಸಾಮಾನ್ಯ ವರ್ಗದ-07, ಪರಿಶಿಷ್ಟ ಜಾತಿಯ-2, ಪ್ರವರ್ಗ 2(ಎ) ವರ್ಗದ-2, ಪ್ರವರ್ಗ 2(ಬಿ) ವರ್ಗದ -01 ಹಾಗೂ ಪ್ರವರ್ಗ 3(ಎ) ವರ್ಗದ -01 ಹುದ್ದೆಗೆ ಸೇರಿದಂತೆ ಒಟ್ಟು 13-ಶೀಘ್ರ ಲಿಪಿಗಾರರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 7 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಲೋಕಾಯುಕ್ತರಿಂದ ಅಹವಾಲು ಸ್ವೀಕಾರ
ಲೋಕಾಯುಕ್ತ ಅಧಿಕಾರಿಗಳು ಮೈಸೂರು ಜಿಲ್ಲೆಯಲ್ಲಿ ಏಪ್ರಿಲ್ 24 ರಿಂದ 30 ರವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಿಗಾಗಿ ವಿಳಂಬ, ಲಂಚದ ಬೇಡಿಕೆ ಹಾಗೂ ಇನ್ನಿತರೆ ತೊಂದರೆಗಳ ಕುರಿತು ಸಾರ್ವಜಿನಿಕರು ನಿಗದಿತ ಪ್ರಪತ್ರದಲ್ಲಿ ದೂರು ನೀಡಬಹುದಾಗಿದೆ. ಏಪ್ರಿಲ್ 24ರಂದು ಮೈಸೂರು ತಾಲ್ಲೂಕು ಕಚೇರಿ ಆವರಣ, ಏಪ್ರಿಲ್ 25ರಂದು ತಾಲೂಕು ಕಛೇರಿ ಆವರಣ ನಂಜನಗೂಡು, ಏಪ್ರಿಲ್ 26ರಂದು ಪಿಡಬ್ಲ್ಯೂಡಿ ಅತಿಥಿ ಗೃಹ ಕೆ.ಆರ್.ನಗರ, ಏಪ್ರಿಲ್ 28ರಂದು ಪಿಡಬ್ಲ್ಯೂಡಿ ಅತಿಥಿ ಗೃಹ ಹುಣಸೂರು, ಏಪ್ರಿಲ್ 29ರಂದು ಪಿಡಬ್ಲ್ಯೂಡಿ ಅತಿಥಿ ಗೃಹ ಪಿರಿಯಾಪಟ್ಟಣ ಮತ್ತು ಏಪ್ರಿಲ್ 30ರಂದು ಪಿಡಬ್ಲ್ಯೂಡಿ ಅತಿಥಿ ಗೃಹ ಹೆಚ್.ಡಿ.ಕೋಟೆ ಮತ್ತು ಟಿ.ನರಸೀಪುರ ತಾಲ್ಲೂಕಿನಲ್ಲಿ ಅಹವಾಲು ಸಲ್ಲಿಕೆ ಕಾರ್ಯ ನಡೆಯಲಿದೆ.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ರೈತರನ್ನು ಗುರುತಿಸಿ ಪ್ರತಿ ಜಿಲ್ಲೆಗೆ ಒಬ್ಬರಂತೆ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ನೀಡುತ್ತಿದೆ. 2014ರ ಸಾಲಿನ ಪ್ರಶಸ್ತಿಗೆ ಸದ್ಯ ಅರ್ಜಿ ಆಹ್ವಾನಿಸಲಾಗಿದ್ದು ಧಾರವಾಡ ಜಿಲ್ಲೆಯ ಅರ್ಹ ರೈತರು ಮೇ 25ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನು, ಕಾರ್ಯಕ್ರಮ ಸಂಯೋಜಕರು, ಕೃಷಿ ವಿಜ್ಞಾನ ಕೇಂದ್ರ ಅಥವಾ ವಿಸ್ತರಣಾ ಮುಂದಾಳು, ವಿಸ್ತರಣಾ ಶಿಕ್ಷಣ ಘಟಕ ಧಾರವಾಡ" ಈ ಕಚೇರಿಯಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9448495342, 9448495348 ನಂಬರ್ ಗೆ ಕರೆ ಮಾಡಬಹುದಾಗಿದೆ.

ಕಬೀರ್ ಕುಟುಂಬಕ್ಕೆ 10 ಲಕ್ಷ ಪರಿಹಾರ
ಶೃಂಗೇರಿ ಶೂಟೌಟ್ ಪ್ರಕರಣದಲ್ಲಿ ಸಾವನಪ್ಪಿದ ಮಂಗಳೂರಿನ ಜೋಕಟ್ಟೆ ನಿವಾಸಿ ಕಬೀರ್ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಘೋಷಣೆ ಮಾಡಿದೆ. ಕಬೀರ್ ಸಾವಿನ ಬಗ್ಗೆ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಹಾಗೂ ಮೃತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗೃಹ ಸಚಿವ ಕೆ.ಜಿ.ಜಾರ್ಜ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.












Click it and Unblock the Notifications