ಕರ್ನಾಟಕದ ಯಾವ ಯಾವ ಜಿಲ್ಲೆಗೆ ಯಾವ ಬಿರುದು ಇದೆ ಗೊತ್ತಾ? ನಿಮ್ಮ ಜಿಲ್ಲೆಗೆ ಇರುವ ಬಿರುದು ಏನೆಂದು ತಿಳಿಯಿರಿ!
ಜಗತ್ತಿನ ಎಲ್ಲಾ ಭಾಷೆಗಳ ರಾಣಿ 'ಕನ್ನಡ', ಹೀಗಾಗಿ ಕನ್ನಡವನ್ನ ಜಗತ್ತಿನಾದ್ಯಂತ ಸುಂದರ ಭಾಷೆ ಎಂದು ಕರೆಯುತ್ತಾರೆ. ಹಾಗೇ ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸ ಕೂಡ ಇದ್ದು, ಕರ್ನಾಟಕ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕನ್ನಡ ಭಾಷೆಯನ್ನು ಕೋಟಿ ಕೋಟಿ ಜನರು ಕಲಿಯುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ವಿಶೇಷತೆ ಕೂಡ ಇದೆ, ಈ ವಿಶೇಷತೆ ಕನ್ನಡಿಗರ ನೆಲದ ಹೆಮ್ಮೆಯ ವಿಚಾರ ಕೂಡ ಹೌದು.
ಅಂದಹಾಗೆ ಕರ್ನಾಟಕ ರಾಜ್ಯ ಭೌಗೋಳಿಕವಾಗಿ ಒಂದೇ ರೀತಿ ಇಲ್ಲ. ದಕ್ಷಿಣ ಭಾಗದಲ್ಲಿ ಒಂದು ರೀತಿಯ ವಾತಾವರಣ ಇದ್ದರೆ, ಉತ್ತರ ಕರ್ನಾಟಕದಲ್ಲಿ ಒಂದು ರೀತಿ ವಾತಾವರಣ ಕಾಣಬಹುದು. ಇದರ ಜೊತೆಗೆ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗ ಹಸಿರಿನ ಸಿರಿಯನ್ನು ಪಸರಿಸುತ್ತದೆ. ಇದೇ ಕಾರಣಕ್ಕೆ ಕರ್ನಾಟಕದ ಒಂದೊಂದು ಜಿಲ್ಲೆಯೂ ಒಂದು ಬಿರುದು ಪಡೆದಿದೆ. ಹಾಗಾದರೆ ಕರ್ನಾಟಕದ ಜಿಲ್ಲೆಗಳಿಗೆ ಇರುವ ಬಿರುದು ಏನು? ರಾಜ್ಯದ ಯಾವ ಜಿಲ್ಲೆ ಯಾವುದಕ್ಕೆ ಹೆಗ್ಗಳಿಕೆ ಪಡೆದಿದೆ ಗೊತ್ತಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಕರ್ನಾಟಕದ ಯಾವ ಜಿಲ್ಲೆಗೆ ಯಾವ ಬಿರುದು?
1). ವಿಜಯಪುರ - ಗುಮ್ಮಟ ನಗರಿ
2). ಧಾರವಾಡ - ಪೇಡಾ ನಗರಿ
3). ಗದಗ - ಮುದ್ರಣ ನಗರಿ
4). ಗೋಕಾಕ - ಕರದಂಟು ನಗರಿ
5). ಬೆಳಗಾವಿ - ಕುಂದಾ ನಗರಿ
6). ಮಂಗಳೂರು - ಬಂದರು ನಗರಿ
7). ಮಡಿಕೇರಿ - ಮಂಜಿನ ನಗರಿ
8). ಬೆಂಗಳೂರು - ಉದ್ಯಾನ ನಗರಿ
9). ಹಾವೇರಿ - ಏಲಕ್ಕಿ ನಗರಿ
10). ಉಡುಪಿ - ಕೃಷ್ಣ ನಗರಿ
11). ದಾವಣಗೆರೆ - ಬೆಣ್ಣೆ ನಗರಿ
12). ಗಂಗಾವತಿ - ಭತ್ತದ ಕಣಜ
13). ಮೈಸೂರು - ಸಾಂಸ್ಕೃತಿಕ ನಗರಿ
14). ಬಾಗಲಕೋಟೆ - ಕೋಟೆ ನಾಡು
15). ಬಳ್ಳಾರಿ - ಗಣಿ ನಾಡು
16). ಚಿತ್ರದುರ್ಗ - ಕೋಟೆ ನಾಡು
17). ತುಮಕೂರು - ಕಲ್ಪತರು ನಾಡು
18). ಕೋಲಾರ - ಚಿನ್ನದ ನಾಡು
19). ಚನ್ನಪಟ್ಟಣ - ಬೊಂಬೆ ನಾಡು
20). ಮಂಡ್ಯ - ಸಕ್ಕರೆ ನಾಡು
21). ರಾಮನಗರ - ರೇಷ್ಮೆ ನಾಡು
22). ಚಿಕ್ಕಮಗಳೂರು - ಕಾಫಿ ನಾಡು
23). ಬಾದಾಮಿ - ಚಾಲುಕ್ಯರ ನಾಡು
24). ತಲಕಾಡು - ಗಂಗರ ನಾಡು
25). ರಾಯಚೂರು - ಬಿಸಿಲ ನಾಡು
26). ಶಿವಮೊಗ್ಗ - ಮಲೆನಾಡಿನ ಹೆಬ್ಬಾಗಿಲು
27). ಕಲಬುರಗಿ - ತೊಗರಿ ಕಣಜ
28). ಕಾರವಾರ - ಜಲಪಾತಗಳ ತವರೂರು
29). ಭದ್ರಾವತಿ - ಕೈಗಾರಿಕೆಗಳ ನಗರಿ
30). ಯಾದಗಿರಿ - ಗಿರಿಗಳ ನಾಡು
31). ಬೀದರ್ - ಸೂಫಿ ಸಂತರ ನಾಡು
32). ಬನವಾಸಿ - ಕದಂಬರ ನಾಡು
ಜಗತ್ತಿಗೆ ಗೊತ್ತು ಕನ್ನಡ ನಾಡಿನ ಗತ್ತು!
ಕನ್ನಡ ಭಾಷೆ & ಕನ್ನಡ ನಾಡಿನ ಸಂಸ್ಕೃತಿ ಬಗ್ಗೆ ಜಗತ್ತಿಗೆ ಗೊತ್ತು. ಸಾವಿರಾರು ವರ್ಷಗಳಿಂದ ಕನ್ನಡಿಗರ ಜೊತೆಗೆ ವ್ಯವಹರಿಸುತ್ತಿರುವ ವಿವಿಧ ದೇಶಗಳಲ್ಲಿ, ಕನ್ನಡ ಭಾಷೆ ಇತಿಹಾಸ ಸಾರುವ ಸಾಕ್ಷ್ಯಗಳು ಸಿಗುತ್ತವೆ. ಇಂತಿಪ್ಪ ಕನ್ನಡ ನಾಡು ಹರಿದು ಹಂಚಿಹೋಗಿ, ಹಲವು ರಾಜ್ಯಗಳಲ್ಲಿ ಸೇರಿಕೊಂಡಿತ್ತು. ಆದರೆ ಹೀಗೆ ಬೇರೆಯಾಗಿದ್ದ ಕರ್ನಾಟಕ ಒಗ್ಗೂಡಿ, ಕರ್ನಾಟಕ ಎಂಬ ಹೆಸರು ಪಡೆದು ಅರ್ಧಶತಮಾನ ಕಳೆದಿದೆ. ಈ ಸಂಭ್ರಮದಲ್ಲಿ ಕನ್ನಡ ನಾಡಿನ ಕೀರ್ತಿ ಕೂಡ ಇಡೀ ಜಗತ್ತಿನಾದ್ಯಂತ ನಳನಳಿಸುತ್ತಿದೆ.

ಒಟ್ನಲ್ಲಿ ಕನ್ನಡ ನಾಡು, ಭಾರತಕ್ಕೆ ಮಾತ್ರವಲ್ಲ ಇಡೀ ಮನುಷ್ಯ ಕುಲಕ್ಕೆ ಒಂದು ಹೆಮ್ಮೆ. ಯಾಕಂದ್ರೆ ನೈಸರ್ಗಿಕವಾಗಿ ಸಾಂಸ್ಕೃತಿಕವಾಗಿ ಕರ್ನಾಟಕ ಇಡೀ ಜಗತ್ತಿಗೆ ದೊಡ್ಡ ಕೊಡುಗೆ ಕೊಟ್ಟಿದೆ. ಅದರಲ್ಲೂ ಅಮೆಜಾನ್ ಕಾಡುಗಳನ್ನ ಬಿಟ್ಟರೆ, ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಹಬ್ಬಿಕೊಂಡಿರುವ ಪಶ್ಚಿಮ ಘಟ್ಟಗಳ ಕಾಡೇ ದೊಡ್ಡದು ಎಂಬ ಬಿರುದು ಕೂಡ ಪಡೆದಿದೆ. ಇದರ ಜೊತೆ ಭೂಮಿ ವಾತಾವರಣಕ್ಕೆ ಇದೇ ಪಶ್ಚಿಮ ಘಟ್ಟಗಳಿಂದ ಭಾರಿ ಪ್ರಮಾಣದಲ್ಲಿ ಆಕ್ಸಿಜೆನ್ ಸೇರುತ್ತಿದೆ. ಇದು ನಿಸರ್ಗದ ವಿಚಾರವಾದ್ರೆ, ಜಗತ್ತಿನ ಸಾಹಿತ್ಯ ಖಜಾನೆಗೆ ನಮ್ಮ ಕನ್ನಡ ನೀಡಿರುವ ಕೊಡುಗೆ ಇನ್ನೂ ದೊಡ್ಡದು ಎಂಬುದೇ ಹೆಮ್ಮೆಯ ವಿಚಾರ.
-
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು












Click it and Unblock the Notifications