ಅತೃಪ್ತರ ಮಣಿಸಲು ದೇವೇಗೌಡ ತಯಾರಿ: ಬೆಂಗಳೂರು ಜೆಡಿಎಸ್ ಮುಖಂಡರ ಸಭೆ
Recommended Video
ಬೆಂಗಳೂರು, ಜುಲೈ 27: ಸರ್ಕಾರಕ್ಕೆ ಕೈಕೊಟ್ಟು ಅತೃಪ್ತ ಶಾಸಕರನ್ನು ಮಣಿಸಲು ದೇವೇಗೌಡ ಅವರು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.
ಶಾಸಕ ಮುನಿರತ್ನ ಅವರ ಆರ್.ಆರ್.ನಗರ, ಭೈರತಿ ಬಸವರಾಜು ಅವರ ಕೆ.ಆರ್.ಪುರಂ ಕ್ಷೇತ್ರದ ಜೆಡಿಎಸ್ ಮುಖಂಡರ ಸಭೆಯನ್ನು ದೇವೇಗೌಡ ಅವರು ಕರೆದಿದ್ದು, ಉಪಚುನಾವಣೆ ಕುರಿತು ಚರ್ಚೆ ಮತ್ತು ಸೂಚನೆಗಳನ್ನು ನೀಡಲಿದ್ದಾರೆ.
ನಾಳೆ ಯಶವಂತಪುರ ಮತ್ತು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೆಡಿಎಸ್ ಮುಖಂಡರ ಜೊತೆ ಸಭೆ ನಾಳೆ ನಡೆಯಲಿದ್ದು, ಈ ಎರಡೂ ಕ್ಷೇತ್ರಗಳ ಶಾಸಕರೂ ಸಹ ರಾಜೀನಾಮೆ ನೀಡಿ ಸರ್ಕಾರಕ್ಕೆ ಕೈಕೊಟ್ಟು ಮುಂಬೈನಲ್ಲಿ ನೆಲೆಸಿದ್ದಾರೆ. ಯಶವಂತಪುರ ಕ್ಷೇತ್ರದಿಂದ ಎಸ್.ಟಿ.ಸೋಮಶೇಖರ್ ಗೆದ್ದಿದ್ದರೆ, ಮಹಾಲಕ್ಷ್ಮಿ ಲೇಔಟ್ನಿಂದ ಜೆಡಿಎಸ್ನ ಗೋಪಾಲಯ್ಯ ಗೆದ್ದಿದ್ದರು. ಆದರೆ ಅವರೀಗ ರಾಜೀನಾಮೆ ಸಲ್ಲಿಸಿದ್ದಾರೆ.

ಜೆಡಿಎಸ್ನ ಮೂರು ಶಾಸಕರು ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ರಾಜೀನಾಮೆ ಸಲ್ಲಿಸಿದ್ದು, ಆ ಮೂರೂ ಶಾಸಕರ ಜೊತೆಗೆ ಕಾಂಗ್ರೆಸ್ನಿಂದ ಪರಾರಿಯಾದ ಕ್ಷೇತ್ರಗಳ ಕಡೆಗೂ ದೇವೇಗೌಡ ಅವರು ಗಮನ ಹರಿಸಿದ್ದಾರೆ. ಒಟ್ಟಿನಲ್ಲಿ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟ ಶಾಸಕರ ರಾಜಕೀಯ ಜೀವನ ನಿರ್ನಾಮ ಮಾಡಲು ದೇವೇಗೌಡ ಅವರು ಪಣತೊಟ್ಟಿದ್ದಾರೆ.












Click it and Unblock the Notifications