ಲಿಂಗಾಯತರಿಗೆ 40 ಟಿಕೆಟ್ ನೀಡುವಂತೆ ಮನವಿ: ವಿನಯ್ ಕುಲಕರ್ಣಿ
ಹುಬ್ಬಳ್ಳಿ, ಏಪ್ರಿಲ್ 03: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 40 ಟಿಕೆಟ್ ಅನ್ನು ಲಿಂಗಾಯತರಿಗೆ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಸಚಿವ ವಿನಯ್ ಕುಲಕರ್ಣಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಿಂಗಾಯತರಿಗೆ ಸ್ವತಂತ್ರ ಧರ್ಮ ವಿಚಾರವಾಗಿ ಯಾರೂ ತೋರದ ಧೈರ್ಯವನ್ನು ಸಿದ್ದರಾಮಯ್ಯ ಅವರು ತೋರಿಸಿದ್ದಾರೆ, ವರ್ಷಾನುಗಟ್ಟಲೆಗಳಿಂದ ಲಿಂಗಾಯತರ ಬೇಡಿಕೆಯನ್ನು ಅವರು ಮಾನ್ಯ ಮಾಡಿದ್ದಾರೆ, ಸಿದ್ದರಾಮಯ್ಯ ಅವರ ಋಣ ಲಿಂಗಾಯತರ ಮೇಲೆ ಉಳಿಯುವಂತಹಾ ಕೆಲಸವನ್ನು ಅವರು ಮಾಡಿದ್ದಾರೆ ಎಂದರು.
12ನೇಯ ಶತಮಾನದಿಂದಲೂ ಲಿಂಗಾಯತರು, ದಲಿತ ಸಮುದಾಯದ ಜೊತೆಗಿದ್ದಾರೆ, ಅವರು ಸಮಾನ ದಮನಿತರು ಎಂದ ಅವರು ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಬಿಜೆಪಿಯವರನ್ನು ಸುಳ್ಳಿನ ಸರದಾರರು ಎಂದು ಜರಿದ ಸಚಿವರು ನಮ್ಮ ಸರ್ಕಾರ ಅತ್ಯುತ್ತಮವಾದ ಕೆಲಸಗಳನ್ನು ಮಾಡಿದೆ, ಆದರೆ ಬಿಜೆಪಿಯವರು ಕಾಂಗ್ರೆಸ್ ಸಾಧನೆಗಳನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.












Click it and Unblock the Notifications