ಐಪಿಎಲ್, ಕೆಪಿಎಲ್ ನಿಂದಾಗಿ ಬೆಟ್ಟಿಂಗ್ ಅಧಿಕ: ಕೆಜೆ ಜಾರ್ಜ್
ಬೆಂಗಳೂರು, ಜುಲೈ 25: ಐ.ಪಿ.ಎಲ್ ಮತ್ತು ಕೆ.ಪಿ.ಎಲ್ ಪಂದ್ಯಗಳಿಂದಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಚ್ಚಾಗುತ್ತಿದೆ. ಆದ್ದರಿಂದ ಪಂದ್ಯ ನಡೆಯುವ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಗಸ್ತು ಬಿಗಿಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ 2014 ರಿಂದ ಈವರೆಗೆ 75 ಪ್ರಕರಣಗಳು ದಾಖಲಾಗಿದ್ದು, 354 ಆರೋಪಿಗಳನ್ನು ಬಂಧಿಸುವ ಮೂಲಕ 1,56,36,310 ರೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ಕೆ. ಜೆ. ಜಾರ್ಜ್ ಅವರು ವಿಧಾನ ಸಭೆಯಲ್ಲಿ ಶುಕ್ರವಾರ ತಿಳಿಸಿದರು.[ಕ್ರಿಕೆಟ್ ಬೆಟ್ಟಿಂಗ್ ದಂಧೆ : ಸಿಬಿಐಗೆ ವಹಿಸಲು ಸಿದ್ಧ]
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಶಾಸಕರಾದ ಗೋವಿಂದ ಎಂ. ಕಾರಜೋಳ, ಬಸವರಾಜ್ ಬೊಮ್ಮಾಯಿ, ಎಸ್. ಸುರೇಶ್ ಕುಮಾರ್ ಮತ್ತು ಲಕ್ಷ್ಮಣ ಸಂಗಪ್ಪ ಸವದಿ ಅವರು ನಿಯಮ 69 ರಡಿ ರಾಜ್ಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಬಗ್ಗೆ ಮಂಡಿಸಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಇತ್ತೀಚೆಗೆ
ನಡೆಯುತ್ತಿರುವ
ಐ.ಪಿ.ಎಲ್
ಮತ್ತು
ಕೆ.ಪಿ.ಎಲ್
ಪಂದ್ಯಗಳಿಂದಾಗಿ
ಕ್ರಿಕೆಟ್
ಬೆಟ್ಟಿಂಗ್
ದಂಧೆ
ಹೆಚ್ಚಾಗುತ್ತಿದೆ.
ಆದ್ದರಿಂದ
ಪಂದ್ಯ
ನಡೆಯುವ
ಸಂದರ್ಭಗಳಲ್ಲಿ
ಪೊಲೀಸ್
ಇಲಾಖೆಯ
ಅಧಿಕಾರಿಗಳು
ಗಸ್ತು
ಬಿಗಿಗೊಳಿಸುವ
ಮೂಲಕ
ಬೆಟ್ಟಿಂಗ್
ನಡೆಸುತ್ತಿರುವವರ
ಬಗ್ಗೆ
ಮಾಹಿತಿಯನ್ನು
ಸಂಗ್ರಹಿತ್ತಿರುವುದಲ್ಲದೆ,
ದಂಧೆಯಲ್ಲಿ
ಭಾಗಿಯದ
ಆರೋಪಿಗಳು
ಯಾರೇ
ಆಗಿದ್ದರೂ
ಸಹ
ಅವರ
ಮೇಲೆ
ಕಾನೂನು
ಕ್ರಮ
ಕೈಗೊಳ್ಳಲಾಗುವುದು
ಎಂದರು.
[ಹುಬ್ಬಳ್ಳಿಯಲ್ಲಿ
ಬೆಟ್ಟಿಂಗ್
ದಂಧೆ
ಬಯಲು]
ಬೆಟ್ಟಿಂಗ್ ಅಕ್ರಮ ದಂಧೆಯನ್ನು ತಡೆಗಟ್ಟಲು ವಿಶೇಷ ತಂಡಗಳನ್ನು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿದೆ. ಈ ತಂಡದವರು ಗೌಪ್ಯವಾಗಿ ಬೆಟ್ಟಿಂಗ್ ದಂಧೆ ನಡೆಯುವ ಸ್ಥಳಗಳನ್ನು ಗುರುತಿಸಿ ಕೂಡಲೇ ಕಾನೂನಿನ ಅಡಿಯಲ್ಲಿ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ
ನಗರದಲ್ಲಿ
ನಡೆಯುತ್ತಿರುವ
ಕ್ರಿಕೆಟ್
ಬೆಟ್ಟಿಂಗ್
ದಂಧೆಯ
ಬಗ್ಗೆ
ಖಾಸಗಿ
ಸುದ್ದಿ
ವಾಹಿನಿಯೊಂದು
ನಡೆಸಿದ
ಸ್ಟಿಂಗ್
ಕಾರ್ಯಾಚರಣೆಯ
ಬಗ್ಗೆ
ಹುಬ್ಬಳ್ಳಿ
ಠಾಣೆಯಲ್ಲಿ
ಪ್ರಕರಣವನ್ನು
ದಾಖಲಿಸಲಾಗಿದೆ.
ಈ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಇಬ್ಬರು
ಪೊಲೀಸ್
ಪೇದೆ
ಹಾಗೂ
ಪೊಲೀಸ್
ಉಪ
ಆಯುಕ್ತರನ್ನು
ಅಮಾನತ್ತುಗೊಳಿಸಲಾಗಿದೆ.
ಅಲ್ಲದೆ
ಇಡೀ
ಪ್ರಕರಣದ
ತನಿಖೆಯನ್ನು
ಸಿ.
ಬಿ.
ಐ
ಗೆ
ವಹಿಸಲಾಗಿದೆ.
ಸ್ಟಿಂಗ್
ಕಾರ್ಯಾಚರಣೆ
ಮಾಡಿದ
ಮಾಧ್ಯಮದವರ
ವಿರುದ್ಧ
ಪೊಲೀಸ್
ಪೇದೆ
ಎ.
ಬಿ.
ನರೇಂದ್ರ
ಎಂಬುವರು
ದೂರು
ನೀಡಿರುವ
ಹಿನ್ನೆಲೆಯಲ್ಲಿ,
ಈ
ಪ್ರಕರಣವನ್ನು
ಕೂಡಾ
ಸಿ.ಐ.ಡಿ
ಗೆ
ಹಸ್ತಾಂತರಿಸಲಾಗಿದೆ
ಎಂದು
ವಿವರಿಸಿದರು.
ಕ್ರಿಕೆಟ್ ಬೆಟ್ಟಿಂಗ್ ದಂಧೆಯು ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ದಂಧೆ ನಡೆಸುವವರು ರಾಷ್ಟದ ಅಥವಾ ವಿದೇಶದ ಯಾವುದೋ ಮೂಲೆಯಲ್ಲಿ ಕುಳಿತು ದಂಧೆಯನ್ನು ನಡೆಸುತ್ತಿರುತ್ತಾರೆ. ರಾಜ್ಯದಲ್ಲಿ ಇರುವವರು ಅವರ ಸಹವರ್ತಿಗಳಾಗಿರುತ್ತಾರೆ. ಆದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಸ್ವಲ್ಪ ಸಮಯ ಬೇಕಾಗಬಹುದು.
ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಪೊಲೀಸ್ ಅವರು ಕೂಡಲೇ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆದು ಅವರ ಕೆಲಸ. ಅವರ ಕೆಲಸದಲ್ಲಿ ಲೋಪವಾದರೆ ಅವರ ವಿರುದ್ದವೂ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.