ಜ18 ಉಡುಪಿ ಪರ್ಯಾಯ: ಜಿಲ್ಲಾಡಳಿತದ ಸಕಲ ಸಿದ್ದತೆ
ಉಡುಪಿ, ಜ 17: ಶನಿವಾರ (ಜ 18) ನಡೆಯಲಿರುವ ಉಡುಪಿ ಅಷ್ಠಮಠಗಳಲ್ಲೊಂದಾದ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ಎಲ್ಲಾ ಸಿದ್ದತೆ ಭರದಿಂದ ಸಾಗುತ್ತಿದೆ. ಉಡುಪಿ ಜಿಲ್ಲಾಡಳಿತ ಪರ್ಯಾಯ ಮಹೋತ್ಸವ ಸಾಂಗವಾಗಿ ನೆರವೇರಲು ಸಕಲ ಸಿದ್ದತೆ ನಡೆಸಿದೆ. ಉಡುಪಿ ಜಿಲ್ಲಾ ಪೊಲೀಸರು ನಗರಕ್ಕೆ ಬರುವ ಮತ್ತು ನಗರದಿಂದ ಹೊರ ಹೋಗುವ ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿದ್ದಾರೆ.
ಉಡುಪಿ ನಗರಸಭೆ ನಗರದಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಕೆಲಸವನ್ನು ಮುಗಿಸಿದ್ದು, ಇಡೀ ಉಡುಪಿ ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಪರ್ಯಾಯ ದರ್ಬಾರ್ ನಡೆಯುವ ರಾಜಾಂಗಣದಲ್ಲಿ ಅಂತಿಮ ಹಂತದ ಕೆಲಸಗಳು ಸಾಗುತ್ತಿದೆ. ಇಡೀ ಪರ್ಯಾಯ ಸಮಯದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿದೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಈ ಮಧ್ಯೆ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಸಂಪ್ರದಾಯದಂತೆ ಹೊರೆಕಾಣಿಕೆಯ ಮಹಾಪೂರವೇ ಉಡುಪಿ ರಥಬೀದಿಗೆ ಹರಿದು ಬರುತ್ತಿದೆ.
ನಾಳೆ ಪ್ರಾತಃಕಾಲ ಎರಡು ಗಂಟೆಗೆ ಭಾವೀ ಪರ್ಯಾಯ ಶ್ರೀಗಳಾದ ಕಾಣಿಯೂರು ಶ್ರೀಗಳು ಉಡುಪಿ ಹೊರವಲಯದಲ್ಲಿರುವ ದಂಡತೀರ್ಥಕ್ಕೆ ತೆರಳಿ ಅಲ್ಲಿ ಧಾರ್ಮಿಕ ವಿಧಿವಿಧಾನ ಮುಗಿಸಿದ ನಂತರ ಜೋಡುಕಟ್ಟೆ ವೃತ್ತಕ್ಕೆ ಮೂರು ಗಂಟೆ ಸುಮಾರಿಗೆ ಆಗಮಿಸಲಿದ್ದಾರೆ. ಅಲ್ಲಿ ಭಾವೀ ಪರ್ಯಾಯ ಶ್ರೀಗಳನ್ನು ಸ್ವಾಗತಿಸಿದ ನಂತರ ಪರ್ಯಾಯ ಮೆರವಣಿಗೆ ಆರಂಭವಾಗಲಿದೆ. ಟ್ಯಾಬ್ಲೋದಲ್ಲಿ ಪಲ್ಲಕ್ಕಿಯನ್ನು ಇಟ್ಟು ಮೆರವಣೆಗೆಯಲ್ಲಿ ತರಲಾಗುತ್ತದೆ. ಈ ಸಂಬಂಧ ಶಿರೂರು ಶ್ರೀಗಳ ಜೊತೆ ಮಾತುಕತೆ ನಡೆಸುತ್ತೇನೆ. ಅಷ್ಠಮಠದ ಎಲ್ಲಾ ಶ್ರೀಗಳ ಜೊತೆ ನಾನು ಉತ್ತಮ ಸಂಬಂಧವನ್ನು ಹೊಂದಿದ್ದೇನೆ ಎಂದು ಭಾವಿ ಪರ್ಯಾಯ ಶ್ರೀಗಳು ಹೇಳಿದ್ದಾರೆ. (ಉಡುಪಿ ಪರ್ಯಾಯಕ್ಕೆ ಕ್ಷಣಗಣನೆ: ಭುಗಿಲೆದ್ದ ಪಲ್ಲಕ್ಕಿ ವಿವಾದ)
(ಚಿತ್ರ ಕೃಪೆ: ಜನಾರ್ಧನ ಕೊಡವೂರು)
ಶಿರೂರು ಶ್ರೀಗಳಿಂದ ಆಶೀರ್ವಾದ
ಶಿರೂರು ಶ್ರೀಗಳಿಂದ ಆಶೀರ್ವಾದ
ಮಕರಸಂಕ್ರಾತಿಯಂದು ಮೂರು ತೇರು
ಮಕರಸಂಕ್ರಾತಿಯಂದು ಮೂರು ತೇರು
ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳು
ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳು
ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳು
ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳು
ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳ ತಯಾರಿ
ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳ ತಯಾರಿ
ವಿವಿಧ ಬಗೆಯ ಭಕ್ಷ್ಯಭೋಜನಗಳು
ವಿವಿಧ ಬಗೆಯ ಭಕ್ಷ್ಯಭೋಜನಗಳು
ಪರ್ಯಾಯಕ್ಕೆ ಹೊರೆ ಕಾಣಿಕೆ
ಪರ್ಯಾಯಕ್ಕೆ ಹೊರೆ ಕಾಣಿಕೆ
ಶಿರೂರು ಶ್ರೀಗಳ ಉಭಯಕುಶಲೋಪರಿ
ಶಿರೂರು ಶ್ರೀಗಳ ಉಭಯಕುಶಲೋಪರಿ
ತೀರ್ಥಸ್ನಾನ
ತೀರ್ಥಸ್ನಾನ
ಉಡುಪಿ ಚುರ್ಣೋತ್ಸವ
ಉಡುಪಿ ಚುರ್ಣೋತ್ಸವ
ಮೂರು ರಥದ ವೈಭವದ ಉತ್ಸವ
ಮೂರು ರಥದ ವೈಭವದ ಉತ್ಸವ