ಜ18 ಉಡುಪಿ ಪರ್ಯಾಯ: ಜಿಲ್ಲಾಡಳಿತದ ಸಕಲ ಸಿದ್ದತೆ
ಉಡುಪಿ, ಜ 17: ಶನಿವಾರ (ಜ 18) ನಡೆಯಲಿರುವ ಉಡುಪಿ ಅಷ್ಠಮಠಗಳಲ್ಲೊಂದಾದ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ಎಲ್ಲಾ ಸಿದ್ದತೆ ಭರದಿಂದ ಸಾಗುತ್ತಿದೆ. ಉಡುಪಿ ಜಿಲ್ಲಾಡಳಿತ ಪರ್ಯಾಯ ಮಹೋತ್ಸವ ಸಾಂಗವಾಗಿ ನೆರವೇರಲು ಸಕಲ ಸಿದ್ದತೆ ನಡೆಸಿದೆ. ಉಡುಪಿ ಜಿಲ್ಲಾ ಪೊಲೀಸರು ನಗರಕ್ಕೆ ಬರುವ ಮತ್ತು ನಗರದಿಂದ ಹೊರ ಹೋಗುವ ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿದ್ದಾರೆ.
ಉಡುಪಿ ನಗರಸಭೆ ನಗರದಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಕೆಲಸವನ್ನು ಮುಗಿಸಿದ್ದು, ಇಡೀ ಉಡುಪಿ ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಪರ್ಯಾಯ ದರ್ಬಾರ್ ನಡೆಯುವ ರಾಜಾಂಗಣದಲ್ಲಿ ಅಂತಿಮ ಹಂತದ ಕೆಲಸಗಳು ಸಾಗುತ್ತಿದೆ. ಇಡೀ ಪರ್ಯಾಯ ಸಮಯದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿದೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಈ ಮಧ್ಯೆ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಸಂಪ್ರದಾಯದಂತೆ ಹೊರೆಕಾಣಿಕೆಯ ಮಹಾಪೂರವೇ ಉಡುಪಿ ರಥಬೀದಿಗೆ ಹರಿದು ಬರುತ್ತಿದೆ.
ನಾಳೆ ಪ್ರಾತಃಕಾಲ ಎರಡು ಗಂಟೆಗೆ ಭಾವೀ ಪರ್ಯಾಯ ಶ್ರೀಗಳಾದ ಕಾಣಿಯೂರು ಶ್ರೀಗಳು ಉಡುಪಿ ಹೊರವಲಯದಲ್ಲಿರುವ ದಂಡತೀರ್ಥಕ್ಕೆ ತೆರಳಿ ಅಲ್ಲಿ ಧಾರ್ಮಿಕ ವಿಧಿವಿಧಾನ ಮುಗಿಸಿದ ನಂತರ ಜೋಡುಕಟ್ಟೆ ವೃತ್ತಕ್ಕೆ ಮೂರು ಗಂಟೆ ಸುಮಾರಿಗೆ ಆಗಮಿಸಲಿದ್ದಾರೆ. ಅಲ್ಲಿ ಭಾವೀ ಪರ್ಯಾಯ ಶ್ರೀಗಳನ್ನು ಸ್ವಾಗತಿಸಿದ ನಂತರ ಪರ್ಯಾಯ ಮೆರವಣಿಗೆ ಆರಂಭವಾಗಲಿದೆ. ಟ್ಯಾಬ್ಲೋದಲ್ಲಿ ಪಲ್ಲಕ್ಕಿಯನ್ನು ಇಟ್ಟು ಮೆರವಣೆಗೆಯಲ್ಲಿ ತರಲಾಗುತ್ತದೆ. ಈ ಸಂಬಂಧ ಶಿರೂರು ಶ್ರೀಗಳ ಜೊತೆ ಮಾತುಕತೆ ನಡೆಸುತ್ತೇನೆ. ಅಷ್ಠಮಠದ ಎಲ್ಲಾ ಶ್ರೀಗಳ ಜೊತೆ ನಾನು ಉತ್ತಮ ಸಂಬಂಧವನ್ನು ಹೊಂದಿದ್ದೇನೆ ಎಂದು ಭಾವಿ ಪರ್ಯಾಯ ಶ್ರೀಗಳು ಹೇಳಿದ್ದಾರೆ. (ಉಡುಪಿ ಪರ್ಯಾಯಕ್ಕೆ ಕ್ಷಣಗಣನೆ: ಭುಗಿಲೆದ್ದ ಪಲ್ಲಕ್ಕಿ ವಿವಾದ)
(ಚಿತ್ರ ಕೃಪೆ: ಜನಾರ್ಧನ ಕೊಡವೂರು)

ಶಿರೂರು ಶ್ರೀಗಳಿಂದ ಆಶೀರ್ವಾದ
ಶಿರೂರು ಶ್ರೀಗಳಿಂದ ಆಶೀರ್ವಾದ

ಮಕರಸಂಕ್ರಾತಿಯಂದು ಮೂರು ತೇರು
ಮಕರಸಂಕ್ರಾತಿಯಂದು ಮೂರು ತೇರು

ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳು
ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳು

ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳು
ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳು

ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳ ತಯಾರಿ
ಅನ್ನಸಂತರ್ಪಣೆಗೆ ಸಿಹಿಭಕ್ಷ್ಯಗಳ ತಯಾರಿ

ವಿವಿಧ ಬಗೆಯ ಭಕ್ಷ್ಯಭೋಜನಗಳು
ವಿವಿಧ ಬಗೆಯ ಭಕ್ಷ್ಯಭೋಜನಗಳು

ಪರ್ಯಾಯಕ್ಕೆ ಹೊರೆ ಕಾಣಿಕೆ
ಪರ್ಯಾಯಕ್ಕೆ ಹೊರೆ ಕಾಣಿಕೆ

ಶಿರೂರು ಶ್ರೀಗಳ ಉಭಯಕುಶಲೋಪರಿ
ಶಿರೂರು ಶ್ರೀಗಳ ಉಭಯಕುಶಲೋಪರಿ

ತೀರ್ಥಸ್ನಾನ
ತೀರ್ಥಸ್ನಾನ

ಉಡುಪಿ ಚುರ್ಣೋತ್ಸವ
ಉಡುಪಿ ಚುರ್ಣೋತ್ಸವ

ಮೂರು ರಥದ ವೈಭವದ ಉತ್ಸವ
ಮೂರು ರಥದ ವೈಭವದ ಉತ್ಸವ
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications